ಎಲ್ಲಾ ವಿಶ್ವ ಕನ್ನಡ ಸಮ್ಮೇಳನಕ್ಕಾಗಿ

ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಏನ್ಮಾಡ್ತಿದ್ದಾರೆ ?

ವಿಶ್ವಕನ್ನಡ ಸಮ್ಮೇಳನ್ನಕ್ಕಾಗಿ ಸರ್ಕಾರಕ್ಕೆ ಸಾಕ್ಷ್ಯಚಿತ್ರ  ನಿರ್ಮಿಸಿಕೊಡುತ್ತಿದ್ದಾರೆ.

ನಿಜ, ನಾಗ್ತಿಹಳ್ಳಿ ಈಗ ವಿಶ್ವಕನ್ನಡ ಸಮ್ಮೇಳನಕ್ಕಾಗಿ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿಕೊಡುತ್ತಿದ್ದಾರೆ. ವಾರದ ಗಡುವಿನೊಳಗೆ ಈ ಸಾಕ್ಷ್ಯಚಿತ್ರ ಮುಗಿಯಬೇಕು. ಅದಕ್ಕಾಗಿ ನಾಡಿನ ಸಂಪನ್ಮೂಲ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ನಿನ್ನೆ ಇದ್ದಕ್ಕಿದ್ದಂತೆ ಬೆಂಗಳೂರಿನ ಹೆಬ್ಬಾಳದ ಮಂಗಳ ರೈತ ಭವನದಲ್ಲಿ ಕಾಣಿಸಿಕೊಂಡರು. ಅಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ಶ್ರೀಪಡ್ರೆ, ಶಿವಾನಂದ ಕಳವೆ ಭಾಗವಹಿಸಿದ ವಿಚಾರ ತಿಳಿದೇ ಅಲ್ಲಿಗೆ ಬಂದಿದ್ದರು ನಾಗತಿಹಳ್ಳಿ.

ಹಳ್ಳಿಯ ಸಮಸ್ಯೆಗಳು, ಕೃಷಿ ವಲಯದ ಸಮಕಾಲೀನ ವಿಚಾರಗಳ ಬಗ್ಗೆ ಕೃಷಿ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳು.. ಹೀಗೆ ಗ್ರಾಮೀಣ ಜಗತ್ತಿನ ಹಲವು ವಿಚಾರಗಳನಗೊಂಡ ಪ್ರಶ್ನೆ ಕೇಳುತ್ತಾ, ಕಾರ್ಯಕ್ರಮ ನಡುವೆಯೇ ಚಕಾಚಕ್  ಅಂತ ಚುಟುಕಾಗಿ ಸಂದರ್ಶನ ಮುಗಿಸಿಬಿಟ್ಟರು.

ನಾಗ್ತಿಹಳ್ಳಿಯವರಿಗಲ್ಲದೇ, ಬೇರೆ ಯಾರಿಗಾದ್ರೂ ಈ ಜವಾಬ್ದಾರಿ ಕೊಟ್ಟಿದ್ದರೆ,  ಈ ಮೂವರ ಬದಲಿಗೆ ಹಳ್ಳಿಯನ್ನೇ ಸುತ್ತಾಡದ ಸಚಿವರು, ರೈತರ ಮನ ಮುಟ್ಟದ ವಿಜ್ಞಾನಿಗಳು, ಹಳ್ಳಿಯ ಸಮಸ್ಯೆಗಳನ್ನು ಹತ್ತಿರದಿಂದ ನೋಡದ ‘ತಜ್ಞರ’ ಮುಖಗಳು, ಮಾತುಗಳು ವಿಶ್ವಕನ್ನಡ ಸಮ್ಮೇಳನದಲ್ಲಿ ರಾರಾಜಿಸುತ್ತಿದ್ದರು.

ಈ ವಿಷಯದಲ್ಲಿ ಸರ್ಕಾರಕ್ಕೊಂದು ಥ್ಯಾಂಕ್ಸ್.

 

 

‘ಬಹು’ಮುಖಿ ಹೋರಾಟ

ಅದು ಬೇಡ್ತಿ ನದಿಯ್ಲಲ, ಕರ್ನಾಟಕದ ಸೈಲೆಂಟ್ ವ್ಯಾಲಿ !
-೧೯೮೨ರ‍್ಲಲಿ ಉತ್ತರ ಕನ್ನಡದ ಬೇಡ್ತಿ ಯೋಜನೆ ವಿರುದ್ಧದ ಹೋರಾಟದ್ಲಲಿ ‘ಚಿಪ್ಕೊ’ ಚಳವಳಿ ನೇತಾರ ಸುಂದರ್‌ಲಾಲ್ ಬಹುಗುಣ ಅವರು ಅಲಿನ ಪರಿಸರ ಕಂಡು ಉದ್ಘರಿಸ್ದಿದು ಹೀಗೆ !
ಪಶ್ಚಿಮ ಘಟ್ಟದ ಬಗ್ಗೆ ಬಹುಗುಣ ಅವರಿಗೆ ಎಲ್ಲ್ಲೆಲದ ಪ್ರೀತಿ. ಅದಕ್ಕಾಗಿಯೇ ‘ಘಟ್ಟ’ವನ್ನು ‘ಕರ್ನಾಟಕದ ಮಕುಟ’ ಎಂದ್ದಿದಾರೆ. ಹಿಮಾಲಯದ್ಲಲಿ ಹುಟ್ಟಿದರೂ, ಅವರಿಗೆ ಕರ್ನಾಟಕದ ನಂಟಿದೆ. ಆ ನಂಟಿಗೆ ದಶಕಗಳ ಇತಿಹಾಸವೂ ಇದೆ.

ಸುಂದರಲಾಲ್ ಬಹುಗುಣ

ಹಿಮಾಲಯ ತಪ್ಪಲಿನ ಹಳ್ಳಿಯೊಂದರ‍ಲ್ಲಿ ಜನವರಿ ೯, ೧೯೨೭ರ‍ಲ್ಲಿ ಜನಿಸಿದ ಸುಂದರ್‌ಲಾಲ್ ಬಹುಗುಣ ಅವರು ಗಾಂಧಿ ತತ್ವದೊಂದಿಗೇ ಜೀವನ ರೂಪಿಸಿಕೊಂಡರು. ವಿದ್ಯಾಭ್ಯಾಸದ ನಂತರ ನಡುವೆ ರಾಜಕೀಯ ಪ್ರವೇಶ. ೧೯೫೬ರ‍್ಲಲಿ ರಾಜಕೀಯ ಬಿಟ್ಟು ಪತ್ನಿ ವಿಮಲರೊಂದಿಗೆ ಆಶ್ರಮ ಸ್ಥಾಪಿಸಿದರು. ಆಶ್ರಮದ್ಲಲಿ ಬಡವರೊಟ್ಟಿಗೆ ಬದುಕುತ್ತಾ ‘ಬಡತನ’ಕ್ಕೆ ಕಾರಣ ಹುಡುಕುತ್ತಾ ಹೊರಟರು. ಅರಣ್ಯ ನಾಶ, ಮಣ್ಣಿನ ಸವಕಳಿ, ನೀರಿನ ಕೊರತೆ ಇವ್ಲೆಲ ಬಡತನಕ್ಕೆ ಕಾರಣ ಎಂಬುದನ್ನು ಅರಿತ ಬಹುಗುಣ ‘ಪರಿಸರ ಸಂರಕ್ಷಣೆ’ ಹೋರಾಟ ಆರಂಭಿಸಿದರು.

‘ಚಿಪ್ಕೊ’ ಚಳವಳಿ ಹುಟ್ದಿದು :
೧೯೩೦ರಲ್ಲಿ ಅರಣ್ಯವನ್ನು ವಾಣಿಜ್ಯಕ್ಕೆ(ಫಾರೆಸ್ಟ್ ಕಮರ್ಷಿಯಲೈಸೇಷನ್) ಬಳಕೆ ಮಾಡಿಕೊಳ್ಳಲು ಬ್ರಿಟಿಷ್ ಆಡಳಿತ ಆದೇಶಿಸಿತು. ಅದರ ವಿರುದ್ಧ ತಿರುಗಿ ಬಿದ್ಧವರನ್ನು ನಿರ್ದಾರ್ಕ್ಷಿಣ್ಯವಾಗಿ ಹತ್ಯೆ ಮಾಡಲಾಯಿತು. ಈ ಘಟನೆಯ್ಲಲಿ ೧೭ ಮಂದಿ ಸಾವನ್ನಪ್ಪಿದರು. ೮೦ ಜನರನ್ನು ಬಂಧಿಸಲಾಯಿತು. ಈ ಹೋರಾಟದ ಸ್ಪೂರ್ತಿಯಿಂದಲೇ ಸುಂದರ್‌ಲಾಲ್ ಬಹುಗುಣ ೧೯೭೦ರಲ್ಲಿ ‘ಚಿಪ್ಕೊ’ ಚಳವಳಿ ಆರಂಭಿಸಿದರು.
‘ಎಕಾಲಜಿ ಈಸ್ ಪರ್ಮನೆಂಟ್ ಎಕಾನಮಿ’ ಎಂಬ ಘೋಷವಾಕ್ಯದೊಂದಿಗೆ ಈ ಚಳವಳಿ ದೇಶ, ವಿದೇಶಗಳಿಗೂ ಪಸರಿಸಿತು. ಸ್ವೀಡನ್, ಜರ್ಮನಿ, ನೆದರ್‌ಲೆಂಡ್, ಸ್ವಿಟ್ಜರ್‌ಲೆಂಡ್, ಫ್ರಾನ್ಸ್, ಇಂಗ್ಲೆಂಡ್ ಮತ್ತು ಅಮೆರಿಕಾದವರು ‘ಚಿಪ್ಕೊ’ ಚಳವಳಿ ನಡೆದ ಪ್ರದೇಶಗಳಿಗೆ, ಬಹುಗುಣ ಅವರ ಆಶ್ರಮಕ್ಕೆ ಭೇಟಿ ನೀಡಿದರು. ಪರಿಸರ ಉಳಿವಿಗಾಗಿ ‘ಪ್ರಾಣ ತೆತ್ತ’ವರ ಬಗ್ಗೆ ಕಂಬನಿ ಮಿಡಿದ ಅನೇಕ ವಿದೇಶಿಯರು, ಈ ಹೋರಾಟವನ್ನು ತಮ್ಮ ದೇಶಗಳಿಗೂ ವಿಸ್ತರಿಸಿದರು. ಈ ಚಳವಳಿಯ ಬಿಸಿ ವಿಶ್ವ ಸಂಸ್ಥೆಯವರೆಗೂ ಮುಟ್ಟಿತು.

ಗಾಂಧಿ ತತ್ವದ್ಲಲೇ ಹೋರಾಟ:
‘ಗಾಂಧಿ ತತ್ವ’ದ ಪ್ರಕಾರ ಶಾಂತಿಯುತವಾಗಿ ಹೋರಾಟ ನಡೆಯಬೇಕು. ಅದಕ್ಕಾಗಿ ಬಹುಗುಣ ಅವರು ‘ಪಾದಯಾತ್ರೆ’ಯನ್ನೇ ಹೋರಾಟದ ಅಸ್ತ್ರವಾಗಿಸಿಕೊಳ್ಳುತ್ತ್ದಿದರು. ಪಾದಯಾತ್ರೆ ಯ್ಲಲಿ ಆಯಾ ಪ್ರದೇಶದ ಜನರನ್ನು ನೇರ ಸಂಪರ್ಕಿಸಬಹುದು. ಭಾವನೆಗಳ ಮೂಲಕ ಅವರ ಮನಸ್ಸು ತಟ್ಟಿ, ಹೃದಯ ಸ್ಪರ್ಶಿಸಬಹುದು. ಜನರ ನಾಡಿ ಮಿಡಿತ ಅರಿತು, ಪರಿಸರ ಶಿಕ್ಷಣ ನೀಡಿ, ಮುಂದಿನ ಹೋರಾಟಕ್ಕೇ ಸ್ಥಳೀಯರನ್ನೇ ಸ್ವಯಂ ಸೇವಕರನ್ನಾಗಿಬಹುದು’ ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಅರಣ್ಯದ್ಲಲಿ ಮರ ಕಡಿಯುವುದಕ್ಕೆ ನಿರ್ಬಂಧ ಹೇರುವುದಕ್ಕೆ ಒತ್ತಾಯಿಸಿ ೧೯೮೧ರಿಂದ ೮೩ರವರಗೆ ಹಿಮಾಲಯ ವ್ಯಾಪ್ತಿಯ ಏಳು ರಾಜ್ಯಗಳ್ಲಲಿ ಐದು ಸಾವಿರ ಕಿಲೋಮೀಟರ್ ಪಾದಯಾತ್ರೆ ಮಾಡಿದರು. ಹಳ್ಳಿ-ಹಳ್ಳಿ ಸುತ್ತುತ್ತಾ ಜನರ ಸಹಕಾರ ಅರಸುತ್ತಾ, ಚಳವಳಿ ಗಟ್ಟಿಗೊಳಿಸಿದ ಅವರು, ಅಂದಿನ ಪ್ರಧಾನಿ ಇಂದಿರಾಗಾಂಧಿಯವರಿಗೆ ಮನವರಿಕೆ ಮಾಡಿಕೊಟ್ಟರು. ೧೯೮೦ರ‍್ಲಲಿ ‘ಮರ ಕತ್ತರಿಸುವುದಕ್ಕೆ’ ೧೫ ವರ್ಷಗಳ ಕಾಲ ನಿಷೇಧ ಹೇರಲಾಯಿತು. ಹೋರಾಟಕ್ಕೆ ಜಯ ಸಿಕ್ಕಿತು.

ಈ ಪಾದಯಾತ್ರೆ, ಚಳವಳಿ, ಹೋರಾಟಗಳೇ ೧೯೮೨ರ‍ಲ್ಲಿ ಕರ್ನಾಟಕದ್ಲಲಿ ‘ಅಪ್ಪಿಕೊ’ ಚಳವಳಿ ಆರಂಭಕ್ಕೆ ಸ್ಪೂರ್ತಿಯಾಯಿತು. ಶಿರಸಿಯ ಪಾಂಡುರಂಗ ಹೆಗಡೆ ಮತ್ತಿತರ ಪರಿಸರಾಸಕ್ತರ ನೇತೃತ್ವದ್ಲಲಿ ಉತ್ತರ ಕನ್ನಡದ ಪಶ್ಚಿಮ ಘಟ್ಟದ್ಲಲಿ ಆರಂಭವಾದ ಈ ಚಳವಳಿಯ್ಲಲಿ ಸುಂದರ್‌ಲಾಲ್ ಬಹುಗುಣ ಖುದ್ಧಾಗಿ ಪಾಲ್ಗೊಂಡ್ದಿದರು. ಅಂದಿನಿಂದ ಆರಂಭವಾದ ಕರ್ನಾಟಕದ ನಂಟು ಇಂದಿಗೂ ನಿರಂತರವಾಗಿದೆ.

ರಾಜ್ಯದ್ಲಲಿ ಬಹುಗುಣರ ಹೆಜ್ಜೆ:
ರಾಜ್ಯದ್ಲಲಿ ಪರಿಸರ ಸಮಸ್ಯೆಗಳ ವಿರುದ್ಧ ಹೋರಾಟ ನಡೆದಾಗಲ್ಲೆಲಾ ಬಹುಗುಣ ಪ್ರತ್ಯಕ್ಷರಾಗ್ದಿದಾರೆ. ೧೯೮೨ರ‍್ಲಲಿ ನಡೆದ ಅಪ್ಪಿಕೊ ಚಳವಳಿ, ೧೯೮೩ರ ಪ್ರೊ.ಎಂ.ಡಿ.ನಂಜುಂಡಸ್ವಾಮಿ ನೇತೃತ್ವದ ರೈತ ಸಂಘ ನಡೆಸಿದ ‘ನೀಲಿಗಿರಿ ನಾಟಿ’ ವಿರುದ್ಧದ ಹೋರಾಟ, ದಕ್ಷಿಣ ಕನ್ನಡದ್ಲಲಿ ಉದ್ಭವಿಸ್ದಿದ ಮಂಗನ ಕಾಯಿಲೆ ವಿರುದ್ಧ ಜಾಗೃತಿ, ೧೯೯೨ರ‍್ಲಲಿ ಕೊಡಗಿನ ಶೋಲಾ ಅರಣ್ಯದ್ಲಲಿ ‘ಟೀ ಪ್ಲಾಂಟೇಷನ್ ನಾಟಿ’ ವಿರುದ್ಧ ಆಂದೋಲನ, ೨೦೦೩ರ‍್ಲಲಿ ಕಾರವಾರದ್ಲಲಿ ನಡೆದ ಕಾಳಿ ಪಾದಯಾತ್ರೆಗೆ ಚಾಲನೆ, ೨೦೦೫ರ‍್ಲಲಿ ಶರಾವತಿ ಅವಲೋಕನ ಪಾದಯಾತ್ರೆಯ್ಲಲಿ ಪಾಲ್ಗೊಂಡ್ದಿದರು.
ಕಳೆದ ವರ್ಷ ಹಾಸನ ಜ್ಲಿಲೆಯ್ಲಲಿ ಗುಂಡ್ಯಾ ಜಲವಿದ್ಯುತ್ ಯೋಜನೆ ವಿರೋಧದ ಹೋರಾಟಕ್ಕೂ ಕೈ ಜೋಡಿದ ಬಹುಗುಣ ಅವರು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗ್ದಿದ ಕಾಲದ್ಲಲಿ ‘ಅರಣ್ಯ ನಾಶ, ನೀಲಿಗಿರಿ ನಾಟಿ’ ವಿರುದ್ಧ ಧ್ವನಿ ಎತ್ತಿ, ರಾಜ್ಯದ ಅರಣ್ಯ ನೀತಿ ಪರಿಷ್ಕರಣೆಗೆ ಕಾರಣರಾದವರು.

ಇಂಥ್ದದೊಂದು ನಂಟಸ್ಥಿಕೆಯೊಂದಿಗೆ ಕರ್ನಾಟಕದ ಪರಿಸರ ಹೋರಾಟಗಾರರ ಪಾಲಿಗೆ ಪ್ರೀತಿಯ ಅಜ್ಜನಾಗಿರುವ ೮೪ರ ಸುಂದರ್‌ಲಾಲ್ ಬಹುಗುಣ ಅವರು ಇತ್ತೀಚೆಗೆ ಮೂಡುಬಿದ್ರೆಯ ಆಳ್ವಾಸ್ ಸಭಾಂಗಣದ್ಲಲಿ ನಡೆದ ‘ಪಶ್ಚಿಮಘಟ್ಟ ಸಂರಕ್ಷಣಾ ಅಭಿಯಾನದ ಸಮಾವೇಶ’ಕ್ಕಾಗಿ ಆಗಮಿಸ್ದಿದರು. ಕಾರ್ಯಕ್ರಮಕ್ಕೂ ಮುನ್ನ ಸಮಕಾಲೀನ ಪರಿಸರ ಸಮಸ್ಯೆಗಳ ಕುರಿತು ಅವರೊಂದಿಗೆ ನಡೆಸಿದ ಸಂವಾದ ಇಲಿದೆ.
*ನೀವು ಅಂದು ಭಾವನಾತ್ಮಕವಾಗಿ ‘ವನಮಹೋತ್ಸವ’ಕ್ಕೆ ಜನರನ್ನು ಪ್ರೇರೇಪಿಸುತ್ತ್ದಿದಿರಿ. ಇಂದು ಹಣಕ್ಕಾಗಿ ಗಿಡ ಬೆಳೆಸುವ ಪರಿಪಾಠವಿದೆ. ಆ ಗಿಡಗಳು ಹತ್ತು-ಹದಿನೈದು ವರ್ಷಗಳ್ಲಲಿ ನಾಶವಾಗುತ್ತಿವೆ. ಇಂಥ ‘ಮರ – ಮುರಿಯುವ ಮನಸ್ಸು’ಗಳನ್ನು ಪರಿವರ್ತಿಸುವ ಬಗೆ ಹೇಗೆ ?
ಮುನ್ನೂರು ದಿನ. ನಾಲ್ಕೂವರೆ ಸಾವಿರ ಕಿಲೋಮೀಟರ್. ಏಳು ರಾಜ್ಯಗಳ್ಲಲಿ ಪರಿಸರ ಸಂರಕ್ಷಣಾ ಪಾದಯಾತ್ರೆ ಮಾಡಿ ಜನರನ್ನು ಸಂಘಟಿಸ್ದಿದೇನೆ. ಅಂಥ ಚಳವಳಿ ಮತ್ತೆ ಎಲೆಡೆ ಆರಂಭವಾಗಬೇಕು. ಅದು ಜನರ‍್ಲಲಿ ಪರಿಸರದ ಅರಿವು ಮೂಡಿಸುವ ಜನಾಂದೋಲನವಾಗಬೇಕು. ಅದು ನಿರಂತರವಾಗಬೇಕು. ಈ ಹೋರಾಟಕ್ಕೆ ಯುವಕರೇ ನಾಯಕತ್ವ ವಹಿಸಿಕೊಳ್ಳಬೇಕು.
*ಪಶ್ಚಿಮ ಘಟ್ಟಗಳಿಗೆ ‘ಘಾಸಿ’ಯಾದರೆ ಕೃಷಿ ಮೇಲೆ ನೇರ ಪರಿಣಾಮ ಬೀರುತ್ತದೆ. ಇಷ್ಟಾದರೂ ಪರಿಸರ ಹೋರಾಟಗಳಿಗೆ ಕೃಷಿಕರು ಜೊತೆಯಾಗುತ್ತ್ಲಿಲ. ನಿಮ್ಮ ‘ಚಿಪ್ಕೊ’ ಚಳವಳಿಗೆ ರೈತರ ಬೆಂಬಲವಿತ್ತೇ? ಹೇಗೆ ರೈತರನ್ನು ಸಂಘಟಿಸುತಿದ್ದಿರಿ?
ಚಿಪ್ಕೋ ಚಳವಳಿಯ್ಲಲ್ದಿದವರ‍್ಲಲಿ ಬಹುತೇಕರು ರೈತರು. ರಾಜ್ಯದ ‘ಅಪ್ಪಿಕೋ’ ಚಳವಳಿಯ್ಲಲೂ ರೈತರಿದ್ದರು. ಇವರೂ ರೈತರಲ್ಲವೇ(ಪಾಂಡುರಂಗ ಹೆಗಡೆಯವರನ್ನು ತೋರಿಸುತ್ತಾ)?  ಎಲರೂ ಜೊತೆಯಾದರೆ ಹೋರಾಟ ಬಲಗೊಳ್ಳುತ್ತದೆ. ಹಾಗೆ ಬಲಗೊಳ್ಳಬೇಕಾದರೆ ಕೃಷಿಕರಲ್ಲೂ ಪರಿಸರ ಪ್ರಜ್ಞೆ ಮೂಡಬೇಕು. ಆ ಕೆಲಸವನ್ನು ಪರಿಸರ ಹೋರಾಟಗಾರರೇ ಮಾಡಬೇಕು. ಪರಿಸರ – ಕೃಷಿ, ತಾಯಿ-ಮಕ್ಕಳ್ದಿದಂತೆ.
*ಇತ್ತೀಚೆಗೆ ಹಳ್ಳಿಗಳ್ಲಲಿ ಪರಿಸರ ಕಾಳಜಿ ಕುಂಠಿತವಾಗಿದೆ. ಗಣಿಗಾರಿಕೆ, ರಿಯಲ್ ಎಸ್ಟೇಟ್, ಭೂಮಾಫಿಯಾಗಳಿಂದಾಗಿ ಹಳ್ಳಿ ಬರಿದಾಗುತ್ತಿದೆ. ಹಳ್ಳಿಗಳ್ಲಲಿ ಪರಿಸರ ಜಾಗೃತಿ ಮೂಡಿಸುವ ಬಗೆ ಹೇಗೆ ?
ಹಳ್ಳಿಗಳ್ಲಲಿರುವ ಹಿರಿಯರಿಂದಲೇ ಜನರಿಗೆ ಪರಿಸರ ಪಾಠ ಹೇಳಿಸಿ. ಇಲಿ ಸೇರಿರುವ ನಿಮ್ಮಂತಹ ಪರಿಸರ ಹೋರಾಟಗಾರರು ಹಳ್ಳಿಗಳ್ಲಲಿ ವಾಸಿಸಲು ನಿರ್ಧರಿಸಿ. ಸಮುದಾಯ ಸಂಘಟನೆ ಮಾಡಿ. ಆಯಾ ಊರಿನ ಪರಿಸರ ಸಂರಕ್ಷಣೆಗೆ ಅಲಿಯವರೇ ಕಾವಲುಗಾರರಾಗಲಿ.
ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುತ್ತಿದೆ ? ಹಾಗಾದರೆ ‘ಅಭಿವೃದ್ಧಿ’ಯ ವ್ಯಾಖ್ಯಾನವೇನು ?
ಯೋಜನೆ ಮತ್ತು ಅಭಿವೃದ್ಧಿ ವ್ಯವಸ್ಥೆಯ್ಲಲಿ ವಿಕೇಂದ್ರೀಕರಣವಾಗಬೇಕು. ಅದು ಹಳ್ಳಿಗಳಿಗೆ, ಬ್ಲಾಕ್ ಮಟ್ಟಕ್ಕೆ ವರ್ಗಾವಣೆಯಾಗಬೇಕು. ಪರಿಸರಕ್ಕೆ ಹಾನಿಯಾಗದಂತಹ ‘ಪರಿಸರಪೂರಕ, ಸುಸ್ಥಿರ ಅಭಿವೃದ್ಧಿ’ ಜಾರಿಗೆ ಬರಬೇಕು. ಶಾಂತಿ, ಸಂತೋಷ ಹಾಗೂ ಸಂತುಷ್ಟಿ ನೆಲಸುವಂತೆ ಮಾಡುವುದೇ  ‘ಸುಸ್ಥಿರ ಅಭಿವೃದ್ಧಿ’.
ಪರಿಸರ ಹೋರಾಟಕ್ಕೆ ಯುವಕರಿಗೆ  ನಿಮ್ಮ ಕಿವಿಮಾತು?
ಎಲದಕ್ಕೂ ಸರ್ಕಾರವನ್ನು ಆಶ್ರಯಿಸಬೇಡಿ. ಅದೊಂದು ಹೃದಯವ್ಲಿಲದ ಯಂತ್ರವ್ದಿದಂತೆ. ಸರ್ಕಾರ ಎಂದೂ ಜನರ ಸಮಸ್ಯೆಗಳನ್ನು ಪರಿಹರಿಸುವುದ್ಲಿಲ. ಹಾಗಾಗಿ ಸರ್ಕಾರವನ್ನು ಮರೆತುಬಿಡಿ. ಅಭಿವೃದ್ಧಿ ವಿಷಯದ್ಲಲಿ ಪಾಶ್ಚಿಮಾತ್ಯರ ವಿಧಾನಗಳು ನಮಗೆ ಮಾದರಿಯ್ಲಲ. ಅವರು ಅಭಿವೃದ್ಧಿ ಹೆಸರ‍ಲ್ಲಿ ಬಡವರನ್ನು ಸುಲಿಗೆ ಮಾಡುತ್ತಾರೆ. ನಾವು ಅದನ್ನು ಅನುಸರಿಸಿದರೆ ನಮ್ಮ ದೇಶದ ಬಡವರನ್ನು ಸುಲಿಗೆ ಮಾಡಬೇಕಾಗುತ್ತದೆ. ನಮ್ಮದು ವನಸಂಸ್ಕೃತಿ. ಟಿಂಬರ್, ಮೈನಿಂಗ್ ಸಂಸ್ಕೃತಿಯ್ಲಲ. ಅದ್ಲೆಲ ನಮ್ಮನ್ನು ಆಳಿದ ಬ್ರಿಟಿಷರ ಕೊಡುಗೆ.

ನೆನಪಿರಲಿ, ಪ್ರೀತಿ ಕಾಮವಲ್ಲ

ಅಜ್ಜೀಪುರ ಪ್ರಕಾಶನ ುದ್ಘಾಟನೆ

ಹೀಗೆಂದು ಪುಸ್ತಕ ಬರೆದಿದ್ದಾರೆ ಗೆಳೆಯ ರವಿ ಅಜ್ಜೀಪುರ. ಇದು ಅವರ ಮೊದಲ ಕೃತಿ. ಕೃತಿ ಬಿಡುಗಡೆಯ ಜೊತೆಗೆ ‘ಅಜ್ಜೀಪುರ ಪ್ರಕಾಶನ’ ಕೂಡ ಉದ್ಘಾಟನೆಯಾಯಿತು. ಪತ್ರಕರ್ತ ರವಿಬೆಳೆಗೆರೆ , ಪುಸ್ತಕಗಳನ್ನು ಓದುವಂತೆ ಮಕ್ಕಳನ್ನು ಬೆಳೆಸಿ. ಮಹಿಳೆಯರು ಟೀವಿ ನೋಡ್ತಾ ಕಾಲ ಕಳೆಯದಿರಿ. ಪುರಷರು ಗುಂಡು ಹಾಕುತ್ತಾ ಸಮಯ ವ್ಯರ್ಥ ಮಾಡಬೇಡಿ. ಎಲ್ಲರೂ ಪುಸ್ತಕ ಓದಿ. ಪುಸ್ತಕ ಲೋಕವನ್ನು ವಿಸ್ತರಿಸಿ ಅಂತ ಸಲಹೆ ನೀಡಿದರು.

ಚಿತ್ರ ನಿರ್ದೇಶಕ ‘ಗುರುಪ್ರಸಾದ್ ಅಜ್ಜೀಪುರ ಪ್ರಕಾಶನ ಉದ್ಘಾಟಿಸಿದರು. ಟಿವಿ9 ಗೆಳೆಯ ರವಿಕುಮಾರ್ ಮುಖ್ಯಅತಿಥಿಯಾಗಿದ್ದರು. ಕವಯತ್ರಿ ಶಶಿಕಲ ವೀಯ್ಯಸ್ವಾಮಿ ಪುಸ್ತಕ ಕುರಿತು ಮಾತನಾಡಿದರು. ಟಿವಿ9 ರಾಘವಸೂರಿ, ಅಮರೇಶ್, ಸ್ನೇಹ ತಮ್ಮ ಸುಮಧುರ ಕಂಠದಿಂದ ಸಭಾ ಸದರನ್ನು ರಂಜಿಸಿದರು.

ಕಾರ್ಯಕ್ರಮಕ್ಕೆ ಬಾರದವರಿಗೆ ಇಲ್ಲಿವೆ ಕೆಲವು ಫೋಟೋಗಳು. ನೋಡಿ ಎಂಜಾಯ್ ಮಾಡಿ.

ಶಾರದೆ ದಯತೋರಿದೆ ನಿನ್ನ ಕರುಣೆಯ ಕಡಲಲ್ಲಿ ಮೊಗ್ಗಾದೆ.. ಅಮರೇಶ್, ರಾಘವಸೂರಿ ಗಾಯನ

ನೆನಪಿರಲಿ ಪ್ರೀತಿ ಕಾಮವಲ್ಲ ಪುಸ್ತಕ ಲೋಕಾರ್ಪಣೆ
ಪುಸ್ತಕ ಬಿಡುಗಡೆಗೆ ಮುನ್ನ ಗುರು - ರವಿ
ರವಿಯನ್ನು ಪೂರ್ವಿಯಾಗಿಸಿದ್ದ ಎ.ಆರ್.ಮಣಿಕಾಂತ್
ಕೃತಿ ಲೇಖಕ ರವಿ ಅಜ್ಜೀಪುರ
ಟಿವಿ 9 ರವಿಕುಮಾರ್ - ಇಂದಿನಿಂದ ಪುಸ್ತಕ ಓದುವ ಶಪಥ
ಹೀಗಿತ್ತು ಸಭಾಂಗಣ
ಸಭಾಂಗಣ ಭರ್ತಿ
ನವಿರಾದ ನಿರೂಪಣೆ - ಪತ್ರಕರ್ತೆ ಶ್ರೀದೇವಿ ಕಳಸದ

ಸರಳ, ಸಜ್ಜನಿಕೆಯ ‘ಪ್ರಕಾಶ’

ಎಂ.ಪಿ.ಪ್ರಕಾಶ

ರಾಜಕೀಯ ಮುತ್ಸದಿ ಎಂ.ಪಿ.ಪ್ರಕಾಶ್ ಇನ್ನಿಲ್ಲ

ಸರಳ ಸಜ್ಜನಿಕೆಗೆ ಹೆಸರಾದ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್  ಬುಧವಾರ(ಫೆ.9)ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರಿಗೆ ಪತ್ನಿ ಮತ್ತು ಮೂ

ವರು ಪುತ್ರರು ಇದ್ದರು. ಮೃತರ ಅಂತ್ಯಕ್ಷಿಯೆಯನ್ನು ಅವರ ಸ್ಥಳವಾದ ಬಳ್ಳಾರಿ ಜಿಲ್ಲೆಯ ಹಡಗಲಿಯಲ್ಲಿ ನಡೆಸುವುದಾಗಿ ಕುಟುಂಬ ಮೂಲಗಳು  ತಿಳಿಸಿವೆ.

———————————————————

ಡಿ.ಕೆ.ಚೌಟರ ಜೊತೆ ಎಂ.ಪಿ.ಪ್ರಕಾಶರು

ಚೌಟರ ತೋಟದಲ್ಲಿ ಪ್ರಕಾಶರ  ಜೊತೆಯಲ್ಲಿ…

ಅದು ೨೦೦೬ ರಜನವರಿ ತಿಂಗಳು. ಕಾಸರಗೋಡಿನ ಮಿಯಪದುವಿನಲ್ಲಿ ಸಿ.ಕೆ.ಚೌಟರು ತಮ್ಮ ತೋಟದಲ್ಲಿ ತೆಂಗು ಸಮಾವೇಶ ಆಯೋಜಿಸಿದ್ದರು. ಆ ಕಾರ್ಯಕ್ರಮದ ಮುಖ್ಯ ಅತಿಥಿ ಅಂದಿನ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್.

ಕೃಷಿ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಯವರು ಬರ್ತಾರೆಯೇ, ಎಲ್ಲೋ ಚೌಟರಿಗೆ ಭ್ರಮೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದಾಗಲೇ, ಕೆಳಗಡೆ ಕಾರಿನಿಂದ ಇಳಿದು ದಿಬ್ಬ ಹತ್ತಿ ಸಭಾಂಗಣದೆಡೆಗೆ ನಡೆದುಬರುತ್ತಿದ್ದರು ಎಂ.ಪಿ.ಪ್ರಕಾಶ್.

ಹಿಂಬಾಲಕರ ದಂಡಿಲ್ಲದೇ, ಅಂಗರಕ್ಷ

ಕರಿಲ್ಲದೇ ಒಬ್ಬ ಸಾಮಾನ್ಯ ಪ್ರಜೆಯಂತೆ ಆಗಮಿಸುತ್ತಿದ್ದ ಪ್ರಕಾಶ್ ಅವರನ್ನು ಕಂಡು ನಾನು ಪುಳಕಿತನಾದೆ. ಕಾರ್ಯಕ್ರಮಕ್ಕೆ ಬಂದವರೇ ಅಕ್ಕಪಕ್ಕದಲ್ಲಿದ್ದ ನಾಗತಿಹಳ್ಳಿ ಚಂದ್ರಶೇಖರ್, ಸಿಜಿಕೆ, ಸಿ.ಕೆ.ಚೌಟರು, ಡಿ.ಕೆ.ಚೌಟರ.. ಇತ್ಯಾದಿ ಇತ್ಯಾದಿ ಆಪ್ತೇಷ್ಟರನ್ನು ಮಾತನಾಡಿಸಿ, ಗುಂಪು ಚರ್ಚೆಗೆ ಕುಳಿತರು.

ತೆಂಗು ಬೆಳೆಗಾರರ ಎಲ್ಲ ಸಮಸ್ಯೆಗಳನ್ನು ಒಬ್ಬ ಶಿಬಿರಾರ್ಥಿಯಂತೆ ಪೆನ್ನು ಪೇಪರ್ ಹಿಡಿದು ಮಾಹಿತಿ ದಾಖಲಿಸಿಕೊಂಡರು. ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು. ಕಾರ್ಯಕ್ರಮ ಮುಗಿಯುವವರೆಗೂ  (ರಾ

ಜಲಪತ್ರಕರ್ತ 'ಶ್ರೀ' ಪಡ್ರೆಯವರೊಂದಿಗೆ

ತ್ರಿ ೮ ಆಗಿತ್ತು) ಜನರ ನಡುವೆಯೇ ಇದ್ದರು.

ಅದೇ ಮೊದಲು ನಾನು ಪ್ರಕಾಶ್ ಅವರನ್ನು ಹತ್ತಿರದಿಂದ ನೋಡಿದ್ದು ಮಾತನಾಡಿದ್ದು. ಬಹಳ ವಿಚಿತ್ರ ಎಂದರೆ, ಅವರು ಎಲ್ಲರೊಡನೆ ಎಲ್ಲ ವಿಷಯಗಳನ್ನೂ ಮಾತನಾಡುತ್ತಿದ್ದರು. ನಾವು ಹಿಂಜರಿಯುತ್ತಿದ್ದರೂ ‘ನಮ್ಮೂರು ಹಾಗೆ, ನಿಮ್ಮೂರು ಹೇಗೆ’ ಎಂದೆಲ್ಲ ವಿಚಾರಿಸುತ್ತಿದ್ದರು.

ಸುಮಾರು ಮೂರ‍್ನಾಲ್ಕು ಗಂಟೆಗಳ ಕಾಲ ಚೌಟರ ತೋಟವನ್ನು ಅವರೊಡನೆ ಸುತ್ತಾಡಿದೆ. ದಾರಿಯುದ್ದಕ್ಕೂ ರಾಜ್ಯದ ಕೃಷಿ ವಿಷಯಗಳನ್ನು ಮೆಲುಕು ಹಾಕುತ್ತಾ ಹೊರಟರು. ನಡು ನಡುವೆ ಬಯಲು ಸೀಮೆ – ಮಲೆನಾಡಿಗೆ ಹೋಲಿಸಿ ಮಾತನಾಡಿದರು. ಬಾಳೆ ಕೃಷಿ, ಅಡಕೆ ಕೃಷಿ, ಮಣ್ಣಿನ ಗುಣ, ನೀರಿನ ಸಮಸ್ಯೆ.. ಕೂಲಿ ಆಳುಗಳ ವಿಚಾರ.. ಹೀಗೆ ಚೌಟರೊಂದಿಗೆ ಸಾಕಷ್ಟು ಚರ್ಚೆ ನಡೆಸಿದರು.

ಕಾಫಿಯೊಂದಿಗೆ ಸಾವಯವ ಚಿತ್ರಾ ಪುಸ್ತಕ ಓದುತ್ತಾ.. ಚಿತ್ರ: ರವಿಶಂಕರ ದೊಡ್ಡಮಾಣಿ

ಹಳ್ಳಿಯ ಬದುಕು ಹಾಳಾಗುತ್ತಿರುವ ಬಗ್ಗೆ ವ್ಯಥೆಪಟ್ಟರು. ಎಲ್ಲದಕ್ಕಿಂತ ಹೆಚ್ಚಾಗಿ ನಾನೊಬ್ಬ ಜನಪ್ರತಿನಿಧಿಯಾಗಿ ತಮ್ಮೂರಿನ ಏತನೀರಾವರಿ ಯೋಜನೆಯೊಂದನ್ನು ಜಾರಿಗೆ ತರಲಾಗಿರಲಿಲ್ಲವಲ್ಲಾ

ಎಂಬ ನೋವನ್ನೂ ಇದೇ ಸಂದರ್ಭ

ದಲ್ಲಿ ಹಂಚಿಕೊಂಡರು.

ಅವರ ಜೊತೆ ಕಳೆದ ಆ ಸಮಯ ಜೀವನದಲ್ಲಿ ಮರೆಯಲಾಗದ ಕ್ಷಣ. ಆ ನೆನಪಿಗಾಗಿ ನನ್ನ ಮೊದಲ ಕೃತಿ ‘ಸಾವಯವ ಚಿತ್ತಾರ’ ವನ್ನು ಅವರ ಕೈಗಿತ್ತೆ. ಒಂದು ಕ್ಷಣ ಪುಸ್ತಕ ತಿರುವಿ ಹಾಕಿ, ‘ನಾಡಿನಲ್ಲಿ ಇಷ್ಟೆಲ್ಲಾ ಸಾವಯವ ಕೃಷಿಕರಿದ್ದಾರೆಯೇ. ಒಳ್ಳೆ ದಾಖಲಾತಿ ಮಾಡಿದ್ದೀರಿ’ ಎಂದರು. ಅವತ್ತು ನನಗೆ ಪ್ರಶಸ್ತಿ ಸಿಕ್ಕಷ್ಟೇ ಸಂತೋಷವಾಯಿತು.

ಅಷ್ಟೆಲ್ಲ ಅವರೊಟ್ಟಿಗೆ ಮಾತನಾಡಿದ ಮೇಲೆಯೇ ಪ್ರಕಾಶ್ ಅವರನ್ನು ಎಲ್ಲರೂ ‘ರಾಜಕೀಯ ಮುತ್ಸದಿ ಎಂದು ಗೊತ್ತಾಗಿದ್ದು. ಅಂದು ಅವರು ಆಡಿದ ಮಾತುಗಳಲ್ಲಿ ಶಿವರಾಮಕಾರಂತರ ಆಶಯಗಳಿದ್ದವು. ಕೃಷಿಕನೊಬ್ಬನ ಅಂತರಂಗದ ಮಾತುಗಳಿದ್ದವು. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸುವ ‘ಡೌನ್ ಟು ಅರ್ಥ್’ ವಿಚಾರಗಳಿದ್ದವು.

ಇಂಥ ಧೀಮಂತ ಚೇತನ ಇಂದು ಚಿರನಿದ್ರೆಗೆ ಸರಿದಿದೆ. ಅವರ ಪತ್ನಿ, ಪುತ್ರರಿಗೆ ಪ್ರಕಾಶ್ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಆಶಿಸುತ್ತೇನೆ.

—————

ಚೌಟರ ತೋಟದಲ್ಲಿ ಪ್ರಕಾಶ ಅವರ ಜೊತೆಯಲ್ಲಿ ಕಳೆದ ಕ್ಷಣಗಳನ್ನು ನಾನು ಮತ್ತು ಗೆಳೆಯ ರವಿಶಂಕರ ದೊಡ್ಡಮಾಣಿ ಕಾಮೆರಾದಲ್ಲಿ ಸೆರೆ ಹಿಡಿದಿದ್ದೆವು. ಆ ಚಿತ್ತಗಳು https://picasaweb.google.com/ganadhal/MPPrakashPhotos# ಇಲ್ಲಿವೆ.

ಸಿ.ಕೆ.ಚೌಟರೊಂದಿಗೆ ಜಿಪ್ಸಿಯಲ್ಲಿ ಪ್ರಕಾಶರು

 

ಸೂರ್ಯೋದಯ ಸಮಯದಲ್ಲಿ...
ಚೌಟದ್ವಯರೊಂದಿಗೆ ತೆಂಗಿನ ನ್ಯೂಕ್ಲಿಯಸ್ ಗಾರ್ಡ್ ನಲ್ಲಿ

ನಗರದತ್ತ ಗ್ರಾಮೀಣರ ಚಿತ್ತ

ಹಳ್ಳಿ ಮಾರಾಟವಾಗಿದೆ !
ಕೆಲವು ತಿಂಗಳುಗಳ ಹಿಂದೆ ಗೆಳೆಯ ಪತ್ರಕರ್ತ ಶಿವಾನಂದ ಕಳವೆ ಹೀಗೊಂದು ಸುದ್ದಿ ಹೇಳಿದರು. ಅಚ್ಚರಿಯಾಯ್ತು. ಜಮೀನು, ಮನೆ ಮಾರಾಟವಾಗಿದ್ದನ್ನು ಕೇಳಿದ್ದೆ. ಊರಿಗೇ ಊರೇ ವ್ಯಾಪಾರವಾಯ್ತು ಅಂದಾಗ, ಇದು ಎಂಥಾ ದುರಂತ ಎನ್ನಿಸಿತು.
ಹಾಗೆ ಮಾರಾಟವಾದ ಊರಿನ ಹೆಸರು ಮೇಗನಿ. ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ. ಎಂಟು ಮನೆಗಳ ಗ್ರಾಮ. ಕೊಲ್ಲೂರು ಸಮೀಪದ ಗುಡ್ಡದ ಮೇಲಿರುವ ಈ ಊರು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸಂಚಾರ, ವಿದ್ಯುತ್.. ಎಲ್ಲವೂ ಅವ್ಯವಸ್ಥೆ. ಹಾಗಾಗಿ ಇಲ್ಲಿನ ಮಕ್ಕಳೆಲ್ಲ ದೂರದ ಊರಿನಲ್ಲಿ ಅಕ್ಷರ ಕಲಿಯುತ್ತಿದ್ದಾರೆ. ಈ ಊರಿನ ಗಂಡು ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ. ಇಲ್ಲಿನ ಹೆಣ್ಣು ಮಕ್ಕಳನ್ನು ಯಾರೂ ಮದುವೆಯಾಗುವುದಿಲ್ಲ. ಇಂಥ ತಾಪತ್ರಯ ಬೇಡ ಅಂತ ಊರಿಗೆ ಊರೇ ಮಾರಿದರು ಹಳ್ಳಿಗರು. ಹೀಗೆ ಮಾರಾಟ ಮಾಡಿ ಹಣ ಪಡೆದವರು ಅದೇ ಊರಿನಲ್ಲಿರುವ ತಮ್ಮದೇ ಜಮೀನಿನಲ್ಲೇ ಕೂಲಿ ಕೆಲಸಕ್ಕೆ ದುಡಿಯುತ್ತಿದ್ದಾರೆ, ಆ ಜಮೀನಿನ ಮಾಲೀಕರು ಮಾತ್ರ ಬದಲಾಗಿದ್ದಾರೆ !
****
ಹಳ್ಳಿ ಮಾರಾಟದ ಈ ಕಥೆ – ನಮ್ಮ ಗ್ರಾಮೀಣ ಭಾರತದಲ್ಲಿನ ಹಳ್ಳಿಗಳ ಪರಿಸ್ಥಿತಿಯ ಒಂದು ತುಣಕು. ಇಂಥ ಅದೆಷ್ಟೋ ಸಮಸ್ಯೆಗಳ ಸಾಲಿನಿಂದಾಗಿ ಸಾಕಷ್ಟು ಹಳ್ಳಿಗಳು ಇಂದು ಬರಿದಾಗುತ್ತಿವೆ. ಹವಾಮಾನ ವೈಪರೀತ್ಯ, ಬೆಳೆ ನಷ್ಟ, ವ್ಯಕ್ತಿ ಗೌರವದ ಕೊರತೆ.. ಹೀಗೆ ಹಲವು ಕಾರಣಗಳಿಂದ ಜಮೀನು ಉಳ್ಳವರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ತುಂಬು ಕುಟುಂಬದಂತಿದ್ದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ.

೪೦ ವರ್ಷದ ನಂತರದವರು ಮಾತ್ರ ಹಳ್ಳಿಗಳ ತೋಟ, ಹೊಲಗಳಲ್ಲಿ ದುಡಿಯುತ್ತಿದ್ದಾರೆ. ಹಳ್ಳಿಗಳಲ್ಲಿ ಹುಡುಕಿದರೂ ೨೫-೩೫ರ ಹರೆಯದ ಯುವಕರು ದೊರಯುವುದು ಕಷ್ಟ. ಇದೇ ಪರಿಸ್ಥಿತಿಯಲ್ಲಿ ೨೦ ವರ್ಷದ ಬಳಿಕ ನಮ್ಮ ಹಳ್ಳಿ ಭವಿಷ್ಯ ಏನಾಗುತ್ತದೆ? ಎಂದು ಚರ್ಚೆ ಆರಂಭಿಸಿದರೆ, ಎರಡು ವರ್ಷಕ್ಕೆ ಏನಾಗುತ್ತದೆ ಎಂಬುದೇ ತಿಳಿದಿಲ್ಲ ಎಂಬ ದಿಗಿಲು ಎದೆ ನಡುಗಿಸುತ್ತಿದೆ.

ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರುತ್ತಿರುವವರದ್ದು ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಮಲೆನಾಡು, ಘಟ್ಟ ಪ್ರದೇಶ, ಕರಾವಳಿಯಲ್ಲಿ ಕೂಲಿಕಾರ್ಮಿಕರ ಸಮಸ್ಯೆ. ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಯಲ್ಲಿ ಮಳೆ ಕೊರತೆ, ಉತ್ಪಾದನೆ ಕ್ಷೀಣ. ಈ ಭಾಗಗಳಲ್ಲಿರುವ ಸಾಮಾನ್ಯ ಸಮಸ್ಯೆಗಳೆಂದರೆ ಹವಾಮಾನ ವೈಪರೀತ್ಯ, ಬೆಳೆಗೆ ಸಿಗದ ವ್ಶೆಜ್ಞಾನಿಕ ಬೆಲೆ, ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ, ಕೃಷಿ ಕುಟುಂಬಕ್ಕೆ ದೊರಕದ ವ್ಯಕ್ತಿ ಗೌರವ.

ಇತ್ತೀಚೆಗಿನ ವರ್ಷಗಳಲ್ಲಿ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್, ವಿಶೇಷ ಆರ್ಥಿಕ ವಲಯ (ಎಸ್‌ಇಎಜ್)ದಿಂದಾಗಿ ಭೂಮಿ ಸ್ವಾಧೀನ ಪ್ರಕ್ರಿಯೆಗಳಿಂದಾಗಿ ಜನರು ಅನಿವಾರ್ಯವಾಗಿ ಬೇರೆ ಕಡೆಗೆ ವಲಸೆ ಹೋಗಬೇಕಿದೆ. ಇತ್ತೀಚೆಗೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ನಡೆದ ಘಟನೆಗಳು ಸಂಕಟಪಡುವಂತಹವು. ಅಭಿವೃದ್ಧಿ ಹೆಸರಲ್ಲಿ ಹೀಗೆ ಹುಟ್ಟಿದ ಊರನ್ನು, ನೆಟ್ಟ ಗಿಡ-ಗಂಟೆಗಳನ್ನು, ತಲೆತಲಾಂತರದಿಂದ ಉತ್ತಿ-ಬಿತ್ತಿ-ಬೆಳೆದ ಭೂಮಿ ತಾಯಿಯನ್ನು ಬಿಟ್ಟು ಹೋಗುವುದು ಎಷ್ಟು ಕಷ್ಟ ಅಲ್ವಾ ?

ಒಂದು ಕಡೆ ಸಮಸ್ಯೆಗಳಿಂದಾಗಿ ಜನ ಹಳ್ಳಿ ತೊರೆಯುತ್ತಿದ್ದಾರೆ. ಇನ್ನೊಂದೆಡೆ ವ್ಯಕ್ತಿ ಗೌರವಕ್ಕಾಗಿ (ರೆಕಗ್ನೀಷನ್‌ಗಾಗಿ) ಪಟ್ಟಣಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.
ಬೆಂಗಳೂರಿನಲ್ಲಿರುವ ವರ್ಷಕ್ಕೆ ೧೨ ಲಕ್ಷ ತೆಗೆದುಕೊಳ್ಳುವ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮಗಳನ್ನು ಕೊಡುತ್ತಾರೆ ಹೆತ್ತಮ್ಮಂದಿರು. ಅವರ ಊರಿನ ಪಕ್ಕದಲ್ಲಿರುವ ರೈತರೊಬ್ಬರ ಮಗ ಅದರ ಒಂದೂವರೆ ಪಟ್ಟು ಹಣ ಸಂಪಾದಿಸುತ್ತಾನೆ. ಆದರೆ ಅವನಿಗೆ ಹೆಣ್ಣು ಕೊಡುವುದಿಲ್ಲ.

ಅಪ್ಪಂದಿರಿಗೆ ಮಗ ಊರಿನಲ್ಲಿ ಉಳಿಯಬೇಕೆಂಬ ಆಸೆಯಿದೆ. ತನ್ನ ಕೃಷಿ ಬದುಕನ್ನು ಉಳಿಸಿಕೊಂಡು ಹೋಗಲೆಂಬ ಹಂಬಲವಿದೆ. ಆದರೆ ತಾಯಿ, ತನ್ನ ಗಂಡ ಈ ಕೊಂಪೆಯಲ್ಲಿ ಏಗಿದ್ದು ಸಾಕು. ಮಗನಾದರೂ ಚೆನ್ನಾಗಿರಲಿ ಅಂತ ಪಟ್ಟಣದಲ್ಲೇ ನೆಲಸಲು ಪ್ರೋತ್ಸಾಹಿಸುತ್ತಾಳೆ. ಅಮ್ಮನ ಮಾತು ವೇದವಾಖ್ಯವಾಗುತ್ತದೆ. ಮಕ್ಕಳು ಊರು ತೊರೆಯಲು ಸಿದ್ಧರಾಗುತ್ತಾರೆ.

ಇವತ್ತು ಹವ್ಯಕ ಸಮುದಾಯದಲ್ಲಿ ಇಂಥದ್ದೊಂದು ಸಮಸ್ಯೆ ಎದುರಾಗಿದೆ. ಆ ಸಮುದಾಯದಲ್ಲಿ ಹೆಣ್ಣು- ಗಂಡಿನ ಅನುಪಾತದಲ್ಲಿ ತೀರಾ ವ್ಯತ್ಯಾಸವಿದೆ. ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣ. ಈ ಸಮುದಾಯದಲ್ಲಿ ಎರಡು ವರ್ಗದ ವ್ಯಕ್ತಿಗಳಿದ್ದಾರೆ. ಒಂದು ವರ್ಗದವರು ಉನ್ನತ ವ್ಯಾಸಂಗ ಮಾಡಿ ಪಟ್ಟಣ ಸೇರಿ ಕೈತುಂಬಾ ಸಂಬಳ ಪಡೆಯುತ್ತಾರೆ. ಇನ್ನೊಂದು ವರ್ಗದವರು ಸಂಬಳಕ್ಕಿಂತ ಹೆಚ್ಚಾಗಿ ಕೃಷಿಯಲ್ಲೇ ಹಣ ಗಳಿಸುತ್ತಾರೆ. ಇವರಿಬ್ಬರ ಆದಾಯದಲ್ಲಿ ವ್ಯತ್ಯಾಸವಿಲ್ಲ. ಆದರೆ ಹಳ್ಳಿಯಲ್ಲಿರುವ ವ್ಯಕ್ತಿಯನ್ನು ಅದೇ ಸಮುದಾಯದವರು ಮದುವೆಯಾಗಲು ಒಲ್ಲೆ ಎನ್ನುತ್ತಾರೆ. ರೂಪ, ವಿದ್ಯೆ, ಆದಾಯ ಎಲ್ಲವೂ ಇದ್ದರೂ ರೈತರಾಗಿದ್ದಾರೆ, ಹಳ್ಳಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಮದುವೆಯಾಗುವುದಿಲ್ಲ. ಈ ಸಾಮಾಜಿಕ ಸಮಸ್ಯೆಯಿಂದಾಗಿ ಉತ್ತರ ಕನ್ನಡದ ಗಂಡು ಮಕ್ಕಳು ಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಯುವಕರ ವಲಸೆ ಹೆಚ್ಚಿಸಿದ ಸಾಫ್ಟ್‌ವೇರ್ ಕ್ರಾಂತಿ :
ಗ್ರಾಮೀಣ ವ್ಯವಸ್ಥೆ ಹದಗೆಡಲು ಇವತ್ತಿನ ಕೃಷಿ ಸಮಸ್ಯೆಗಳಷ್ಟೇ ಕಾರಣವಲ್ಲ. ಕಳೆದ ದಶಕಗಳಿಂದ ನಮ್ಮಲ್ಲಿ ಬದಲಾಗುತ್ತಿರುವ ಶೈಕ್ಷಣಿಕ ಪ್ರಗತಿ ಮತ್ತು ಶಿಕ್ಷಣ ವ್ಯವಸ್ಥೆಯೂ ಕಾರಣ. ನಮ್ಮ ರಾಜ್ಯದಲ್ಲಿ ಗ್ರಾಮೀಣ ವಲಸೆ ಗುರುತಿಸುವ ರೀತಿಯಲ್ಲಿ ಆರಂಭವಾಗಿದ್ದು ೯೦ರ ದಶಕದಲ್ಲಿ. ಖ್ಯಾತ ಸಮಾಜಶಾಸ್ತ್ರಜ್ಞ ದೀಪಾಂಕರ ಗುಪ್ತಾ ಅವರ ತಮ್ಮ ಪ್ರಬಂಧವೊಂದರಲ್ಲಿ ಉಲ್ಲೇಖಿಸಿರುವಂತೆ ಮೂರ‍್ನಾಲ್ಕು ದಶಕಗಳ ಹಿಂದೆ ಉತ್ತರ ಭಾರತದಲ್ಲಿ ಗ್ರಾಮೀಣ ವಲಸೆ ಆರಂಭವಾಗಿತ್ತು. ಕೃಷಿ ವಲಯದಲ್ಲಿ ಉಂಟಾಗುತ್ತಿದ್ದ ಏರುಪೇರು, ಜೀವನ ನಡೆಸಲು ದುಸ್ತರ ಎಂದು ಉತ್ತರ ಭಾರತದ ಹಳ್ಳಿಗಳಲ್ಲಿನ ಕೃಷಿಕರು ಮಹಾನಗರಗಳಿಗೆ ವಲಸೆ ಬರಲು ಆರಂಭಿಸಿದರು.

ಕೃಷಿ ಸಮಸ್ಯೆ, ಮೂಲಸೌಲಭ್ಯಗಳ ಕೊರತೆಯಿಂದಾಗಿ ರಾಜ್ಯದಲ್ಲಿ ವಲಸೆ ಆರಂಭವಾಯಿತು. ಇದು ಮೇಲ್ನೋಟಕ್ಕೆ ಕಾಣುವ ಸತ್ಯ. ಆದರೆ ವಲಸೆಯ ಮೂಲ ಇರುವುದು ಶೈಕ್ಷಣಿಕ ಪ್ರಗತಿಯಲ್ಲಿ ಎನ್ನುವುದು ಗಮನಿಸಬೇಕಾದ ಅಂಶ.

ಶೈಕ್ಷಣಿಕ ಪ್ರಗತಿ ಏರುತ್ತಿರುವಂತೆ ಗ್ರಾಮೀಣ ಪ್ರದೇಶದಿಂದ ಕೃಷಿಯೇತರ ಕ್ಷೇತ್ರಗಳೆಡೆಗೆ ನಗರ ವಲಸೆ ಹೆಚ್ಚಿದೆ. ಉನ್ನತ ಶಿಕ್ಷಣ ಕಲಿತವರು ಹಳ್ಳಿಗಳಿಗೆ ಹಿಂದಿರುಗುತ್ತಿಲ್ಲ. ಒಂದೂವರೆ ದಶಕದ ಹಿಂದೆ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರ ಪ್ರವೇಶಿಸಿದ ಸಾಫ್ಟ್‌ವೇರ್ ಕ್ರಾಂತಿ ಗ್ರಾಮೀಣದಲ್ಲಿನ ಬುದ್ಧಿವಂತ ಯುವಕರನ್ನು ಅಯಸ್ಕಾಂತದಂತೆ ಸೆಳೆಯಿತು. ಪಿಯುಸಿ ಪಾಸಾದವರು, ಡಿಗ್ರಿ ಫೇಲಾದವರು, ಮಾತು ಬಲ್ಲವರು, ಅಂದವಾಗಿರುವವರು ಬಹುರಾಷ್ಟ್ರೀಯ ಕಂಪೆನಿಗಳ ಹಿಂದೆ ಓಡಿದ್ದಾರೆ. ತಿಂಗಳ ಸಂಬಳ ನಾಲ್ಕಂಕೆ ದಾಟಿದೆ. ಎಕರೆ ಕೃಷಿಯ ಆದಾಯವನ್ನು ಕಂಪ್ಯೂಟರ್ ಎಂಜಿನಿಯರ್ ತನ್ನ ಒಂದು ತಿಂಗಳ ಸಂಬಳಕ್ಕೆ ಹೋಲಿಸಿ ನೋಡಲಾರಂಭಿಸಿದ್ದಾರೆ. ಎಂಜಿನಿಯರ್ ಅಪ್ಪ ಕೂಡ, ತನ್ನ ವಾರ್ಷಿಕ ಕೃಷಿ ಆದಾಯವನ್ನು ಮಕ್ಕಳ ಸಂಬಳಕ್ಕೆ ಹೋಲಿಸುತ್ತಾ, ಎಷ್ಟು ಕಡಿಮೆಯಾಯ್ತು ಎಂದು ಅಲ್ಲಗೆಳೆದ. ಹೀಗೆ ಕೃಷಿಯ ಒಟ್ಟೂ ಆದಾಯ, ಖರ್ಚಿನ ತುಲನೆಯಲ್ಲಿ ಬೇಸಾಯ ಬಡವಾಯಿತು. ಆ ಬಡತನ ಈಗಲೂ ಮುಂದುವರಿದಿದೆ. ಶೈಕ್ಷಣಿಕ ಕ್ರಾಂತಿ ಹಳ್ಳಿಯನ್ನು ಬರಿದಾಗಿಸುತ್ತಿದೆ.

ಇವೆಲ್ಲದರ ಹಿಂದೆ ಅಪ್ಪ ಅಮ್ಮಂದಿರ ಕಾಣಿಕೆಯೂ ಇಲ್ಲದಿಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ಯೂನಿಫಾರಂ ತೊಡಿಸಿ, ಟೈಕಟ್ಟಿ, ಸೊಂಟ್ಟಕ್ಕೆ ಬೆಲ್ಟ್ ಕಟ್ಟುತ್ತಾ… ನನ್ನ ಹಾಗೆ ನೀವು ಮೈ-ಕೈ ಕೊಳೆ ಮಾಡ್ಕೊಳ್ಳೋದು ಬೇಡ. ನೀನೊಬ್ಬ ದೊಡ್ಡ ಆಫೀಸರ್ ಆಗಬೇಕು. ಡಾಕ್ಟರ್ ಆಗಬೇಕು.. ಎಂಜಿನಿಯರ್ ಆಗಬೇಕು.. ಎಂದು ಮಕ್ಕಳ ತಲೆಗೆ ಪಟ್ಟಣದ ಬಣ್ಣದ ಬದುಕನ್ನು ತುಂಬಿದ್ದಾರೆ. ಆಗಿನಿಂದಲೇ ಉಣ್ಣುವ ಅನ್ನದ ಮೂಲ ಅರ್ಥವಾಗದಂತೆ ಮಕ್ಕಳನ್ನು ಬೆಳೆಸುವ ಪರಿಪಾಟ ಬೆಳೆದಿದೆ. ಕೃಷಿ ಚಟುವಟಿಕೆಗಳು, ಹಳ್ಳಿ ಸಂಸ್ಕೃತಿ ಎನ್ನುವುದು ಶಾಲೆಯ ಪಾಠಗಳಿಗಷ್ಟೇ ಸೀಮಿತವಾಗಿದೆ. ಭತ್ತ, ರಾಗಿ, ಬೇಳೆ ಕಾಳು, ಕೃಷಿ ಬದುಕನ್ನು ಪ್ರಾಯೋಗಿಕವಾಗಿ ಹೇಳುವಂತಹ ಶಿಕ್ಷಣ ಇಲ್ಲದಂತಾಗಿದೆ. ಮಣ್ಣಲ್ಲಿ ಬೇರುಬಿಡಿಸಿ ಬದುಕಿನ ದಾರಿ ತೋರಿಸಿದ ಕೃಷಿಕರಿಗಿಂತ ರಾಜಕೀಯ ಮುತ್ಸದ್ದಿಗಳ ಜೀವನ ಓದುವುದು ಪರೀಕ್ಷೆಯಾಗಿದೆ. ಇದೆಲ್ಲದರ ಜೊತೆಗೆ ಸಣ್ಣ ವಯಸ್ಸಿನಲ್ಲೇ ಊರು ಬಿಡಲು ಮಕ್ಕಳ ಜೇಬಲ್ಲಿ ಪಾಸ್‌ಪೋರ್ಟ್, ವೀಸಾ ತುರುಕಿದ್ದೇವೆ. ಇದ್ದೊಬ್ಬ ಮಗನನ್ನು ನಗರದ ನೌಕರಿಗೆ ಕಳಿಸಿ, ಈಗ ಕೃಷಿ ನಿರ್ವಹಣೆಗೆ ಜನಗಳಿಲ್ಲ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದೇವೆ. ಹಳ್ಳಿ ಖಾಲಿ ಮಾಡುತ್ತಿದ್ದೇವೆ. ಇಂಥದ್ದೊಂದು ತಳಹದಿ ಮೇಲೆ ಬೆಳೆದ ಮಕ್ಕಳು ಹಳ್ಳಿಯಲ್ಲಿರುವುದಾದರೂ ಹೇಗೆ ?

ದಿಢೀರ್ ದುಡ್ಡು ಮಾಡುವ ಕನಸು:
ಶೈಕ್ಷಣಿಕ ಪ್ರಗತಿ ಒಂದೆಡೆ ಗ್ರಾಮೀಣರನ್ನು ಪಟ್ಟಣಕ್ಕೆ ಸೆಳೆಯುತ್ತಿದ್ದರೆ, ಇನ್ನೊಂದೆಡೆ ದಿಢೀರ್ ದುಡ್ಡು ಮಾಡುವ ಪ್ರವೃತ್ತಿ ಕೂಡ ಪಟ್ಟಣದ ರುಚಿ ಹತ್ತಿಸಿದೆ. ಇಂದು ಬಿತ್ತಿ, ನಾಳೆ ಬೆಳೆದು, ನಾಡಿದ್ದು ಹಣ ಸಂಪಾದಿಸಲು ವಿವಿಧ ಬೆಳೆಗಳ ಪ್ರಯೋಗ ನಡೆಸಿದ ರೈತರಲ್ಲಿ ಕೈ ಸುಟ್ಟುಕೊಂಡವರೇ ಹೆಚ್ಚು. ಹೀಗೆ ಹಳ್ಳಿಯಲ್ಲಿ ಸೋಲು ಕಂಡವರು, ಪಟ್ಟಣದಲ್ಲಿ ಗೆಲುವು ಹುಡುಕುತ್ತಾ ಹೊರಟರು. ಬಾಡಿಗೆ ರೂಮು ಹಂಚಿಕೊಂಡು, ಶಿಫ್ಟ್‌ಗಳಲ್ಲಿ ಕೆಲಸ ಹುಡುಕಿಕೊಂಡರು. ಮೊದಲು ಒಬ್ಬ, ನಂತರ ಮತ್ತೊಬ್ಬ.. ಹೀಗೆ ಒಬ್ಬರ ಕೈ ಹಿಡಿದು ಎಳೆಯುತ್ತಾ ಹಳ್ಳಿ ಬಿಟ್ಟರು.
ಹೀಗೆ ಬದಲಾದ ಮನಸ್ಥಿತಿಯಿಂದಾಗಿ ಹಳ್ಳಿಗಳಲ್ಲಿನ ಅವಿಭಕ್ತ ಕುಟುಂಬಗಳಲ್ಲಿ ಬಿರುಕು ಉಂಟಾಯಿತು. ಹಳ್ಳಿಗಳಲ್ಲಿ ಅಪ್ಪ-ಅಮ್ಮನ ಜೊತೆಯಿದ್ದ ಮಕ್ಕಳೂ ಕೂಡ, ಪಟ್ಟಣದ ಸಹೋದರರ ದಾರಿ ಹಿಡಿಯಲು ಸಿದ್ಧರಾದರು. ಹೀಗಾಗಿ ಮನೆಗಳು ಇಬ್ಬಾಗವಾದವು. ಮನೆ ಮನೆಗಳ ನಡುವೆ ಗೋಡೆ ಎದ್ದಿತು. ಅದು ಮನಸ್ಸುಗಳ ನಡುವೆಯೂ ಗೋಡೆ ಕಟ್ಟುತ್ತಿದೆ. ಹದ ಮಳೆ ಬಿದ್ದ ಕೂಡಲೇ ಹೊಲದ ಕಡೆ ಹೆಜ್ಜೆ ಹಾಕುತ್ತಿದ್ದವರು, ಈಗ ಪಟ್ಟಣದಲ್ಲಿ ಕುಳಿತು ಮಳೆಯನ್ನು ಶಪಿಸುವ ಮಟ್ಟಕ್ಕೆ ಬದಲಾಗಿದ್ದಾರೆ.

ಜಾಗತೀಕರಣ, ಉದಾರೀಕರಣ :
ಜಾಗತಿಕರಣದ ಪ್ರಭಾವದಿಂದಾಗಿ ವಿದೇಶಿ ಕಂಪೆನಿಗಳು ನಮ್ಮ ನೆಲದಲ್ಲಿ ಗುತ್ತಿಗೆ ಕೃಷಿ  ಬೀಜ ಬಿತ್ತಿದವು. ಆನಂತರದಲ್ಲಿ ಗ್ರಾಮೀಣ ಪರಿಸ್ಥಿತಿಯೇ ಬದಲಾಯಿತು. ವೆನಿಲ್ಲಾದಂತಹ ಚಿನ್ನದ ಬೆಳೆಗಳು ಅನೇಕ ಆಸೆಗಳನ್ನು ಹುಟ್ಟಿಸಿ ಕೆಲವೇ ವರ್ಷದಲ್ಲಿ ನಿರಾಸೆ ಮೂಡಿಸಿತು. ನಂತರ ಬಹುರಾಷ್ಟ್ರೀಯ ಕಂಪೆನಿಗಳು ಶುಂಠಿ ಹಿಡಿದುಕೊಂಡು ಕೃಷಿ ಜಮೀನನ್ನು ಗುತ್ತಿಗೆ ಪಡೆಯಲು ಮಲೆನಾಡಿನ ಅಂಗಳಕ್ಕೆ ಜಿಗಿದವು. ಕೂಲಿಕಾರ್ಮಿಕರ ಕೊರತೆಯಿಂದ ಸೋತಿದ್ದ ರೈತರು, ಕಂಪೆನಿಗಳ ಜೊತೆ ಶುಂಠಿ ಬೆಳೆಯಲು ಒಪ್ಪಿಕೊಂಡವು. ಅಧಿಕ ಇಳುವರಿ, ರೋಗ ನಿಯಂತ್ರಣಕ್ಕಾಗಿ ಕಂಪೆನಿಗಳು ವರ್ಷಗಟ್ಟಲೆ ಜಮೀನಿಗೆ ವಿಷ ಸುರಿದವು. ಬಂದಿದ್ದೆಲ್ಲವನ್ನು ಬಾಚಿಕೊಂಡು ಮಣ್ಣಿನ ಫಲವತ್ತತೆ ಬರೀದು ಮಾಡಿದವು. ಮುಂದೊಂದು ದಿನ ಜಮೀನಿನಲ್ಲಿ ಏನೂ ಬೆಳೆಯದಾದಾಗ ಅನಿವಾರ್ಯವಾಗಿ ರೈತರು ಜಮೀನು ಮಾರಾಟ ಮಾಡುವ ಸ್ಥಿತಿ ಎದುರಾಯಿತು.

ಅನೇಕ ಸಮಸ್ಯೆಗಳ ನಡುವೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗಲಿಲ್ಲ. ಕಳೆದ ಒಂದು ದಶಕದಿಂದೀಚೆಗೆ ಬಹುರಾಷ್ಟ್ರೀಯ ಕಂಪೆನಿಗಳೆಲ್ಲ ಚಿಲ್ಲರೆ ಮಾರಾಟಕ್ಕೆ ಇಳಿದ ಮೇಲಂತೂ ದಲ್ಲಾಳಿಗಳ ಸಂಖ್ಯೆ ವಿಪರೀತವೆನ್ನುವಷ್ಟಾಯಿತು. ಬೆಳೆದ ರೈತನಿಗೆ ಅಸಲು ದೊರಕದ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಯಿತು. ಇವೆಲ್ಲದರ ಪರಿಣಾಮ ಬೆಳೆಗೆ ಬೆಲೆ ಸಿಗಲಿಲ್ಲ. ಗಳಿಸಿದ ಹಣ ಮಾಡಿದ ಸಾಲಕ್ಕೆ ಸಮವಾಯಿತು. ಮತ್ತೆ ಸಾಲ ಮಾಡಿ ಕೃಷಿ ಮಾಡಬೇಕಾದ ಪರಿಸ್ಥಿತಿ ಬಂತು. ಇಂಥ ಬದುಕಿನಿಂದ ಬೇಸತ್ತ ಕೃಷಿಕರು ಜಮೀನು ಗುತ್ತಿಗೆ ಕೊಟ್ಟು ತಾವು ಬೇರೆ ಪಟ್ಟಣಗಳಲ್ಲಿ ಕೆಲಸ ಹುಡುಕಿಕೊಂಡರು. ಇತ್ತ ಜಮೀನಿನಲ್ಲಿ ಹಣ ಸಿಕ್ಕಿತು. ಇನ್ರ್ನೆಂದೆಡೆ ದುಡಿಮೆಯೂ ಆಯಿತು.

ಹೀಗೆ ದುಬಾರಿ ಒಳಸುರಿ – ದಲ್ಲಾಳಿ ಮಾರಾಟ – ಬೆಲೆ ಏರಿಳಿತ- ಬ್ಯಾಂಕ್ ಸಾಲ.. ಇಂಥ ಹೊಡೆತ ತಾಳಲಾರದೇ ಬೇಸತ್ತ ರೈತರು ಊರು ಬಿಟ್ಟು ಪಟ್ಟಣಕ್ಕೆ ವಲಸೆ ಬಂದರು. ವರ್ಷಪೂರ್ತಿ ಕೃಷಿಯಲ್ಲಿ ದುಡಿಯಲಾಗದ್ದನ್ನೂ, ಪಟ್ಟಣದಲ್ಲಿ ಕೆಲಸಕ್ಕೆ ಸೇರಿ ದುಡಿಯಲಾರಂಬಿಸಿದರು.  ಕೈ ತುಂಬಾ ಹಣ  ಸಂಪಾದಿಸಿದರು. ಆದರೆ ಹಳ್ಳಿಯಲ್ಲಿ ಸಮಸ್ಯೆಗಳ ನಡುವೆ ಇದ್ದ ಖುಷಿಯ ಕ್ಷಣಗಳು ಮಾತ್ರ ನಾಪತ್ತೆಯಾಗಿವೆ ಎಂಬುದು ಅವರಿಗೆ ಅನ್ನಿಸಿತು.

ಮಾಧ್ಯಮಗಳ ಭರಾಟೆ – ಯವಕರ ವಲಸೆ
ತೆಂಗಿನ ನುಸಿಪೀಡೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಟೊಮೇಟೊ ಬೆಳೆಯಲ್ಲಿ ಸುಖವಿಲ್ಲ. ಕಾಫಿ ಕಾಯಿಕೊರಕ ಕಾಡುತ್ತಲೇ ಇದೆ. ಇಂಥ ಕೃಷಿಯಲ್ಲಿ ಸುಖ ಕಾಣುವುದೆಂತೋ.. ಹೀಗೆ ನೂರೆಂಟು ನೆಪಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಮಕ್ಕಳು ಬೆಂಗಳೂರಿಗೆ ಓಡಿದ್ದಾರೆ.

ನಗರ ವಲಸೆಗೆ ಉದ್ಯೋಗ ಹುಡುಕಾಟ ಮಾತ್ರ ಕಾರಣ ಎಂದರೆ ಅದು ನಂಬುವ ವಿಷಯವಲ್ಲ. ಏಕೆಂದರೆ, ಇಂದಿನ ಯುವಕರಿಗೆ ಬದಲಾವಣೆ ಬೇಕಿದೆ. ಹಿರಿಯರ ಅಂಕೆ-ಶಿಕ್ಷೆಯಿಂದ ದೂರ ಬದುಕುವ ಆಸೆ ಹೆಚ್ಚಿದೆ. ಬಿಸಿಲಿನಲ್ಲಿ ನೇಗಿಲು ಹಿಡಿದು ಬೆವರಿಳಿಸುವುದು ಅವರಿಗೆ ಬೇಕಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುವ ಕನಸಿನ ಬೀಜಗಳು, ವಯಸ್ಸಿಗೆ ಮೀರಿದ ಆಸೆಯನ್ನು ಹುಟ್ಟು ಹಾಕಿವೆ. ಅದಕ್ಕೆ ಬೇಕಾದ ಖರ್ಚಿನ ಗಳಿಕೆಗೆ ಕೆಲಸದ ಅವಶ್ಯಕತೆ. ಇವೆಲ್ಲ ಕಾರಣಗಳೂ ಯುವಕರನ್ನು ಪಟ್ಟಣದೆಡೆಗೆ ಆಕರ್ಷಿಸುತ್ತವೆ.

ಪಿಯುಸಿ ಫೇಲಾದರೂ ಕಾಲ್ ಸೆಂಟರ್‌ನಲ್ಲಿ ಕೆಲಸ. ಸಾವಿರಾರು ರೂಪಾಯಿ ಸಂಬಳ. ಉಂಡು – ಮಲಗುವ ಹೊತ್ತಿನಲ್ಲಿ ದುಡಿಮೆ, ಕೆಲಸ ಮಾಡುವ ಹೊತ್ತಿನಲ್ಲಿ ನಿದ್ದೆ. ವಾರಕ್ಕೆ ಐದು ದಿನ ಕೆಲಸ. ಆರೋಗ್ಯಕ್ಕೆ ಕುತ್ತು. ಅಕಾಲ ವೃದ್ಧಾಪ್ಯ ಪ್ರಾಪ್ತಿ. ಪರಿಣಾಮ ಅತ್ತ ಹಳ್ಳಿಗೆ ಹೋಗಲಾಗದೇ ಪಟ್ಟಣದಲ್ಲಿರಲೂ ಆಗದಂತಹ ತ್ರಿಶಂಕು ಸ್ಥಿತಿ ಗ್ರಾಮೀಣ ಯುವಕರದ್ದು.

ಪರಿಹಾರಗಳಿವೆ, ತಾಳ್ಮೆ ಸಂಯಮ ಬೇಕಿದೆ ;

ಹಳ್ಳಿಗಳಿಂದ ನಗರದ ವಲಸೆ ತಪ್ಪಿಸಲು, ಹಳ್ಳಿ ಮಕ್ಕಳನ್ನು ಹಳ್ಳಿಯಲ್ಲೇ ಉಳಿಸಲು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪುರ ಎಂಬ ಯೋಜನೆ ರೂಪಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದರು. ಹಳ್ಳಿಯಲ್ಲಿ ಮೂಲಭೂತ ಸೌಲಭ್ಯಕಲ್ಪಿಸಿ ಸಣ್ಣಪುಟ್ಟ ಕೈಗಾರಿಕೆ ಮುಖೇನ ಉದ್ಯೋಗ ಸೃಷ್ಟಿಸುವುದು ಈ ಸರ್ಕಾರಿ ಯೋಜನೆಯ ಉದ್ದೇಶ. ಅದಕ್ಕಾಗಿ ಗ್ರಾಮಗಳನ್ನೂ ಆಯ್ಕೆ ಮಾಡಲಾಗಿತ್ತು. ಈವರೆಗೂ ಯೋಜನೆಯ ಮಾತು ಕೇಳಿದ್ದೇವೆಯೇ ವಿನಃ ಪರಿಣಾಮ ಅರಿಯಲು ಸಾಧ್ಯವಾಗಿಲ್ಲ.

ಆದರೆ ನಗರದ ಸೌಲಭ್ಯಗಳನ್ನು ಹಳ್ಳಿಗೆ ನೀಡಿದ ಕೂಡಲೇ ಸಮಸ್ಯೆ ಬಗೆಹರಿಯುವುದಿಲ್ಲ. ಯಾವತ್ತೂ ಹಳ್ಳಿಗಳಿಗೆ ನಗರ ಮಾದರಿಯಲ್ಲ. ಹಳ್ಳಿಗಳು ನಗರಗಳ ಹಾಗೆ ಕಲ್ಲು, ಇಟ್ಟಿಗೆ, ಕಾಂಕ್ರಿಟ್‌ನಿಂದ ದಶಕಗಳಲ್ಲಿ ರೂಪುಗೊಂಡಿಲ್ಲ. ಶತಮಾನಗಳ ಹಿಂದೆ ಅಲೆಮಾರಿಗಳು ನದಿ ತಟದಲ್ಲಿ ಗುಡಿಸಿಲು ಕಟ್ಟಿದರು. ಕೃಷಿ ಭೂಮಿ ಗುರುತಿಸಿದರು. ಉಳುಮೆ ಮಾಡಿ ಭೂಮಿ ಹದ ಮಾಡಿದರು. ಉತ್ತಿದರು. ಬಿತ್ತಿದರು. ಹಾಡು ಹೇಳಿ, ಹಬ್ಬ ಮಾಡಿ, ಜಾತ್ರೆ ಮಾಡಿ, ಮನ-ಮನಗಳ ನಡುವೆ ಸಂಬಂಧದ ಕೊಂಡಿ ಬೆಸೆದರು. ಇಂಥ ಸಂಸ್ಕೃತಿಯ ಬೇಲಿಯಲ್ಲಿ, ಭಾವನಾತ್ಮಕ ಸಂಬಂಧಗಳ ನಡುವೆ ಹಳ್ಳಿಗಳು ನಿರ್ಮಾಣವಾಯಿತು. ಇಂಥ ಹಳ್ಳಿಗಳಿಗೆ ನಗರ ಸೌಲಭ್ಯಗಳು ದೊರೆತರೆ, ಅಲ್ಲಿ ಮತ್ತೊಂದು ಯಾಂತ್ರಿಕ ಜಗತ್ತು ನಿರ್ಮಾಣವಾಗುತ್ತದೆ.

ಹಳ್ಳಿಗಳಲ್ಲಿ ಏನಿದೆ ? ಎಂದು ಪ್ರಶ್ನಿಸುತ್ತಲೇ ಹಳ್ಳಿ ಖಾಲಿ ಮಾಡುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ನಾವಿರುವ ಹಳ್ಳಿಯಲ್ಲೇ ಏನೆಲ್ಲಾ ಸಾಧಿಸುವ ಅವಕಾಶಗಳಿವೆ. ಅದಕ್ಕೆ ತಾಳ್ಮೆ ಬೇಕು, ಕಾಯುವ ಸಂಯಮ ಬೇಕು ಅಷ್ಟೇ.

ಒಮ್ಮೆ ನಮ್ಮ ರಾಜ್ಯದ ಹಳ್ಳಿಯಲ್ಲಿ ಬದುಕುತ್ತಾ ನೆಮ್ಮದಿ ಕಂಡವರ ಕಡೆಗೆ ಕಣ್ಣು ಹಾಯಿಸಿ. ಪಾವಗಡದ ಸಮೀಪವಿರುವ ಸಿ.ಕೆ.ಪುರ ಎಂಬ ಗ್ರಾಮದಲ್ಲಿ ವಿಜ್ಞಾನಿ ಶೇಷಗಿರಿ ರಾವ್ ಅವರು, ತಮ್ಮ ಊರಿನ ಜಮೀನುಗಳಲ್ಲೇ ಬೆಳೆಗಳಿಗೆ ತಗಲುವ ರೋಗ-ಕೀಟ ಬಾಧೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಕರ್ನಾಟಕದ ಗಡಿಭಾಗ ಕಾಸರಗೋಡಿನ ಹಳ್ಳಿಯೊಂದರಲ್ಲಿ ಕುಳಿತ ಜಲಪತ್ರ ಶ್ರೀ ಪಡ್ರೆಯವರು ನಾಡಿನೆಲ್ಲೆಡೆ ಜಲ ಸಾಕ್ಷರತೆ ಮೂಡಿಸಿದ್ದಾರೆ. ಶಿರಸಿ ಸಮೀಪದ ಹಳ್ಳಿಯಲ್ಲಿರುವ ಗ್ರಾಮೀಣ ಪತ್ರಕರ್ತ ಶಿವಾನಂದ ಕಳವೆ ಗ್ರಾಮೀಣ ಬದುಕಿನ ತವಕ-ತಲ್ಲಣಗಳನ್ನು ನಾಡಿಗೇ ಪರಿಚಯಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಸಂತೆಶಿವರದ ಬಸವರಾಜು ಬಿಎಸ್‌ಸಿ ಕೃಷಿ ಪದವೀಧರ. ೨೫ ವರ್ಷಗಳಿಂದ ಕೃಷಿ ಪದವಿಯನ್ನು ತನ್ನ ಜಮೀನಿನಲ್ಲಿ ಪ್ರಯೋಗ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ. ರಾಜ್ಯ, ಅಂತರರಾಜ್ಯಗಳಲ್ಲೆಲ್ಲಾ ವಿಜ್ಞಾನಿಗಳಿಗೆ ಕೃಷಿ ಪಾಠ ಮಾಡುತ್ತಾರೆ. ಮೈಸೂರಿನ ಕಳಲವಾಡಿಯ ಎ.ಪಿ.ಚಂದ್ರಶೇಖರ್, ಬೆಳಗಾವಿಯ ಅಭಯ್ ಮುತಾಲಿಕ್ ದೇಸಾಯಿ ಇಬ್ಬರೂ ಮೆಕಾನಿಕಲ್ ಎಂಜಿನಿಯರ್‌ಗಳು. ಓದಿದ್ದನ್ನು ಬಿಟ್ಟು ಹಳ್ಳಿಯಲ್ಲೇ ನೆಲಸಿ, ಪ್ರಗತಿಪರ ರೈತರಾಗಿದ್ದಾರೆ. ಇವರೆಲ್ಲ ವೃತ್ತಿಯಲ್ಲಿ ಕೃಷಿಕರಾಗಿ ಪ್ರವೃತ್ತಿಯಲ್ಲಿ ಬರಹಗಾರ, ವಿಜ್ಞಾನಿ ಹೀಗೆ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇವರೆಲ್ಲ ಕೇವಲ ಉದಾಹರಣೆಗಳಷ್ಟೇ ಇಂಥ ಅನೇಕ ಮಹನೀಯರು ರಾಜ್ಯದ ಹಳ್ಳಿಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.
ಹಳ್ಳಿಗಳಲ್ಲಿ ಎಲ್ಲವೂ ಇದೆ. ಬೇಕಾದ್ದನ್ನು ಹುಡುಕಿಕೊಳ್ಳುವ ಮನಸ್ಸು ಇರಬೇಕು ಅಷ್ಟೇ !