ಚಿತ್ರ ನೋಡಿದ ಕೂಡಲೇ ಯಾವುದೋ ಮಲೆನಾಡಿನ ಭಾಗವಿರಬೇಕು ಎನ್ನಿಸಿರಬೇಕಲ್ವಾ ? ಹಾಗೆಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇದು ವರ್ಷೊಂಭತ್ತುಕಾಲ ಧಗ ಧಗ ಉರಿಯುವ ಬಿಸಿಲ ನಾಡು ಗುಲ್ಬರ್ಗ ಜಿಲ್ಲೆಯ ಸಮೀಪವಿರುವ ಒಂದು ಕಾಡಿನ ದೃಶ್ಯ. ಇತ್ತೀಚೆಗೆ ಗೆಳೆಯರಾದ ಶಿವಾನಂದ ಕಳವೆ, ಆನಂದತೀರ್ಥ ಪ್ಯಾಟಿ ಈ ಕಾಡಿಗೆ ಭೇಟಿ ನೀಡಿದ್ದಾರೆ. ಕನ್ನಡ ನಾಡಿನ ಗಡಿಯಲ್ಲಿರುವ ಈ ಕಾಡಿನ ಬಗ್ಗೆ ಒಂದೆರಡು ತುಣುಕು ಹಾಗೂ ನಾಲ್ಕೈದು ಫೋಟೋ ಕಳುಹಿಸಿದ್ದಾನೆ ಪ್ಯಾಟಿ. ಅವನ ಬರಹದೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದೇನೆ. ಅದಕ್ಕೆ ಗೆಳೆಯ ವಿನೋದ್ ಪ್ರತಿಕ್ರಿಯಿಸಿದ್ದಾನೆ. ಅದನ್ನು ಪೊಸ್ಟಿಸಿದ್ದೇನೆ..
‘ಗುಲ್ಬರ್ಗ ಜಿಲ್ಲೆ ಎಂದರೆ ಬಿಸಿಲಿನ ನಾಡು. ಇಲ್ಲಿ ಕೂಡ ಹಸಿರಿನ ತಾಣವೊಂದು ಇದೆ ಗೊತ್ತೇ?! ಹೌದು… ಇದರ ಹೆಸರು ಕೊಂಚಾವರಂ ಕಾಡು. ಮಿತ್ರ ಶಿವಾನಂದ ಕಳವೆ ಜತೆ ಎರಡು ದಿನ ಸುತ್ತಾಡಿ ಬಂದ ಬಳಿಕ, ಕೆಲ ಚಿತ್ರ ಕಳಿಸುತ್ತಿದ್ದೇನೆ. ಅಂದ ಹಾಗೆ, ಕಾಡಿನಲ್ಲಿ ಜಲಪಾತ ಕೂಡ ಇದೆ!! ‘ಎತ್ತಿಪೋತೆ’ ಅಂತ ಹೆಸರು. ಇನ್ನು ಈ ಚಿತ್ರಗಳು ನಿಮಗಾಗಿ…
-ಆನಂದತೀರ್ಥ ಪ್ಯಾಟಿ
ಈ ಹಿಂದೆ ಇದೇ ಕಾಡನ್ನು ಸುತ್ತಾಡಿ ತೋಳಗಳ ಕುರಿತು ಅಧ್ಯಯನ ನಡೆಸಿರುವ ಕಾಡು ಪ್ರೀತಿಯ ಪರ್ತಕರ್ತ ಗೆಳೆಯ ಬಿ.ವಿನೋದ್ ಕುಮಾರ್ (ಸುವರ್ಣ ನ್ಯೂಸ್ ) ಬಿಸಿಲ ನಾಡಿನ ಕಾಡು ಕುರಿತು ಖುಷಿಯಿಂದ ಪ್ರತಿಕ್ರಿಯಿಸಿದ್ದಾರ. ಆ ಪ್ರತಿಕ್ರಿಯೆ ಹೀಗಿದೆ ;
……This is like a oasis in your district. I had an opportunity to roam in this forest searching for indian grey wolves. This is one of the finest forest patch in this region. if i am not wrong, this joins bidar and gulbarga with some parts of AP. Forest department is declaring this as a wildlife sanctuary.
This amazing forest is facing a major threat from local villagers as all of they directly depend on this forest for firewood.
I request you to focus on this forest and write some stories, which will definately help to restore this beautiful bio diversity.
ಹೀಗೆಲ್ಲ ಹೇಳಿದ ಮೇಲೆ ಬಿಸಲೂರಿನ ಈ ಕಾಡು ನೋಡಬೇಕೆನಿಸಿದೆ. ಈ ಚಳಿಗಾಲದಲ್ಲೇಕೆ ಒಮ್ಮೆ ಭೇಟಿ ಕೊಡಬಾರದು ? ಎಂದು ಯೋಚಿಸುತ್ತಿದ್ದೇನೆ. ಅದಕ್ಕೆ ಮುಂದೆ ಈ ಚಿತ್ರಗಳನ್ನೊಮ್ಮೆ ನೋಡಿ.. ಎಂಜಾಯ್್ ಮಾಡಿ.
ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ.
ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ.
ಪ್ರಕಟಿತ ಕೃತಿಗಳು :
ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ.
ಪ್ರಶಸ್ತಿ ಪುರಸ್ಕಾರ
೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ.
ಅಧ್ಯಯನ ಪ್ರವಾಸ :
ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.
ಗಾಣಧಾಳು ಶ್ರೀಕಂಠ ಅವರ ಎಲ್ಲಾ ಲೇಖನಗಳನ್ನು ನೋಡಿ
3 thoughts on “ಪುಟ್ಟ ಕಾಡು, ಅದರೊಳಗೊಂದು ಜಲಪಾತ…”
ಖಂಡಿತವಾಗಿಯೂ ಇದು ಸ್ವತಃ ನೋಡಿಯೇ ಆನಂದವನ್ನು ಅನುಭವಿಸುವ ತಾಣವೇ ಸರಿ. ಚಿತ್ರಗಳಲ್ಲೇ ಇದೊಂದು ಹಸಿರಿನ ಸಿರಿ, ತಂಪಿನ ತಾಣವಾಗಿ ಕಾಣುತ್ತಿದೆ. ಇನ್ನು ಪ್ರತ್ಯಕ್ಷ್ಯ ಅನುಭವಿಸುವುದರ ಮಜವೇ ಮಜಾ. ನಿಜವಾಗಿಯೂ ಇದು ಹಸಿರುಪ್ರಿಯರಿಗೆ ಹಬ್ಬದೂಟ.
ಖಂಡಿತವಾಗಿಯೂ ಇದು ಸ್ವತಃ ನೋಡಿಯೇ ಆನಂದವನ್ನು ಅನುಭವಿಸುವ ತಾಣವೇ ಸರಿ. ಚಿತ್ರಗಳಲ್ಲೇ ಇದೊಂದು ಹಸಿರಿನ ಸಿರಿ, ತಂಪಿನ ತಾಣವಾಗಿ ಕಾಣುತ್ತಿದೆ. ಇನ್ನು ಪ್ರತ್ಯಕ್ಷ್ಯ ಅನುಭವಿಸುವುದರ ಮಜವೇ ಮಜಾ. ನಿಜವಾಗಿಯೂ ಇದು ಹಸಿರುಪ್ರಿಯರಿಗೆ ಹಬ್ಬದೂಟ.
Thanks for the info. Will try to visit the place, when we plan our trip towards Gulbarga.
By all means. Thanks for reading my blog and information.
Ganadhalu Srikanta