ಕುಶಾಲನಗರದಲ್ಲಿ ಸೂರ್ಯೋದಯದ ದೃಶ್ಯ.

 

 

ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು
ಬೆಟ್ಟಕ್ಕೆ ಎದೆಯೆತ್ತಿ ನ್ಲಿಲುವ ಧೈರ್ಯ
ಹೊಳೆಯ ನೀರಿಗೆ ಉಗುರ ಬಿಸಿ
ಗಾಳಿ ನೆರಳಿಗೆ ತಂಪು ತಂದ ಯುಗಾದಿ
ಕುಸಿದು ಕೊರಗುವ ಬಾಳಿಗೇನ ತಂದೆ…
– ಕವಿ ಡಾ. ಸಿದ್ಧಲಿಂಗಯ್ಯ ಅವರ ಈ ಕವನದ ಸಾಲುಗಳು ವಸಂತ ಋತುವಿನೊಂದಿಗೆ ಆಗಮಿಸುವ ಯುಗಾದಿ ಹಬ್ಬದ ಸಡಗರವನ್ನು ಮೆಲುಕು ಹಾಕಿಸುತ್ತದೆ.

ನಿಜ, ಯುಗಾದಿ ಎಂದರೆ ಹೊಸತನ. ಮಕ್ಕಳಿಗೆ ಹೊಸ ಬಟ್ಟೆಯ ಸಂಭ್ರಮ. ಕೃಷಿಕರಿಗೆ ಮಳೆ-ಬೆಳೆ-ನಕ್ಷತ್ರಗಳ ವರ್ಷದ ಲೆಕ್ಕಾಚಾರ, ಉದಿಮೆದಾರರಿಗೆ ವರ್ಷದ ಸೋಲು-ಗೆಲುವನ್ನು ನಿರ್ಧರಿಸುವ ಸಮಯ. ಹೀಗೆ ಯುಗಾದಿ ಹಬ್ಬ ಹಲವು ‘ಹೊಸತು’ಗಳ ಸಂಗಮ.

ಯುಗಾದಿ – ಚೈತ್ರ ಮಾಸದ ಮೊದಲ ದಿನ. ಹೊಸ ಸಂವತ್ಸರದ ಮೊದಲ ಹಬ್ಬ. ದೇವಾನು-ದೇವತೆಗಳ ಸೋಂಕ್ಲಿಲದ ನಿಸರ್ಗದ ಹಬ್ಬ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು – ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬ್ಲೆಲ ಮ್ಲೆಲುವ ಹಬ್ಬ. ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಎಳೆ ಚಿಗುರಿನ ಹೊಂಗೆ, ಬೇವು, ಹಿಪ್ಪೆ ಮರದ ನೆರಳ್ಲಲಿ ಮೈ ಹರವಿಕೊಂಡು ವಿರಮಿಸಿಕೊಳ್ಳುವ ದಿನ.

 

ಸೂರ್ಯೋದಯದ ಮತ್ತೊಂದು ಚಿತ್ರ

ಯುಗಾದಿ ಸಂಪೂರ್ಣ ವಿರಾಮದ ಕೊನೆಯ ಮತ್ತು ದುಡಿಮೆಯ ಆರಂಭ- ಇವೆರಡರ ನಡುವೆ ಬರುವಂತಹ ಹಬ್ಬ. ಹಾಗಾಗಿಯೇ ಈ ಹಬ್ಬದ್ಲಲಿ ಸಿಹಿ-ಕಹಿಯ ಮಿಶ್ರಣವಿರುತ್ತದೆ. ಕಾಮನ ಹಬ್ಬ ನಿಸರ್ಗದ್ಲಲಿ ವರ್ಷದ ಕೊನೆಯ ಹಬ್ಬವಾದರೆ, ಯುಗಾದಿ ವರ್ಷದ ಮೊದಲ ಹಬ್ಬ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಈ ಹಬ್ಬದ್ಲಲಿ ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ಯುಗದ ಆದಿ. ಶಾಲಿವಾಹನ ಶಕೆಯ ಹೊಸ ಸಂವತ್ಸರದ ಆರಂಭ.

ಹಳ್ಳಿಗಳ್ಲಲಿ ಯುಗಾದಿ…
ಯುಗಾದಿಯ ನೈಜತೆ ಉಳಿದಿರುವುದೇ ಹಳ್ಳಿಗಳ್ಲಲಿ, ರೈತರ ನೆಲೆಯ್ಲಲಿ. ನಗರವಾಸಿಗಳಿಗೆ ಯುಗಾದಿ ಕೇವಲ ಒಂದು ಹಬ್ಬ ಮಾತ್ರ. ಅವರು ಅಬ್ಬಬ್ಬಾ ಎಂದರೆ ಎರಡು ದಿವಸ ಹಬ್ಬ ಮಾಡಬಹುದು. ಆದರೆ ಕೃಷಿಕರ ಹಬ್ಬದ ಸಂಭ್ರಮವಿದೆಯ್ಲಲಾ, ಅದು ತಿಂಗಳ ಮುಂಚೆಯೇ ಆರಂಭವಾಗುತ್ತದೆ. ಈ ದಿನಗಳ್ಲಲಿ ಕೃಷಿಕರಿಗೆ ಯಾವುದೇ ಕೆಲಸ ಹೇಳಿದರೂ ‘ಹಬ್ಬಾದ್ಮೇಲೆ ನೋಡನ್ ಬಿಡ್ಲೆ’ ಎನ್ನುತ್ತಾರೆ. ಸಾಲ ಕೇಳಲು ಬಂದವರಿಗೂ ಅಥವಾ ಸಾಲ ಕೇಳುವವರು, ಹೊಸ ಕೆಲಸ ಆರಂಭಿಸುವವರು ಎಲರೂ ‘ಯುಗಾದಿ’ಯ ನೆಪ ಹೇಳುತ್ತಾರೆ.
ಯುಗಾದಿ ಹಬ್ಬವನ್ನು ಸಂಭ್ರಮಿಸಲು ಊರಿಗೆ ಊರೇ ತಯಾರಾಗುತ್ತಿರುತ್ತದೆ. ಮಹಿಳೆಯರು ಎರಡು ವಾರ ಮುಂಚೆಯೇ ಮನೆ ಸ್ವಚ್ಛಗೊಳಿಸಲು ಶುರುಮಾಡುತ್ತಾರೆ. ವರ್ಷಪೂರ್ತಿ ಗುಡಿಸದ ಮೂಲೆಗಳು, ವಾಡೆ, ಕೊಮ್ಮೆಗಳು, ಕೊಟ್ಟಿಗೆ-ಪಡಸಾಲೆಗಳು ಶುದ್ಧವಾಗುತ್ತವೆ. ಅಟ್ಟ, ಗೋಡೆ, ಅಂಗಳ, ಮಾಡು(ತಾರಸಿ)ಗಳ ದೂಳೊಡೆಯುತ್ತಾರೆ. ಮನೆ ಮುಂಭಾಗದ ಗೋಡೆಗಳಿಗೆ ಕೆಮ್ಮಣ್ಣು-ಸಗಣಿಯಿಂದ ಸಾರಿಸುತ್ತಾರೆ(ಈಗ ಎಲ ಪೇಂಟ್‌ಗಳ್ದದೇ ರಾಜ್ಯ). ಇಡೀ ಮನೆ ಸುಣ್ಣ-ಬಣ್ಣ ಕಾಣುತ್ತದೆ. ಕೆಮ್ಮಣ್ಣಿನ ಬಣ್ಣದ್ಲಲಿ ‘ಗೋಡೆಯ ಮೇಲೆ ಹಸೆ ಚಿತ್ತಾರಗಳನ್ನು ಮೂಡಿಸುವುದುಒಂದು ಸಂಭ್ರಮದ ಕೆಲಸ.

 

ಗಂಡಸರು ಹೊಸ ಬಟ್ಟೆ-ಬರೆ ಖರೀದಿಗೆ ಪಟ್ಟಣಕ್ಕೆ ಓಡಾಡುತ್ತಾರೆ. ಹಬ್ಬದ ಖರೀದಿಗಾಗಿ ಅಡಕೆ ಮಂಡಿ, ಗೊಬ್ಬರಿ ಮಂಡಿ, ಮಾಲೀಕರ ಬಳಿ ‘ಹಬ್ಬದ ಸಾಲವೆಂದೇ’ ಮುಂಗಡ ಹಣ ಪಡೆಯುತ್ತಾರೆ. ಬಟ್ಟೆ ಖರೀದಿಯೊಂದಿಗೆ ಬೇಸಾಯಕ್ಕೆ ಬೇಕಾದ ಹೊಸ ನೇಗಿಲು, ನೊಗ, ಮೇಣಿ, ದೊಡ್ಡಮಿಣಿ, ಹಗ್ಗ, ಚಿಲಕ್ಕಣ್ಣಿ, ಮಕಾಡ, ಕೊಳದಂಡೆ, ಕುಂಟೆ, ಕುಳ, ಅಲುಗು, ಕೂರಿಗೆ ಮುಂತಾದವುಗಳನ್ನು ಹೊಂಚುವ ಧಾವಂತದಲ್ಲಿರುತ್ತಾರೆ. ಯುಗಾದಿ ಹಿಂದೆ ಮುಂದೆ ದನಗಳ ಜಾತ್ರೆಗಳೂ ನಡೆಯುವುದರಿಂದ ರಾಸುಗಳನ್ನು ಕೊಟ್ಟು-ಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತದೆ.

ಮೂರು ದಿನದ ಹಬ್ಬ !
ಬಯಲು ಸೀಮೆಯ್ಲಲಿ ಯುಗಾದಿ ಮೂರು ದಿನದ ಹಬ್ಬ. ಮೊದಲ ದಿನ ಮುಸುರೆ ಹಬ್ಬ. ಪಾತ್ರೆ-ಪಗಡಗಳನ್ನು ತೊಳೆದು ಹೊಸ ನೀರು ತಂದು ತುಂಬಿಸುತ್ತಾರೆ. ಹದಿನೈದು ದಿನಗಳ ಸ್ವಚ್ಚತಾ ಕಾರ್ಯಕ್ಕೆ ಅಂತಿಮ ರೂಪ. ಎರಡನೇ ದಿನ ಸಿಹಿ ಹಬ್ಬ. ಮನೆ ಮಕ್ಕಳ್ಲೆಲಾ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ. ಮನೆಗ್ಲೆಲ ತೋರಣ ಕಟ್ಟಿ, ದನಗಳ ಕೊಟ್ಟಿಗೆಗೂ ಮಾವು-ಬೇವು ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ತೋರಣದ ತುದಿಗೆ ಸಿಕ್ಕಿಸುತ್ತಾರೆ. ಜಾನುವಾರುಗಳು ರೋಗ ಮುಕ್ತವಾಗಲೆಂದು ಬೇವು ಬಳಸುತ್ತಾರೆ ಎಂಬುದು ಹಿರಿಯ ನಂಬಿಕೆ. ಮೂರನೆಯದಿನ ‘ವರಷದ ತಡುಕು’ ಅಥವಾ ವರ್ಷದ ಹೆಚ್ಚು. ಈ ದಿನ ಕೆಲವು ಕಡೆ ಬೇಟೆಗೆ ಹೋಗುತ್ತಾರೆ. ಮಾಂಸದ ಅಡುಗೆ ಮಾಡಿ ಊಟ ಮಾಡುತ್ತಾರೆ. ಸಸ್ಯಹಾರಿಗಳು ನುಗ್ಗೆಕಾಯಿ ಸಂಬಾರು, ಆಂಬೊಡೆಯಂತಹ ಎಣ್ಣೆ ತಿಂಡಿ ಮಾಡಿ ಸವಿಯುತ್ತಾರೆ.

 

ಹೊಸ ನೀರಿನ ಸಿಂಚನ

ಎತ್ತುಗಳಿಗೆ ಗೌಸು ಹೊದಿಸಿ, ಚೆಂಡು ಹೂವಿನ ಹಾರ ಹಾಕಿ, ಬಂಡಿ ಕಟ್ಟಿ ದೇವಾಲಯಕ್ಕೆ ಮೂರು ಸುತ್ತು ಬರುತ್ತಾರೆ. ಅವುಗಳಿಗೆ ವಿಶೇಷ ನೈವೇದ್ಯ ಇರುತ್ತದೆ. ಹೊಸ ಬಟ್ಟೆ ತೊಡುವ ಮುಂಚೆ ದನಗಳ ಬೆನ್ನ ಮೇಲೆ ಹಾಕುವುದು ರೂಢಿ. ಕೆಲವರು ಹೊಸ ಬಟ್ಟೆಗಳಿಗೆ ಅರಿಶಿಣ ಸೋಕಿಸುತ್ತಾರೆ. ಮೈಸೂರು ಸೀಮೆಯ್ಲಲಿ ದವಸ ಧಾನ್ಯಗಳನ್ನು ಕಣದ್ಲಲಿ ಒಟ್ಟು ಮಾಡಿ ಪೂಜಿಸುತ್ತಾರೆ.
ಪೂಜೆ ಪುನಸ್ಕಾರಗಳು ಮುಗಿದ ಮೇಲೆ ಮನೆ ಯಜಮಾನ ಎಲರಿಗೂ ಬೇವು-ಬ್ಲೆಲ ಹಂಚುತ್ತಾನೆ. ಮನೆಗೆ ಯಾರೇ ಬಂದರೂ ಬೇವು-ಬ್ಲೆಲ ನೀಡುವುದು ಸಂಪ್ರದಾಯ. ಕಿತ್ತು ಹೋದ ಎಷ್ಟು ಸಂಬಂಧಗಳು ಈ ಹಬ್ಬದ್ಲಲಿ ಬೇವು-ಬ್ಲೆಲ ತಿಂದು ಒಂದಾಗುವ ಸಂಪ್ರದಾಯವಿದೆ. ಬೇಳೆ ಒಬ್ಬಟ್ಟು, ಗಟ್ಟಕ್ಕಿ ಪಾಯಸ, ಅಕ್ಕಿ ಪಾಯಸ, ಕಡುಬು ಅಡುಗೆಗಳು ಹಬ್ಬದ ವಿಶೇಷ.

 

ಪೂಜೆ ಮಾಡಿ, ಸಿಹಿ ಊಟದ ನಂತರ ‘ಜೂಜಾಟ ಶುರು’. ಗಂಡಸರು ಹೊಸ ಬಟ್ಟೆ ತೊಟ್ಟು ಹೊಂಗೆ ಮರದ ನೆರಳ್ಲಲಿ ಇಸ್ಪೀಟ್ ಆಟ ಆರಂಭಿಸಿದರೆ, ಮಹಿಳೆಯರು ಮನೆಯ ಅಂಗಳದ್ಲಲೇ ಚೌಕಾಬರ, ಪಗಡೆ, ಆನೆ-ಕುರಿಯಾಟ.. ಹೀಗೆ ವಿವಿಧ ಆಟಗಳನ್ನಾಡುತ್ತಾರೆ. ಮನರಂಜನೆಯೊಂದಿಗೆ ಹೊರ ಹೊಮ್ಮುವ ಸೋಲು-ಗೆಲುವು ವರ್ಷ ಪೂರ್ತಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಜನರಿಗೆ ಮಾರ್ಗದರ್ಶನ ನೀಡುತ್ತವೆ.

ಯುಗಾದಿ ಹಬ್ಬಕ್ಕೆ ಹದಿನೈದು ದಿನ ಮುನ್ನವೇ ಗ್ರಾಮೀಣ ಕ್ರೀಡೆಗಳ ಸುಗ್ಗಿ. ಜೊತೆ ಜೊತೆಗೆ ಬಯಲು ನಾಟಕಗಳ ಅಭ್ಯಾಸ. ಕೃಷಿಯ ಬಿಡುವಿನ ವೇಳೆಯ್ದಾದರಿಂದ ಊರ ಮಂದಿಯ್ಲೆಲ ಈ ಕ್ರೀಡೆಯ್ಲಲಿ ಭಾಗಿಯಾಗುತ್ತಾರೆ. ಮೈಗ್ಲೆಲ ಹರಳೆಣ್ಣೆ ಹಚ್ಚಿಕೊಂಡು ಕಬ್ಬಡ್ಡಿ, ಕೊಕ್ಕೊ, ವಾಲಿಬಾಲ್‌ನಂತಹ ಆಟವಾಡುವ ಸಂಪ್ರದಾಯ ಕೆಲವು ಪ್ರದೇಶಗಳ್ಲಲಿವೆ. ತುಮಕೂರು, ಚಿತ್ರದುರ್ಗ ಭಾಗಗಳ್ಲಲಿ ಯುಗಾದಿ ಹಬ್ಬದ ದಿನದಂದು ಉಯ್ಯಾಲೆಯಾಡುತ್ತಾರೆ. ಉಯ್ಯಾಲೆ ತೂಗುತ್ತ ತೂಗುತ್ತಾ, ಹಾಡುವ ಜನಪದ ಗೀತೆಗಳನ್ನು ಕೇಳುವುದೇ ಒಂದು ಸಂಭ್ರಮ.

ಬಿದಿಗೆ ಚಂದ್ರ ದರ್ಶನ :
ಗಣೇಶ ಚತುರ್ಥಿಯ ಬಿದಿಗೆ ಚಂದ್ರ ದರ್ಶನ ಅಪವಾದ. ಯುಗಾದಿ ಪಾಡ್ಯದ ನಂತರದ ಬಿದಿಗೆ ಚಂದ್ರ ದರ್ಶನ ಶುಭ ಎನ್ನುವ ನಂಬಿಕೆ ಗ್ರಾಮೀಣರ‍್ಲಲಿದೆ.  ಹಬ್ಬದೂಟ ಉಂಡು, ಉಯ್ಯಾಲೆಯಾಡಿ, ಜೂಜಾಟ ಮುಗಿಸಿ, ಪಶ್ಚಿಮದ್ಲಲಿ ಸೂರ್ಯ ಅಸ್ತಂಗತವಾಗುತ್ತ್ದಿದಂತೆ ಊರ ಮಂದಿಯ್ಲಲ ಮುಗಿಲತ್ತ ಮುಖಮಾಡುತ್ತಾರೆ. ಸಂವತ್ಸದರ ಮೊದಲ ಚಂದ್ರನ ಕೋಡನ್ನು ಕಂಡ ಮಂದಿ ಮನೆಗೆ ಹಿಂದಿರುಗಿ ಹಿರಿಯರ ಕಾಲಿಗೆ ನಮಸ್ಕರಿಸುತ್ತಾರೆ. ನವ ಸಂವತ್ಸರದ ಮೊದಲ ಚಂದ್ರನ ದರ್ಶನ ಇಡೀ ವರ್ಷದ್ಲಲಿ ಶುಭವನ್ನೇ ತರುತ್ತದೆ ಎಂಬ ನಂಬಿಕೆ ರೈತರ‍್ದದು.
ಚಂದ್ರನ ಕೋಡಿನ್ಲಲಿ ಮಳೆ-ಬೆಳೆಗಳ ಲೆಕ್ಕಾಚಾರ ಶುರು. ಇದಾದ ನಂತರ ಪಂಚಾಂಗ ಶ್ರವಣ. ಊರಿನ ದೇವಾಲಯದ್ಲಲೋ, ಅರಳಿಕಟ್ಟೆಯ ಮೇಲೋ ಕುಳಿತು, ಆ ವರ್ಷದ ಭವಿಷ್ಯ ಕೇಳುವ ಸಂಪ್ರದಾಯ. ಊರಿನ ಹಿರಿಯರು ವರ್ಷದ್ಲಲಿ ಯಾವ ಬೆಳೆ ಉತ್ತಮವಾಗಿದೆ ಎಂಬುದನ್ನು ವಿವರಿಸುತ್ತಾರೆ. ಧಾನ್ಯ ಹೆಸರು ಹೇಳದೇ ‘ಬಣ್ಣಗಳನ್ನು’ ಉಲೇಖಿಸುತ್ತಾ, ‘ಈ ಬಾರಿ ಹಸಿರು, ಕೆಂಪು, ಬೂದು ಬಣ್ಣದ ಧಾನ್ಯಗಳಿಗೆ ಏಳಿಗೆಯಿದೆ’ ಎಂದು ವಿವರಿಸುತ್ತಾರೆ. ಬುಧ, ಗುರು, ಚಂದ್ರ.. ಇತ್ಯಾದಿ ಗ್ರಹಗಳ ನಾಯಕತ್ವದ್ಲಲಿ ‘ಕೃಷಿ ಗ್ರಹ-ಗತಿ’ಗಳ ಲೆಕ್ಕಾಚಾರವೂ ನಡೆಯುತ್ತದೆ.

ಉತ್ತರ ಕರ್ನಾಟಕದ ಕೆಲವೆಡೆ ಚಕ್ಕಡಿಗೆ (ಗಾಡಿ) ತರಾತರ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಚಕ್ಕಡಿಯ ಒಂದೊಂದು ಭಾಗಕ್ಕೆ ಒಂದೊಂದು ಬಣ್ಣ, ಗಾಲಿಗಳಿಗೆ ಕೆಮ್ಮಣ್ಣು, ಗಾಲಿ ಅಂಚಿಗೆ, ಗುಂಭಕ್ಕೆ, ಗುಜ್ಜುಗಳಿಗೆ ಸುಣ್ಣ ಬಳಿಯುವುದು ವಾಡಿಕೆ. ಬಯಲು ಸೀಮೆಯ್ಲಲಿ ಕೆಲವು ಜನಾಂಗದವರು ಕೃಷಿ ಆಯುಧಗಳನ್ನಿಟ್ಟು ಪೂಜಿಸುತ್ತಾರೆ. ಹಿರಿಯರ ಸಮಾಧಿಗಳಿಗೆ ಹೋಗಿ ಹಣ್ಣು-ಕಾಯಿ ಮಾಡಿ, ಎಡೆ ಹಾಕಿ ನಮಸ್ಕರಿಸುತ್ತಾರೆ.

ಅದಕ್ಕೆ ಹೇಳುವುದು ಹಬ್ಬ ಎಂದರೆ ಪೂಜೆ ಪುನಸ್ಕಾರವಷ್ಟೇ ಅಲ, ಅದೊಂದು ಸಂಸ್ಕೃತಿ, ವಿಜ್ಞಾನ, ಮನರಂಜನೆಯ ಸಂಗಮವೆಂದು. ಇಂಥ ಸಂಪ್ರದಾಯ ಹಲವು ಆಧುನಿಕತೆಗಳ ಅಬ್ಬರದ್ಲಲಿ ಮಾಯವಾಗುತ್ತಿದೆ ಎಂಬುದು ನೋವಿನ ಸಂಗತಿ. ಈ ನೋವು ಉಪಶಮನವಾಗಲಿ, ‘ಖರ’ನಾಮ ಸಂವತ್ಸವರ ಹಳೆಯ ಸಂಪ್ರದಾಯಗಳ್ಲೆಲ ಮರಳಿ ಹಳ್ಳಿಗಳಿಗೆ ಬರಲಿ ಎಂದು ಹಾರೈಸೋಣ.

(ಪ್ರಜಾವಾಣಿಯ ‘ಯುಗಾದಿ ವಿಶೇಷ ಪುರವಣಿಯಲ್ಲಿ’ ಬರೆದ ಲೇಖನ)

ಪಕ್ಷಿಗಳಿಗೆ ಬೊಗಸೆ ನೀರು ಕೊಡಿ ಪ್ಲೀಸ್!

This slideshow requires JavaScript.

ಚಿತ್ರದುರ್ಗ: ಆಡುಮಲ್ಲೇಶ್ವರ ಕಿರು ಉದ್ಯಾನದ ಪಕ್ಕದ ನರ್ಸರಿಯಲ್ಲಿ ನವಿಲೊಂದು ಪೈಪ್‌ನಿಂದ ಸೋರುತ್ತಿದ್ದ ನೀರಿಗೆ ಕೊಕ್ಕು ಹಾಕುತ್ತಿತ್ತು, ಬೆಳವಲದ ಹಕ್ಕಿಯೊಂದು ಕೊಳವೆಯಿಂದ ತೊಟ್ಟಿಕ್ಕುತ್ತಿದ್ದ ನೀರಿಗೆ ಕೊಕ್ಕು ನೀಡುತ್ತಿತ್ತು. ಜಿಲ್ಲಾಧಿಕಾರಿ ಕಚೇರಿಯ ಹಿಂಬದಿಯ ಹೋಟೆಲ್‌ ಟೇಬಲ್‌ ಮೇಲ್ಭಾಗದಲ್ಲಿ ಜಗ್ಗಿನಲ್ಲಿಟ್ಟಿದ್ದ ನೀರಿಗಾಗಿ ಮಂಗಗಳು ಕಸರತ್ತು ನಡೆಸುತ್ತಿದ್ದವು…

ಬೇಸಿಗೆಯ ತೀವ್ರತೆ ಹೆಚ್ಚಾಗಿದೆ. ಏಪ್ರಿಲ್‌ – ಮೇ ತಿಂಗಳಿಗೆ ಮುನ್ನವೇ ವಾತಾವರಣದಲ್ಲಿ 38 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಮಾರ್ಚ್‌ ಆರಂಭದವರೆಗೂ ಅಲ್ಲಲ್ಲಿ ಕಾಣುತ್ತಿದ್ದ ಜಲಮೂಲಗಳು ಬರಿದಾಗಿವೆ. ನಗರಕ್ಕೆ ಹೊಂದಿ ಕೊಂಡಿರುವ ಉದ್ಯಾನ, ಅರಣ್ಯದಂಚಿನ ಪ್ರದೇಶಗಳಲ್ಲಿ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುತ್ತಿವೆ.

ಅರಣ್ಯ ಪ್ರದೇಶದಲ್ಲಿ ಎಲ್ಲೂ ನೀರು ನಿಲ್ಲುವ ವ್ಯವಸ್ಥೆ ಇಲ್ಲ. ಮನುಷ್ಯರೇನೋ ಬಾಯಾರಿದರೆ ನೀರು ಕೇಳಿ ಪಡೆಯುತ್ತಾರೆ. ಆದರೆ, ಬಿಸಿಲ ದಿನಗಳಲ್ಲಿ ಮೂಕ ಪಕ್ಷಿಗಳ ಪಾಡೇನು? ಅದಕ್ಕಾಗಿ ದಯವಿಟ್ಟು ಪಕ್ಷಿಗಳಿಗೆ ನಿತ್ಯ ಸ್ವಲ್ಪ ನೀರಿಡಿ’ ಎನ್ನುವುದು ಪಕ್ಷಿ ಪ್ರಿಯರ ಕಳಕಳಿಯಾಗಿದೆ.

ಪಕ್ಷಿ, ಪ್ರಾಣಿಗಳಿಗಾಗಿ ಆಹಾರ ನೀಡುವ ಸಂಪ್ರದಾಯ ಸಾಮಾನ್ಯ. ನೀರು ಕೊಡುವ ಕಾಯಕ  ವಿರಳ. ಆದರೆ, ನಗರದ ಕೆಲವು ಕಡೆ ಅಂಥ ಪ್ರಯತ್ನಗಳು ನಡೆದಿವೆ. ಆ ಪ್ರಯತ್ನ ವ್ಯಾಪಕ ಆಗಬೇಕು ಎನ್ನುವುದು ಪರಿಸರ ಪ್ರಿಯರ ಮನವಿಯಾಗಿದೆ.

ಮೂರು ವರ್ಷಗಳ ಪ್ರಯತ್ನ:

ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದ ಅಂಗಳದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಠದ ಎದುರಿಗಿನ ಕಟ್ಟೆಯ ಮೇಲೆ ಮಣ್ಣಿನ ಹರಿವಾಣ (ತಟ್ಟೆಗಿಂತ ದೊಡ್ಡದು) ನೀರು ತುಂಬಿಸಿ ಇಡುತ್ತಾರೆ. ಮೂರ್ನಾಲ್ಕು ವರ್ಷಗಳಿಂದ ಈ ಕಾಯಕ ಮುಂದುವರಿದಿದೆ. ಬೇಸಿಗೆ ಮಾತ್ರವಲ್ಲ, ವರ್ಷಪೂರ್ತಿ ‘ಜಲಕಾಯಕ’ ನಡೆಯುತ್ತಿದೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ, ಈ ಪಾತ್ರೆಗಳಿಗೆ ನೀರು ತುಂಬಿಸುತ್ತಾರೆ. ಮೂರು ಹೊತ್ತು ನೂರಾರು ಹಕ್ಕಿಗಳು ಹಿಂಡು ಹಿಂಡಾಗಿ ಬಂದು ನೀರು ಕುಡಿಯುತ್ತವೆ. ಕೆಲವು ಈಜಾಡುತ್ತವೆ. ಪಕ್ಕದಲ್ಲಿದ್ದ ಗಿಡಗಳ ಮೇಲೆ ಕುಳಿತು ದಣಿವಾರಿಸಿಕೊಂಡು ಹೋಗುತ್ತವೆ.

‘ಸಂಪಿಗೆ, ಬೇವಿನ ಮರ ಸುತ್ತ ಕಟ್ಟೆ ಕಟ್ಟಿಸಿದ್ದೇವೆ. ಅದರ ಸುತ್ತ ನೀರಿಟ್ಟಿದ್ದೇವೆ. ಮೂರು ಹೊತ್ತು ನೀರು ಕುಡಿಯಲು ನೂರಾರು ಪಕ್ಷಿಗಳು ಬರುತ್ತವೆ. ಚಿಟುಗು ಗುಬ್ಬಿ, ಬೆಳವಲ, ನೀಲಿ ಬಣ್ಣದ ಹಕ್ಕಿ, ಮರಕುಟುಕ, ಗುಬ್ಬಚ್ಚಿ, ಕಾಗೆ, ಸಾಂಬಾರು ಕಾಗೆ.. ಹೀಗೆ ಗಾತ್ರ, ಬಣ್ಣ, ಧ್ವನಿ ಆಧರಿಸಿ, 10ರಿಂದ 15 ಬಗೆಯ ಪಕ್ಷಿಗಳು ಬರುತ್ತವೆ. ನೀರು, ಆಹಾರ, ಆವಾಸ ಮೂರು ಇರುವುದರಿಂದ ಪಕ್ಷಿಗಳಿಗೆ ಉತ್ತಮ ತಾಣವಾಗಿದೆ’ ಎಂದು ಸ್ವಾಮೀಜಿ ಮಠದ ಅಂಗಳದ ಪಕ್ಷಿ ಸ್ನೇಹಿ ವಾತಾವರಣ ವಿವರಿಸುತ್ತಾರೆ.

ಪಾರಿವಾಳಗಳ ಹಿಂಡು:

ಕೆಳಗೋಟೆ ಯಲ್ಲಿರುವ ಆಕಾಶವಾಣಿ ಕೇಂದ್ರದ ಅಂಗಳದಲ್ಲಿ ಪಾರಿವಾಳಗಳ ಸಂಸಾರವೇ ಇದೆ. ಅಂದಾಜು 80ಕ್ಕೂ ಹೆಚ್ಚು ಪಾರಿವಾಳಗಳಿವೆ. ಇದರ ಜತೆ ಬೇರೆ ಬೇರೆ ಪಕ್ಷಿಗಳೂ ಬಂದು ಹೋಗುತ್ತವೆ.

‘ಆಕಾಶವಾಣಿ ಕೇಂದ್ರದ ಆವರಣ ದಲ್ಲಿ ಪಕ್ಷಿಗಳಿಗಾಗಿ ಕಾಯಂ ಜಲಪಾತ್ರೆ ಯನ್ನು ನಿರ್ಮಿಸಲಾಗಿದೆ. ನಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿ ಅದನ್ನು ನಿರ್ಮಿಸಿದ್ದಾರೆ. ಸೆಕ್ಯುರಿಟಿ ವಿಭಾಗದವರು ಪಕ್ಷಿಗಳಿಗೆ ಬೆಳಿಗ್ಗೆ, ಸಂಜೆ ಆಹಾರ ಪೂರೈಸುತ್ತಾರೆ. ಹೀಗಾಗಿ, ಆಕಾಶವಾಣಿ ಅಂಗಳದಲ್ಲಿ ಪಕ್ಷಿಗಳ ಸಂಸಾರ ನಿರಂತರ ವಾಗಿರುತ್ತದೆ’ ಎನ್ನುತ್ತಾರೆ ಕಾರ್ಯಕ್ರಮ ಮುಖ್ಯಸ್ಥೆ ಎಸ್‌.ಉಷಾಲತಾ.

‘ಸರಸ್ವತಿಪುರದ 1ನೇ ಕ್ರಾಸ್‌ನಲ್ಲಿ ನಮ್ಮ ಮನೆಯಿದೆ. ಅಂಗಳದಲ್ಲಿ ಸಂಪಿಗೆ, ಸೀಬೆ, ತೆಂಗಿನ ಮರಗಳಿವೆ. ಅಂಗಳದಲ್ಲಿ ದೊಡ್ಡದಾಗಿ ಪ್ಲಾಸ್ಟಿಕ್‌ ಟ್ಯಾಂಕ್ ಇಟ್ಟು, ನೀರು ತುಂಬಿಸುತ್ತೇವೆ. ಸಾಂಬಾರ ಕಾಗೆ, ಚಿಂವ್‌ ಚಿಂವ್‌ ಗುಬ್ಬಿ ಸೇರಿದಂತೆ ಹಲವು ಪಕ್ಷಿಗಳು ಬರುತ್ತವೆ. ಡ್ರಮ್‌ ಕಂಠದ ಮೇಲೆ ಕುಳಿತು, ಕೊಕ್ಕು ಹಾಕಿ, ನೀರು ಕುಡಿದು ಹಾರಿ ಹೋಗುತ್ತವೆ. ನೀರು, ನೆರಳು, ಹಣ್ಣು ಹಕ್ಕಿಗಳಿಗೆ ಸೂಕ್ತ ತಾಣವಾಗಿದೆ’ ಎನ್ನುತ್ತಾರೆ ನಿವಾಸಿ ಜಿ.ಎಸ್.ಉಜ್ಜಿನಪ್ಪ.

ಕೋಟೆ ಅಂಗಳದಲ್ಲಿ…:

ಐತಿಹಾಸಿಕ ಏಳು ಸುತ್ತನ ಕೋಟೆ ಪ್ರಾಂಗಣದಲ್ಲಿ ಪ್ರಾಣಿಗಳಿಗೆ ಅನುಕೂಲವಾಗುವಂತಹ ನೀರಿನ ವ್ಯವಸ್ಥೆ ಇಲ್ಲ ಎಂದು ಅಲ್ಲಿನ ವಾಯುವಿಹಾರಿಗಳು ಅಭಿಪ್ರಾಯಪಡು ತ್ತಾರೆ. ಕಳೆದ ವರ್ಷ ಗೊಂಬೆ ಮಂಟಪದ ವ್ಯಾಪ್ತಿಯಲ್ಲಿ ಅಳಿಲು, ಪಕ್ಷಿಗೆ ಅನುಕೂಲ ವಾಗುವಂತೆ ಕೆಲವು ವಾಯುವಿಹಾರಿ ಗಳು ಅಲ್ಲಲ್ಲೇ ಚಿಪ್ಪು ಮತ್ತು ಪ್ಲಾಸ್ಟಿಕ್ ಡಬ್ಬಗಳಲ್ಲಿ ನೀರು ತುಂಬಿಡುತ್ತಿದ್ದರು.

ಅದು ಸರಿ ಹೋಗುತ್ತಿಲ್ಲ­ವಾದ್ದರಿಂದ, ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕ ರಿಗೆ ಸಣ್ಣದೊಂದು ಬಾನಿ (ತೊಟ್ಟಿ) ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಆ ಕೆಲಸ ಇನ್ನೂ ಆಗಿಲ್ಲ. ಪ್ರಾಣಿ ಪಕ್ಷಿಗಳು ಪರದಾಡುವುದು ತಪ್ಪಿಲ್ಲ’ ಎನ್ನುತ್ತಾರೆ ಕೋಟೆ ವಾಯುವಿಹಾರಿಗಳು.

ಯಾಕ್ರಿ ಪದ್ಮನಾಭ್ ಹೀಗ್ ಮಾಡ್ಕೊಂಡ್ರಿ..

ಕಾರ್ಟೂನಿಸ್ಟ್ ಗೆಳೆಯ ಎಸ್.ವಿ.ಪದ್ಮನಾಭ್ ಆತ್ಮಹತ್ಯೆ ಮಾಡಿಕೊಂಡರು ಎಂದು ಮೆಸೇಜ್ ನೋಡಿದಾಗ, ಕೆಲವೊಮ್ಮೆ ಕಾರ್ಟುನಿಸ್ಟ್ ಗೆಳೆಯರು ಜೋಕ್ ಮಾಡ್ತಿರ್ತಾರೆ. ಇದು ಹಾಗೆ ಇರಬೇಕು ಅಂದು ಕೊಂಡು, ಆತ್ಮೀಯ ಗೆಳೆಯರಿಗೆ ಕರೆ ಮಾಡಿ ಕೇಳಿದೆ. ಮೆಸೇಜ್ ಸುಳ್ಳಾಗಿರಲಿಲ್ಲ. ಆದರೆ, ಆ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಪದ್ಮನಾಭ್, ಕೇವಲ ಮಾತು-ಮಂಥನದ ಗೆಳೆಯರಷ್ಟೇ ಅಲ್ಲ. ಸತತ ಮೂರು ವರ್ಷಗಳ ಕಾಲ ನನ್ನೊಂದಿಗೆ ಮಧ್ಯಾಹ್ನದ ಊಟದ ನೆಂಟನಾಗಿದ್ದರು. ನನ್ನ ಅಮ್ಮನ ಕೈಯಲ್ಲಿ ತಯಾರಾದ ತಿಳಿ ಸಾರು ಅವರಿಗೆ ಬಹಳ ಪ್ರಿಯವಾಗಿತ್ತು.

 

2004ರಲ್ಲಿ ‘ವಿಜಯ ಕರ್ನಾಟಕ’ದಲ್ಲಿದ್ದಾಗ, ನಾನು ಕೃಷಿ ಮ್ಯಾಗಜಿನ್ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಪಕ್ಕದ ಸೆಕ್ಷನ್ ಅವರದ್ದು. ಮಧ್ಯಾಹ್ನ 1.30 ಆದ ಕೂಡಲೇ,’ಏನ್ರಿ ಇವತ್ತು ಊಟದ ವಿಶೇಷ’ ಎನ್ನುತ್ತಿದ್ದರು ಪದ್ಮನಾಭ್. ಹಾಗೆ ಕೇಳುತ್ತಿದ್ದಂತೆ, ಅವರ ಟೇಬಲ್ ಡೈನಿಂಗ್ ಟೇಬಲ್ ಆಗುತ್ತಿತ್ತು. ನಾನು, ರವಿ ಅಜ್ಜೀಪುರ, ಶಶಿಧರ ಹಳೇಮನಿ, ಎನ್. ಆರ್. ಬಡಿಗೇರ್, ಮಣಿಕಾಂತ್, ರಜನಿ… ಹೀಗೆ ಇನ್ನೂ ಅನೇಕ ಗೆಳೆಯರು ಎಲ್ಲ ಒಟ್ಟಿಗೆ ಊಟಕ್ಕೆ ಸೇರುತ್ತಿದ್ದೆವು. ಬಾಕ್ಸ್ ಗಳು ಬದಲಾಗುತ್ತಿದ್ದವು. ಅನೇಕ ಬಾರಿ, ಊಟ ಕಡಿಮೆಯಾದಾಗ, ಅರೆ ಹೊಟ್ಟೆ ಮಾಡ್ಕೊಬೇಡಿ ಬನ್ನಿ, ಅಂತ ಎಸ್ ಎಲ್ ವಿಗೆ ಹೋಗಿ ಊಟ ಮಾಡಿದ ದಿನಗಳೂ ಇದ್ದವು.
ಊಟದ ಜತೆ, ನಮ್ಮ ಟೇಬಲ್ ಮೇಲೆ ಹಿಂದಿನ ದಿನದ ಗರಮಾಗರಂ, ಅಪಾರಾರ್ಥ ಕಾರ್ಟೂನುಗಳು ಉಪ್ಪಿನಕಾಯಿಯಾಗುತ್ತಿದ್ದವು. ಆ ಕಾರ್ಟೂನ್ ಹೆಂಗೆ ಬರದೆ ಗೊತ್ತಾ ಅಂತ ಪದ್ಮನಾಭ್ ಗಂಭೀರವಾಗಿ ವಿವರಣೆ ನೀಡುತ್ತಿದ್ದರೆ, ಉಳಿದವರು ಬಾಯಲ್ಲಿ ಅನ್ನದ ತುತ್ತಿದ್ದರೂ, ತೊದಲುಕೊಂಡೇ ನಗುತ್ತಿದ್ದರು. ನೆತ್ತಿಗೆ ಹತ್ತುವವರೆಗೂ ನಗುತ್ತಿದ್ದರು. ‘ಅಪಾರಾರ್ಥ’ ಅಂಕಣದಲ್ಲಿ ಅವರು ಬರೆದಿದ್ದ ‘ಇನ್ ಕಮಿಂಗ್ ಕಾಲ್ಸೂ’ ಎಂಬ ಕಾರ್ಟೂನ್ ಇವತ್ತು ನೆನಪಿಸಿಕೊಂಡರೂ ನಗೆ ಹುಟ್ಟಿಸುತ್ತದೆ. ಇವತ್ತಿಗೂ ಅನೇಕ ಪತ್ರಿಕೋದ್ಯಮ ಶಿಬಿರಗಳಲ್ಲಿ ಈ ಕಾರ್ಟೂನ್ ಅನ್ನು ಉದಾಹರಿಸುತ್ತೇನೆ.
ಪದ್ಮನಾಭ್ ಆಫೀಸಿಗೆ ಬಂದ ಕೂಡಲೇ, ಎಲ್ಲ ಪೇಪರ್ ತಡಕುತ್ತಿದ್ದರು. ‘ಏನೂ ಆಹಾರ ಸಿಗಲಿಲ್ಲವಲ್ರೀ.. ಕಾರ್ಟೂನ್ ಬರೆಯೋಕೆ ಐಡಿಯಾ ಕೊಡ್ರಿ’ ಅಂತ ನಮ್ಮ ಹತ್ರ ಮಾಹಿತಿ ತಗೊಳ್ಳುತ್ತಿದ್ದರು. ನಾವೆಲ್ಲ ತಲೆಗೊಂದು ಐಡಿಯಾಕೊಟ್ಟು, ನಾಳೆ ಇದೇ ಬರೀತಾರೆ ನೋಡು.. ಎಂದು ಹೇಳುತ್ತಾ, ಬೆಳಿಗ್ಗೆ ಎದ್ದು ಪೇಪರ್ ನೋಡಿದರೆ, ವಿಭಿನ್ನವಾದ ಕಾರ್ಟೂನು ಪ್ರಕಟವಾಗಿರುತ್ತಿತ್ತು. ಪದ್ಮನಾಭ್ ಯೋಚಿಸುತ್ತಿದ್ದ ರೀತಿಯೇ ಅದ್ಭುತವಾಗಿತ್ತು. ಆತನ ಗೆರೆಗಳಲ್ಲಿ, ಪರಿಕಲ್ಪನೆಗಳಲ್ಲಿ ಬಹಳ ಸೂಕ್ಷ್ಮತೆಗಳಿರುತ್ತಿದ್ದವು.
ಪದ್ಮನಾಭ್ ಕಾರ್ಟೂನ್ ಪತ್ರಿಕೆಗಳಲ್ಲಷ್ಟೇ ಪ್ರಕಟವಾಗುತ್ತಿದ್ದಾಗ, ಅದನ್ನು ಕೃಷಿ ಬರಹಗಳಿಗೂ ಬಳಸಿಕೊಳ್ಳಬೇಕೆಂದು ಯೋಚನೆ ಮಾಡಿದ್ದು ಗೆಳೆಯ ಜಿ.ಕೃಷ್ಣಪ್ರಸಾದ್. ಪದ್ಮನಾಭ್ ಕೂಡ ಕೃಷಿ ಮನೆತನದವರು, ಮಣ್ಣು, ಗೊಬ್ಬರ, ಗಿಡ ಮರಗಳ ಬಗ್ಗೆ ಪ್ರೀತಿ ಇದ್ದಿದ್ದರಿಂದ ಕೃಷಿ ಪುಸ್ತಕಕ್ಕೆ ಕಾರ್ಟೂನ್ ಬರೆಯೋಕೆ ಒಪ್ಪಿದರು. ‘ಸಾವಯವ ಕೃಷಿಯ ಹತ್ತು ಹೆಜ್ಜೆಗಳು’ ಪುಸ್ತಕಕ್ಕೆ ಬರೆದುಕೊಟ್ಟರು. ಆ ಚಿತ್ರಗಳು ಎಷ್ಟು ಲವ್ಲಿಯಾಗಿದ್ದವೆಂದರೆ, ರೈತ ಮತ್ತು ಎರೆಹುಳು ನಡುವಿನ ಪ್ರೀತಿಯನ್ನು ಬಹಳ ಅಂದವಾಗಿ ಗೆರೆಗಳಲ್ಲಿ ಮೂಡಿಸಿದ್ದರು. ಇದಾದ ಮೇಲೆ ಕೃಷಿ ಪುಸ್ತಕದ ನಮ್ಮ ಬಳಗಕ್ಕೆ ಅವರು ಸೇರಿದರು. ಕೃಷಿ ಕಾರ್ಯಕ್ರಮಗಳಿಗೂ ಬರೋದಕ್ಕೆ ಶುರು ಮಾಡಿದರು.
ಮುಂದೆ, ಪದ್ಮನಾಭ್, ನನ್ನ ಅಜೋಲ್ಲಾ ಪುಸ್ತಕಕ್ಕೆ ಚಿತ್ರಗಳನ್ನು ಬರೆದುಕೊಟ್ಟರು. ಮೊದಲು ಒಪ್ಪಿರಲಿಲ್ಲ. ಪುಸ್ತಕ ಓದಿದ ಮೇಲೆ, ‘ಬಹಳ ಚೆನ್ನಾಗಿದೆ ರೀ, ಇಂಥ ಮಾಹಿತಿಗೆ, ಈ ಕಾರ್ಟೂನ್ ಬರೆಯೋಣ’ ಅವರೇ ನಿರ್ಧಾರ ಮಾಡಿ ಚಿತ್ರಗಳನ್ನು ಬರೆದರು. ‘ರೈತರೊಬ್ಬರು ಅಜೋಲಾ ಮುಂದೆ ಕುಳಿತು, ನಿಬ್ಬೆರಗಾಗಿ ನೋಡುತ್ತಿರುವುದನ್ನು’ ಅದ್ಭುತವಾಗಿ ಬರೆದಿದ್ದರು.
ಅಷ್ಟು ಅದ್ಬುತವಾಗಿ ಕಾರ್ಟೂನ್ ರಚಿಸುತ್ತಿದ್ದರೂ, ಬೇರೆ ಕಾರ್ಟೂನಿಸ್ಟ್ ಗಳ ಬಗ್ಗೆ ಬಹಳ ಗೌರವವಿತ್ತು. ಆಗ ಪ್ರಜಾವಾಣಿಯಲ್ಲಿ ಪಿ.ಮಹಮದ್ ‘ಚಿನಕುರುಳಿ’ ಬರೆಯುತ್ತಿದ್ದರು. ಅದನ್ನಿಟ್ಟುಕೊಂಡು, ಅನೇಕ ಬಾರಿ ಅವರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು.
ಮೊನ್ನೆ ಮೊನ್ನೆ ಕೂಡ, ಹೆಲ್ಮೆಟ್ ಕಡ್ಡಾಯವಾದಾಗ, ‘ಯಾರು ಯಾರನ್ನು ಬೇಕಾದರೂ ಬೈಕ್ ಹಿಂದೆ ಕೂರಿಸಿಕೊಂಡು ಹೋಗಬಹುದು’ ಎಂದು ಪದ್ಮನಾಭ್ ಕಾರ್ಟೂನ್ ಬರೆದಿದ್ದರು. ಅದನ್ನು ನೋಡಿ, ‘ರೀ ಪದ್ಮನಾಭ್ ಎಂಥ ಅಪಾಯದ ಐಡಿಯಾ ಕೊಡ್ತೀರಿ’ ಎಂದು ಪ್ರತಿಕ್ರಿಯಿಸಿದ್ದೆ. ಪ್ರತಿಕ್ರಿಯೆ ಸಾಲದು ಎಂದು ಫೋನ್ ಮಾಡಿ ಮಾತನಾಡಿದ್ದೆ. ‘ಶ್ರೀಕಂಠ, ಫೋನ್ ಕಳೆದು ಹೋಗಿದೆ. ನಿಮ್ಮ ನಂ. ಇರಲಿಲ್ಲ. ಅನೇಕ ಸಾರಿ ಫೋನ್ ಮಾಡ್ಕೋಬೇಕು ಅಂದುಕೊಂಡೆ, ನಂಬರ್ ಸಿಕ್ಕಿರಲಿಲ್ಲ. ನಿಮ್ಮ ನಂಬರ್ ಕೊಡಿ’ ಎಂದು ತೆಗೆದುಕೊಂಡಿದ್ದರು. ನಾನು, ಮಲ್ಲಿಕಾರ್ಜುನ ಹೊಸಪಾಳ್ಯ, ನಮ್ಮ ಹೊಸ ಪುಸ್ತಕಕ್ಕೆ ಕಾರ್ಟೂನ್ ಮಾಡಿಸುವ ಕುರಿತು ಯೋಚನೆ ಮಾಡ್ತಿದ್ದೆವು. ಆದರೆ, ಫೋನ್ ನಂಬರ್ ತಗೊಂಡ ಪದ್ಮನಾಭ್ ಮತ್ತೆ ಕರೆ ಮಾಡಲೂ ಇಲ್ಲ. ನಮ್ಮ ಕರೆಗೂ ಸಿಗಲಿಲ್ಲ.
ಯಾಕ್ ಹೀಗಾಯ್ತು ಎಂದು ಕೊಳ್ಳುತ್ತಿದ್ದಾಗ, ‘ಪದ್ಮನಾಭ್ ಆತ್ಮಹತ್ಯೆ ಮಾಡ್ಕೊಂಡ್ರು’ ಅಂತ ಬುಧವಾರ ನಾಲ್ಕು ಗಂಟೆಗೆ ಮೆಸೇಜ್ ಬಂತು. ಖಚಿತ ಪಡಿಸಿಕೊಳ್ಳೋಕೆ ಗೆಳೆಯರಿಗೆ ಕರೆ ಮಾಡಿದೆ. ವಿಷಯ ಸುಳ್ಳಾಗಲಿಲ್ಲ. ಕಾರಣ ಗೊತ್ತಾಗಲಿಲ್ಲ. ಅಲ್ಲಿ ಇಲ್ಲಿ ಸಿಕ್ಕಿದ ಗೆಳೆಯರು, ಫೋನ್ ನಲ್ಲಿ ಮಾತನಾಡಿದವರು,
‘ಸಾಲಬಾಧೆ’ ಸಾವಿಗೆ ಕಾರಣವಂತೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಹತ್ತಿರವಿದ್ದ ಗೆಳೆಯರು, ಅವರನ್ನು ಮಾತನಾಡಿಸಿ, ಏನಾದರೂ ಪರಿಹಾರ ಸೂಚಿಸಬಹುದಿತ್ತೋ ಏನೋ. ಹಾಗಂತ ಗೆಳೆಯ ಟಿ.ಆರ್.ಶಿವಪ್ರಸಾದ್ ಹೇಳ್ತಿದ್ದ. ಏನೋ ಅಪ್ಪ, ನಿನ್ನೆ ಮೊನ್ನೆಯಿಂದ ಮಾಧ್ಯಮದಲ್ಲಿ ಕೆಲಸ ಮಾಡುವ ಮೂರ್ನಾಲ್ಕು ಮಂದಿ ಹೀಗೆ ಮರಣಕ್ಕೆ ತುತ್ತಾಗಿದ್ದಾರೆ. ಕೆಲಸದ ಒತ್ತಡವೋ, ಜೀವನ ಶೈಲಿಯಲ್ಲಾದ ಬದಲಾವಣೆಯೋ.. ಒಂದು ಗೊತ್ತಾಗುತ್ತಿಲ್ಲ. ಇವೆಲ್ಲ ನೋಡಿಕೊಂಡು ವಾಪಸ್ ಮಣ್ಣಿನ ಮೇಲೆ ನಿಂತು ನೆಲೆ ಕಂಡು ಕೊಳ್ಳೋಣ ಎಂದರೆ, ಅಲ್ಲೂ ಕೂಡ ‘ಪದ್ಮನಾಭ್’ ಪ್ರಕರಣಗಳೇ ಕಾಣಿಸುತ್ತಿವೆ. ಸಾಯವ ರೈತರಿಗೆ ಆಪ್ತ ಸಲಹೆ ನೀಡುವುದಕ್ಕೂ ಊರಿನಲ್ಲಿ ಜನ ಇಲ್ಲದಂತಾಗಿದ್ದಾರೆ. ಬದುಕು ಬಹಳ ‘ಮೌನ’ ಎನ್ನಿಸುತ್ತಿದೆ.

ಅದೆಲ್ಲ ಸರಿ, ಪದ್ಮನಾಭ್, ಗೆರೆಗಳೊಂದಿಗೆ ನಮ್ಮನ್ನೆಲ್ಲ ನಗಿಸುತ್ತಾ, ಒಂದು ದಿನವೂ ಮುಖದ ಮೇಲೆ ಸಾವಿನ ಗೆರೆ ಎಳೆದುಕೊಳ್ಳದ ನೀವು.. ಯಾಕೆ ಹೀಗೆ ಮಾಡ್ಕೊಂಡ್ರಿ…. !

ಹೊಲದ ಕೃಷಿಹೊಂಡದಲ್ಲಿ ನೀರಿನ ಸೆಲೆ !

ನೀರಿನ ಸೆಲೆಯಿಂದ ತುಂಬಿಕೊಳ್ಳುತ್ತಿದ್ದ ತೆರೆದ ಬಾವಿಗಳು ಮಾಯವಾಗುತ್ತಿರುವ ಈ ಕಾಲದಲ್ಲಿ 3 ಮೀಟರ್ ಆಳದ ಕೃಷಿಹೊಂಡವೊಂದರಲ್ಲಿ ನೀರಿನ ಸೆಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ…!
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಕೆರೆಯ ನಾಗವೇಣಿ ಲೋಕನಾಥ್ ಎಂಬ ರೈತರ ಹೊಲದ ಕೃಷಿಹೊಂಡದಲ್ಲಿ ನೀರಿನಸೆಲೆ ಲಭ್ಯವಾಗಿದೆ. ಈ ಸಣ್ಣದಾದ ನೀರಿನ ಒರತೆಯಿಂದಾಗಿ ಒಂದೆರಡು ವಾರದಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಕೃಷಿಕ ಮಹಿಳೆ ನಾಗವೇಣಿ, ಕೃಷಿ ಚಟುವಟಿಕೆಗೆ ಎದುರಾಗಿದ್ದ ನೀರಿನ ಸಮಸ್ಯೆಗೆ ಪರಿಹಾರವಾಗಿ 20 ಮೀಟರ್ ಅಗಲ,20ಮೀಟರ್ ಉದ್ದ, 3 ಮೀಟರ್ ಆಳದ ಅಳತೆಯ ಕೃಷಿಹೊಂಡ ಮಾಡಿಸಿದ್ದಾರೆ. ಇಲಾಖೆಯ ಯೋಜನೆ­ಯೊಂದರಡಿ ₨ 1ಲಕ್ಷ ವೆಚ್ಚದಲ್ಲಿ ನಿರ್ಮಿಸಿ­ರುವ ಕೃಷಿಹೊಂಡದ ನಿರ್ಮಾಣ ಅಂತಿಮ ಹಂತ­ದಲ್ಲಿ­ದ್ದಾಗ, ಹೊಂಡದ ತುದಿಯಿಂದ ನೀರಿನ ಒರತೆ ಕಾಣಿಸಿಕೊಂಡಿದೆ. ಒಂದೆರಡು ವಾರಗಳಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಬಿರು ಬೇಸಿಗೆಯಲ್ಲಿ ನೀರಿನ ಒರತೆ ಕಂಡು, ನಾಗವೇಣಿ ಕುಟುಂಬ ಸಂಭ್ರಮಪಟ್ಟಿದೆ.

ನೀರಿನ ಸೆಲೆ ಹೇಗೆ?
ಹಿರಿಯೂರು ತಾಲ್ಲೂಕಿನ ಐಮಂಗಲ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ  200 ರಿಂದ 250 ಅಡಿಗೆ ಲಭ್ಯವಿದೆ. ಆದರೆ, ಆ ನೀರಿನಲ್ಲಿ 1500 ಪಿಪಿಎಂಗಿಂತ ಹೆಚ್ಚು ಲವಣಾಂಶಗಳಿದ್ದು, ಕುಡಿಯಲು ಯೋಗ್ಯವಿಲ್ಲ. ಇಂಥ ಪ್ರದೇಶದಲ್ಲಿ ತೆಗೆಸಿರುವ ಕೃಷಿಹೊಂಡದಲ್ಲಿ 10 ಮೀಟರ್‌ಗೆ ನೀರಿನ ಸೆಲೆ ಲಭ್ಯವಾಗಿದೆ. ಜತೆಗೆ, ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಜಲತಜ್ಞ ಎನ್.ದೇವರಾಜರೆಡ್ಡಿ ಖಚಿತಪಡಿಸುತ್ತಾರೆ. ‘ಈ ಭಾಗದ ಭೂಗರ್ಭದಲ್ಲಿರುವ ಶಿಥಿಲ (ಫೆದರ್‌ಝೋನ್) ವಲಯದಲ್ಲಿ ನೀರಿನ ಹರಿವಿನ ಪ್ರಮಾಣ ಉತ್ತಮವಾಗಿದೆ. ಇದೇ ಕಾರಣದಿಂದಾಗಿಯೇ ಇಷ್ಟು ಮೇಲ್ಭಾಗದಲ್ಲಿ ನೀರು ಲಭ್ಯವಾಗಿದೆ’ ಎಂದು ರೆಡ್ಡಿ ಅಭಿಪ್ರಾಯ­ಪಡುತ್ತಾರೆ.
‘ಕೃಷಿಹೊಂಡದ ಸಾಲಿನಲ್ಲಿರುವ (ಮೇಲ್ಭಾಗದಲ್ಲಿ) ಹೊಲದಲ್ಲಿ ಒಂದೆರಡು ಬಾವಿಗಳಿವೆ. ಬಾವಿ ಹಾಗೂ ಕೃಷಿ ಹೊಂಡ­ವಿರುವ ಜಾಗ ಇಳಿಜಾರಿನಲ್ಲಿದೆ. ಮಳೆ ನೀರು ಇದೇ ಜಾಡಿನಲ್ಲಿ ಹರಿಯುವಾಗ ಬಾವಿಗಳಲ್ಲಿ ಇಂಗಿರಬಹುದು. ಬಾವಿ ನೀರು ಬಳಸದಿರುವುರಿಂದ ಅಂತರ್ಜಲ ಹೆಚ್ಚಾಗಿ ಕೃಷಿ ಹೊಂಡದಲ್ಲಿ ಒರತೆ ಕಾಣಿಸಿಕೊಂಡಿ­ರ­ಬಹುದು ಎಂದು ನಾಗವೇಣಿ ಮತ್ತೊಂದು ರೀತಿ ಅಂದಾಜಿಸುತ್ತಾರೆ.

4 ಕಿ.ಮೀ ಕ್ಯಾಚ್‌ಮೆಂಟ್‌:
ನಾಲ್ಕು ಕಿ.ಮೀ ವ್ಯಾಪ್ತಿಯ ಹಳ್ಳಿಗಳ ನೀರು ನಾಗವೇಣಿಯವರ ಜಮೀನಿನ ಮೇಲೆ ಹರಿದು, ನಂತರ ಮುಂದಿ­ರುವ ಸಾಣಿಕೆರೆಗೆ ಸೇರುತ್ತಿತ್ತಂತೆ. ಹಾಗೆ ಹರಿಯುವ ನೀರು ಭೂಮಿಯಲ್ಲಿ ಇಂಗಿ, ಭೂಗರ್ಭದ ಶಿಥಿಲಪದರ­ದಲ್ಲಿ ಸಂಗ್ರಹವಾಗಿದೆ. ಇಳಿಜಾರಿಗೆ ಅಡ್ಡಲಾಗಿ ಕೃಷಿಹೊಂಡ ನಿರ್ಮಿಸಿರುವುದರಿಂದ, ನೀರಿನ ಸೆಲೆ ಕಾಣುತ್ತಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ತಜ್ಞರು ಹೀಗೆ ಹೇಳ್ತಾರೆ…
ಭೂಗರ್ಭದ ಶಿಥಿಲವಲಯದಲ್ಲಿ ನೀರಿನ ಪ್ರಮಾಣ ಉತ್ತಮವಾಗಿರುವುದೇ, ಹೊಂಡದಲ್ಲಿ ನೀರಿನ ಒರತೆ ಗೋಚರಿಸಲು ಸಾಧ್ಯವಾಗಿದೆ. ಜಮೀನಿನಲ್ಲಿ ಮಳೆ ನೀರು ಇಂಗಿದರೆ ಇಂಥ ಅಚ್ಚರಿಗಳು ಕಾಣಿಸಲು ಸಾಧ್ಯವಿದೆ.
– ಎನ್. ದೇವರಾಜರೆಡ್ಡಿ, ಜಲತಜ್ಞರು,
ಕೋಟ್‌…

ಕೊನೆ ಕ್ಷಣದಲ್ಲಿ ನೀರು ಕಂಡಿತು..

ಜೆಸಿಬಿಯಿಂದ ಮಣ್ಣು ತೆಗೆಸಿ, ಪ್ಲಾಸ್ಟಿಕ್ ಹೊದಿಸುವ ಹಂತದಲ್ಲಿದ್ದೆವು. ಆಗ ಹೊಂಡದ ಮೂಲೆಯಿಂದ ಒರತೆ ಕಾಣಿಸಿಕೊಂಡಿತು. ಈಗ ಹೊಂಡದಲ್ಲಿ ಮೊಳಕಾಲುದ್ದ ನೀರು ಸಂಗ್ರಹವಾಗಿದೆ.
– ನಾಗವೇಣಿ ಲೋಕನಾಥ್, ವದ್ದೀಕೆರೆ