ಸಾಗರೋತ್ತರದಲ್ಲಿ ‘ರಂಗ ಪಯಣ’

ಹೀಗಿದ್ದರೆ ಹೇಗೆ ನಾಟಕದ ದೃಶ್ಯದಲ್ಲಿ ಸುಂದರ್ ರಾಜ್ ಮತ್ತು ಲಕ್ಷ್ಮಿ ಚಂದ್ರಶೇಖರ್

ಆರು ಪೆಟ್ಟಿಗೆ, ನಾಲ್ಕು ಪಾತ್ರದಾರಿಗಳು, ೬೦ ದಿನಗಳ ಮೂರು ಸಾವಿರ ಮೈಲುಗಳ ಅಮೆರಿಕ ಪ್ರವಾಸ, ಹದಿಮೂರು ರಾಜ್ಯಗಳ್ಲಲಿ ೧೫ ನಗರಗಳ ಹದಿನಾರು ಸ್ಥಳಗಳ್ಲಲಿ ವಾರಾಂತ್ಯದ ಎಂಟು ದಿನಗಳ್ಲಲಿ, ಎರಡು ನಾಟಕಗಳ ಹದಿನೈದು ಪ್ರದರ್ಶನ…. ಅಬ್ಬಾ ! ಅದೊಂದು ರೋಚಕ ಅನುಭವ…

ಕಬ್ಬನ್ ಪಾರ್ಕ್ ಸೆಂಚುರಿ ಕ್ಲಬ್‌ನ ಅಂಗಳದ್ಲಲಿ ಗೋಬಿಮಂಚುರಿ ಮ್ಲೆಲುತ್ತಾ ಸಾಗರೋತ್ತರ ‘ರಂಗ ಪಯಣ’ದ ಅನುಭವವನ್ನು ರಂಗಭೂಮಿ ಕಲಾವಿದರಾದ ಲಕ್ಷ್ಮಿ ಚಂದ್ರಶೇಖರ್, ಸುಂದರ್‌ರಾಜ್, ಗಜಾನನ ನಾಯಕ್, ರಾಮಕೃಷ್ಣ ಕನ್ನರ್ಪಾಡಿ ವಿವರಿಸಿದ ಪರಿಯಿದು. ಹೀಗಿದ್ದರೆ ಹೇಗೆ ನಾಟದ ದೃಶ್ಯದಲ್ಲಿ ಸುಂದರ್ ರಾಜ್ ಮತ್ತು ಲಕ್ಷ್ಮಿ ಚಂದ್ರಶೇಖರ್

ಈ ಹೊಸ ಪ್ರಯತ್ನಕ್ಕಾಗಿ ಆರು ತಿಂಗಳ ಕಾಲ ತಾಲೀಮು ನಡೆಸ್ದಿದೆವು. ಪ್ರವಾಸಕ್ಕಾಗಿಯೇ ‘ನಾಟಕದ ಪರಿಕರಗಳನ್ನು’ ಸಿದ್ಧಗೊಳಿಸ್ದಿದೆವು. ಎಲವೂ ಫೋಲ್ಡಬಲ್ ಮತ್ತು ಪೋರ್ಟ್‌ಬಲ್. ವಸ್ತುಗಳಿಗೆ ತಕ್ಕಂತ ಪೆಟ್ಟಿಗೆಗಳು. ಇಷ್ಟ್ಲೆಲ ಇದರೂ ಪ್ರವಾಸದ್ಲಲ್ಲೆಲೂ ಒಂದಿಂಚೂ ಆಚೀಚೆಯಾಗಲ್ಲಿಲ’ ಎನ್ನುತ್ತ ಗೆಲುವಿನ ನಗೆಬೀರಿದರು ಲಕ್ಷ್ಮಿ ಮೇಡಮ್.
ನಾಲ್ಕು ಕಲಾವಿದರು ೨೫ ಪಾತ್ರಗಳು. ‘ರತ್ನನ್ ಪರಪಂಚ’ ನಾಟಕದ್ಲಲಿ ಒಟ್ಟು ಇಪ್ಪತ್ತೈದು ಪಾತ್ರಗಳು. ಇಷ್ಟೂ ಪಾತ್ರಗಳನ್ನು ನಾಲ್ಕು ಮಂದಿ ಅಭಿನಯಿಸ್ದಿದು ಈ ಪ್ರವಾಸ ವಿಶೇಷ.

‘ಸುಂದರ್ ನಾಲ್ಕೈದು ಪಾತ್ರ ಮಾಡಿದರು. ಒಂದೊಂದು ಪಾತ್ರ ಒಂದೂವರೆ ನಿಮಿಷದ್ಲಲಿ ವೇಷ-ಬಣ್ಣ ಬದಲಾಯಿಸಿಕೊಳ್ಳುತ್ತ್ದಿದರು. ನಿಜಕ್ಕೂ ಇದೊಂದು ಥ್ರಿಲ್’ ಲಕ್ಷ್ಮಿ ಮೇಡಮ್ ಮತ್ತೆ ಅನುಭವದ ನೆನಪಿಗೆ ಜಾರಿದರು

ಎಲ್ಲವೂ ಇದು ನಾಟಕ ಮಾಡೋದು ವಿಶೇಷವಲ್ಲ. ಗ್ರೀನ್ ರೂಮ್, ಸೈಡ್‌ವಿಂಗ್, ಲೈಟಿಂಗ್ ಹೀಗೆ.. ಯಾವ ವ್ಯವಸ್ಥೆಯೂ ಸರಿಯ್ಲಿಲದ ಪುಟ್ಟ ರಂಗ ಸಜ್ಜಿಕೆ ಮೇಲೆ ನಾಟಕ ಪ್ರದರ್ಶನ ನಿಜಕ್ಕೂ ಒಂದು ಸವಾಲು. ಇಂಥ ವಾತಾವರಣದ್ಲಲೇ ಹದಿನೈದು ಪ್ರದರ್ಶನಗಳನ್ನು ನೀಡ್ದಿದೇವೆ’ ಎನ್ನುವ ಕ್ರಿಯೇಟಿವ್ ತಂಡ್ದದು ಒಂದು ಮಟ್ಟಿಗೆ ‘ದೊಡ್ಡ ಸಾಧನೆಯೇ ಸರಿ’.

ವರ್ಷಗಳ ನಂತರ ನಕ್ಕ್ದಿದೇ ನಕ್ಕ್ದಿದು..!
ಕರ್ನಾಟಕದ್ಲಲಿ ೭೫ ಯಶಸ್ವಿ ಪ್ರದರ್ಶನಗಳನ್ನು ಕಂಡ ‘ಹೀಗಾದರೆ ಹೇಗೆ?’ ನಾಟಕ ನೋಡಿದವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕ್ದಿದೇ ನಕ್ಕ್ದಿದು. ‘ಬಹಳ ವರ್ಷಗಳ ಮೇಲೆ ಹೀಗೆ ನಗುತ್ತ್ದಿದೇವೆ’ ಎಂದು ನಮ್ಮ ಪ್ರೇಕ್ಷಕರು ಉದ್ಗರಿಸ್ದಿದು ಪ್ರದರ್ಶನದ ಸಾರ್ಥಕತೆಗೆ ಹಿಡಿದ ಕನ್ನಡಿಯಾಗಿತ್ತು.

ವಿಶೇಷ ಅಂದ್ರೆ ಕನ್ನಡ ಅರ್ಥವಾಗದ ‘ಬಿಳಿಯ’ರೂ ಕೂಡ ಚಪ್ಪಾಳೆ ತಟ್ಟ್ದಿದು, ಅವರ ಮಕ್ಕಳು ಗಪ್‌ಚಿಪ್ ಆಗಿ ಕುಳಿತು ನಾಟಕ ನೋಡ್ದಿದು, ಇವ್ಲೆಲ ಮರೆಯಲಾಗದ ನೆನಪುಗಳು ಎಂದ ಮೇಡಮ್ ಮಾತಿಗೆ ಸುಂದರ್, ಗಜಾನನ, ರಾಮಕೃಷ್ಣ ಜೊತೆಯಾದರು.

ಶಹಬ್ಬಾಸ್, ಬನ್ನಿ ಮತ್ತೆ!
‘ಆಸ್ಕರ್ ಪ್ರಶಸ್ತಿ ನೀಡಬೇಕಾದ ಪ್ರದರ್ಶನ’ ಎಂದು ಉದ್ಗರಿಸಿದರೆ, ಇನ್ನು ಕೆಲವರು ‘ನಾವು ಬೆಂಗಳೂರಿಗೆ ಬಂದಾಗ ಕನ್ನಡ ನಾಟಕಗಳನ್ನು ತಪ್ಪದೇ ನೋಡುತ್ತೇವೆ’ ಎಂದರು. ಅನೇಕ ಕನ್ನಡ ಒಕ್ಕೂಟಗಳು ‘ಮತ್ತೆ ಬನ್ನಿ’ ಎಂದು ಆಹ್ವಾನ ನೀಡಿದವು. ಸ್ಥಳೀಯ ಕನ್ನಡ ಪತ್ರಿಕೆಗಳು ನಾಟಕಗಳ ಬಗ್ಗೆ ಪ್ರಶಂಸಾತ್ಮಕ ವಿಮರ್ಶೆ ಪ್ರಕಟಿಸಿದವು. ಅಷ್ಟರ ಮಟ್ಟಿಗೆ ನಮ್ಮ ನಾಟಕಗಳು ಅಲಿನ ಕನ್ನಡಿಗರ ಮೇಲೆ ಪರಿಣಾಮ ಬೀರಿದವು’ ಎಂದರು ಲಕ್ಷ್ಮಿ ಚಂದ್ರಶೇಖರ್.

ಹೊಂಗೆ ಮರದ ರಸ್ತೆ !

60 ಅಡಿ ರಸ್ತೆಯಲ್ಲಿರುವ ಹೊಂಗೆ ಮರಗಳ ಸಾಲು

ಮಲ್ಲೇಶ್ವರ, ಸದಾಶಿವನಗರ, ನ್ಯೂ ಬಿಇಎಲ್ ರಸ್ತೆ.. ಹೂ ..ಹೂಂ.. ಇಲ್ಲೆಲ ಹುಡುಕಿದರೂ ಈ ರಸ್ತೆ ಸಿಗುವುದಿಲ್ಲ ಬಿಡಿ. ಏಕೆ ಗೊತ್ತಾ ? ಈ ಹೆಸರಿನ ರಸ್ತೆ ಪಾಲಿಕೆಯ ಪುಸ್ತಕದಲ್ಲಿಲ್ಲ. ಅಂಚೆ ಇಲಾಖೆಯ ವಿಳಾಸದ ಡೈರೆಕ್ಟರಿಯಲ್ಲೂ  ಇಲ್ಲ. ಈ ರಸ್ತೆ ಇರುವುದು ಸಂಜಯ ನಗರ ಬಡಾವಣೆಗೆ ಹೊಂದಿಕೊಂಡಿರುವ ಭೂಪಸಂದ್ರದಲ್ಲಿ. ಇಲ್ಲಿನ ಕಲ್ಪನಾಚಾವ್ಲ ರಸ್ತೆ ಮತ್ತು ಹೆಬ್ಬಾಳದ ಫೈಓವವರ್‌ಗೆ ಸಂಪರ್ಕ ಕಲ್ಪಿಸುವ ೬೦ ಅಡಿ ವಿಶಾಲ ಒಳ ರಸ್ತೆಯೇ ಹೊಂಗೆ ಮರದ ರಸ್ತೆ !
ಈ ರಸ್ತೆಗೆ ‘ಹೊಂಗೆ ಮರದ ರಸ್ತೆ’ ಎಂದು ಯಾರೂ ಹೆಸರಿಟ್ಟಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನಿಂದ ಕಂಗೊಳಿಸುವ ಸಾಲು ಸಾಲು ಹೊಂಗೆ ಮರಗಳು ‘ಈ ರಸ್ತೆಗೊಂದು ಅಂಥ ಹೆಸರಿಡಿ’ ಎಂದು ಕೇಳುತ್ತವೆ.
ಹೊಂಗೆ ಮರಗಳ ಸಾಲು
ಇಲ್ಲಿ ಸುಮಾರು ನೂರಕ್ಕೂ ಹೆಚ್ಚು ಮರಗಳಿರಬಹುದು. ಎಲ್ಲ ಮರಗಳನ್ನೂ ಪಾದಚಾರಿ ಮಾರ್ಗದಲ್ಲೇ ನೆಟ್ಟಿದ್ದಾರೆ. ಪ್ರತಿಯೊಂದಕ್ಕೂ ವ್ಯವಸ್ಥಿತವಾಗಿ ಸಿಮೆಂಟ್ ಪಾತಿ ಮಾಡಲಾಗಿದೆ. ದಟ್ಟವಾಗಿರುವ ಈ ಮರಗಳ ನಡುವಿನ ರಸ್ತೆಯಲ್ಲಿ ಮುಂಜಾನೆ, ಸಂಜೆ ವಿಹರಿಸುವುದೆಂದರೆ ವಾಹ್ ! ಅದರ ಅನುಭವವೇ ವಿಭಿನ್ನ !
ಐದಾರು ವರ್ಷಗಳ ಹಿಂದೆ ಭೂಪಸಂದ್ರ ಬಡಾವಣೆಯನ್ನು ‘ಹಸಿರಾಗಿಸುವ’ ಪ್ರಯತ್ನದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯವರು ಈ ಹೊಂಗೆ ಸಸಿಗಳನ್ನು ನೆಟ್ಟಿದ್ದಾರೆ. ಆಗ ಇಲಿ ಸ್ವಂತ ಮನೆ ಹೊಂದಿದ್ದವರು ತಮ್ಮ ಮನೆಯ ಮುಂದೆ ಅಲಂಕಾರಕ್ಕಾಗಿ ಎರಡೆರಡು ಹೊಂಗೆ ಮರಗಳನ್ನು ಕೇಳಿ ಕೇಳಿ ನಾಟಿ ಮಾಡಿಸಿದ್ದಾರೆ. ಈಗ ಅವೆಲ್ಲ ಪುಟ್ಟ ಪುಟ್ಟ ಮರಗಳಾಗಿ ಇಡೀ ರಸ್ತೆಗೆ ಹಸಿರುಡುಗೆಯಾಗಿಸಿವೆ.
ಹೂವಿನ ನಡೆಮುಡಿ
ಫೆಬ್ರುವರಿ ಮಾರ್ಚ್ ತಿಂಗಳ್ಲಲಿ ಈ ರಸ್ತೆಯ್ಲಲಿ ಮುಂಜಾನೆ ವಾಕಿಂಗ್ ಮಾಡುವುದು ಒಂದು ವಿಶಿಷ್ಟ ಅನುಭವ. ಅದು ಹೂವು ಅರಳುವ ಸಮಯ. ದುಂಬಿಗಳು ಹೂವಿನ ಮಕರಂದ ಹೀರುತ್ತಾ ಆನಂದವಾಗಿ ಹಾರುಡುತ್ತಿರುತ್ತವೆ. ಜೇನಿನ ಹುಳಗಳು ಮಕರಂದ ಹೀರಿ ಪಕ್ಕದ ಬೇಲಿಗೆ ಹಾರಿ ‘ಗೂಡು’ ಕಟ್ಟುತ್ತವೆ. ಹೊಂಗೆ ಹೂವು ಪರಿಮಳ ‘ದೇಹ ದಂಡಿಸುವವರ’ ಮನಸ್ಸನ್ನು ಅರಳಿಸುತ್ತದೆ. ಮುಂದಿನ ದಿನಗಳ್ಲಲಿ ಇದೇ ಹೂವುಗಳು ನೆಲದ್ಲಲಿ ಹರಡಿಕೊಂಡು ನಡೆದಾಡುವವರಿಗೆ ನಡೆಮುಡಿ ಹಾಸುತ್ತವೆ. ಈ ನೈಸರ್ಗಿಕ ಪ್ರಕ್ರಿಯೆಯನ್ನು ನೋಡುವುದೇ ಒಂದು ಆನಂದ.ಹೊಂಗೆ ಮರಗಳು ಅಂದ ಹೆಚ್ಚಿಸುವ ಜೊತೆಗೆ ಬೇಸಿಗೆಯ ಬೇಗೆಯನ್ನೂ ತಣಿಸುತ್ತವೆ.
ಈ ಪ್ರದೇಶದಲ್ಲಿರುವ ಕಟ್ಟಡ ಕಾರ್ಮಿಕ ಮಕ್ಕಳು ಈ ಮರಗಳಿಗೆ ಉಯ್ಯಾಲೆ ಕಟ್ಟಿಕೊಳ್ಳುತ್ತಾರೆ. ಬಿಸಿಲಿನ್ಲಲಿ ಓಡಾಡುವ ಹಿರಿಯ ಜೀವಗಳು ಹೊಂಗೆಯ ನೆರಳಿನಲ್ಲಿ  ಸ್ವಲ್ಪ ಹೊತ್ತು ವಿರಮಿಸಿ ಕೊಂಡು ಮುಂದುವರಿಯುತ್ತಾರೆ. ದೀರ್ಘಕಾಲ ಮೊಬೈಲ್‌ನಲ್ಲಿ ಮಾತನಾಡುವವರಿಗೆ ಇದು ‘ನೈಸರ್ಗಿಕ ಟೆಲಿ ಬೂತ್’ ಆಗಿದೆ. ಅಷ್ಟೇ ಅಲ್ಲ, ಗುಟ್ಟಾಗಿ ಹೇಳಬೇಕೆಂದರೆ, ಪ್ರೇಮಿಗಳ ಪಿಸು ಮಾತಿನ ತಾಣವೂ ಹೌದು !
ಒಳ ರಸ್ತೆಗಳಲ್ಲೂ ಮರಗಳ ಸಾಲು:
ಹೊಂಗೆ ಮರಗಳು ಕೇವಲ ಈ ಪ್ರಮುಖ ರಸ್ತೆಯ್ಲಲಷ್ಟೇ ಅಲ. ಒಳ ರಸ್ತೆಗಳನ್ನೂ ಅಲಂಕರಿಸಿವೆ. ಸಮೀಕ್ಷೆ ಮಾಡಿದರೆ ಪ್ರತಿ ಮನೆಗಳ ಮುಂದು ಎರಡೆರಡು ಹೊಂಗೆ ಮರಗಳಿವೆ. ಆ ಮರಗಳು ಅದೆಷ್ಟು ಅಂದವಾಗಿ ಬೆಳೆದುಕೊಂಡಿವೆಯೆಂದರೆ ಒಂದು ಕಾರನ್ನು ಸರಾಗವಾಗಿ ಮರದ ಕೆಳಗೆ ಪಾರ್ಕ್ ಮಾಡಬಹುದು. ಹಾಗಾಗಿ ಮರಗಳ ನೆರಳು ಕಾರು ಪಾರ್ಕಿಂಗ್‌ಗೆ ಮೀಸಲಾಗಿದೆ. ಕಾಕತಾಳೀಯವೋ ಏನೋ, ಮರದ ‘ಕೆನಾಪಿ’ಗಳ ವಿನ್ಯಾಸ ಕೂಡ ಪಾರ್ಕಿಂಗ್‌ಗೆ ಹೇಳಿ ಮಾಡಿಸಿದಂತಿವೆ. ಈ ನೆರಳನ್ನೇ ಬಳಸಿಕೊಂಡ ಕೆಲವರು ತಮ್ಮ ಮನೆಗಳ ಮುಂದೆ ಅಲಂಕಾರಿಕ ಸಸ್ಯಗಳನ್ನೂ ಬೆಳೆಸಿ, ರಸ್ತೆಯ ಚೆಲುವು ಹೆಚ್ಚಲು ಕೆಲವು ನಾಗರಿಕರು ಸಹಕರಿಸಿದ್ದಾರೆ.
ನಾಗರಿಕರ ಆಸ್ತೆಯೂ ಕಾರಣ:
ಬೆಂಗಳೂರಿನ ರಸ್ತೆ ಬದಿಗಳಲ್ಲಿ ಹೀಗೆ ಮರಗಳ ಸಾಲಿರುವುದು ಸಾಮಾನ್ಯ, ಅದರಲ್ಲಿ ಅಂಥ ವಿಶೇಷವಿಲ್ಲ. ಆದರೆ ಈ ಬಡಾವಣೆಯಲ್ಲಿ ಮರಗಳನ್ನು ಸಂರಕ್ಷಿಸುವ, ಪೋಷಿಸುವ ಮತ್ತು ನಿರ್ವಹಿಸುವ ನಾಗರಿಕರ ಆಸಕ್ತಿ, ಆಸ್ತೆ ಮೆಚ್ಚುವಂಥದ್ದು. ಎಲರೂ ಈ ಕಾರ್ಯಕ್ಕೆ ಕೈ ಜೋಡಿಸದಿದ್ದರೂ ತಮ್ಮ ಕಾರಿಗೆ ನೆರಳು ನೀಡುವ, ದಣಿದ ದೇಹಗಳಿಗೆ ತಂಪನೆರೆಯುವ, ಮನೆ ಮುಂದಿನ ಅಂದ ಹೆಚ್ಚಿಸುವ ವೃಕ್ಷ ಪ್ರೀತಿಯ ಮನಸ್ಸಿರುವ ಕೆಲವರು ಹೊಂಗೆ ಮರಗಳ ಒಂದೇ ಒಂದು ರೆಂಬೆಯನ್ನೂ ಕೀಳಗೊಡುವುದ್ಲಿಲ. ಅಷ್ಟೇ ಅಲ. ನಿತ್ಯ ಕಾರು ತೊಳೆಯುವವರು ಉಳಿದ ನೀರನ್ನು ಮನೆ ಮುಂದಿನ ಗಿಡಗಳಿಗೆ ಉಣಿಸುತ್ತಾರೆ. ಕಾಲ ಕಾಲಕ್ಕೆ ಕೊಂಬೆಗಳನ್ನು ಸವರಿಸುತ್ತಾರೆ. ರೆಂಬೆಗಳು ದೊಡ್ಡದಾಗ್ದಿದರೆ ಪಾಲಿಕೆಯವರಿಗೆ ತಿಳಿಸುತ್ತಾರೆ. ನಾಗರಿಕರ ಮತ್ತು ಪಾಲಿಕೆಯವರ ಸಹಯೋಗದಲ್ಲಿ ಪಾದಚಾರಿ ಮಾರ್ಗಗಳಲ್ಲೂ ಮರಗಳು ಸುರಕ್ಷಿತವಾಗಿವೆ. ಈ ಮರ ಬೆಳೆಸುವ ಮುತುವರ್ಜಿ ನಿಜಕ್ಕೂ ಮಾದರಿಯಾಗುವಂಥದ್ದು.
ಇಂಥದೊಂದು ಪರಿಸರ ಪ್ರೀತಿಯ ಬಡಾವಣೆಗೆ ದೃಷ್ಟಿಬೊಟ್ಟಿಟ್ಟಂತೆ ಅಲ್ಲಲ್ಲಿ ಕಸದ ರಾಶಿ ತುಂಬಿಕೊಂಡಿದೆ.
. ಭೂಪಸಂದ್ರದ ಆರಂಭದಲ್ಲೇ ಪಾಲಿಕೆಯವರು ಕಸವಿಲೇವಾರಿ ನಡೆಸುತ್ತಾರೆ. ಈ ಕಸದ ರಾಶಿ(ವಿಶೇಷವಾಗಿ ಪ್ಲಾಸ್ಟಿಕ್ ರಾಶಿ) ವಾಕಿಂಗ್ ಪೂರೈಸಿ ಬರುವವರನ್ನು ಕೆರಳುವಂತೆ ಮಾಡುತ್ತದೆ. ಪರಿಸರ ಪ್ರೀತಿಯ ನಡುವೆ ಈ ಕೊಳಕು ಏಕೆ ಎಂಬುದಕ್ಕೇ ಆ ‘(ಕಟ್ಟಾ) ಸುಬ್ರಹ್ಮಣ್ಯನೇ’ ಉತ್ತರ ನೀಡಬೇಕು !