ಸದಾ ವತ್ಸಲೇ ಮಾತೃಭೂಮಿ…!

ಭೂಮಿಯನ್ನು ‘ಮಾತೃಭೂಮಿ, ಭೂಮ್ತಾಯಿ’ ಎನ್ನುತ್ತೇವೆ. ವನ್ಯ, ಖನಿಜ ಖಜಾನೆಯಾಗಿರುವುದರಿಂದ ‘ರತ್ನಗರ್ಭಾ ವಸುಂಧರೆ, ಹಸಿರು ನೀಲಾಂಬರ ಭೂಷಿತೆ’ ಎಂದೆಲ್ಲಾ ವ್ಯಾಖ್ಯಾನಿಸುತ್ತೇವೆ. ‘ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ಮರೆಯಲಿ…’ ಎಂದು ಹಾಡುತ್ತೇವೆ. ಹಾಗಾಗಿಯೇ ವೈಜ್ಞಾನಿಕವಾಗಿ ಭೂಮಿ ಒಂದು ಗ್ರಹವಾದರೂ, ಭಾವನಾತ್ಮಕವಾಗಿ ಅದು ನಮ್ಮೆಲ್ಲರ ‘ಮನೆ’. ಅದರ ಮೇಲಿರುವ ಸಕಲ ಜೀವರಾಶಿಯೂ ನಮ್ಮ ಕುಟುಂಬ. ಆದರೆ ಅದು ನಮ್ಮಆಸ್ತಿಯಲ್ಲ. ಪೀಳಿಗೆಯಿಂದ ಎರವಲಾಗಿ ಪಡೆದದ್ದು. ಅದನ್ನು ಅಷ್ಟೇ ಸುರಕ್ಷಿತವಾಗಿ, ಜೋಪಾನವಾಗಿ ಹಿಂದಿರುಗಿಸುವ ಜವಾಬ್ದಾರಿ ನಮ್ಮ ಮೇಲಿದೆ !

ಆದರೆ ನಾವೇನು ಮಾಡುತ್ತಿದ್ದೇವೆ? ಇಂಥ ಭೂಮಿಯನ್ನು ನಮ್ಮ ಸೌಲಭ್ಯ, ಸೌಕರ್ಯಗಳ ದುರಾಸೆಯಿಂದ ಬಲಿಕೊಡುತ್ತಿದ್ದೇವೆ. ಭೂಮಿ ತನ್ನ ರಕ್ಷಣೆಗಾಗಿ ತಾನೇ ನಿರ್ಮಿಸಿಕೊಂಡಿದ್ದ ಕಾಡು- ಮೇಡು, ಕೆರೆ-ಹೊಂಡ, ಗುಡ್ಡ-ಬೆಟ್ಟಗಳನ್ನೆಲ್ಲ ನಾಶ ಮಾಡುತ್ತಿದ್ದೇವೆ. ದಾಹ ತೀರಿಕೆಗಾಗಿ ಅಂತರ್ಜಲ ಬರಿದು ಮಾಡುತ್ತಿದ್ದೇವೆ. ಖನಿಜ ಸಂಪತ್ತಿಗಾಗಿ ಭೂಮಿ ಬಗೆಯುತ್ತಿದ್ದೇವೆ. ಮಡಿಲಲ್ಲಿ ಸೋಬಲಕ್ಕಿ ಇಟ್ಟು ಮನೆಯ ಹೆಣ್ಮಗಳಂತೆ ಕಾಣಬೇಕಿದ್ದ ಭೂಮಿಗೆ ವಿಷಕಾರಕ ತ್ಯಾಜ್ಯಗಳನ್ನು ತುಂಬುತ್ತಿದ್ದೇವೆ. ಭೂಮಿಯಲ್ಲಿ ಬದುಕುತ್ತಿರುವ ಜೀವಜಂತು ನಾಶ ಮಾಡುತ್ತಿದ್ದೇವೆ. ಅಳಿದುಳಿದ ನಿಸರ್ಗವನ್ನು ಮಲಿನಗೊಳಿಸುತ್ತಿದ್ದೇವೆ. ವಿಷ ಪ್ರಾಶನ ಮಾಡಿಸುತ್ತಿದ್ದೇವೆ. ‘ನಿಸರ್ಗ ಕುಟುಂಬ’ದ ಕೆಮಿಸ್ಟ್ರಿಯನ್ನೇ ಬದಲಾಯಿಸುತ್ತಿದ್ದೇವೆ. ಋತುಮಾನಗಳನ್ನೇ ಏರು ಪೇರು ಮಾಡುತ್ತಿದ್ದೇವೆ!

ಕೇಳಿಸದೇ ಭೂ ದೇವಿಯ ಆರ್ತನಾದ

ನಿಸರ್ಗದ ಮೇಲೆ ನಡೆಯುತ್ತಿರುವ ಇಂಥ ದುಷ್ಕೃತ್ಯಗಳಿಂದಾಗಿ ಭೂಮಿಯ ಒಡಲು ಬಿಸಿಯಾಗುತ್ತಿದೆ. ಭೂಮಿ ಬಿಕ್ಕಿ ಬಿಕ್ಕಿ ಅಳುತ್ತಿದೆ. ಅದರ ಕಣ್ಣೀರು ಪ್ರವಾಹ, ಸುನಾಮಿಯಾಗಿ ಹಳ್ಳಿ, ನಗರ, ಪಟ್ಟಣಗಳನ್ನು ಯಾವುದೇ ಮುಲಾಜಿಲ್ಲದೆ ಆಹುತಿ ತೆಗೆದುಕೊಳ್ಳುತ್ತಿದೆ. ಇನ್ನೊಂದೆಡೆ ಮರುಭೂಮಿ ವಿಸ್ತರಣೆಯಾಗುತ್ತಿದೆ. ಈ ಏರುಪೇರುಗಳೊಂದಿಗೆ ಹೊಸ ಹೊಸ ರೋಗ-ರುಜಿನಗಳು ಅವತರಿಸುತ್ತ, ಪರೋಕ್ಷವಾಗಿ ಮಾನವನ ವಿರುದ್ಧ ಪ್ರಕೃತಿ ಯುದ್ಧ ಸಾರುತ್ತಿದೆ.

ಕೇಳಿಸದ ಭೂದೇವಿ ಆರ್ತನಾದ:
ಭೂಮಿ ತನಗಾಗುವ ನೋವನ್ನು ಹಲವು ಬಾರಿ ನಮ್ಮ ಮುಂದೆ ನಾನಾ ರೂಪದಲ್ಲಿ ತೋಡಿಕೊಳ್ಳುತ್ತದೆ. ವಾತಾವರಣ ಏರುಪೇರು ಮಾಡಿ, ಸೋನೆ ಮಳೆ ಸುರಿಸಿ, ಸಣ್ಣದಾಗಿ ಕಂಪಿಸಿ, ‘ನೋಡ್ರಪ್ಪಾ, ನನಗೆ ನೋವಾಗ್ತಿದೆ. ನಿಮ್ಮ ಅವಾಂತರಗಳನ್ನು ನಿಲ್ಲಿಸಿ’ ಎಂದೆಲ್ಲ ಬೇಡುತ್ತದೆ. ಪ್ರಕೃತಿಯನ್ನೇ ಅರ್ಥ ಮಾಡಿಕೊಳ್ಳದ ಪೃಥ್ವಿಯ ಪುತ್ರನಾದ ಮಾನವ, ತಾಯಿಯ ಆರ್ತನಾದವನ್ನು ಕೇಳಿಸಿಕೊಳ್ಳದೇ ನಿಸರ್ಗಕ್ಕೆ ತಲೆಬಾಗದೆ ಅಧಿಪತಿಯಾಗಲು ಮಹೀಪತಿಯಾಗಲು ಹೊರಟಿದ್ದಾನೆ. ಇಂಥ ಅಟ್ಟಹಾಸಗಳಿಗೆ ಭೂ ತಾಯಿ ಒಮ್ಮೊಮ್ಮೆ ಚಂಡಮಾರುತ, ಭೂಕಂಪ, ಬರಗಾಲದಂತಹ ವಿಕೋಪಗಳ ರುದ್ರ ನರ್ತನದೊಂದಿಗೆ ಉತ್ತರಿಸುತ್ತಾಳೆ!
ಇದು ಹೀಗೆ ಮುಂದುವರಿದರೆ ನಿಂತ ಜಾಗವೇ ಕುಸಿಯುತ್ತದೆ. ದೇಶಗಳು ಆಕೆಯ ಗರ್ಭದಲ್ಲಿ ಸಮಾದಿಯಾಗುತ್ತವೆ. ಪ್ರಳಯ ಎಂಬುದು ದೇವಾನು ದೇವತೆಗಳ ಶಾಪವಲ್ಲ. ವರ್ಷಾನುಗಟ್ಟಲೆಯಿಂದ ಮಾನವ ನಿಸರ್ಗದ ಮೇಲೆ ನಡೆಸಿದ ಅತ್ಯಾಚಾರಗಳ ಪ್ರತಿಫಲ.
ಅಂಥ ಅಪಾಯದ ಕರೆಗಂಟೆ ಈಗಾಗಲೇ ದೂರದ ಜಪಾನ್‌ನಲ್ಲಿ ಮೊಳಗಿದೆ. ಐದು ವರ್ಷಗಳ ಹಿಂದೆ ನಮ್ಮ ರಾಷ್ಟ್ರಕ್ಕೂ ತಟ್ಟಿತ್ತು. ಇಷ್ಟಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಅಪಾಯ ಖಚಿತ.

ಹಾಗಾದರೆ ನಾವೇನು ಮಾಡಬಹುದು ?
ಇರುವುದೊಂದೇ ಭೂಮಿ, ಉಳಿಸುವುದೊಂದೇ ನಮ್ಮ ಜವಾಬ್ದಾರಿ! ಇಷ್ಟೆಲ್ಲ ಅನಾಹುತಗಳ ಸುನಾಮಿಯನ್ನು ಎದುರಿಸುವುದು ಹೇಗೆಂದು ಯೋಚಿಸುತ್ತಿದ್ದೀರಾ? ಚಿಂತಿಸಬೇಡಿ. ಅದಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಮೊದಲಿಗೆ ಪರಿಸರ ಉಳಿಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಿ. ನಿತ್ಯ ಪರಿಸರಕ್ಕೆ ಹಾನಿಯಾಗದಂತಹ ಹೆಜ್ಜೆಗಳನ್ನಿಡುತ್ತೇನೆಂದು ಸಂಕಲ್ಪ ಮಾಡಿ. ಅದರಂತೆ ಕಾರ್ಯಕ್ರಮ ರೂಪಿಸಿ. ಪರಿಸರ ಉಳಿದರೆ ಭೂಮಿ ಉಳಿದೀತು. ಭೂಮಿ ಉಳಿದರೆ ನಾವು ಉಳಿಯುತ್ತೇವೆ. ಈ ಕಾರ್ಯ ಒಬ್ಬರಿಂದ ಸಾಧ್ಯವಿಲ್ಲ. ಅದಕ್ಕಾಗಿ ಮೊದಲು ನೀವು ಹೆಜ್ಜೆ ಇಡಿ, ನಂತರ ನಿಮ್ಮೊಡನಿರುವವರನ್ನೂ ಕೈಹಿಡಿದು ಕರೆತನ್ನಿ.

ಏಪ್ರಿಲ್ 22, ವಿಶ್ವ ಭೂಮಿ ದಿನಾಚರಣೆ

‘ಭೂಮಿ ರಕ್ಷಣೆ’ಗಾಗಿ ಹಲವಾರು ಸಂಘಟನೆಗಳು ವಿಶ್ವದಾದ್ಯಂತ ಹೋರಾಟ ನಡೆಸುತ್ತಿವೆ. ಜನ-ಜಾಗೃತಿ ಮೂಡಿಸುತ್ತಿವೆ. ಅಮೆರಿಕದ ಸೆನೆಟರ್ ಗೆರಾಯ್ಡಿ ನೆಲ್ಸನ್ 1972ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ‘ವಿಶ್ವ ಭೂಮಿ ದಿನ’ ಆರಂಭಿಸಿದ. ದಶಕಗಳ ಕಾಲ ಅಮೆರಿಕಕ್ಕೆ ಸೀಮಿತವಾಗಿದ್ದ ಈ ‘ದಿನ’ 1990ರಲ್ಲಿ ವಿಶ್ವದ 141ರಾಷ್ಟ್ರಗಳಿಗೆ ವಿಸ್ತರಿಸಿತು.

ಬೆಂಗಳೂರಲ್ಲಿ…
ಕಳೆದ ಮೂರು ವರ್ಷಗಳಿಂದ ‘ವಿಶ್ವ ಭೂಮಿ ದಿನವನ್ನು’ ಕರ್ನಾಟಕದಲ್ಲೂ ಆಚರಿಸಲಾಗುತ್ತಿದೆ. ಈ ಬಾರಿ ಶುಕ್ರವಾರ ಡಾಲರ್ಸ್ ಕಾಲೊನಿಯಲ್ಲಿರುವ ಗ್ರೀನ್ ಪಾತ್ ಎಕೋ ಫೌಂಡೇಷನ್ ಸಂಸ್ಥೆ ನಾಯಕತ್ವದಲ್ಲಿ, ಬಿಸಿಐಎಲ್, ಪ್ರಿಸ್ಟೀನ್, ಡೈಲಿ ಡಂಪ್, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಧಾನ್ಯ ಸೇರಿ ಹದಿನಾರು ಸಂಘಟನೆಗಳು ‘ವಿಶ್ವ ಭೂಮಿ ದಿನ’ ವಿಭಿನ್ನವಾಗಿ ಆಚರಿಸುತ್ತಿವೆ.

‘ರಾಗಿ ಆಹಾರ ಮೇಳ ಮತ್ತು ಸಾವಯವ ಸಂತೆ’ ಎಂಬ ವಿಷಯದೊಂದಿಗೆ ವಿವಿಧ ಬಗೆಯ ರಾಗಿಯ ತಿನಿಸುಗಳನ್ನು ಪ್ರದರ್ಶನವಿದೆ. ಪರಿಸರ ಕುರಿತ ವಿಚಾರ ವಿನಿಮಯ, ಸಾವಯವ ಊಟ, ಜೊತೆಗೆ ಜಾನಪದ ತಂಡಗಳೊಂದಿಗೆ ‘ಗೋ ಗ್ರೀನ್ ನಡಿಗೆ’ಯಿದೆ ಎನ್ನುತ್ತಾರೆ ಗ್ರೀನ್‌ಪಾತ್ ಫೌಂಡೇಷನ್ ಅಧ್ಯಕ್ಷ ಎಚ್.ಆರ್.ಜಯರಾಮ್.

ಕಾರ್ಯಕ್ರಮದಲ್ಲಿ ಭೂಮಿ ತಾಯಿಯ ಪ್ರೀತಿಗೆ ಅಕ್ಷರ ರೂಪ ಕೊಟ್ಟ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ, ನಾಡೋಜ ಕೃಷಿಕ ನಾರಾಯಣರೆಡ್ಡಿ, ಪರಿಸರ ತಜ್ಞ ಹರಿಹರನ್ ಚಂದ್ರಶೇಖರ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುತ್ತಾರೆ. ಸ್ಥಳ: ದಿ ಗ್ರೀನ್ ಪಾತ್ ಎಕೋ ಫೌಂಡೇಷನ್, 348, ಡಾಲರ್ಸ್ ಕಾಲೊನಿ, ಆರ್‌ಎಂವಿ ಕ್ಲಬ್ ರಸ್ತೆ, ಆರ್‌ಎಂವಿ 2ನೇ ಹಂತ. ಬೆಳಿಗ್ಗೆ 10.30. ಮಾಹಿತಿಗೆ: 4160 6003, 4266 4777.

ಭೂಮಿ ರಕ್ಷಣೆಗೆ ಒಂದಿಷ್ಟು ಟಿಪ್ಸ್

  • ಭೂಮಿ ಸಂರಕ್ಷಣೆಗಾಗಿ ದೊಡ್ಡ ದೊಡ್ಡ ಸೆಮಿನಾರ್ ನಡೆಸಬೇಕಿಲ್ಲ. ಪಂಚತಾರಾ ಹೋಟಲಿನಲ್ಲಿ ಕುಳಿತು ಭಾಷಣವೂ ಅಗತ್ಯವಿಲ್ಲ. ನಮ್ಮ ಬದುಕಿನಲ್ಲಿ ಯಾವ ಅಳಿಲುಸೇವೆಯನ್ನು ಮಾಡಬಹುದು ಎಂಬುದನ್ನು ಚಿಂತಿಸಿ. ಈ ಸಲಹೆಗಳನ್ನೂ ಪರಿಶೀಲಿಸಬಹುದು.
ಭೂಮಿ ರಕ್ಷಣೆ, ನಮ್ಮೆಲ್ಲರ ಹೊಣೆ
  • ಎಲ್ಲಾದರೂ ಒಂದು ಗಿಡ ನೆಡಿ. ಅದನ್ನು ಪೋಷಿಸಿ. ನೀವು ಗಿಡ ನೆಟ್ಟರೆ ಸಾಲದು. ನಿಮ್ಮ ಅಕ್ಕಪಕ್ಕದವರನ್ನೂ ಪ್ರೇರೇಪಿಸಿ. ಶಾಲೆಯಲ್ಲಿ ಪ್ರತಿ ಮಗುವಿನ ಕೈಯಲ್ಲೂ ಒಂದು ಗಿಡವನ್ನು ನೆಡಿಸಿ. ಆ ಗಿಡಕ್ಕೆ ಅದರ ಹೆಸರಿಡಿ. ಆ ಗಿಡಕ್ಕೆ ನೀರು, ಗೊಬ್ಬರ, ಆರೈಕೆ ಪೋಷಣೆ ಜವಾಬ್ದಾರಿ ಕೊಡಿ. ಗಿಡದ ಬೆಳವಣಿಗೆಯನ್ನು ಸಾಧ್ಯವಾದರೆ ವಿವರಿಸಿ. ಎಲ್ಲಾ ಶಾಲೆಗಳಲ್ಲೂ ಈ ವಿಧಾನ ಅನುಸರಿಸಿ.
  • ಕಸ ವಿಲೇವಾರಿಯಲ್ಲಿ ಜಾಗೃತಿ ವಹಿಸಿ. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ. ಮಣ್ಣಲ್ಲಿ ಮಣ್ಣಾಗುವ ಉತ್ಪನ್ನಗಳನ್ನು ಬಳಸಿ. ನೀರು ಬಳಕೆಯಲ್ಲಿ ಜಾಗೃತಿ ಇರಲಿ. ನೀರು ಪೋಲಾಗುವುದನ್ನು ತಪ್ಪಿಸಿದರೆ ಅದಕ್ಕಿಂತ ದೊಡ್ಡ ಪರಿಸರ ಸಂರಕ್ಷಣೆ ಕೆಲಸ ಇನ್ನೊಂದಿಲ್ಲ.
  • ಪ್ರತಿಯೊಂದು ವಸ್ತುಗಳ ಮರುಬಳಕೆ ಮಾಡುವ ಚಿಂತನೆ ನಡೆಸಿ. ಕಚೇರಿಯಲ್ಲಿ ಕಾಗದ ಮರುಬಳಕೆಯಾಗಲಿ.
  • ವಿದ್ಯುತ್ ಬಳಕೆ ಮಿತವಾಗಿರಲಿ. ಪ್ರಕೃತಿದತ್ತವಾದ ಸೂರ್ಯನ ಬೆಳಕನ್ನೇ ಬಳಸಲು ಪ್ರಯತ್ನಿಸಿ. ಬುರುಡೆ ಬಲ್ಬ್ ಬದಲು ಸಿಎಫ್‌ಎಲ್, ಎಲ್‌ಇಡಿ ಬಳಸಿ. ಇವು ದುಬಾರಿ. ನಿಜ. ಆದರೆ ಹೆಚ್ಚು ಬಾಳಿಕೆ ಬರುತ್ತವೆ ಹಾಗೂ ಕಡಿಮೆ ವಿದ್ಯುತ್ತನ್ನು ಬಳಸಿಕೊಳ್ಳುತ್ತವೆ. ಒಟ್ಟಾರೆ ಲೆಕ್ಕಾಚಾರದಲ್ಲಿ ಲಾಭದಾಯಕ.
  • ಒಂದು ಶಾಂಪೂ, ಒಂದು ಬಟ್ಟೆ ಒಗೆಯುವ ಸೋಪು ನಿಮ್ಮೂರಿನ ಜಲಮೂಲಗಳನ್ನೆಲ್ಲ ಮಲಿನಗೊಳಿಸುತ್ತವೆ. ಜಲಚರಗಳು ಸಾವನ್ನಪ್ಪುತ್ತವೆ. ಪರೋಕ್ಷವಾಗಿ ಅವುಗಳ ಸಾವಿಗೆ ನೀವು ಹೊಣೆಯಾಗುತ್ತೀರಿ. ಶಾಂಪೂ, ಸೋಪು ಬದಲಿಗೆ ಸೀಗೆಪುಡಿ ಅಂಟುವಾಳಕಾಯಿ ಬಳಸಿ.
  • ಸಂಚಾರ ವಾಹನಗಳ ಬಳಕೆಯಲ್ಲೂ ಮಾರ್ಪಾಡು ಮಾಡಬಹುದು. ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸಬಹುದು. ಕಾರ್-ಪೂಲಿಂಗ್ ಬಗ್ಗೆ ಆಲೋಚಿಸಬಹುದು. ಅನಿವಾರ್ಯ ಎಂಬ ಸಂದರ್ಭಗಳನ್ನು ಬಿಟ್ಟು ಉಳಿದ ಸಮಯದಲ್ಲಿ ಸಾರ್ವಜನಿಕ ಸಂಚಾರ ಸಾಧನವಾದ ಬಸ್‌ನಲ್ಲಿ ಪಯಣಿಸಬಹುದು.
  • ಸಿಗ್ನಲ್ ಇರುವ ಕಡೆ ವಾಹನಗಳು, ಅದರಲಿಯ್ಲೂ ಬೈಕುಗಳನ್ನು ಆಫ್ ಮಾಡಿ. ಇದರಿಂದ ಹೊಗೆ ಉಗುಳುವುದು ನಿಲ್ಲುತ್ತದೆ. ಇಂಧನ ಉಳಿಯುತ್ತದೆ.
    • ಕಚೇರಿಯಲ್ಲಿ ಪದೇ ಪದೇ ಕಾಫಿ/ ಚಹಾ ಕುಡಿಯುವಾಗ ಪಿಂಗಾಣಿ ಕಾಫಿ ಕಪ್ಪನ್ನು ಇಟ್ಟುಕೊಳ್ಳಿ. ಕಾಫಿ ಕುಡಿದಾದ ಮೇಲೆ ತೊಳೆದು ಮತ್ತೆ ಅದನ್ನು ಉಪಯೋಗಿಸಿ. ಪ್ಲಾಸ್ಟಿಕ್, ಕಾಗದದ ಕಪ್ ಬಳಸದಿರಲು ಇದು ಸುಲಭ ಮಾರ್ಗ.
    • ಕಂಪ್ಯೂಟರ್, ದೀಪ, ಮಾನಿಟರ್, ಪ್ರಿಂಟರ್, ಸ್ಪೀಕರ್, ಫ್ಯಾನ್ ಇತ್ಯಾದಿಗಳನ್ನು ಹಿತ-ಮಿತವಾಗಿ ಬಳಸಿ. ಮನೆಗೆ ಹೋಗುವಾಗ ಎಲ್ಲವನ್ನೂ ಸ್ವಿಚ್-ಆಫ್ ಮಾಡಿ. ಇದರಿಂದ ಕಂಪೆನಿಗೆ ಲಾಭ ಎಂದುಕೊಳ್ಳಬೇಡಿ. ಪ್ರಕೃತಿಗೆ ನೀವು ಸಲ್ಲಿಸುವ ದೊಡ್ಡ ಸೇವೆ ಎಂದುಕೊಳ್ಳಿ.

ವರ್ಲಿ ಚಿತ್ತಾರಗಳ ವಿದ್ಯಾನಿಕೇತನ

ಬಿದಿರಿನ ಕಲಾಕೃತಿಗಳಿಂದ ಅಲಂಕೃತ ಹೆಬ್ಬಾಗಿಲು. ಒಳಗೆ ಹಸಿರು ಗೋಡೆಗಳ ಮೇಲೆ ಬೆಳ್ಳನೆಯ ಗೆರೆಗಳ ಚಿತ್ತಾರಗಳು. ಕಂಬಗಳ ನಡುವೆ, ಕಿಟಕಿಯ ಪಕ್ಕ, ಬಾಗಿಲು, ಕಾರಿಡಾರ್‌ನ ಬದಿಯಲ್ಲೆಲ್ಲಾ ಚಿತ್ತಾರಗಳ ಸೊಬಗು. ಜನರ ದೈನಂದಿನ ಬದುಕಿಗೆ ಆಧಾರವಾದ ಹಲವು ಕಾಯಕಗಳನ್ನು ಪರಿಚಯಿಸುವ ಚಿತ್ರಗಳು ಗೋಡೆಗಳ ಮೇಲೆ ಅನಾವರಣಗೊಂಡಿವೆ! ಗೆರೆಗಳನ್ನೇ ಬಾಗಿಸಿ, ಸುರುಳಿಯಾಗಿ ಸುತ್ತಿಸಿ ಬಿಡಿಸಿರುವ ‘ವರ್ಲಿ ಚಿತ್ತಾರಗಳು’ ಶಾಲೆ ಅಂದವನ್ನು ಇಮ್ಮಡಿಗೊಳಿಸಿವೆ!

ವರ್ಲಿ ಚಿತ್ತಾರಗಳ ಸಿರಿವಂತಿಕೆಯನ್ನೇ ಧರಿಸಿನಿಂತಿರುವ ಈ ಶಾಲೆಯ ಹೆಸರು ಟ್ವಿಂಕ್ಲರ್ಸ್‌ ವಿದ್ಯಾನಿಕೇತನ. ಬೆಂಗಳೂರಿನ ನಾಗರಬಾವಿ ಬಡಾವಣೆಯ ಎನ್‌ಜಿಇಎಫ್ ಲೇಔಟ್‌ನಲ್ಲಿದೆ. ಕೆ.ಎಸ್.ಜಗನ್ನಾಥ ಗುಪ್ತ ಈ ಶಾಲೆಯ ಸ್ಥಾಪಕರು. 350 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಈ ಶಾಲೆಯ ಗೋಡೆಗಳ ಮೇಲೆಲ್ಲಾ ಕಾರ್ಟೂನ್‌ಗಳಳು ಎದ್ದು ಕಾಣುತ್ತಿದ್ದವು. ಅದೇ ಮಿಕ್ಕಿಮೌಸ್, ಟೆಡ್ಡಿ ಬೇರ್. ಟಿವಿ, ಪುಸ್ತಕ, ಸಿನಿಮಾಗಳಲ್ಲಿ ಇಂಥ ಚಿತ್ರಗಳನ್ನು ನೋಡಿ ಬೋರ್ ಹೊಡೆಸಿಕೊಂಡಿದ್ದ ಮಕ್ಕಳು, ಶಾಲೆ ಗೋಡೆಗಳ ಮೇಲಿದ್ದ ಅವೇ ಚಿತ್ರಗಳನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಇದೇ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ‘ವರ್ಲಿ ಕಲೆ’ ಕುರಿತು ಪ್ರಕಟವಾದ ಲೇಖನ ಹಾಗೂ ಚಿತ್ರಗಳನ್ನು ಗಮನಿಸಿದ ಗುಪ್ತ ಅವರಿಗೆ  ತಮ್ಮ  ಶಾಲೆಯ ಗೋಡೆಗಳ ಮೇಲೂ ಇಂಥ ಚಿತ್ರಗಳನ್ನು ಬಿಡಿಸಬಾರದೇಕೆ? ಅನ್ನಿಸಿತು. ವರ್ಲಿ ಚಿತ್ರಗಳ ಮೂಲಕ ಮಕ್ಕಳಿಗೆ ‘ಸ್ಥಳೀಯ ಶ್ರಮ ಸಂಸ್ಕೃತಿ’ಯನ್ನು ಪರಿಚಯಿಸಬೇಕು ಎನ್ನುವ ನಿರ್ಧಾರಕ್ಕೆ ಬಂದರು.

ಇದೇ ಸಮಯದಲ್ಲಿ ಸಂಶೋಧಕ ಸತ್ಯಜಿತ್ ಅವರ ಮೂಲಕ ಮಂಡ್ಯದ ಕಲಾವಿದ ಸೋಮವರದ ಅವರ  ಪರಿಚಯವಾಯಿತು. ಸತ್ಯಜಿತ್ ಅವರ ಮಗ ಈ ಶಾಲೆಯ ವಿದ್ಯಾರ್ಥಿ. ಸೋಮವರದ ಅವರ ಕಲಾ ಕೌಶಲ್ಯ ಹಾಗೂ ಗುಪ್ತ ಅವರ ‘ಸ್ಥಳೀಯ ಸಂಸ್ಕೃತಿ’ ಪರಿಕಲ್ಪನೆ ಎರಡೂ ಸಮಾಗಮಗೊಂಡು ಮೂರು ತಿಂಗಳಲ್ಲಿ ಶಾಲೆಯ ಗೋಡೆಗಳ ಮೇಲೆ ವರ್ಲಿ ಚಿತ್ತಾರಗಳು ಅರಳಿದವು!

ಮಧ್ಯಾಹ್ನ ಊಟದ ಸಮಯದಲ್ಲಿ ಶಿಕ್ಷಕಿಯರೊಂದಿಗೆ ಚಿತ್ತಾರಗಳ ನೋಟ

ಕಟ್ಟಡದ ವಿನ್ಯಾಸಕ್ಕೆ ತಕ್ಕಂತೆ ಚಿತ್ರಗಳಿವೆ. ಮಕ್ಕಳು ಓಡಾಡುವ, ಊಟ ಮಾಡುವ ಹಾಗೂ ಆಟವಾಡುವ ಸ್ಥಳದ ಪಕ್ಕದ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಸಲಾಗಿದೆ. ಹಳ್ಳಿಯ ಹಾಗೂ ಪಟ್ಟಣದ ಜೀವನವನ್ನು ಪರಿಚಯಿಸುವ ಚಿತ್ರಗಳಿವೆ. ಬೇಸಾಯ ಚಟುವಟಿಕೆಗಳಾದ ಉಳುಮೆ, ಚಕ್ಕಡಿ ಓಟ, ಬಿತ್ತನೆ, ಧಾನ್ಯ ಸಂಸ್ಕರಣೆ, ಅಡುಗೆ ತಯಾರಿ, ಗ್ರಾಮೀಣ ಕ್ರೀಡೆಗಳೂ ಸೇರಿದಂತೆ 20 ರಿಂದ 25 ವೈವಿಧ್ಯಮಯ ಚಿತ್ರಗಳು ಇಲ್ಲಿ ಅರಳಿವೆ. ಈ ಚಿತ್ರಗಳು ಅರಣ್ಯ,ಪರಿಸರ, ಜಲ ಸಂರಕ್ಷಣೆಯ ಪಾಠಗಳನ್ನೂ ಹೇಳುತ್ತವೆ. ಪುಟ್ಟ ಮಕ್ಕಳಿಗಾಗಿ ವಿಮಾನ, ಹಳೆಕಾಲದ ಉಗಿಬಂಡಿ,  ಬಸ್ಸು, ಲಾರಿ, ಮೋಟರ್ ಬೈಕ್ ಮತ್ತಿತರ ವಾಹನಗಳ ಚಿತ್ರಗಳಿವೆ.

‘ಇಲ್ಲಿನ ವರ್ಲಿ ಚಿತ್ರಗಳಲ್ಲಿ ವೈವಿಧ್ಯತೆ ಇದೆ. ಮಕ್ಕಳು ಬಹಳ ಆಸಕ್ತಿಯಿಂದ ಇವನ್ನು ಗಮನಿಸುತ್ತಾರೆ. ಊಟದ ಸಮಯದಲ್ಲಿ, ಬಿಡುವಿನ ವೇಳೆಯಲ್ಲಿ ಚಿತ್ರಗಳ ಮೇಲೆ ಕಣ್ಣು ಹಾಯಿಸುತ್ತಾರೆ. ಚಿತ್ರಗಳನ್ನು ತೋರಿಸುತ್ತಾ  ಶಿಕ್ಷಕರನ್ನು ಪ್ರಶ್ನಿಸುವುದನ್ನು ನಾನು ಗಮನಿಸಿದ್ದೇನೆ ಎನ್ನುತ್ತಾರೆ ಗುಪ್ತ.

ಮಕ್ಕಳ ಮನೋ ವಿಕಾಸ: ‘ಮಕ್ಕಳ ಮುಗ್ಧ ಮನಸ್ಸುಗಳಿಗೆ ಖುಷಿ ಕೊಡುವಂತಹ ಚಿತ್ರ ಬಿಡಿಸಬೇಕು. ಆ ಚಿತ್ರ ನೋಡಿದ ಕೂಡಲೇ ಮಕ್ಕಳು ತಾವೂ ಚಿತ್ರ ಬರೆಯಲು ಮುಂದಾಗಬೇಕು. ಅದಕ್ಕೆಂದೇ ‘ವರ್ಲಿ ಚಿತ್ರ ಕಲೆಯನ್ನು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಸೋಮವರದ. ವರ್ಲಿ ಚಿತ್ರ ರಚಿಸುವುದು ಸುಲಭ ಹಾಗೂ ಅವು ಜನರಿಗೆ ನೋಡುತ್ತಿದ್ದಂತೆ ಅರ್ಥವಾಗಿಬಿಡುತ್ತವೆ ಎನ್ನುವುದು ಸೋಮವರದ ಅವರ ಅಭಿಪ್ರಾಯ.

ಚಿತ್ರಗಳಿಗೆ ಹಸಿರು ಮತ್ತು ಬಿಳಿ ಬಣ್ಣಗಳನ್ನು ಮಾತ್ರ ಬಳಸಿದ್ದೇನೆ. ‘ಹಸಿರು ನಿಸರ್ಗದ ಸಂಕೇತ. ಅದು ಕಣ್ಣಿಗೆ ತಂಪು ನೀಡುತ್ತದೆ. ಶಾಲೆಯ ಹಿಂಭಾಗದಲ್ಲಿ ಮರಗಳಿವೆ. ಹಸಿರು ಹಿನ್ನೆಲೆಯಲ್ಲಿ ಬಿಳಿ ಗೆರೆಗಳು ಎದ್ದುಕಾಣುತ್ತವೆ ಎನ್ನುತ್ತಾರೆ.

ಮಾಧ್ಯಮಿಕ ಶಾಲೆ ಮಕ್ಕಳಿಗೆ ಚಿತ್ತ ನೋಡುವಲ್ಲಿ ಆಸಕ್ತಿ

ಶಾಲೆಯ ಚಿತ್ರಗಳು ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರಿಗೂ ಇಷ್ಟವಾಗಿವೆ. ಚಿತ್ರಗಳನ್ನು ನೋಡಿ ಉತ್ತೇಜನಗೊಂಡಿರುವ ಅನೇಕ ಪಾಲಕರು ತಮ್ಮ ಮನೆಗಳ ಗೋಡೆಗಳ ಮೇಲೆ ವರ್ಲಿ ಚಿತ್ರಗಳನ್ನು ಬರೆಸಲು ಮುಂದಾಗಿದ್ದಾರೆ. ಗುಪ್ತ ಅವರೂ ತಮ್ಮ ಹೊಸ ಶಾಲಾ ಕಟ್ಟಡದ ಗೋಡೆಗಳ ಮೇಲೂ ವರ್ಲಿ ಚಿತ್ರಗಳನ್ನೇ  ಬರೆಸಲು ನಿರ್ಧರಿಸಿದ್ದಾರೆ.

ಟ್ವಿಂಕ್ಲರ್ಸ್‌ ವಿದ್ಯಾನಿಕೇತನ ಶಾಲೆಯ ಈ ಪ್ರಯತ್ನ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ. ಭಾರೀ ಹಣ ಖರ್ಚು ಮಾಡಿ ಶಾಲೆಯ ಗೋಡೆಗಳ ಮೇಲೆ ಬಣ್ಣಗಳ ರಾಡಿ ಎಬ್ಬಿಸುವ ಬದಲು ಸೌಮ್ಯ ಬಣ್ಣಗಳನ್ನು ಬಳಸಿಕೊಂಡು ಆಕರ್ಷಕ ಚಿತ್ರಗಳನ್ನು ಬರೆಸುವುದು ಹೆಚ್ಚು ಪರಿಣಾಮಕಾರಿ.

ಟ್ವಿಂಕ್ಲರ್ಸ್‌ ವಿದ್ಯಾನಿಕೇತನ ಶಾಲೆಯ ದೂರವಾಣಿ ನಂಬರ್- 23213135. ಸೋಮವರದ ಅವರ ಮೊಬೈಲ್ ನಂಬರ್ – 9743512174.

ಗುಬ್ಬಚ್ಚಿಗಳೇ, ಬನ್ನಿ ಗೂಡಿಗೆ !

ಗೂಡಿಗಾಗಿ ಹಂಬಲಿಸುತ್ತಿದೆ ಗುಬ್ಬಚ್ಚಿ

ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವ ಯಾರನ್ನು ?ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನನ್ನು?
– ದಶಕಗಳ ಹಿಂದೆ, ಕೋಣೆಯ ಬಾಗಿಲ್ಲಲಿ ಕತ್ತು ಟಂಕಿಸುತ್ತ ಕುಳಿತ್ದಿದ ಗುಬ್ಬಚ್ಚಿಗಳತ್ತ ಬೊಟ್ಟು ಮಾಡುತ್ತಾ ಮೇಷ್ಟ್ರು ಈ ಪದ್ಯ ಹೇಳುತ್ತ್ದಿದರು. ಈಗ ಆ ಪದ್ಯಗಳೂ ಇಲ. ಶಾಲೆ ಬಳಿಗೆ ಗುಬ್ಬಚ್ಚಿಗಳೂ ಸುಳಿಯುವುದ್ಲಿಲ. ಆ ಪ್ರಮಾಣದ್ಲಲಿ ಗುಬ್ಬಚ್ಚಿಗಳು ನಮ್ಮನಗರದಿಂದ ನಾಪತ್ತೆಯಾಗಿವೆ. ಉದ್ಯಾನನಗರಿ ಎನಿಸಿಕೊಂಡ ಬೆಂಗಳೂರಿನ್ಲಲಂತೂ ಗುಬ್ಬಚ್ಚಿಗಳನ್ನು ’ದುರ್ಬಿನ್’ ಹಾಕಿ ಹುಡುಕಬೇಕು.
ಬೆಂಗಳೂರಿನಾದ್ಯಂತ ಮೇಲ್ಸೇತುವೆ, ಮೆಟ್ರೊ, ಮಾನೋ, ವಾಣಿಜ್ಯ ಸಂಕೀರ್ಣ, ಗಗನ ಚುಂಬಿ ಕಟ್ಟಡ.. ಹೀಗೆ ಅಭಿವೃದ್ಧಿಯ ಸಾಲು ಸಾಲು. ಪರಿಣಾಮ ಗುಬ್ಬಚ್ಚಿಗಳ ಆವಾಸಸ್ಥಾನವಾಗ್ದಿದ ಗಿಡ-ಗಂಟೆಗಳು ನಾಪತ್ತೆ. ಪರಿಣಾಮ ಗೂಡು ಕಟ್ಟಲು ಗುಬ್ಬಿಗಳಿ ಸ್ಥಳವ್ಲಿಲ. ಇದರ ಜೊತೆಗೆ ಸೀಸ ಮಿಶ್ರಿತ ಪೆಟ್ರೋಲ್ ಬಳಕೆಯಿಂದ ವಾತಾವರಣದ್ಲಲಿ ಮೀಥೈಲ್ ನೈಟ್ರೇಟ್ ಸೇರ್ಪಡೆ. ಗುಬ್ಬಚ್ಚಿಗಳ ಆಹಾರವಾದ ಕ್ರಿಮಿ ಕೀಟಗಳೂ ಕಲ್ಮಶಗೊಂಡವು. ಬೆಚ್ಚನೆಯ ಗೂಡಿಗೆ ನೆರವಾಗುತ್ತ್ದಿದ ಸಾಂಪ್ರದಾಯಿಕ ಮನೆಗಳೂ ಇಲವಾದವು. ಆಹಾರ, ಆವಾಸ ಎರಡೂ ಕ್ಷೀಣವಾದಾಗ ಗುಬ್ಬಚ್ಚಿ ಸಂತತಿಯೂ ನಶಿಸಿ ಹೋಯಿತು.

ಹೀಗೆ ಇನಿಸು-ಮುನಿಸಿನಿಂದ ಬೆಂಗಳೂರು ಬಿಟ್ಟು ಹೋಗಿರುವ ಗುಬ್ಬಚ್ಚಿಗಳನ್ನು ಮರಳಿ ಕರೆತರುವ ಪ್ರಯತ್ನಕ್ಕೆ ನಗರದ ಬಯೋಡೈವರ್ಸಿಟಿ ಕನ್ಸರ್‌ವೇಷನ್ ಇಂಡಿಯಾ(ಬಿಸಿಐಎಲ್) ಸಂಸ್ಥೆ ‘ಗುಬ್ಬಿ ಗೂಡು’ ಎಂಬ ನೂತನ ಕಾರ್ಯಕ್ರಮ ರೂಪಿಸಿದೆ. ಮಾರ್ಚ್ ೨೦ರ ‘ವಿಶ್ವ ಮನೆಗುಬ್ಬಿ ದಿನ’ದಂದು ‘ಮತ್ತೆ ಗೂಡಿಗೆ ಬಾ ಗುಬ್ಬಿ’ ಎಂಬ ಘೋಷ ವಾಖ್ಯದೊಂದಿಗೆ ಈ ಕಾರ್ಯಕ್ರಮ ಆರಂಭವಾಗಿದೆ.

ಗುಬ್ಬಿ ಗೂಡು ಪರಿಕಲ್ಪನೆ:
ಪರಿಸರಸ್ನೇಹಿ ಗೃಹ ನಿರ್ಮಾಣದ್ಲಲಿ ಮಂಚೂಣಿಯ್ಲಲಿರುವ ಬಿಸಿಐಎಲ್ – ಝೆಡ್ ಪ್ರತಿಷ್ಠಾನ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಕನಸಿನ ಕೂಸು ‘ಗುಬ್ಬಿ ಗೂಡು’ ಯೋಜನೆ. ಗುಬ್ಬಿಗಳನ್ನು ನಮ್ಮ ಮನೆಯ ಅಂಗಳಕ್ಕೆ ಕರೆತಂದು ಅವುಗಳಿಗೆ ಬೆಚ್ಚಗಿನ ವಾಸ, ಇಚ್ಛೆ ಪಡುವ ಆಹಾರ ನೀಡಿ, ಅವುಗಳ ಸಂತತಿ ವೃದ್ಧಿಸುವುದು ಯೋಜನೆ ಉದೇಶ. ಅದಕ್ಕಾಗಿ ಬಿದಿರಿನಿಂದ ವಿಶೇಷವಾದ ‘ಗುಬ್ಬಿ ಗೂಡನ್ನು ಸಂಸ್ಥೆ ಸಿದ್ಧಪಡಿಸಿದೆ. ಬೆಂಗಳೂರಿನ ಗುಬ್ಬಚ್ಚಿ ಪ್ರೀತಿಯ ಮನಸ್ಸುಗಳಿಗೆ ಈ ಗೂಡುಗಳನ್ನು ಉಚಿತವಾಗಿ ವಿತರಿಸುತ್ತಿದೆ. ಗೂಡಿನ ಜೊತೆಗೆ ಗುಬ್ಬಚ್ಚಿಗಳಿಗೆ ಆಹಾರ, ಪೊದೆ ನಿರ್ಮಾಣಕ್ಕೆ ಬೇಕಾದ ಹೂವು, ಹ್ಲುಲು, ಬಳ್ಳಿ.. ಇತ್ಯಾದಿಗಳನ್ನು ನೀಡುತ್ತಿದೆ. ಗುಬ್ಬಿಗಳ ಸಂತಾನ ವೃದ್ಧಿಗೆ ಯೋಗ್ಯ ವಾತಾವರಣ ಕಲ್ಪಿಸುವ ಮಾಹಿತಿಯನ್ನೂ ನೀಡುತ್ತಿದೆ. ’ಸುಮಾರು ಹತ್ತು ಸಾವಿರ ಗೂಡುಗಳನ್ನು ಸಂಸ್ಥೆ ಸಿದ್ಧಪಡಿಸಿದೆ. ಯೋಜನೆ ಕ್ಲಿಕ್ ಆದರೆ ೧೦ ಲಕ್ಷ ಗೂಡುಗಳನ್ನು ವಿತರಿಸುವ ಗುರಿಯಿದೆ’ ಎನ್ನುತ್ತಾರೆ ಬಿಐಸಿಎಲ್‌ನ-ಝೆಡ್ ಪ್ರತಿಷ್ಠಾನದ ಸಿಇಒ ಕ್ರಿಷ್ ಮುರುಳಿ ಈಶ್ವರ್.

ಗುಬ್ಬಚ್ಚಿ ಗೂಡು

ಬೊಂಬಾಟ್ ಪ್ರತಿಕ್ರಿಯೆ :
ಕಾರ್ಯಕ್ರಮ ಉದ್ಘಾಟನೆಗೊಂಡು ನಾಲ್ಕು ದಿನಗಳು ಕಳೆದಿವೆ. ಈಗಾಗಲೇ ಮೂರೂವರೆ ಸಾವಿರ ಜನರು ಗುಬ್ಬಿ ಗೂಡುಗಳನ್ನು ಪಡೆದ್ದಿದಾರೆ. ೫೦೦ ಶಾಲೆಗಳು ಗೂಡುಗಳನ್ನು ಪಡೆದು, ತಮ್ಮ ಶಾಲಾ ಆವರಣದ್ಲಲಿ ತೂಗು ಹಾಕಿವೆ. ‘ಗುಬ್ಬಿ ಸಂತತಿ ಹೆಚ್ಚಿಸುವ ನಮ್ಮ ಪ್ರಯತ್ನಕ್ಕೆ ಅಭೂತಪೂರ್ವ ಆರಂಭ ದೊರೆತಿದೆ. ಇದೇ ವೇಗ ನಿರಂತರವಾಗ್ದಿದರೆ ಕೆಲವೇ ವರ್ಷಗಳ್ಲಲಿ ಗುಬ್ಬಿ ಸಂತತಿ ವಿಸ್ತರಣೆಯಾಗುವುದರ‍್ಲಲಿ ಸಂದೇಹವೇ ಇಲ’ ಎನ್ನುತ್ತಾರೆ ಗೂಡು ವಿತರಣೆಯ ಜವಾಬ್ದಾರಿ ಹೊತ್ತಿರುವ ಪ್ರತಿಷ್ಠಾನದ ಹರೀಶ್.

ಎಷ್ಟು ದಿನಗಳು ಬೇಕಾಗಬಹುದು ?
ಗೂಡು ಕಟ್ಟಿದ ಕೂಡಲೇ ಗುಬ್ಬಚ್ಚಿಗಳು ಬರುವುದ್ಲಿಲ. ಅದಕ್ಕೆ ಪಕ್ಷಿ ತಜ್ಞ ಹರೀಶ್ ಭಟ್ ತಮ್ಮ ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ. ‘ ‘೨೦೦೩ರಿಂದ ನನ್ನ ಮನೆಗೆ ಗುಬ್ಬಚ್ಚಿ ಕರೆತರಲು ಪ್ರಯತ್ನಿಸಿದೆ. ಎರಡು ವರ್ಷಗಳ ನಂತರ ಗಂಡು-ಹೆಣ್ಣು ಗುಬ್ಬಚ್ಚಿಗಳು ಮನೆಯ ಕಂಪೌಂಡ್ ಬಂದವು. ಕಾಳು, ನೀರು ಕೊಡುತ್ತಿದೆ. ಆರೇಳು ವರ್ಷಗಳ ನಂತರ ೨೬ ಗುಬ್ಬಚ್ಚಿಗಳಾಗಿವೆ. ಈಗ ನಮ್ಮ ಕೈಯಿಂದಲೇ ಆಹಾರ ಪಡೆಯುವಷ್ಟು ಗೆಳೆಯಾರಿವೆ. ಗುಬ್ಬಚ್ಚಿಗಳು ಕೇಳುವುದು ವಾಸಕ್ಕೆ ಸುರಕ್ಷಿತವಾದ ತಾಣ, ನಿಶ್ಚಿತವಾದ ಆಹಾರ. ಇವ್ದಿದರೆ ಖಂಡಿತ ಗುಬ್ಬಚ್ಚಿಗಳು ಬರುತ್ತವೆ’ ಎನ್ನುವುದು ಅವರ ಅಭಿಪ್ರಾಯ.

ಒಟ್ಟಾರೆ ಉದ್ಯಾನ ನಗರಿಗೆ ಗುಬ್ಬಚ್ಚಿಗಳನ್ನು ಕರೆತರುವ ಸಂಕಲ್ಪಕ್ಕೆ ನಾಂದಿ ಹಾಡಲಾಗಿದೆ. ಕಾಣೆಯಾಗಿರುವ ಗುಬ್ಬಚ್ಚಿಗಳನ್ನು ಮತ್ತೆ ಗೂಡಿಗೆ ಕರೆತರುವ ಸಂಸ್ಥೆಯ ಕೆಲಸಕ್ಕೆ ಎಲರೂ ಕೈ ಜೋಡಿಸಬೇಕಿದೆ. ಗುಬ್ಬಿ ಗೂಡುಗಳಿಗಾಗಿ ಸಹಾಯವಾಣಿ ೮೪೩೧೮೪೮೨೨೪(Sಏಉ ೧ಖಿ ಎಖಿಆಆಐ)ಗೆ ಕರೆ ಮಾಡಬಹುದು.

ಗೂಡು ಕಟ್ಟುವವರೇ ಗಮನಿಸಿ:
ಮನೆ ಅಂಗಳದ್ಲಲಿ ಗುಚ್ಛವಾಗಿ ಬೆಳೆಯುವ ನಾಲ್ಕಾರು ಹೂವಿನ ಗಿಡ (ಉದಾಹರಣೆಗೆ ದಾಸವಾಳ) ನೆಡಿ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಗಿಡಗಳಿಗೆ ಇರುವೆ ಮುತ್ತುವುದು ಸಾಮಾನ್ಯ. ಹಾಗಾಗಿ, ಕರಿಬೇವು, ನಿಂಬೆಹಣ್ಣು, ಚೆರ್ರಿ ಗಿಡ (ಲಾಭ ಎರಡು!) ಅಥವಾ ಗಿಡ ಬೇಲಿಗೆ ತೂಗು ಹಾಕಿ. ಗೂಡಿಗೆ ಒಂದು ಹಿಡಿ ಕಾಳು ಹಾಕಿ ಇಡಿ. ಆ ಪದಾರ್ಥಗಳಿಗೆ ಇರುವೆ ಮುತ್ತದಂತೆ ಜಾಗ್ರತೆವಹಿಸಿ. ಗಿಡದ ಬುಡದ್ಲಲಿ ಅಥವಾ ಮನೆ ಅಂಗಳದ್ಲಲಿ ಬಾನಿ, ಹೊಂಡ ಅಥವಾ ಮನೆಯ ತಾರಸಿಯ ಮೇಲೆ ಅಗಲವಾದ ಬಾಯಿಯಿರುವ ಮಣ್ಣಿನ ಕುಡಿಕೆಗಳ್ಲಲಿ ನೀರು ತುಂಬಿಸಿಡಿ. ಬೇಸಿಗೆಯ್ಲಲಿ ಅವುಗಳಿಗೆ ಜೀವ ಬಂದಂತಾಗುತ್ತದೆ. ಮನೆಯ ಸುತ್ತಲೂ ಬಿದರಿನ ಬುಟ್ಟಿ, ಮಣ್ಣಿನ ಪಕ್ಷಿ ಮನೆಗಳನ್ನು ಅಥವಾ ತಗಡಿನ ಡಬ್ಬಿಗಳನ್ನು ಕಟ್ಟಿ, ತುಸು ಭತ್ತದ ಹ್ಲುಲು ಹಾಸಿ. ಈ ಎಲ ಕೆಲಸಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಿ !
ತರಕಾರಿ, ಹೂವು, ಹಣ್ಣಿನ ಗಿಡಗಳಿರುವ ಕೈತೋಟದ ಸಮೀಪದ್ಲಲಿ ಗೂಡು ಕಟ್ಟಿ. ಇದರಿಂದ ಕೈತೋಟಕ್ಕೆ ದಾಳಿಯಿಡುವ ಕೀಟ, ಹುಳುಗಳನ್ನು ಗುಬ್ಬಚ್ಚಿ ಭಕ್ಷಿಸುತ್ತದೆ. ಇದರಿಂದ ಗುಬ್ಬಚ್ಚಿಗೆ ಆಹಾರ ಪೂರೈಕೆಯ ಶ್ರಮ ತುಸು ತಪ್ಪೀತು. ಇನ್ನೊಂದೆಡೆ ಗುಬ್ಬಚ್ಚಿ ಪೋಷಣೆಯಿಂದ ನಮ್ಮ ಕೈತೋಟ ಕೀಟ ಮುಕ್ತವಾಗಿರುತ್ತದೆ. ಈ ಕ್ರಿಮಿಕೀಟಗಳ ನಿಯಂತ್ರಣಕ್ಕೆ ಔಷಧ ಸಿಂಪಡಿಸುವ ಅಗತ್ಯ ಬೀಳುವುದ್ಲಿಲ. ಪರೋಕ್ಷವಾಗಿ ಸಾವಯವ ಆಹಾರ ಸೇವಿಸುವ ಭಾಗ್ಯ ನಮ್ಮದಾಗುತ್ತದೆ.

(ಮಾರ್ಚ್ 20ರ ‘ವಿಶ್ವ ಮನೆಗುಬ್ಬಚ್ಚಿ’ ದಿನದಂದು ಬೆಂಗಳೂರು ಮೆಟ್ರೋದಲ್ಲಿ ಪ್ರಕಟವಾದ ಲೇಖನ)

ಹಳ್ಳಿ ಹಳ್ಳಿಗಳಲ್ಲಿ ಯುಗಾದಿಯ ರಂಗು

ಬಾನಲ್ಲಿ ನಿನ್ನಿಂದ ಸೂರ್ಯೋದಯ...!

ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು
ಬೆಟ್ಟಕ್ಕೆ ಎದೆಯೆತ್ತಿ ನ್ಲಿಲುವ ಧೈರ್ಯ
ಹೊಳೆಯ ನೀರಿಗೆ ಉಗುರ ಬಿಸಿ
ಗಾಳಿ ನೆರಳಿಗೆ ತಂಪು ತಂದ ಯುಗಾದಿ
ಕುಸಿದು ಕೊರಗುವ ಬಾಳಿಗೇನ ತಂದೆ…
– ಕವಿ ಡಾ. ಸಿದ್ಧಲಿಂಗಯ್ಯ ಅವರ ಈ ಕವನದ ಸಾಲುಗಳು ವಸಂತ ಋತುವಿನೊಂದಿಗೆ ಆಗಮಿಸುವ ಯುಗಾದಿ ಹಬ್ಬದ ಸಡಗರವನ್ನು ಮೆಲುಕು ಹಾಕಿಸುತ್ತದೆ.

ನಿಜ, ಯುಗಾದಿ ಎಂದರೆ ಹೊಸತನ. ಮಕ್ಕಳಿಗೆ ಹೊಸ ಬಟ್ಟೆಯ ಸಂಭ್ರಮ. ಕೃಷಿಕರಿಗೆ ಮಳೆ-ಬೆಳೆ-ನಕ್ಷತ್ರಗಳ ವರ್ಷದ ಲೆಕ್ಕಾಚಾರ, ಉದಿಮೆದಾರರಿಗೆ ವರ್ಷದ ಸೋಲು-ಗೆಲುವನ್ನು ನಿರ್ಧರಿಸುವ ಸಮಯ. ಹೀಗೆ ಯುಗಾದಿ ಹಬ್ಬ ಹಲವು ‘ಹೊಸತು’ಗಳ ಸಂಗಮ.

ಯುಗಾದಿ – ಚೈತ್ರ ಮಾಸದ ಮೊದಲ ದಿನ. ಹೊಸ ಸಂವತ್ಸರದ ಮೊದಲ ಹಬ್ಬ. ದೇವಾನು-ದೇವತೆಗಳ ಸೋಂಕ್ಲಿಲದ ನಿಸರ್ಗದ ಹಬ್ಬ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು – ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬ್ಲೆಲ ಮ್ಲೆಲುವ ಹಬ್ಬ. ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಎಳೆ ಚಿಗುರಿನ ಹೊಂಗೆ, ಬೇವು, ಹಿಪ್ಪೆ ಮರದ ನೆರಳ್ಲಲಿ ಮೈ ಹರವಿಕೊಂಡು ವಿರಮಿಸಿಕೊಳ್ಳುವ ದಿನ.

ಸೂರ್ಯೋದಯದ ಮತ್ತೊಂದು ಚಿತ್ರ

ಯುಗಾದಿ ಸಂಪೂರ್ಣ ವಿರಾಮದ ಕೊನೆಯ ಮತ್ತು ದುಡಿಮೆಯ ಆರಂಭ- ಇವೆರಡರ ನಡುವೆ ಬರುವಂತಹ ಹಬ್ಬ. ಹಾಗಾಗಿಯೇ ಈ ಹಬ್ಬದ್ಲಲಿ ಸಿಹಿ-ಕಹಿಯ ಮಿಶ್ರಣವಿರುತ್ತದೆ. ಕಾಮನ ಹಬ್ಬ ನಿಸರ್ಗದ್ಲಲಿ ವರ್ಷದ ಕೊನೆಯ ಹಬ್ಬವಾದರೆ, ಯುಗಾದಿ ವರ್ಷದ ಮೊದಲ ಹಬ್ಬ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಈ ಹಬ್ಬದ್ಲಲಿ ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ಯುಗದ ಆದಿ. ಶಾಲಿವಾಹನ ಶಕೆಯ ಹೊಸ ಸಂವತ್ಸರದ ಆರಂಭ.

ಹಳ್ಳಿಗಳ್ಲಲಿ ಯುಗಾದಿ…
ಯುಗಾದಿಯ ನೈಜತೆ ಉಳಿದಿರುವುದೇ ಹಳ್ಳಿಗಳ್ಲಲಿ, ರೈತರ ನೆಲೆಯ್ಲಲಿ. ನಗರವಾಸಿಗಳಿಗೆ ಯುಗಾದಿ ಕೇವಲ ಒಂದು ಹಬ್ಬ ಮಾತ್ರ. ಅವರು ಅಬ್ಬಬ್ಬಾ ಎಂದರೆ ಎರಡು ದಿವಸ ಹಬ್ಬ ಮಾಡಬಹುದು. ಆದರೆ ಕೃಷಿಕರ ಹಬ್ಬದ ಸಂಭ್ರಮವಿದೆಯ್ಲಲಾ, ಅದು ತಿಂಗಳ ಮುಂಚೆಯೇ ಆರಂಭವಾಗುತ್ತದೆ. ಈ ದಿನಗಳ್ಲಲಿ ಕೃಷಿಕರಿಗೆ ಯಾವುದೇ ಕೆಲಸ ಹೇಳಿದರೂ ‘ಹಬ್ಬಾದ್ಮೇಲೆ ನೋಡನ್ ಬಿಡ್ಲೆ’ ಎನ್ನುತ್ತಾರೆ. ಸಾಲ ಕೇಳಲು ಬಂದವರಿಗೂ ಅಥವಾ ಸಾಲ ಕೇಳುವವರು, ಹೊಸ ಕೆಲಸ ಆರಂಭಿಸುವವರು ಎಲರೂ ‘ಯುಗಾದಿ’ಯ ನೆಪ ಹೇಳುತ್ತಾರೆ.
ಯುಗಾದಿ ಹಬ್ಬವನ್ನು ಸಂಭ್ರಮಿಸಲು ಊರಿಗೆ ಊರೇ ತಯಾರಾಗುತ್ತಿರುತ್ತದೆ. ಮಹಿಳೆಯರು ಎರಡು ವಾರ ಮುಂಚೆಯೇ ಮನೆ ಸ್ವಚ್ಛಗೊಳಿಸಲು ಶುರುಮಾಡುತ್ತಾರೆ. ವರ್ಷಪೂರ್ತಿ ಗುಡಿಸದ ಮೂಲೆಗಳು, ವಾಡೆ, ಕೊಮ್ಮೆಗಳು, ಕೊಟ್ಟಿಗೆ-ಪಡಸಾಲೆಗಳು ಶುದ್ಧವಾಗುತ್ತವೆ. ಅಟ್ಟ, ಗೋಡೆ, ಅಂಗಳ, ಮಾಡು(ತಾರಸಿ)ಗಳ ದೂಳೊಡೆಯುತ್ತಾರೆ. ಮನೆ ಮುಂಭಾಗದ ಗೋಡೆಗಳಿಗೆ ಕೆಮ್ಮಣ್ಣು-ಸಗಣಿಯಿಂದ ಸಾರಿಸುತ್ತಾರೆ(ಈಗ ಎಲ ಪೇಂಟ್‌ಗಳ್ದದೇ ರಾಜ್ಯ). ಇಡೀ ಮನೆ ಸುಣ್ಣ-ಬಣ್ಣ ಕಾಣುತ್ತದೆ. ಕೆಮ್ಮಣ್ಣಿನ ಬಣ್ಣದ್ಲಲಿ ‘ಗೋಡೆಯ ಮೇಲೆ ಹಸೆ ಚಿತ್ತಾರಗಳನ್ನು ಮೂಡಿಸುವುದುಒಂದು ಸಂಭ್ರಮದ ಕೆಲಸ.

ಗಂಡಸರು ಹೊಸ ಬಟ್ಟೆ-ಬರೆ ಖರೀದಿಗೆ ಪಟ್ಟಣಕ್ಕೆ ಓಡಾಡುತ್ತಾರೆ. ಹಬ್ಬದ ಖರೀದಿಗಾಗಿ ಅಡಕೆ ಮಂಡಿ, ಗೊಬ್ಬರಿ ಮಂಡಿ, ಮಾಲೀಕರ ಬಳಿ ‘ಹಬ್ಬದ ಸಾಲವೆಂದೇ’ ಮುಂಗಡ ಹಣ ಪಡೆಯುತ್ತಾರೆ. ಬಟ್ಟೆ ಖರೀದಿಯೊಂದಿಗೆ ಬೇಸಾಯಕ್ಕೆ ಬೇಕಾದ ಹೊಸ ನೇಗಿಲು, ನೊಗ, ಮೇಣಿ, ದೊಡ್ಡಮಿಣಿ, ಹಗ್ಗ, ಚಿಲಕ್ಕಣ್ಣಿ, ಮಕಾಡ, ಕೊಳದಂಡೆ, ಕುಂಟೆ, ಕುಳ, ಅಲುಗು, ಕೂರಿಗೆ ಮುಂತಾದವುಗಳನ್ನು ಹೊಂಚುವ ಧಾವಂತದಲ್ಲಿರುತ್ತಾರೆ. ಯುಗಾದಿ ಹಿಂದೆ ಮುಂದೆ ದನಗಳ ಜಾತ್ರೆಗಳೂ ನಡೆಯುವುದರಿಂದ ರಾಸುಗಳನ್ನು ಕೊಟ್ಟು-ಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತದೆ.

ಮೂರು ದಿನದ ಹಬ್ಬ !
ಬಯಲು ಸೀಮೆಯ್ಲಲಿ ಯುಗಾದಿ ಮೂರು ದಿನದ ಹಬ್ಬ. ಮೊದಲ ದಿನ ಮುಸುರೆ ಹಬ್ಬ. ಪಾತ್ರೆ-ಪಗಡಗಳನ್ನು ತೊಳೆದು ಹೊಸ ನೀರು ತಂದು ತುಂಬಿಸುತ್ತಾರೆ. ಹದಿನೈದು ದಿನಗಳ ಸ್ವಚ್ಚತಾ ಕಾರ್ಯಕ್ಕೆ ಅಂತಿಮ ರೂಪ. ಎರಡನೇ ದಿನ ಸಿಹಿ ಹಬ್ಬ. ಮನೆ ಮಕ್ಕಳ್ಲೆಲಾ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ. ಮನೆಗ್ಲೆಲ ತೋರಣ ಕಟ್ಟಿ, ದನಗಳ ಕೊಟ್ಟಿಗೆಗೂ ಮಾವು-ಬೇವು ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ತೋರಣದ ತುದಿಗೆ ಸಿಕ್ಕಿಸುತ್ತಾರೆ. ಜಾನುವಾರುಗಳು ರೋಗ ಮುಕ್ತವಾಗಲೆಂದು ಬೇವು ಬಳಸುತ್ತಾರೆ ಎಂಬುದು ಹಿರಿಯ ನಂಬಿಕೆ. ಮೂರನೆಯದಿನ ‘ವರಷದ ತಡುಕು’ ಅಥವಾ ವರ್ಷದ ಹೆಚ್ಚು. ಈ ದಿನ ಕೆಲವು ಕಡೆ ಬೇಟೆಗೆ ಹೋಗುತ್ತಾರೆ. ಮಾಂಸದ ಅಡುಗೆ ಮಾಡಿ ಊಟ ಮಾಡುತ್ತಾರೆ. ಸಸ್ಯಹಾರಿಗಳು ನುಗ್ಗೆಕಾಯಿ ಸಂಬಾರು, ಆಂಬೊಡೆಯಂತಹ ಎಣ್ಣೆ ತಿಂಡಿ ಮಾಡಿ ಸವಿಯುತ್ತಾರೆ.

ಹೊಸ ನೀರಿನ ಸಿಂಚನ

ಎತ್ತುಗಳಿಗೆ ಗೌಸು ಹೊದಿಸಿ, ಚೆಂಡು ಹೂವಿನ ಹಾರ ಹಾಕಿ, ಬಂಡಿ ಕಟ್ಟಿ ದೇವಾಲಯಕ್ಕೆ ಮೂರು ಸುತ್ತು ಬರುತ್ತಾರೆ. ಅವುಗಳಿಗೆ ವಿಶೇಷ ನೈವೇದ್ಯ ಇರುತ್ತದೆ. ಹೊಸ ಬಟ್ಟೆ ತೊಡುವ ಮುಂಚೆ ದನಗಳ ಬೆನ್ನ ಮೇಲೆ ಹಾಕುವುದು ರೂಢಿ. ಕೆಲವರು ಹೊಸ ಬಟ್ಟೆಗಳಿಗೆ ಅರಿಶಿಣ ಸೋಕಿಸುತ್ತಾರೆ. ಮೈಸೂರು ಸೀಮೆಯ್ಲಲಿ ದವಸ ಧಾನ್ಯಗಳನ್ನು ಕಣದ್ಲಲಿ ಒಟ್ಟು ಮಾಡಿ ಪೂಜಿಸುತ್ತಾರೆ.
ಪೂಜೆ ಪುನಸ್ಕಾರಗಳು ಮುಗಿದ ಮೇಲೆ ಮನೆ ಯಜಮಾನ ಎಲರಿಗೂ ಬೇವು-ಬ್ಲೆಲ ಹಂಚುತ್ತಾನೆ. ಮನೆಗೆ ಯಾರೇ ಬಂದರೂ ಬೇವು-ಬ್ಲೆಲ ನೀಡುವುದು ಸಂಪ್ರದಾಯ. ಕಿತ್ತು ಹೋದ ಎಷ್ಟು ಸಂಬಂಧಗಳು ಈ ಹಬ್ಬದ್ಲಲಿ ಬೇವು-ಬ್ಲೆಲ ತಿಂದು ಒಂದಾಗುವ ಸಂಪ್ರದಾಯವಿದೆ. ಬೇಳೆ ಒಬ್ಬಟ್ಟು, ಗಟ್ಟಕ್ಕಿ ಪಾಯಸ, ಅಕ್ಕಿ ಪಾಯಸ, ಕಡುಬು ಅಡುಗೆಗಳು ಹಬ್ಬದ ವಿಶೇಷ.

ಪೂಜೆ ಮಾಡಿ, ಸಿಹಿ ಊಟದ ನಂತರ ‘ಜೂಜಾಟ ಶುರು’. ಗಂಡಸರು ಹೊಸ ಬಟ್ಟೆ ತೊಟ್ಟು ಹೊಂಗೆ ಮರದ ನೆರಳ್ಲಲಿ ಇಸ್ಪೀಟ್ ಆಟ ಆರಂಭಿಸಿದರೆ, ಮಹಿಳೆಯರು ಮನೆಯ ಅಂಗಳದ್ಲಲೇ ಚೌಕಾಬರ, ಪಗಡೆ, ಆನೆ-ಕುರಿಯಾಟ.. ಹೀಗೆ ವಿವಿಧ ಆಟಗಳನ್ನಾಡುತ್ತಾರೆ. ಮನರಂಜನೆಯೊಂದಿಗೆ ಹೊರ ಹೊಮ್ಮುವ ಸೋಲು-ಗೆಲುವು ವರ್ಷ ಪೂರ್ತಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಜನರಿಗೆ ಮಾರ್ಗದರ್ಶನ ನೀಡುತ್ತವೆ.

ಯುಗಾದಿ ಹಬ್ಬಕ್ಕೆ ಹದಿನೈದು ದಿನ ಮುನ್ನವೇ ಗ್ರಾಮೀಣ ಕ್ರೀಡೆಗಳ ಸುಗ್ಗಿ. ಜೊತೆ ಜೊತೆಗೆ ಬಯಲು ನಾಟಕಗಳ ಅಭ್ಯಾಸ. ಕೃಷಿಯ ಬಿಡುವಿನ ವೇಳೆಯ್ದಾದರಿಂದ ಊರ ಮಂದಿಯ್ಲೆಲ ಈ ಕ್ರೀಡೆಯ್ಲಲಿ ಭಾಗಿಯಾಗುತ್ತಾರೆ. ಮೈಗ್ಲೆಲ ಹರಳೆಣ್ಣೆ ಹಚ್ಚಿಕೊಂಡು ಕಬ್ಬಡ್ಡಿ, ಕೊಕ್ಕೊ, ವಾಲಿಬಾಲ್‌ನಂತಹ ಆಟವಾಡುವ ಸಂಪ್ರದಾಯ ಕೆಲವು ಪ್ರದೇಶಗಳ್ಲಲಿವೆ. ತುಮಕೂರು, ಚಿತ್ರದುರ್ಗ ಭಾಗಗಳ್ಲಲಿ ಯುಗಾದಿ ಹಬ್ಬದ ದಿನದಂದು ಉಯ್ಯಾಲೆಯಾಡುತ್ತಾರೆ. ಉಯ್ಯಾಲೆ ತೂಗುತ್ತ ತೂಗುತ್ತಾ, ಹಾಡುವ ಜನಪದ ಗೀತೆಗಳನ್ನು ಕೇಳುವುದೇ ಒಂದು ಸಂಭ್ರಮ.

ಬಿದಿಗೆ ಚಂದ್ರ ದರ್ಶನ :
ಗಣೇಶ ಚತುರ್ಥಿಯ ಬಿದಿಗೆ ಚಂದ್ರ ದರ್ಶನ ಅಪವಾದ. ಯುಗಾದಿ ಪಾಡ್ಯದ ನಂತರದ ಬಿದಿಗೆ ಚಂದ್ರ ದರ್ಶನ ಶುಭ ಎನ್ನುವ ನಂಬಿಕೆ ಗ್ರಾಮೀಣರ‍್ಲಲಿದೆ.  ಹಬ್ಬದೂಟ ಉಂಡು, ಉಯ್ಯಾಲೆಯಾಡಿ, ಜೂಜಾಟ ಮುಗಿಸಿ, ಪಶ್ಚಿಮದ್ಲಲಿ ಸೂರ್ಯ ಅಸ್ತಂಗತವಾಗುತ್ತ್ದಿದಂತೆ ಊರ ಮಂದಿಯ್ಲಲ ಮುಗಿಲತ್ತ ಮುಖಮಾಡುತ್ತಾರೆ. ಸಂವತ್ಸದರ ಮೊದಲ ಚಂದ್ರನ ಕೋಡನ್ನು ಕಂಡ ಮಂದಿ ಮನೆಗೆ ಹಿಂದಿರುಗಿ ಹಿರಿಯರ ಕಾಲಿಗೆ ನಮಸ್ಕರಿಸುತ್ತಾರೆ. ನವ ಸಂವತ್ಸರದ ಮೊದಲ ಚಂದ್ರನ ದರ್ಶನ ಇಡೀ ವರ್ಷದ್ಲಲಿ ಶುಭವನ್ನೇ ತರುತ್ತದೆ ಎಂಬ ನಂಬಿಕೆ ರೈತರ‍್ದದು.
ಚಂದ್ರನ ಕೋಡಿನ್ಲಲಿ ಮಳೆ-ಬೆಳೆಗಳ ಲೆಕ್ಕಾಚಾರ ಶುರು. ಇದಾದ ನಂತರ ಪಂಚಾಂಗ ಶ್ರವಣ. ಊರಿನ ದೇವಾಲಯದ್ಲಲೋ, ಅರಳಿಕಟ್ಟೆಯ ಮೇಲೋ ಕುಳಿತು, ಆ ವರ್ಷದ ಭವಿಷ್ಯ ಕೇಳುವ ಸಂಪ್ರದಾಯ. ಊರಿನ ಹಿರಿಯರು ವರ್ಷದ್ಲಲಿ ಯಾವ ಬೆಳೆ ಉತ್ತಮವಾಗಿದೆ ಎಂಬುದನ್ನು ವಿವರಿಸುತ್ತಾರೆ. ಧಾನ್ಯ ಹೆಸರು ಹೇಳದೇ ‘ಬಣ್ಣಗಳನ್ನು’ ಉಲೇಖಿಸುತ್ತಾ, ‘ಈ ಬಾರಿ ಹಸಿರು, ಕೆಂಪು, ಬೂದು ಬಣ್ಣದ ಧಾನ್ಯಗಳಿಗೆ ಏಳಿಗೆಯಿದೆ’ ಎಂದು ವಿವರಿಸುತ್ತಾರೆ. ಬುಧ, ಗುರು, ಚಂದ್ರ.. ಇತ್ಯಾದಿ ಗ್ರಹಗಳ ನಾಯಕತ್ವದ್ಲಲಿ ‘ಕೃಷಿ ಗ್ರಹ-ಗತಿ’ಗಳ ಲೆಕ್ಕಾಚಾರವೂ ನಡೆಯುತ್ತದೆ.

ಉತ್ತರ ಕರ್ನಾಟಕದ ಕೆಲವೆಡೆ ಚಕ್ಕಡಿಗೆ (ಗಾಡಿ) ತರಾತರ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಚಕ್ಕಡಿಯ ಒಂದೊಂದು ಭಾಗಕ್ಕೆ ಒಂದೊಂದು ಬಣ್ಣ, ಗಾಲಿಗಳಿಗೆ ಕೆಮ್ಮಣ್ಣು, ಗಾಲಿ ಅಂಚಿಗೆ, ಗುಂಭಕ್ಕೆ, ಗುಜ್ಜುಗಳಿಗೆ ಸುಣ್ಣ ಬಳಿಯುವುದು ವಾಡಿಕೆ. ಬಯಲು ಸೀಮೆಯ್ಲಲಿ ಕೆಲವು ಜನಾಂಗದವರು ಕೃಷಿ ಆಯುಧಗಳನ್ನಿಟ್ಟು ಪೂಜಿಸುತ್ತಾರೆ. ಹಿರಿಯರ ಸಮಾಧಿಗಳಿಗೆ ಹೋಗಿ ಹಣ್ಣು-ಕಾಯಿ ಮಾಡಿ, ಎಡೆ ಹಾಕಿ ನಮಸ್ಕರಿಸುತ್ತಾರೆ.

ಅದಕ್ಕೆ ಹೇಳುವುದು ಹಬ್ಬ ಎಂದರೆ ಪೂಜೆ ಪುನಸ್ಕಾರವಷ್ಟೇ ಅಲ, ಅದೊಂದು ಸಂಸ್ಕೃತಿ, ವಿಜ್ಞಾನ, ಮನರಂಜನೆಯ ಸಂಗಮವೆಂದು. ಇಂಥ ಸಂಪ್ರದಾಯ ಹಲವು ಆಧುನಿಕತೆಗಳ ಅಬ್ಬರದ್ಲಲಿ ಮಾಯವಾಗುತ್ತಿದೆ ಎಂಬುದು ನೋವಿನ ಸಂಗತಿ. ಈ ನೋವು ಉಪಶಮನವಾಗಲಿ, ‘ಖರ’ನಾಮ ಸಂವತ್ಸವರ ಹಳೆಯ ಸಂಪ್ರದಾಯಗಳ್ಲೆಲ ಮರಳಿ ಹಳ್ಳಿಗಳಿಗೆ ಬರಲಿ ಎಂದು ಹಾರೈಸೋಣ.

(ಪ್ರಜಾವಾಣಿಯ ‘ಯುಗಾದಿ ವಿಶೇಷ ಪುರವಣಿಯಲ್ಲಿ’ ಬರೆದ ಲೇಖನ)