ಅದ್ಭುತ ಮರಳು ಶಿಲ್ಪ !

ನಿಜಕ್ಕೂ ಆ ಇಮೇಲ್ ಅದ್ಭುತವಾಗಿತ್ತು. ಸಾಮಾನ್ಯವಾಗಿ ಗೆಳೆಯ ಅಮೃತ ಜೋಗಿ ಕಳುಹಿಸುವ ಮೇಲ್ ಗಳು ಹೀಗೆ ಉದ್ಘರಿಸುವಂತೆ ಮಾಡುತ್ತವೆ. ಇವತ್ತು ಕೂಡ ಅಂಥದ್ದೇ ಒಂದು ಮೇಲ್ ಕಳುಹಿಸಿದ್ದಾರೆ. ವಿದೇಶೀಯನೊಬ್ಬರ ಮರಳಿನಲ್ಲಿ ವಿವಿಧ ಪ್ರತಿಮೆಗಳನ್ನು ಮಾಡಿದ್ದಾನೆ. ಹಾಸ್ಯ, ಕ್ರೌರ್ಯ, ಗಂಭೀರ, ಶೃಂಗಾರ, ವಾತ್ಸಾಯನ, ರಾಜಕೀಯ.. ಹೀಗೆ ಹಲವು ವೈವಿಧ್ಯಗಳಿವೆ. ವೈರುಧ್ಯಗಳೂ ಇವೆ. ಅಂಥ ಹದಿನೈದಕ್ಕೂ ಅಧಿಕ ಚಿತ್ರಗಳಲ್ಲಿ ಒಂದು ಚಿತ್ರ ನನಗೆ ತುಂಬಾ ಇಷ್ಟವಾಯಿತು. ಹಾಗೆ ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸುತು.

ಬಿದಿರು ಬೊಂಬಿನ ಸಂಗೀತ ಸಂಜೆ

ಸೆಪ್ಟೆಂಬರ್ 18, ವಿಶ್ವ ಬಿದಿರು ದಿನ. ಹೀಗೆಂದು ಗೊತ್ತಾಗಿದ್ದು ಡೆಕನ್ ಹೆರಾಲ್ಡ್ ನ ಪನೋರಮಾ ಪುಟದಲ್ಲಿ  ಅಪ್ಪಿಕೋ ಚಳುವಳಿ ನೇತಾರ ಪಾಂಡುರಂಗಹೆಗಡೆಯವರ ಬರೆದ ಲೇಖನ ಓದಿದ ಮೇಲೆ. ಈ ಸಂದರ್ಭದಲ್ಲಿ  ‘ಬಿದಿರಿನ ಗೆಳೆಯ’ ಕೇರಳದ ಉನ್ನಿಕೃಷ್ಣ ಪಕ್ಕನಾರ್ ನನಪಾದರು. ಹತ್ತಾರು ಬಿದಿರು ವಾದ್ಯಗಳ ಮೂಲಕ ಸಂಗೀತ ಸುಧೆ ಹರಿಸುತ್ತಾ ಪರಿಸರ ಸಂರಕ್ಷಣೆಗಾಗಿ ಪಣ ತೊಟ್ಟಿರುವ ಉನ್ನಿಕೃಷ್ಣ ತಂಡದ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಕರ್ನಾಟಕ ದರ್ಶನದಲ್ಲಿ ಲೇಖನ ಬರೆದಿದ್ದೆ. ಹಾಗೆ ನೆನಪಿಸುವ ಸಲುವಾಗಿ ಇಲ್ಲಿ ಪೋಸ್ಟ್  ಮಾಡಿದ್ದೇನೆ.

ಉನ್ನಿಕೃಷ್ಣ ಸಂಗೀತ ತಂಡ

Our Bamboo,
Our Music,
Our Planet,
Save Bamboo,
Save Athirapilly,
Save Western ghats,

– ಹೀಗೆ ‘ಪ್ರಾರ್ಥಿಸುತ್ತಲೇ’ ಉನ್ನಿಕೃಷ್ಣ ಪಕ್ಕನಾರ ಮತ್ತು ತಂಡದವರು ‘ಬೊಂಬಿನ ಸಂಗೀತ ಸಂಜೆ’ ಆರಂಭಿಸುತ್ತಾರೆ. ಬಿದಿರಿನಿಂದ ತಯಾರಿಸಿದ ಸಂಗೀತ ವಾದ್ಯಗಳನ್ನು ನುಡಿಸುತ್ತಾ ಜನಪದ ಗೀತೆಗಳನ್ನು ಹಾಡುತ್ತಾರೆ. ನೋಡುಗರು ಮತ್ತು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.

‘ಸಂಗೀತವೇ ನಮ್ಮ ದೇವರು, ಪರಿಸರ ಸಂರಕ್ಷಣೆಯೇ ನಮ್ಮ ಉಸಿರು. ಬಿದಿರು ಉಳಿಸಿ, ಅಥಿರಪಲ್ಲಿ ರಕ್ಷಿಸಿ, ಪಶ್ಚಿಮ ಘಟ್ಟ ಸಂರಕ್ಷಿಸಿ.. ಎಂದು ಹೇಳುತ್ತಾ ಸಂಗೀತ ಕಾರ್ಯಕ್ರಮಕ್ಕೆ ‘ಮಂಗಳ’ ಹಾಡುತ್ತಾರೆ!

ಮೂಂಗೇತರಂಗ

ಉನ್ನಿಕೃಷ್ಣ ಪಕ್ಕನಾರ್ ಹಾಗೂ ಗೆಳೆಯರು ಕೇರಳದ ತ್ರಿಶ್ಯೂರ್ ಜಿಲ್ಲೆಯವರು. ಚಾಲುಕುಡಿ ನದಿಯ ದಡದ ನಿವಾಸಿಗಳು. ತಮ್ಮ ಊರಿನ ನದಿ  ನೀರು ಬಳಸಿ ವಿದ್ಯುತ್ ತಯಾರಿಸಲು ಕೇರಳ ಸರ್ಕಾರ ಮುಂದಾದಾಗ ಆ ಪ್ರಕ್ರಿಯೆ ವಿರುದ್ಧ ಹೋರಾಟ ನಡೆಸಲು ಉನ್ನಿಕೃಷ್ಣ ಬಿದಿರು ವಾದ್ಯಗಳ ಆರ್ಕೆಸ್ಟ್ರಾ ತಂಡವನ್ನು ಕಟ್ಟಿದರು. ಕಳೆದ ಹತ್ತು ವರ್ಷಗಳಿಂದ ‘ಮೂಲ ಪಾಡುಂ ರಾವು’(ಬಿದಿರು ಸಂಗೀತ ಸಂಜೆ) ತಂಡದೊಂದಿಗೆ ಪರಿಸರ ಸಂರಕ್ಷಣೆಗೆ ಧ್ವನಿಯಾಗಿದ್ದಾರೆ.

‘ಬ್ಯಾಂಬೂ ಮ್ಯೂಸಿಕ್ ತಂಡ’ದಲ್ಲಿ ಹತ್ತು ಮಂದಿ ನುರಿತ ಕಲಾವಿದರಿದ್ದಾರೆ. ಎಂಬತ್ತಕ್ಕೂ ಹೆಚ್ಚು ವೈವಿಧ್ಯಮಯ ಬಿದಿರು ವಾದ್ಯಗಳನ್ನು ಈ ತಂಡದ ಕಲಾವಿದರು ಬಳಸುತ್ತಾರೆ. ಅವನ್ನು ಅವರೇ ತಯಾರಿಸಿದ್ದಾರೆ.  ವಾದ್ಯಗಳಿಗೆ ಧ್ವನಿ ಆಧರಿಸಿ ಹೆಸರಿಟ್ಟಿದ್ದಾರೆ. ‘ಮೊಳದುದ್ದ  ಬಿದಿರಿಗೆ ಒಂದು ರಂಧ್ರ ಮಾಡಿದರೆ ‘ಅಂಬಾ’ ಎಂಬ ಶಬ್ದ ಹೊಮ್ಮುತ್ತದೆ. ಅದಕ್ಕೆ ‘ಅಂಬಾ’ ಎಂದು ಹೆಸರಿಟ್ಟೆವು. ಇದೇ ಬೇಸ್ ವಾಯ್ಸೆ. ಇನ್ನೊಂದಕ್ಕೆ ಮರಿಂಬಾ, ಮತ್ತೊಂದಕ್ಕೆ ಮೂಲಂ ತಡಿ (ರಿದಂ ಪ್ಯಾಡ್), ಮೂಲಂತಟ್ಟು (ರಿದಂ ಪ್ಯಾಡ್‌ನಂತಹ ವಾದ್ಯ), ನ್ಯಾಲಿಕೋರ್,  ಆಂಕ್ಲನ್ – ಸೈಲೋ ಫೋನ್ (ಇಂಡೋನೇಷ್ಯಾದ ವಾದನ), ಮುಂಗೇತರಂಗ್, ಪ್ಯಾನ್ ಪ್ಲೂಟ್(ಮೌತ್ ಆರ್ಗನ್), ಮರುಮೂಳಿ (ಮಳೆ ಹನಿ ಶಬ್ದ ಹೊರಡಿಸುವ ವಾದ್ಯ), ಪಕ್ಕನಾರ್-1 ಮತ್ತು ಪಕ್ಕನಾರ್-2 ಹೀಗೆ ಅವರದೇ ವಿಧಾನಗಳಲ್ಲಿ ವಾದ್ಯಗಳನ್ನು ಅನುಶೋಧಿಸಿದ್ದಾರೆ. ವಿಶೇಷವೆಂದರೆ ಪ್ರತಿ ವಾದ್ಯದ ಅನುಶೋಧನೆಯ ಹಿಂದೆ ಪರಿಸರದ ಲಯವಿದೆ. ತಾಳವಿದೆ. ದನಿಯಿದೆ.
ಸಂಗೀತಕ್ಕೆ ಸ್ಪೂರ್ತಿ ನೀಡಿದ ಬಿದಿರಿನೊಂದಿಗೆ ತನ್ನ ಹಳ್ಳಿಯಲ್ಲಿ ಉನ್ನಿಕೃಷ್ಣ
ಬಿದಿರು ಸಂಗೀತದ ಬೆನ್ನ ಹಿಂದೆ…
ಉನ್ನಿಕೃಷ್ಣ ಅವರದ್ದು ಕಾಡಿನೊಳಗಿನ ಜೀವನ. ಅಲ್ಲಿನ ಪ್ರಾಣಿ, ಪಕ್ಷಿಗಳು, ಗಿಡ-ಮರಗಳೇ ಅವರ ಸ್ನೇಹಿತರು. ದುಂಬಿಗಳ ಝೇಂಕಾರ, ಹಕ್ಕಿಗಳ ಚಿಲಿಪಿಲಿ ಕಲರವ, ಮಳೆ ಹನಿ ತೊಟ್ಟಿಕ್ಕುವ ಸದ್ದು, ಬಾಗುತ್ತಾ, ಬಳುಕುತ್ತಾ, ಧುಮ್ಮಿಕ್ಕುವ ಜಲಪಾತಗಳ ಮಂಜುಳ ನೀನಾದ… ಇವೇ ಮನರಂಜನೆ. ಒಮ್ಮೆ ಉನ್ನಿಕೃಷ್ಣ ಬಿದಿರು ಮೆಳೆಯಲ್ಲಿ  ಅಡ್ಡಾಡುತ್ತಿದ್ದರು. ಆಗ ಗಾಳಿ ಸುಯ್ಯೆಂದು ಬೀಸಿತು. ಗಾಳಿಗೆ ಸುತ್ತಲಿನ ಬಿದಿರು ಮೆಳೆಗಳು ಕಟಿ ಕಟಿ ಕಟಿ ಎಂದು ಶಬ್ದಮಾಡಿದವು. ಮರ, ಗಿಡ, ಬಳ್ಳಿಗಳು ತೊನೆದಾಡಿದವು.  ತೆಳ್ಳೆನೆಯ ಮರವೊಂದು ಬಳುಕುತ್ತ ಕೊರ್ರೊ…. ಎಂದು ಕೂಗಿತು. ಬಂಡೆಯ ಸಂದಿನೊಳಗೆ ಝರಿಯೊಂದು ಬಳುಕುತ್ತ ಜುಳಕ್, ಜುಳಕ್ ಸದ್ದು ಮಾಡಿತು. ಪ್ರಕೃತಿ ಹೊಮ್ಮಿಸುತ್ತಿದ್ದ ಇಂಥ ವೈವಿಧ್ಯಮಯ ನಾದಗಳ ಜೊತೆಗೆ ಉನ್ನಿಕೃಷ್ಣ ಕೊಳಲು ಬಾರಿಸುತ್ತ ಧ್ವನಿಗೂಡಿಸಿದರು. ‘ಪ್ರಕೃತಿಯ ಜೊತೆಗಿನ ಜುಗಲ್ ಬಂದಿಯೇ ಬಿದಿರಿನ ಸಂಗೀತ ಸಾಮ್ರಾಜ್ಯ ಆರಂಭಕ್ಕೆ ಮುನ್ನುಡಿ ಬರೆಯಿತು  ಎನ್ನುತ್ತಾರೆ ಉನ್ನಿಕೃಷ್ಣ.

ಪ್ರಕೃತಿಯಿಂದ ಸಂಗೀತ ಕಲಿತ ಉನ್ನಿಕೃಷ್ಣ ಆರಂಭದಲ್ಲಿ ಕೊಳಲು ನುಡಿಸುವುದನ್ನು ಕಲಿತರು. ಆನಂತರ ಸಮಾನಾಸಕ್ತ ಗೆಳೆಯರು ಜೊತೆಯಾದರು. ಮೊದಲು ಮೌತ್ ಆರ್ಗನ್, ಡ್ರಮ್, ರಿದಂ ಪ್ಯಾಡ್.. ಹೀಗೆ ಒಬ್ಬೊಬ್ಬರು ಒಂದೊಂದು ವಾದ್ಯಗಳನ್ನು ಅನುಶೋಧಿಸಿದರು. ಇದನ್ನು ಅನುಶೋಧನೆ ಎನ್ನುತ್ತಾರೆ. ನನಗೆ ಹಾಗನ್ನಿಸಿಲ್ಲ. ಬಿದಿರು ಸಂಗೀತ ಹಾಡಿತು. ನಾವು ಅದನ್ನು ಹಿಂಬಾಲಿಸಿದೆವು ಎನ್ನುತ್ತಾರೆ ಉನ್ನಿಕೃಷ್ಣ.

ಅಂಗುಲಾಂಗ್

ಉನ್ನಿಕೃಷ್ಣ ಅವರ ಅಪ್ಪ, ಅಜ್ಜ ಬಿದಿರಿನಿಂದ ಆಟಿಕೆ ತಯಾರಿಸಿ ಸ್ಥಳೀಯ ಹಬ್ಬ, ಜಾತ್ರೆ, ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಸ್ಥಳೀಯ ಪಂಚಾಯಿತಿಯ ಉತ್ಸವದಲ್ಲಿ ತಮ್ಮ ಮಳಿಗೆ ಮುಂದೆ ನಿಂತ ಗ್ರಾಹಕರು, ಅವುಗಳನ್ನು ನೋಡಿ ಹಾಗೇ ಹೊರಟು ಹೋಗುತ್ತಿದ್ದರು. ಈ ಗ್ರಾಹಕರನ್ನು ಸೆಳೆಯುವ ಮನಸ್ಸಾಯಿತು. ಮಾರನೆ ದಿನ ಮಳಿಗೆಯೊಳಗೆ ಕುಳಿತು ‘ನಾಧಿನ್ ಧಿನ್ನಾ,ನಾಧಿನ್ ಧಿನ್ನಾ’ ಅಂತ ಬಿದಿರಿನ ದಮಡಿ ನುಡಿಸಲು ಆರಂಭಿಸಿದರು. ‘ದಮಡಿ ತಾಳಕ್ಕೆ ಗ್ರಾಹಕರು ಮನ ಸೋತರು. ಮಳಿಗೆ ಎದುರು ಬಂದು ನಿಂತರು. ಬಿದಿರಿನ ಆಟಿಕೆಗಳ ವ್ಯಾಪಾರ ಕುದುರಿತು. ನನ್ನ ಈ ಅವತಾರ ನೋಡಿ ಕೆಲವರು ಹುಚ್ಚ ಎಂದರು ಎಂದು ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾರೆ ಉನ್ನಿಕೃಷ್ಣ.

ಸಂಗೀತ – ಹೋರಾಟದ ನಂಟು:

ಬಿದಿರು ಸಂಗೀತ ತಂಡ ಆರಂಭವಾಗಿದ್ದು ಹವ್ಯಾಸ ಮತ್ತು ಮನರಂಜನೆಗಾಗಿ. ಕೆಲ ವರ್ಷಗಳ ಹಿಂದೆ ಕೊಟ್ಟನೆಲ್ಲು ಸಮೀಪ ಚಾಲುಕುಡಿ ನದಿ(ಅಥಿರಪಲ್ಲಿ ಜಲಪಾತ) ನೀರು ಬಳಸಿ ವಿದ್ಯುತ್ ತಯಾರಿಸಲು ಸರ್ಕಾರ ತೀರ್ಮಾನಿಸಿತು. ಈ ನದಿ ರಕ್ಷಣೆಗಾಗಿ ಹಲವು ಸಂಸ್ಥೆಗಳು ಹೋರಾಟ ಆರಂಭಿಸಿದವು. ‘ಪ್ರಕೃತಿಯನ್ನೇ ತಾಯಿ ಎಂದು ನಂಬಿರುವ ನಾವು ಆಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪರಿಸರ ಹೋರಾಟಕ್ಕೆ ಕೈಜೋಡಿಸಿದೆವು. ಸಂಗೀತದ ಮೂಲಕ ಹೋರಾಟಕ್ಕೆ ಧ್ವನಿಯಾದೆವು’

‘ಪರಿಸರ ಹೋರಾಟ ಎನ್ನುತ್ತೀರಿ, ಬಿದಿರು ಕಡಿದು ವಾದ್ಯಗಳನ್ನು ಮಾಡಿಕೊಂಡಿದ್ದೀರಲ್ಲ? ಎಂಬ ಪ್ರಶ್ನೆಗೆ  ‘ಬಿದಿರು ಕಡಿದಂತೆ ಬೆಳೆಯುವ ಸಸ್ಯ. ಮಾನವನ ಬದುಕಿನ ಆದಿಯಿಂದ ಅಂತ್ಯದವರೆಗೂ ಬಿದಿರು ಬಳಕೆಯಾಗುತ್ತದೆ ಎಂಬ ವಿವರಣೆ ನೀಡುತ್ತಾರೆ.

ಹತ್ತು ವರ್ಷಗಳಿಂದ ಪರಿಸರ ಹೋರಾಟದಲ್ಲಿ ಸಕ್ರಿಯರಾಗಿರುವ ಬಿದಿರು ಸಂಗೀತ ತಂಡ ದೇಶದ ವಿವಿಧೆಡೆ ಸಂಗೀತ  ಕಾರ್ಯಕ್ರಮ ನೀಡಿದೆ. ಕೇರಳದ ‘ಅಥಿರಪಲ್ಲಿ ಉಳಿಸಿ’ ದಕ್ಷಿಣ ಭಾರತದ ಪಶ್ಚಿಮ ಘಟ್ಟ ಉಳಿಸಿ  ಹೋರಾಟ ಸೇರಿದಂತೆ ಹಲವು ಪರಿಸರ ಚಳವಳಿಗಳಲ್ಲಿ ಅವರು ಭಾಗವಹಿಸಿದ್ದಾರೆ. ಹೋರಾಟದ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಸಂಭಾವನೆ ಪಡೆಯುವ ಉನ್ನಿಕೃಷ್ಣ ‘ಎರಡು ಹೊತ್ತಿನ ಊಟಕ್ಕೆ ಹಣ ಸಿಕ್ಕರೆ ಸಾಕು. ಸಂಗೀತದಿಂದ  ದುಡ್ಡು ಮಾಡುವ ಅಗತ್ಯ ಇಲ್ಲ’ ಎನ್ನುತ್ತಾರೆ.

ಮೂಲಂ ತುಡಿ

ಉನ್ನಿಕೃಷ್ಣ ನೂರು ಕಲಾವಿದರಿರುವ ಸಂಗೀತ ತಂಡ ಕಟ್ಟಿದ್ದಾರೆ. ಅವರೊಡನೆ ಹತ್ತು ಜನರ ‘ಕೋರ್’ ಟೀಮ್ ಕೂಡ ಇದೆ. ಕಳೆದ ವರ್ಷದಿಂದ  ‘ಇನ್ಸ್ಟಿಟ್ಯೂಟ್ ಆಫ್ ಬ್ಯಾಂಬೂ ಮ್ಯೂಸಿಕ್(ಐಬಿಎಂ) ಎಂಬ ಸಂಗೀತ ಶಾಲೆಯನ್ನೂ ಆರಂಭಿಸಿದ್ದಾರೆ. ಶಾಲೆಯಲ್ಲಿ ಹತ್ತೊಂಬತ್ತು ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.

ಬಣ್ಣ ಬೇಡ, ಮಣ್ಣೇ ಸಾಕು

 

ಜೈ ಗಣೇಶ…

ಬೆಂಗಳೂರಿನ ಚಾಮರಾಜ ಪೇಟೆಯ ವೀಣಾ ಕಲಾ ಮಂದಿರದವರ ತಯಾರಿಸಿರುವ ಮಣ್ಣಿನ ಗಣಪ. ಅದಕ್ಕೆ ಲೇಪಿಸಿರುವ ಬಣ್ಣಗಳು ಸುಣ್ಣ, ಅರಿಶಿಣ, ಇಜ್ಜಿಲು ಮತ್ತು ಕುಂಕುಮ

ಣೇಶ ಬಂದ
ಕಾಯಿ ಕಡಬು ತಿಂದ
ಚಿಕ್ಕ ಕೆರೆಯ್ಲಲಿ ಎದ್ದ
ದೊಡ್ಡ ಕೆರೆಯ್ಲಲಿ ಬಿದ್ದ..

ಗಣೇಶ ಹಬ್ಬ ಮುಗಿಯುತ್ತಲೇ ಹೀಗೆ ಘೋಷಣೆ ಕೂಗುತ್ತಾ ಪಕ್ಕದ ಕೆರೆಗೋ, ಹೊಂಡಕ್ಕೋ, ತೊಟ್ಟಿಗೆ ಬಣ್ಣ ಲೇಪನದ ಗಣೇಶನ ಪ್ರತಿಮೆಯನ್ನು ಮುಳುಗಿಸುತ್ತೇವೆ. ಸಂಭ್ರಮ ಸಡಗರೆದೊಂದಿಗೆ ಕುಣಿದು ಕುಪ್ಪಳಿಸಿ, ಪ್ರಸಾದ ಮೆದ್ದು ಬೆಚ್ಚನೆ ಮಲಗುತ್ತೇವೆ. ಆದರೆ ಕೆರೆಯಲ್ಲಿ ಮುಳುಗಿದ ಬಣ್ಣದ ಗಣಪನ ವಿಗ್ರಹ ಅದೆಷ್ಟು ವಿಷ ಕಕ್ಕುತ್ತದೆಂದು ನಿಮಗೆ ಗೊತ್ತೇ? ಆ ವಿಷದಿಂದ ಕೆರೆಯಲ್ಲಿರುವ ಎಷ್ಟು ಜಲಚರಗಳು ಸಾಯುತ್ತವೆಂದು ನಿಮಗೆ ಅರವಿದೆಯೇ ? ಕೆರೆಯ ನೀರು ಭೂಮಿಯಲ್ಲಿ ಇಂಗಿ, ಅಂತರ್ಜಲ ಕಲುಷಿತಗೊಳ್ಳುವ ಪ್ರಕ್ರಿಯೆ ನಿಮಗೆ ಗೊತೇ ?
ಇಲ.. ಇಂಥ ಗೊತ್ತ್ಲಿಲದ ಅದೆಷ್ಟೋ ವಿಷಯಗಳಿಂದಾಗಿ ಎಲರೂ ರಾಸಾಯನಿಕ ಮಿಶ್ರಿತ ಬಣ್ಣಗಳ ಗಣೇಶನ ವಿಗ್ರಹಗಳನ್ನು ಭಕ್ತಿಯಿಂದ ಪೂಜಿಸಿ ನೀರಿಗೆ ಹಾಕಿ ಸಂಭ್ರಮ ಪಡುತ್ತೇವೆ. ಈ ಕೃತ್ಯದಿಂದ ಪ್ರಕೃತಿಗಷ್ಟೇ ಅಲ, ಮಾನವ ಕುಲಕ್ಕೇ ಕಂಟಕ ಎಂಬುದು ಎಲರಿಗೂ ತಿಳಿಯಬೇಕಾ ಅಂಶ.

ಗಣೇಶನ ಮೂರ್ತಿ ಆದಷ್ಟೂ ಆಕರ್ಷಕವಾಗಲೆಂದು ಎನಾಮೆಲ್ ಬಣ್ಣ ಬಳಿದ ದೊಡ್ಡ ದೊಡ್ಡ ವಿಗ್ರಹಗಳನ್ನೇ ತರುತ್ತೇವೆ. ಅಂಥ ಬಣ್ಣಗಳಲ್ಲಿ ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದ ವಿಷದ ರಾಸಾಯನಿಕಗಳಿರುತ್ತವೆ. ಅದರಲ್ಲೂ ಸೀಸದ ವಿಷ ತೀರಾ ಅಪಾಯಕಾರಿ. ಅದು ನೀರಿನ ಮೂಲಕ, ಆವಿಯ ಮೂಲಕ, ಉಸಿರಿನ ಮೂಲಕ ನಮ್ಮ ದೇಹಕ್ಕೆ ನೇರವಾಗಿ ಪ್ರವೇಶಿಸಬಹುದು. ಇಲ್ಲವೇ ಮಣ್ಣು, ನೀರಿನ ಮೂಲಕ ಕಾಯಿಪಲ್ಲೆ, ಗಡ್ಡೆಗೆಣಸು, ಹಣ್ಣುಹಂಪಲುಗಳ ಮೂಲಕವೂ ನಮ್ಮದೇಹಕ್ಕೆ ಪ್ರವೇಶಿಸಬಹುದು. ಈ ವಿಷ ರಕ್ತನಾಳಗಳಲ್ಲಿ ಸೇರಿಕೊಂಡರೆ ಅದು ಯಕೃತ್ತು, ಮೂತ್ರಪಿಂಡ, ಹೃದಯದ ನಾಳಗಳಿಗೆ ಹೊಕ್ಕು ಅಲೇ ಕೂತಿರುತ್ತದೆ. ಮಿದುಳಿನ ನರಕೋಶಗಳಲ್ಲಿ ಸೇರಿದರೆ, ವಿಶೇಷವಾಗಿ ಎಳೆಯ ಮಕ್ಕಳ ಬುದ್ಧಿ ಕುಂಠಿತವಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಮೇಲ್ನೋಟಕ್ಕೆ ಅತಿಚಟುವಟಿಕೆಯಿಂದ ಆಡುತ್ತಿದ್ದರೂ ಅದರ ಏಕಾಗ್ರತೆ, ಗ್ರಹಣಶಕ್ತಿ ಕಡಿಮೆಯಾಗಬಹುದು. ಗಣಪನ ಬಣ್ಣದಲ್ಲಿರುವ ಈ ಭಾರಲೋಹಗಳು ನಮಗಷ್ಟೇ ಅಲ, ನೀರು, ಗಾಳಿ ಮತ್ತು ಮಣ್ಣಿನ ಮೂಲಕ ಇತರ ಪ್ರಾಣಿಪಕ್ಷಿಗಳ ದೇಹಕ್ಕೂ ಸೇರಿ ನಾನಾ ಬಗೆಯ ಸಂಕಟಗಳನ್ನು ತಂದೊಡ್ಡಬಹುದು ಎನ್ನುತ್ತಾರೆ ವೈದ್ಯರು.
ಗಣಪನನ್ನು ನೀರಿನಲ್ಲಿ ವಿಸರ್ಜಿಸಿದಾಗ, ವಿಗ್ರಹಕ್ಕೆ ಬಳಿದ ಬಣ್ಣದ್ಲಲಿರುವ ವಿಷವಸ್ತುಗಳು ಕ್ರಮೇಣ ನೀರಿಗೆ ಸೇರುತ್ತವೆ; ಕೆಸರಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ, ಮಣ್ಣಿಗೆ, ಕಳೆಸಸ್ಯಗಳಿಗೆ, ಏಡಿಗೆ, ಕಪ್ಪೆಗೆ, ನೀರೊಳ್ಳೆ ಹಾವುಗಳಿಗೆ ಮತ್ತಿತರ ಜಲಚರಗಳಿಗೆ ಸೇರುತ್ತವೆ. ಕೆರೆಯ ಆಸುಪಾಸಿನ ಜೊಂಡು ಹ್ಲುಲನ್ನು ಮೇಯುವ ದನಕರುಗಳಿಗೂ ಸೀಸ, ಕ್ಯಾಡ್ಮಿಯಂ ಸೇರುತ್ತದೆ. ವಿಘ್ನ ನಿವಾರಣೆಗಾಗಿ ಪೂಜಿಸುವ ವಿಘ್ನೇಶ್ವರನ ಹಬ್ಬದಿಂದ ನಾನಾ ಬಗೆಯ ಜೀವಿಗಳ ಸಹಜ ಬದುಕಿಗೆ ವಿಘ್ನ ತರುತ್ತದೆ.

ಹಾಗಾದರೆ ವಿಘ್ನ ಹೆಚ್ಚಾಗದಂತೆ, ಬ್ದುದಿ ಕಡಿಮೆಯಾಗದಂತೆ, ಪರಿಸರ ಹಾಳಾಗದಂತೆ ಗಣೇಶನ ಹಬ್ಬ ಮಾಡುವುದಾದರೂ ಹೇಗೆ ? ಅದಕ್ಕೆ ಇಲಿದೆ ದಾರಿ;
೧. ‘ಪ್ರಖರ ಬಣ್ಣಗಳ ಗಣೇಶ ವಿಗ್ರಹ ಖರೀದಿಸಬೇಡಿ. ಮಣ್ಣಿನ ಬಣ್ಣದ ಗಣಪನನ್ನೇ ಪೂಜಿಸಿ

೨. ‘ಇಕೊ ಕಲರ್’ ಅಂದರೆ ಸಸ್ಯರಸದ ಬಣ್ಣ ಬಳಿದ, ನೀರ‍್ಲಲಿ ಕರಗಬಲ್ಲ ತಿಳಿ ಬಣ್ಣಗಳ ಗಣೇಶನನ್ನು ಖರೀದಿಸಿ.

೩. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಅಥವಾ ಸುಟ್ಟ ಮಣ್ಣಿನ ಗಣೇಶಮೂರ್ತಿಗಳು ಬೇಡ. ಏಕೆಂದರೆ ಅವು ಕೊನೆಗೆ ನೀರಲ್ಲಿ ಕರಗುವುದ್ಲಿಲ. ನಿಸರ್ಗಕ್ಕೆ ಸೇರುವುದಿಲ್ಲ.

೪. ಗಣಪನ ಮಂಟಪವನ್ನು ಮತ್ತು ಪೆಂಡಾಲ್ ಕಂಬಗಳನ್ನು ಅಲಂಕರಿಸುವಾಗ ಕೃತಕ ಬಣ್ಣ ಬ್ಯಾನರ್‌ಗಳನ್ನು ಬಳಸದಿರಿ. ಒಂದು ಪಕ್ಷ ಬಳಸಿದರೂ ಹಬ್ಬದ ನಂತರ ಅವುಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ. ದಯವಿಟ್ಟು ಅವುಗಳನ್ನು ಸುಡಬೇಡಿ

೫ ಗಣಪ ನೈಸರ್ಗಿಕ ದೇವರು. ಆತನನ್ನು ತೆಂಗಿನ ಗರಿಗಳಿಂದ, ನೀಲಗಿರಿ ಎಲೆಗಳಿಂದ ಅಲಂಕರಿಸುತ್ತೇವೆ. ಗರಿಕೆಗಳಿಂದ ಪೂಜಿಸುತ್ತೇವೆ. ಹಾಗಾಗಿ ಇಂಥ ಸಸ್ಯಗಳನ್ನೇ ಬಳಸಿ ಸುಂದರ ತೋರಣಗಳನ್ನು ಸಿದ್ಧಪಡಿಸಬಹುದು.
೬. ವಿಸರ್ಜನೆಯ ಸಮಯದಲ್ಲಿ ಗಣೇಶ ಮೂರ್ತಿಯ ಮೇಲಿನ ಅಲಂಕಾರಗಳನ್ನ್ಲೆಲ ಪ್ರತ್ಯೇಕಿಸಿ. ಅವು ನೀರಿಗೆ ಹೋಗಬಾರದು. ಹಾಗೇ ಸಾವಯವ ದ್ರವ್ಯಗಳು ಅಂದರೆ ತುಳಸಿ, ದೂರ್ವೆ ಪುಷ್ಪಗುಚ್ಛಗಳನ್ನೂ ಹೊರಕ್ಕೆ ತೆಗೆದಿಡಿ. ಅವೂ ನೀರನ್ನು ಸೇರಬಾರದು.

೭. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಗಣೇಶ ವಿಸರ್ಜನೆಗೆ ನಿರ್ದಿಷ್ಟ ತಾಣಗಳನ್ನು ನಿಗದಿ ಮಾಡಿರುತ್ತಾರೆ. ಅವುಗಳ ಬಗೆಗೆ ಮೊದಲೇ ಮಾಹಿತಿ ಸಂಗ್ರಹಿಸಿ, ಅಲೇ ಗಣೇಶನನ್ನು ವಿಸರ್ಜಿಸಿ.

ವರ್ಷಕ್ಕೆ ಒಂದೇ ಬಾರಿ ಗಣಪನ ಹಬ್ಬ. ಅದು ಇಡೀ ವರ್ಷ ನೆನಪಿನ್ಲಲಿ ಉಳಿಯಬೇಕು. ಗಣೇಶನ ಹಬ್ಬ ನಿಸರ್ಗದ ಪ್ರೀತಿಯ ಸಂಕೇತವಾಗಬೇಕು. ಹೀಗೆ ಆಗಬೇಕೆಂದರೆ ಎಲರೂ ಮೇಲಿನ ನಿಯಮಗಳನ್ನು ಪಾಲಿಸಬೇಕು.

ಗಣೇಶನ ಹಬ್ಬದ ಸಂದರ್ಭದ್ಲಲಿ ಪರಿಸರದ ಮೇಲಾಗುವ ಹಾನಿಯನ್ನು ತಪ್ಪಿಸಲು ಅನೇಕ ಸಂಘಟನೆಗಳು ಪ್ರಚಾರ ಕೈಗೊಂಡಿವೆ. ಬೆಂಗಳೂರಿನ ಒಂದು ಯುವಕರ ತಂಡ ಒಂದು ವೆಬ್‌ಸೈಟ್ ತಯಾರಿಸಿ, ಅವುಗಳ ಮೂಲಕ ಸಾರ್ವಜನಿಕರ‍್ಲಲಿ ಜಾಗೃತಿ ಮೂಡಿಸುತ್ತಿದೆ. ಆ ವೆಬ್‌ತಾಣದ ಹೆಸರು ಪರಿಸರಗಣಪತಿ.ನೆಟ್(parisaraganapathi.net). ಈ ತಾಣದ್ಲಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳು ದೊರೆಯುವ ಸ್ಥಳ, ಅವುಗಳ ಬಳಸುವ ರೀತಿ, ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ ಕುರಿತು ನಾಡಿನ ಸ್ವಾಮೀಜಿಗಳ ಅನಿಸಿಕೆ ಅಭಿಪ್ರಾಯಗಳನ್ನು ಪ್ರಕಟಿಸಿದೆ.

ಪರಿಸರ ಸ್ನೇಹಿ ಗಣಪನ ವಿಗ್ರಹಗಳು ದೊರೆಯುವ ವಿಳಾಸ:

‘ಕರ್ನಾಟಕ ಹಸ್ತಶಿಲ್ಪಕಲಾ ಮಂಡಲಿ’ – ೦೮೦೨೩೫೬೭೪೭೦ – ಮಣ್ಣಿನ, ಸಹಜ ವರ್ಣದ ಇಕೊ-ಗಣೇಶ ಮೂರ್ತಿಗಳು ಸಿಗುತ್ತವೆ.
ವೀಣಾ ಕಲಾ ಮಂದಿರ, ಚಾಮರಾಜಪೇಟೆ, ಬೆಂಗಳೂರು – ೯೨೪೧೭೧೫೦೦೮, ೯೯೦೧೩೦೩೩೯೦.
ಹೆಚ್ಚಿನ ವಿಳಾಸಗಳಿಗೆ parisaraganapathi.net ನೋಡಿ.

ದಿಮ್ಮನೆ ರಂಗ, ದಿಮ್ಮನೆ ರಂಗಿ, ತಿನ್ನಲೆ ರಂಗ, ತಿನ್ನಲೆ ತೆಂಗ…!

ತೆಂಗಿನ ಕಾಯಿ ಒಡೆಯುವ ಮೂಲಕ ಜಿಲ್ಲಾಧಿಕಾರಿ ಸಿ.ಸೋಮಶೇಖರ್ ಅವರಿಂದ ಸಮಾವೇಶ ಉದ್ಘಾಟನೆ

ತೆಂಗಿನ ಹಾಡು ತುಮಕೂರು
ಕೊಬ್ಬರಿ ನಾಡು ತಿಪಟೂರು
ದಿಮ್ಮನೆ ರಂಗ, ದಿಮ್ಮನೆ ರಂಗಿ ತಿನ್ನಲೆ ರಂಗ, ತಿನ್ನಲೆ ತೆಂಗ !!

– ಸೈಕಲ್ ಮೇಲೆ ಕುಳಿತೇ ಇಂಥ್ದದೊಂದು ಕವಿತೆ ಗೀಚಿದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ತೆಂಗು ಉಳಿಸಿ ಸೈಕಲ್ ಜಾಥಕ್ಕೆ ಚಾಲನೆ ನೀಡಿದರು. ನೂರಾರು ರೈತರೊಂದಿಗೆ ಜಾಥದ ಉದಕ್ಕೂ ಕಲ್ಪವೃಕ್ಷಕ್ಕೆ ಅಂಟಿರುವ ಕಳಂಕ, ಕಂಪೆನಿಗಳ ಅಪಪ್ರಚಾರ, ಎಳನೀರಿನ ಆರೋಗ್ಯ, ತೆಂಗಿನ ಎಣ್ಣೆಯ ಔಷಧೀಯ ಗುಣ, ತೆಂಗಿನ ವೈವಿಧ್ಯ.. ಹೀಗೆ ಹಲವು ದೃಷ್ಟಿಕೋನಗಳಿಂದ ಕಲ್ಪವೃಕ್ಷವನ್ನು ಕವಿತೆಯೊಂದಿಗೆ ವಿವರಿಸುತ್ತಾ ಹೊರಟರು.

ಆಗಸ್ಟ್ ೩೧ರಿಂದ ತುಮಕೂರು ಜ್ಲಿಲೆಯ ಚಿಕ್ಕನಾಯ್ಕನಹಳ್ಳಿ, ತಿಪಟೂರು, ತುರುವೇಕೆರೆಯಿಂದ ಜಾಥಾ ಆರಂಭವಾಯಿತು. ನೂರಾರು ರೈತರು ಜಾಥಾದ್ಲಲಿ ಪಾಲ್ಗೊಂಡ್ದಿದರು. ತುರುವೇಕೆರೆಯಿಂದ ಡಾ.ನಂಜಪ್ಪ ನೇತೃತ್ವದ್ಲಲಿ ಮಹಿಳೆಯರಾದಿಯಾಗಿ ಸೈಕಲ್ ಜಾಥಾದ್ಲಲಿ ಪಾಲ್ಗೊಂಡ್ದಿದು ವಿಶೇಷ.  ತಿಪಟೂರಿನ್ಲಲಿ ಸಾವಿರಕ್ಕೂ ಹೆಚ್ಚು ಜನ ಸೇರ‍್ದಿದು ಬೆಳೆಗಾರರ ಒಗ್ಗಟ್ಟಿನ ಸಂಕೇತ. ತ್ಲಾಲೂಕಿನ ಪ್ರಮುಖ ಸ್ಥಳಗಳ್ಲಲಿ ಸಭೆ, ಚರ್ಚೆ. ಸಾಕಷ್ಟು ಬೆಳೆಗಾರರ ಬೆಂಬಲದೊಂದಿಗೆ ಜಾಥಾಕ್ಕೆ ಹಾಡು, ಕುಣಿತ, ಘೋಷಣೆಗಳ ಸಾತ್…

‘ಎಳ್ನೀರ್ ಎಳ್ನೀರ್ ನಮ್ಮೂರು.. ಎಳ್ನೀರು ಕುಡಿಯೋರ್ ಒಳ್ಳೆಯವರು.. ಮ್ದದೂರು ತಳಿ ಎಳ್ನೀರು.. ಕಾಯಿಲೆಗೆ ಮ್ದದು ಎಳ್ನೀರ್… ಎಂದು ಪ್ರಾಸ ಬದ್ಧ ಗಾನದೊಂದಿಗೆ ಸಾಗಿದ ಸೈಕಲ್ ಜಾಥಾ ಸೆಪ್ಟೆಂಬರ್ ೨ರ ‘ವಿಶ್ವ ತೆಂಗು’ ದಿನದಂದು ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣ ತಲುಪಿತು. ವಿಶ್ವ ತೆಂಗು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ೨೨ ಸಂಘಟನೆಗಳು ಒಂದೇ ವೇದಿಕೆಯಡಿ ಈ ಅಭಿಯಾನವನ್ನು ಕೈಗೊಂಡ್ದಿದವು.

 

ತೆಂಗಿನ ಮಹತ್ವ ಸಾರುವ ಕಲ್ಪವೃಕ್ಷ ರಥ

ಬೆಲೆ ಸಿಗಬೇಕು, ಬೆಳೆ ಬಳಸಬೇಕು :

ಮಾರ್ಕೆಟ್‌ನ್ಲಲಿ ಎಲ ಬೆಲೆಗಳು ಏರುತ್ತವೆ. ತೆಂಗಿಗೆ ಬೆಲೆ ಮಾತ್ರ ಸ್ಥಿರ. ಮಾರ್ಕೆಟ್‌ನ್ಲಲಿ ಎಳನೀರು ಬೆಲೆ ೨೦ ರೂಪಾಯಿ ಆದರೂ, ರೈತರಿಗೆ ಸಿಗೋದು ೩ ರೂಪಾಯಿ. ಇಂಥ ಅವ್ಯವಸ್ಥೆಗಳು ಸರಿಯಾಗಬೇಕು. ತೆಂಗಿಗೆ ಬೆಲೆ ಸಿಗಬೇಕು. ನಮ್ಮ ಬೆಳೆ ನಾವೇ ಬಳಸುವಂತಾಗಬೇಕು. ಅಪಪ್ರಚಾರದಿಂದ ತೆಂಗು ತಿನ್ನುವುದನ್ನೇ ನ್ಲಿಲಿಸಿರುವ ಗ್ರಾಹಕರಿಗೆ ಈ ಫಲದ ಆರೋಗ್ಯದ ಗುಟ್ಟನ್ನು ತಿಳಿಸಬೇಕು. ಅದಕ್ಕಾಗಿ ಈ ಜಾಥಾ. ಎಳನೀರು ಮೇಳದಿಂದ ‘ಅಭಿಯಾನ’ ಆರಂಭವಾಯಿತು. ಈ ಸಮಾವೇಶ ಅದರ ಮುಂದುವರಿದ ಭಾಗ’ – ಅಭಿಯಾನದ ಸಂಘಟಕ ಅಣೇಕಟ್ಟೆ ವಿಶ್ವನಾಥ್ ಜಾಥಾದ ಉದೇಶ ವಿವರಿಸಿದರು.

ಹೃದಯಾಘಾತ – ತಪ್ಪು ಕಲ್ಪನೆ:

ಸಮಾವೇಶದ ಪ್ರಮುಖ ಕೇಂದ್ರ ಬಿಂದು ಹೃದ್ರೋಗ ತಜ್ಞ ಪ್ರೊ. ಬಿ.ಎಂ.ಹೆಗ್ಡೆ. ‘ಕಲ್ಪವೃಕ್ಷಕ್ಕೆ ಅಂಟಿದ’ ಕಳಂಕದ ಇತಿಹಾಸವನ್ನು ಸಮಾವೇಶದ್ಲಲಿ ಬಿಚ್ಚಿಟ್ಟ್ದಿದು ಹೀಗೆ; ‘೧೯೩೦ ರ‍್ಲಲಿ ಅಮೆರಿಕದ್ಲಲಿ ವ್ಯಾಪಕವಾಗಿ ತೆಂಗಿನ ಎಣ್ಣೆ ಬಳಕೆಯ್ಲಲಿತ್ತು. ೪೬-೪೭ರ ದಶಕದ್ಲಲಿ ಅಮೆರಿಕದ್ಲಲಿ ಸೋಯಾಬೀನ್ ಬೆಳೆಯಲು ಆರಂಭವಾಯಿತು. ಇದನ್ನು ವಿಶ್ವದ್ಲೆಲೆಡೆ ಹಂಚುವುದಕ್ಕಾಗಿಯೇ ತೃತೀಯ ರಾಷ್ಟ್ರಗಳ ಆಹಾರದ ಬಗ್ಗೆ ಅಪಪ್ರಚಾರ ಆರಂಭವಾಯಿತು. ವೈದ್ಯಕೀಯ ಪಠ್ಯಗಳ ರಚನೆಯಿಂದಲೇ ಅದಕ್ಕೆ ಚಾಲನೆ ಸಿಕ್ಕಿತು. ಅಂದು ರಚನೆಯಾದ ‘ಗೈಡ್‌ಲೈನ್’ ಇಟ್ಟುಕೊಂಡೇ ತೆಂಗಿನ ಎಣ್ಣೆಯ್ಲಲಿ ಸ್ಯಾಚುರೇಟೆಡ್ ಕೊಲೆಸ್ಟ್ರಾಲ್ ಇದೆ. ಅದನ್ನು ತಿಂದರೆ ಹೃದಯಾಘಾತವಾಗುತ್ತದೆ ಎಂದು ಈ ವೈದ್ಯರು ರೋಗಿಗಳಿಗೆ ಎಚ್ಚರಿಕೆ ನೀಡುತ್ತಾರೆ.
ಅದು ಸುಳ್ಳು. ಶುದ್ಧ ತೆಂಗಿನ ಎಣ್ಣೆ – ತಾಯಿಯ ಹಾಲ್ದಿದಂತೆ. ಈ ಎಣ್ಣೆಯಿಂದ ಹೃದ್ರೋಗ ಬರುವುದ್ಲಿಲ. ಬದಲಾಗಿ ಅದರ‍್ಲಲಿರುವ ಮಾನೋ ಲಾರಿಕ್ ಆಸಿಡ್ ಎಂಬ ಅಂಶ ಹೃದ್ರೋಗ ನಿವಾರಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ಒಂದು ಚಮಚ ತೆಂಗಿನ ಎಣ್ಣೆ ಸೇವಿಸಿದರೆ ದೇಹದ್ಲಲಿನ ಮೆಟಬಾಲಿಕ್ ಚಟುವಟಿಕೆ ಚುರುಕುಗೊಳ್ಳುತ್ತದೆ’ ಎಂದು ಹೆಗಡೆಯವರು ವಿವರಿಸುತ್ತಾ ಹತ್ತು ನಿಮಿಷದ್ಲಲಿ ಹತ್ತಾರು ವೆಬ್‌ಸೈಟ್‌ಗಳು, ವಿಜ್ಞಾನಿಗಳು, ಪುಸ್ತಕಗಳ ವಿಳಾಸಗಳ ಸಾಕ್ಷಿಯನ್ನು ಬೆಳೆಗಾರರಿಗೆ ಒದಗಿಸಿದರು.
ಹೆಗ್ಡೆಯವರ ಮಾತಿನೊಂದಿಗೆ ಉದ್ಯಮಿಯೊಬ್ಬರು ‘ಶುದ್ಧ ತೆಂಗಿನ ಎಣ್ಣೆ’ ತುಂಬಿದ ಪುಟ್ಟ ಶೀಶೆಗಳನ್ನು ಸಮಾವೇಶದ್ಲಲಿ ವಿತರಿಸಿದರು. ಜೊತೆಗೊಂದು ತೆಂಗಿನ ಎಣ್ಣೆಯ ಆರೋಗ್ಯ ಕುರಿತ ವಿವರಣೆಯಳ್ಳ ಕರಪತ್ರವನ್ನು ನೀಡಿದರು. ಎದುರು ಕುಳಿತ್ದಿದ ಬೆಳೆಗಾರರ ಬಾಯ್ಲಲಿ ‘ಬಿಳಿಗೆರೆ’ಯ ಈ ಹಾಡಿನ ಸಾಲು ಗುನುಗುತ್ತಿತ್ತು…

ಲ್ಯಾಬಿನ ಲೋಕ ಒಂದೆಡೆ ಇರಲಿ
ನಮ್ಮನು ಮಂಗನ ಮಾಡದೇ ಇರಲಿ
ಕಣ್ಣಿಗೆ ಕಾಣುವ ಸತ್ಯದ ಗೊಂಚಲು
ಸಮಯ ಪರೀಕ್ಷೆ ಎಲಕೂ ಮೇಲು !!

ತೆಂಗಿನ ಹಣ್ಣನು ತಿನ್ನುವರು
ಹೊಳೆಯುವ ಕಣ್ಣನು ಪಡೆಯುವರು
ತೆಂಗಿನ ಮೇಲೆ ತೇಲುವರು
ಮುಳುಗದೇ ದಡವನು ಸೇರುವರು !!

 

ತಿಪಟೂರಿನಲ್ಲಿ ನಡೆದ ಜಾಥಾದ ದೃಶ್ಯ. ಇಲ್ಲಿ ದಾಖಲೆಯ ಸಂಖ್ಯೆಯಲ್ಲಿ ಬೆಳೆಗಾರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಎಳನೀರ್ ಮಾರಾಟ ಮಾಡಿ :

‘ಎಳನೀರು ಮಾರಾಟ ಲಾಭದಾಕ. ಆದರೆ ಬೆಳೆಗಾರರು ಒಗ್ಗಟ್ಟಾಗಿ ಮಾರಾಟ ಮಾಡಬೇಕು. ನಮ್ಮೂರಿನ್ಲಲಿ ಈಗ ಒಂದು ಸಿಯಾಳಕ್ಕೆ ೯ ರೂಪಾಯಿ ಬೆಲೆ ಇದೆ’ – ಸಮಾವೇಶದ ಮತ್ತೊಬ್ಬ ಅತಿಥಿ ಕಾಸರಗೋಡು ಸಮೀಪದ ಮಿಯಪದವಿನ ಸಿ.ಕೆ.ಚೌಟರ ಮಾತು. ಕೆಲವು ತಿಂಗಳುಗಳ ಹಿಂದೆ ಕಿಬ್ಬನಹಳ್ಳಿಯ್ಲಲಿ ನಡೆದ ಎಳನೀರು ಮೇಳ ನೆನಪಿಸಿದ ಚೌಟರು, ತಮ್ಮೂರಿನ ಎಳನೀರು ವಹಿವಾಟು ಪ್ರಕ್ರಿಯೆ ವಿವರಿಸಿದರು.

‘ತೆಂಗು ಮಂಡಳಿ ಏನ್ ಕೆಲಸ ಮಾಡ್ತಿದೆ’ – ಸಮಾವೇಶದಲ್ಲಿ  ಹೀಗೆ ಗುಡುಗ್ದಿದು ತುರುವೇಕೆರೆಯ ವೈದ್ಯ ಡಾ. ನಂಜಪ್ಪ. ವಿಶ್ರಾಂತ ವೈದ್ಯರಾದ ನಂಜಪ್ಪ ನೂರಾರು ಬೆಳೆಗಾರರೊಂದಿಗೆ ತುರುವೇಕೆರೆಯಿಂದ ತುಮಕೂರುವರೆಗೂ ಸೈಕಲ್ ತುಳಿದುಕೊಂಡೇ ಬಂದ್ದಿದರು. ತೆಂಗು ಅಭಿವೃದ್ಧಿ ಮಂಡಳಿಯ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬೇರೆಯವರತ್ತ ಬೊಟ್ಟು ಮಾಡುವ ಮುನ್ನ ನಮ್ಮ ಮನೆಗಳ್ಲಲಿ ಒಂದು ತೆಂಗಿನ ಕಾಯಿ ಬಳಸುವ ಜಾಗದ್ಲಲಿ ಎರಡು ಬಳಸುವಂತಾದರೆ, ನಾವು ಬೆಳದ್ದದನ್ನು ನಾವೇ ಬಳಸುವಂತಾದರೆ ನಮ್ಮ ಬೆಳೆಗೆ ಬೆಲೆ ಖಂಡಿತಾ – ಸಾವಯವ ಕೃಷಿಕ ಮಾರುಗೊಂಡನಹಳ್ಳಿ ಸದಾಶಿವಯ್ಯ ಅವರ ಅಭಿಮತ.

ಹೀಗೆ ಇಡೀ ಕಾರ್ಯಕ್ರಮದ್ದುದಕ್ಕೂ ಬೆಳೆಗಾರರು ಸಮಸ್ಯೆಗಳನ್ನು ವಿವರಿಸುತ್ತ್ದಿದರೆ ಅದನ್ನು ಆಲಿಸಬೇಕಾದ ಜನಪ್ರತಿನಿಧಿಗಳು ಸಮಾವೇಶಕ್ಕೆ ಗೈರಾಗ್ದಿದರು. ಇದನ್ನು ಗಮನಿಸಿದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ‘ಇಷ್ಟು ದೊಡ್ಡ ಸಮಾವೇಶ ನಡೆಯುತ್ತಿದೆ. ಇಲಿ ಬೆಳೆಗಾರರ ಸಮಸ್ಯೆಗಳನ್ನು ಕೇಳುವುದಕ್ಕಿಂತ ಈ ಜನಪ್ರತಿನಿಧಿಗಳಿಗೆ ಇನ್ನಾವ ಘನಕಾರ್ಯವಿತ್ತು’ ಎಂದು ಕಟುವಾಗಿ ಟೀಕಿಸಿದರು.

ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳು

ಸಮಾವೇಶದ ಒಳಗೆ ಮಾತುಗಳ ಮಳೆ. ಹೊರಗೆ ತೆಂಗಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ. ಒಂದೆಡೆ ಬೆಳೆಗಾರರು ಮಾಧ್ಯಮದವರಿಗೆ ಸಂದರ್ಶನ ನೀಡುತ್ತ್ದಿದರೆ, ಹೆಗ್ಡೆಯವರ ಭಾಷಣ ಕೇಳಿದ ಗ್ರಾಹಕರು ಧೈರ್ಯವಾಗಿ ‘ತೆಂತಾ(ತಾಜಾ ತೆಂಗು) ಎಣ್ಣೆ’ ಖರೀದಿಯ್ಲಲಿ ನಿರತವಾಗ್ದಿದರು. ಒಳಗಡೆ ಸಮಾವೇಶ ಸಮಾಪ್ತಿಯಾಗುತ್ತಾ, ಸರ್ಕಾರಕ್ಕೆ ಒತ್ತಾಯಿಸುವ ಘೋಷಣೆಗಳು ಮೊಳಗುತ್ತ್ದಿದರೆ, ಇನ್ನೊಂದೆಡೆ ಮತ್ತೆ ‘ಬಿಳಿಗೆರೆಯ’ ಹಾಡಿನ ಕೊನೆ ಸಾಲುಗಳು ಬೆಳೆಗಾರರೊಬ್ಬರ ಬಾಯ್ಲಲಿ ಗುನ್ ಗುನಿಸುತ್ತಿತ್ತು…

ಕೊಲೆಸ್ಟ್ರಾಲಿನ ಕಂತೆ ಪುರಾಣ
ತೆಂಗಿಗೆ ತಗುಲದು ಸುಳ್ಳಿನ ಬಾಣ
ಕೊಬ್ಬರಿ ಎಣ್ಣೆ ತೆಂಗಿನ ಬೆಣ್ಣೆ
ಬೆಳಗು ಬೈಗು ಉಂಡವರು
ಹೃದಯದ ಕಾಯಿಲೆ ಗ್ಲೆಲುವರು
ಕೊಲೆಸ್ಟ್ರಾಲನೆ ಕ್ಲೊಲುವರು.

ದಿಮ್ಮನೆ ರಂಗ ದಿಮ್ಮನೆ ರಂಗಿ
ತಿನ್ನಲೆ ರಂಗ, ತಿನ್ನಲೆ ತೆಂಗ…!!

ತುಮಕೂರು ಘೋಷಣೆ
೧. ಕ್ವಿಂಟಾಲ್ ಕೊಬ್ಬರಿಗೆ ರೂ.೧೦೦೦೦ ವೈಜ್ಞಾನಿಕ ಬೆಂಬಲ ಬೆಲೆ ನಿಗಧಿಪಡಿಸಬೇಕು.
೨. ಎಳನೀರನ್ನು ರಾಷ್ಟ್ರೀಯ ಪಾನೀಯ ಎಂದು ಘೋಷಿಸಬೇಕು.
೩. ತೆಂಗು ಬಳಕೆಯಿಂದ ಆರೋಗ್ಯಭಾಗ್ಯ ಎಂಬುದನ್ನು ಸರ್ಕಾರ, ಇಲಾಖೆಗಳು ಪ್ರಚಾರ ಪಡಿಸಬೇಕು.
೪. ತೆಂಗು ಆಧಾರಿತ ಉತ್ಪನ್ನಗಳ ತಯಾರಿಕೆಗೆ ಮತ್ತು ಮಾರಾಟಕ್ಕೆ ಸಹಕಾರಿ ಸಂಸ್ಥೆಗಳಿಗೆ ಒತ್ತು ನೀಡಬೇಕು.
೫. ಪಡಿತರ ವ್ಯವಸ್ಥೆಯ್ಲಲಿ ವಿತರಣೆಯಾಗುತ್ತಿರುವ ಪಾಮ್‌ಆಯಿಲ್ ಬದಲಾಗಿ ತೆಂಗಿನೆಣ್ಣೆಯನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು.
೬. ವೈದ್ಯರಿಗೆ ಅದರ‍್ಲಲೂ ವಿಶೇಷವಾಗಿ ಹೃದ್ರೋಗ ತಜ್ಞರಿಗೆ ತೆಂಗಿನ ಶ್ರೇಷ್ಠತೆಯ ಬಗ್ಗೆ ಅರಿವು ಮೂಡಿಸಬೇಕು.
೭. ನಿಸ್ತೇಜವಾಗಿರುವ ರಾಜ್ಯ ತೆಂಗು ಅಭಿವೃದ್ಧಿ ಮಂಡಳಿಯ ಕಾರ್ಯಚಟುವಟಿಕೆ ಬದಲಾಗಬೇಕು.
೮. ಮಂಡಳಿಯ ಸಮಿತಿಯ್ಲಲಿ ರಾಜ್ಯದ ತೆಂಗು ಬೆಳೆಗಾರರಿಗೆ ಶೇ ೫೦% ರಷ್ಟು ಅವಕಾಶ ಕಲ್ಪಿಸಬೇಕು.
೮. ತೆಂಗು ಬೆಳೆಯುವ ಭಾಗಗಳ್ಲಲಿ ಮಂಡಳಿಯ ಶಾಖೆಗಳನ್ನು ತೆರೆದು ಬೆಳೆಗಾರರಿಗೆ ಸ್ಪಂದಿಸಬೇಕು.
೯. ವಿದೇಶದಿಂದ ಆಮದಾಗುತ್ತಿರುವ ಸೋಯಾಬೀನ್ ಎಣ್ಣೆಯನ್ನು ನಿಷೇಧಿಸಬೇಕು.
೧೦. ಈಗಾಗಲೆ ಚಾಲ್ತಿಯಲ್ಲಿರುವ ನಫೆಡ್ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.