ಸಾವಯವದಲ್ಲಿ ದೊಣ್ಣೆ ಮೆಣಸು(ಕ್ಯಾಪ್ಸಿಕಂ)

ಸೀತೆಕೆಂಪನಹಳ್ಳಿಯ ಮಲ್ಲಿಕಾರ್ಜುನ ಅವರು ಹೊಲದಲ್ಲಿ ಬೆಳೆದಿರುವ ದೊಣ್ಣೆಮೆಣಸಿನಕಾಯಿ ಅಂಗಳ

ಬಿತ್ತನೆ ಮಾಡುವುದರಿಂದ ಹಿಡಿದು ಮಾರುಕಟ್ಟೆಗೆ ಹೋಗುವವರೆಗೂ ರಾಸಾಯನಿಕದಲ್ಲೇ ಮುಳುಗೇಳುವ ದೊಣ್ಣೆ ಮೆಣಸಿನಕಾಯಿ ಬೆಳೆಯನ್ನು ರೈತರೊಬ್ಬರು ಹಸಿರು ಮನೆಯ ಹೊರಗೆ ಸಾವಯವ ಪದ್ಧತಿಯಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ.
*****

ಬೆಂಗಳೂರು ಉತ್ತರ ತ್ಲಾಲೂಕಿನ ಸೀತೆಕೆಂಪನಹಳ್ಳಿ ಮ್ಲಲಿಕಾಜುನ್ ಮುಕ್ಕಾಲು ಎಕರೆ ಜಮೀನಿನ್ಲಲಿ ಕ್ಯಾಪ್ಸಿಕಂ(ದೊಣ್ಣೆ ಮೆಣಸಿನಕಾಯಿ) ಬೆಳೆದ್ದಿದಾರೆ. ಅರೆ, ಅದರಲ್ಲೇನು ವಿಶೇಷ ಅಂತೀರಾ ? ಖಂಡಿತಾ ವಿಶೇಷ ಇದೆ.

ಗಿಡಗಳಲ್ಲಿ ಜೋತಾಡುತ್ತಿರುವ ಕ್ಯಾಪ್ಸಿಕಂ

ಸಾಮಾನ್ಯವಾಗಿ ಕ್ಯಾಪ್ಸಿಕಂ ಬೆಳೆಯುವುದಕ್ಕೆ ಹವಾನಿಯಂತ್ರಿತ ಹಸಿರು ಮನೆ ಬೇಕು. ಹೈಟೆಕ್ ತಂತ್ರಜ್ಞಾನದ್ಲಲಿ ಬೆಳೆಸಬೇಕು. ರಸಗೊಬ್ಬರ, ಕೀಟನಾಶಕ ಕಡ್ಡಾಯವಾಗಿ ಬಳಸಬೇಕು. ನಿರಂತರ ಆರೈಕೆ.. ಹೀಗೆ ಒಂದಿಷ್ಟು ನಿಯಮಗಳಿವೆ. ಆದರೆ ಮ್ಲಲಿಕಾರ್ಜುನ ಅವನ್ನ್ಲೆಲ ‘ಉಲಂಘಿಸಿ’ ಬಟ್ಟ ಬಯಲಿನ್ಲಲಿ, ಸಾವಯವ ಕೃಷಿ ಪದ್ಧತಿಯ್ಲಲಿ, ಕಡಿಮೆ ಖರ್ಚಿನ್ಲಲಿ ಉತ್ತಮ ಬೆಳೆ ತೆಗೆದ್ದಿದಾರೆ. ಎರಡು ತಿಂಗಳಿಗೆ ಕಾಯಿ ಕೊಯ್ಲಿಗೆ ಬಂದಿದೆ. ಒಂದೊಂದು ಕಾಯಿ ೧೫೦ ರಿಂದ ೨೦೦ ಗ್ರಾಂ ತೂಕವಿದೆ. ಕಡು ಹಸಿರು ಬಣ್ಣದ ಕಾಯಿಗಳು, ರೋಗ ರಹಿತ ಗಿಡಗಳ ಮುಕ್ಕಾಲು ಎಕರೆಯ ಅಂಗಳವನ್ನು ಆವರಿಸಿಕೊಂಡಿವೆ. ‘ಕನಿಷ್ಠ ಮೂರು ತಿಂಗಳು ಉತ್ತಮ ಇಳುವರಿ ಪಡೆಯುತ್ತೇನೆ’ ಎಂಬ ಉಮೇದಿನ್ಲಲ್ದಿದಾರೆ ಮ್ಲಲಿಕಾರ್ಜುನ. ಇದೇ ಇವರ ಕೃಷಿಯ ವಿಶೇಷ !

ಮುಕ್ಕಾಲು ಎಕರೆಯ್ಲಲಿ ಮೊದಲ ಹೆಜ್ಜೆ :

ಮ್ಲಲಿಕಾರ್ಜುನ ಅವರ‍್ದದು ಒಂದು ಕಡೆ ದ್ರಾಕ್ಷಿ ತೋಟ, ಮತ್ತೊಂದು ಕಡೆ ಹೊಲ ಹಾಗೂ ಮನೆಯ ಬಳಿ ತರಕಾರಿ ತೋಟವಿದೆ. ಕಳೆದ ಏಳೆಂಟು ವರ್ಷಗಳಿಂದ ಕ್ಯಾಪ್ಸಿಕಂ ಸೇರಿದಂತೆ ವಿವಿಧ ತರಕಾರಿಗಳನ್ನು ರಾಸಾಯನಿಕ ಪದ್ಧತಿಯ್ಲಲಿ ಬೆಳೆಯುತ್ತ್ದಿದರು. ಒಂದೆರಡು ವರ್ಷಗಳಿಂದೀಚೆಗೆ ರಾಸಾಯನಿಕ ಪದ್ಧತಿಯ ಅವಾಂತರಗಳ ‘ದರ್ಶನ’ವಾಯಿತು. ಮಾಧ್ಯಮಗಳ್ಲಲಿ ಬಿತ್ತರವಾಗುತ್ತ್ದಿದ ಸಾವಯವ ಕೃಷಿ ವಿಚಾರ, ಪ್ರಗತಿಪರ ರೈತರ ಅನುಭವಗಳಿಂದ ಪ್ರೇರಿತರಾದ ಇವರು ಸಾವಯವ ಕೃಷಿಯ್ಲಲಿ ದ್ರಾಕ್ಷಿ, ತರಕಾರಿ ಬೆಳೆಯುವ ಯೋಚನೆಯ್ಲಲ್ದಿದರು. ಇದೇ ಸಮಯದ್ಲಲಿ ಹೆಸರುಘಟ್ಟದ ತೋಟಗಾರಿಕಾ ಸಂಶೋಧನಾ ಕೇಂದ್ರದ ಪ್ರಧಾನ ವಿಜ್ಞಾನಿ ಪ್ರಭಾಕರ್ ಅವರು ಸಾವಯವ ಕೃಷಿಯ್ಲಲಿ ಕ್ಯಾಪ್ಸಿಕಂ ಬೆಳೆಯುವ ಸಲಹೆ ನೀಡಿದರು. ‘ಮಾರ್ಗದರ್ಶನ ನೀಡುವುದಾಗಿ’ ಭರವಸೆ ಕೊಟ್ಟರು. ಈ ನಡುವೆ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಕೃಷಿ ಇಲಾಖೆ ಸಹಯೋಗದೊಂದಿಗೆ ಸಾವಯವ ಗ್ರಾಮ/ಸ್ಥಳ ಯೋಜನೆಯನ್ನು ಸೀತೆಕೆಂಪನಹಳ್ಳಿಯ್ಲಲಿ ಅನುಷ್ಠಾನಗೊಳಿಸಲಾರಂಭಿಸಿತು. ಈ ಯೋಜನೆಯಡಿ ರಚಿತವಾದ ಸಾವಯವ ಕೃಷಿ ಸಂಘಕ್ಕೆ ಮ್ಲಲಿಕಾರ್ಜುನ್ ಅಧ್ಯಕ್ಷರಾದರು. ಈ ಎಲ ‘ಬೆಳವಣಿಗೆ’ಗಳ ಮೊದಲ ಪ್ರಯತ್ನವಾಗಿ ಮೇ ತಿಂಗಳ್ಲಲಿ ಸಾವಯವ ಕೃಷಿ ಪದ್ಧತಿಯ್ಲಲಿ ಕ್ಯಾಪ್ಸಿಕಂ ಬೆಳೆಯಲು ಆರಂಭಿಸಿದರು.

ಕ್ಯಾಪ್ಸಿಕಂ ಬೆಳೆದ್ದಿದು ಹೀಗೆ :

ಮುಕ್ಕಾಲು ಎಕರೆ (೩೦ ಗುಂಟೆ) ಜಮೀನನ್ನು ಆಳವಾಗಿ ಉಳುಮೆ ಮಾಡಿಸಿದರು. ೧೫ ಟನ್ ಕೊಟ್ಟಿಗೆ(ಮೂರು ಟ್ರ್ಯಾಕ್ಟರ್) ಗೊಬ್ಬರವನ್ನು ಭೂಮಿಗೆ ಹರಗಿಸಿದರು. ಮೂರು ಅಡಿ ಅಳತೆಯ್ಲಲಿ ಸಾಲುಗಳನ್ನು ಗುರುತು ಮಾಡಿದರು. ಪ್ರತಿ ಸಾಲಿನ್ಲಲಿ ಐದು ಇಂಚು ಆಳದ ಗುಂಡಿ ತೆಗೆಸಿದರು. ವರ್ಮಿ ಕಾಂಪೊಸ್ಟ್ ೫೦೦ ಕೆ.ಜಿ, ೨೫೦ ಕೆ.ಜಿ ಬೇವಿನಹಿಂಡಿ, ನಾಲ್ಕು ಕೆ.ಜಿ ಟ್ರೈಕೋಡರ್ಮಾ ಮಿಶ್ರ ಮಾಡಿ ಮೂರು ದಿನ ಕಳಿಸಿದರು. ಈ ಮಿಶ್ರಣವನ್ನು ಪ್ರತಿ ಸಾಲುಗಳಿಗೆ ಹಾಕಿ ಮುಚ್ಚಿಗೆ ಮಾಡಿದರು. ಮತ್ತೆ ಮೂರು ದಿನಗಳ ನಂತರ ಸಾಲುಗಳ ಮೇಲೆ ಡ್ರಿಪ್ ಪೈಪ್ ಅಳವಡಿಸಲಾಯಿತು. ನಂತರ ನೀರು ಹರಿಸಿ ಮಣ್ಣನ್ನು ತೇವಗೊಳಿಸಿದರು. ಮರು ದಿನವೇ ಸಸಿಗಳ ನಾಟಿ ಆರಂಭ. ಇದ್ಲೆಲ ನಾಟಿಗೆ ೨೦ ದಿವಸಗಳ ಮುಂಚೆ ಮಾಡಿದ ಕೆಲಸ.

ಸೀತೆಕೆಂಪನಹಳ್ಮಳಿ ಮಲ್ಲಿಕಾರ್ಜುನ್

ಗಿಡಗಳನ್ನು ನಾಟಿ ಮಾಡಿದ ೨೦ ದಿನಗಳ ನಂತರ ಮತ್ತೆ ಪೋಷಕಾಂಶಗಳನ್ನು ಮೇಲುಗೊಬ್ಬರವಾಗಿ ಗಿಡಗಳಿಗೆ ನೀಡಿದರು. ಈ ಬಾರಿ ೧೦೦ ಕೆ.ಜಿ ಬೇವಿನ ಹಿಂಡಿ, ೨೫೦ ಕೆ.ಜಿ ವರ್ಮಿ ಕಾಂಪೋಸ್ಟ್ ಮಿಶ್ರಣವನ್ನು(ಒಂದು ಹಿಡಿ) ಪ್ರತಿ ಎರಡು ಸಸಿಗಳ ನಡುವೆ ಕೊಟ್ಟರು. ಸಾಲುಗಳ ನಡುವ್ದಿದ ಮಣ್ಣನ್ನು ಈ ಮಿಶ್ರಣದ ಮೇಲೆ ಮುಚ್ಚಿ ‘ಬೆಡ್’ ತಯಾರಿಸಲಾಯಿತು. ‘ಬೆಡ್ ಮಾಡ್ದಿದರಿಂದ ಕಳೆ ನಿಯಂತ್ರಣವಾಗುತ್ತದೆ. ಪೋಷಕಾಂಶಗಳು ಭೂಮಿಯೊಳಗಿನ ಗಿಡಗಳ ಬೇರಿಗೆ ನೇರವಾಗಿ ತಲುಪುತ್ತವೆ. ಬೇರು ಬೆಳವಣಿಗೆಗೂ ನೆರವಾಗುತ್ತದೆ’ ಎನ್ನುವುದು ಮ್ಲಲಿಕಾರ್ಜುನ್ ಅಭಿಪ್ರಾಯ.

ಹೂ ಅರಳಿ-ಕಾಯಾಗಿ:

ಗೊಬ್ಬರ, ಪೋಷಕಾಂಶಗಳ ಆರೈಕೆಯೊಂದಿಗೆ ತಿಂಗಳೊಳಗೆ ಗಿಡಗಳ್ಲಲಿ ಹೂವು ಬಿರಿಯಲು ಶುರುವಾಯಿತ. ಈ ಸಂಭ್ರಮದ ಜೊತೆಗೆ ಹೂವಿನ ಪಕಳೆಗಳ ನಡುವೆ ಸಣ್ಣ ಸಣ್ಣ ಹೇನುಗಳು(ತ್ರಿಪ್ಸ್) ಕಾಣಿಸಿಕೊಂಡವು. ಮ್ಲಲಿಕಾರ್ಜುನ ಧೃತಿಗೆಡಲ್ಲಿಲ. ಐಐಎಚ್‌ಆರ್ ವಿಜ್ಞಾನಿ ಪ್ರಭಾಕರ್ ಅವರು ಸೂಚಿಸ್ದಿದ ‘ಮೆಣಸಿನಕಾಯಿ ಕಷಾಯ’ (ಬಾಕ್ಸ್ ನೋಡಿ)ವನ್ನು ಗಿಡಗಳ ನೆತ್ತಿಯ ಮೇಲೆ ಸಿಂಪಡಿಸಿದರು. ‘ಈ ಕಷಾಯದಿಂದ ತ್ರಿಪ್ಸ್ ನಿಯಂತ್ರಣಕ್ಕೆ ಬಂತು. ಗಿಡಗಳ ಎಲೆಗಳು ಕೂಡ ಮೃದುವಾದವು’ ಎನುತ್ತಾರೆ ಮ್ಲಲಿಕಾರ್ಜುನ್.

ಕ್ಯಾಪ್ಸಿಕಂ ಬೆಳೆ ಸೋಲುವುದೇ ‘ಫಂಗಸ್’ ಬಾಧೆಯಿಂದ. ಫಂಗಸ್ ನಿಯಂತ್ರಣಕ್ಕೆ ಹದಿನೈದು ದಿನಗಳಿಗೊಮ್ಮೆ ಟ್ರೈಕೋಡರ್ಮವನ್ನು ಕಷಾಯ ಮಾಡಿ ಗಿಡಗಳಿಗೆ ಸಿಂಪಡಿಸಬೇಕು. ಎಲೆ- ಪೌಡರ್ ರೋಗ ಬಾಧಿಸಿದರೆ ಬೋರ್ಡೊ ದ್ರಾವಣ ಸಿಂಪಡಿಸಬೇಕು’ ಎಂಬುದು ಅವರ ಸಲಹೆ. ಇಂಥ ಸಲಹೆಗಳನ್ನು ಅಳವಡಿಸಿಕೊಂಡ್ದಿದರಿಂದಲೇ ಐದು ಸಾವಿರ ಕ್ಯಾಪ್ಸಿಕಂ ಗಿಡಗಳ್ಲಲಿ ಒಂದೇ ಒಂದು ಗಿಡವೂ ಹಾಳಾಗಲ್ಲಿಲ. ಜೊತೆಗೆ ರೋಗ ರಹಿತ ಕಾಯಿಗಳು ಹೊರ ಹೊಮ್ಮಲು ಕಾರಣವಾಯಿತು ಎನ್ನುತ್ತಾರೆ ಮ್ಲಲಿಕಾರ್ಜುನ.

ಪ್ರಸ್ತುತ ಜಮೀನಿನ್ಲಲಿ ಎಲಾ ಗಿಡಗಳು ಕಾಯಿ ಕಚ್ಚಿವೆ. ಎರಡು ಅಡಿ ಎತ್ತರವಿರುವ ಪ್ರತಿ ಗಿಡದ್ಲಲಿ ನಾಲ್ಕೈದು ಕಾಯಿಗಳು ಜೋತಾಡುತ್ತಿವೆ. ‘ರಾಸಾಯನಿಕ ಪದ್ಧತಿಯ್ಲಲಿ ಇಂಥ ತಾಜಾ ಕಾಯಿ ಕಾಣುವುದಕ್ಕೆ ಬಹಳ ಸರ್ಕಸ್ ಮಾಡಬೇಕು. ಅಷ್ಟೇ ಅಲ, ಈ ಹಂತದ್ಲಲಿ ೨೫ ಸಾವಿರ ರೂಪಾಯಿಗೂ ಹೆಚ್ಚು ಹಣ ಖರ್ಚಾಗುತ್ತಿತ್ತು. ಕೂಲಿ ಆಳು, ಗೊಬ್ಬರ, ಕಷಾಯ, ಸಸಿ.. ಹೀಗೆ ಎಲ ಲೆಕ್ಕ ಹಾಕಿದರೂ, ಹತ್ತು ಸಾವಿರ ದಾಟ್ಲಿಲ. ನನ್ನದು ಕಡಿಮೆ ಶ್ರಮದ್ಲಲಿ ಉತ್ತಮ ಇಳುವರಿ ತೆಗೆಯುವ ಪ್ರಯತ್ನ ಎಂದು ಮ್ಲಲಿಕಾರ್ಜುನ ಖುಷಿಯಿಂದ ವಿವರಿಸುತ್ತಾರೆ. ಅಂದ ಹಾಗೆ, ಎರಡೂ ಪದ್ಧತಿಯ್ಲಲಿ ಇಳುವರಿ ಒಂದೇ. ಆದರೆ ಕಾಯಿಯ ಗುಣಮಟ್ಟ (ಸಿಪ್ಪೆಯ ಗಾತ್ರ) ಸಾವಯವದ್ಲಲಿ ತುಸು ದಪ್ಪ, ರುಚಿಯ್ಲಲೂ ಸೊಗಸು’ – ಅನುಭವ ಎನ್ನುವುದು ಮ್ಲಲಿಕಾರ್ಜುನ ಅವರಿಗೆ ವಿಜ್ಞಾನ, ಲೆಕ್ಕಾಚಾರ.. ಎಲವನ್ನೂ ಕಲಿಸಿದೆ.

ಸ್ವಾವಲಂಬಿಯಾದರೆ ಖರ್ಚು ಕಡಿಮೆ :

ಸಾವಯವ ಕೃಷಿ ಪದ್ಧತಿ ಎಂದರೆ ‘ದುಬಾರಿ’ ಎನ್ನುವ ಮಾತಿದೆ. ಆ ಮಾತನ್ನು ಮ್ಲಲಿಕಾರ್ಜುನ ಸುಳ್ಳು ಮಾಡ್ದಿದಾರೆ. ಖರ್ಚು ಕಡಿಮೆಯಾಗಲು ಮನೆಗಳ್ಲಲಿ ಸಂಪನ್ಮೂಲಗಳಿರಬೇಕು ಎನ್ನುವ ಅವರು, ಸಸಿ, ಬೇವಿನ ಹಿಂಡಿ ಬಿಟ್ಟರೆ, ಬೇರೇನೂ ಹೊರಗಿನಿಂದ ಖರೀದಿಸ್ಲಿಲ. ಗಿಡ ನಾಟಿ ಹಾಗೂ ಕಳೆ ತೆಗೆಯಲು ಮಾತ್ರ ಆಳುಗಳನ್ನು ಬಳಸ್ದಿದಾರೆ. ವಿಜ್ಞಾನಿಗಳ ಲೆಕ್ಕಾಚಾರದ ಪ್ರಕಾರ ಒಂದು ಎಕರೆ ಕ್ಯಾಪ್ಸಿಕಂ ಬೆಳೆಯಲು ಕನಿಷ್ಠ ೩೫ ಸಾವಿರ ರೂಪಾಯಿ ಬೇಕು. ಹಸಿರು ಮನೆಯ್ಲಲಿ (ರಫ್ತು ಗುಣಮಟ್ಟದ)ಬಣ್ಣಬಣ್ಣದ ಕ್ಯಾಪ್ಸಿಕಂ ಬೆಳೆಯಲು 3-4 ಲಕ್ಷ ರೂಪಾಯಿ ಅಗತ್ಯ. ಮ್ಲಲಿಕಾರ್ಜುನ್ ೧೩ ಸಾವಿರ ಬಂಡವಾಳದ್ಲಲಿ ಮುಕ್ಕಾಲು ಎಕರೆಯ್ಲಲಿ ಕ್ಯಾಪ್ಸಿಕಂ ಬೆಳೆದ್ದಿದಾರೆ !

ಈಗ ಕ್ಯಾಪ್ಸಿಕಂ ಕೊಯ್ಲು ಶುರುವಾಗಿದೆ. ಎರಡು ಬಾರಿ ಕೊಯ್ಲು ಮಾಡ್ದಿದಾರೆ. ಮೊದಲು ೩೫೦ ಕೆ.ಜಿ, ನಂತರ ೫೦೦ ಕೆ.ಜಿ ಕಾಯಿಗಳು ಸಿಕ್ಕಿವೆ. ಯಲಹಂಕ ರೈತ ಸಂತೆಯ ವ್ಯಾಪಾರಸ್ಥರೊಬ್ಬರು ಮನೆ ಬಾಗಿಲಿಗೆ ಬಂದು ಕೆ.ಜಿ.ಗೆ ೨೫ ರೂಪಾಯಿ ಕೊಟ್ಟು ಖರೀದಿಸ್ದಿದಾರೆ. ಸಾಗಾಟ ವೆಚ್ಚ ಇಲ. ಮಾರ್ಕೆಟ್ ಸುಲಭವಾಗಿದೆ. ಎಲದಕ್ಕಿಂತ ಆರೋಗ್ಯಪೂರ್ಣ ಗಿಡಗಳು, ಕಾಯಿಗಳನ್ನು ಕಂಡು ಮ್ಲಲಿಕಾರ್ಜುನ್ ಸಮಾಧಾನಗೊಂಡ್ದಿದಾರೆ. ಮ್ಲಲಿಕಾರ್ಜುನ ಸಂಪರ್ಕ ಸಂಖ್ಯೆ: ೯೩೪೨೪೬೦೨೧೬.

ಕೆಂಪುತೋಟದಲ್ಲಿ ಹೂ ಹಬ್ಬ

ಲಾಲ್ ಬಾಗ್ ಅಂಗಳದಲ್ಲಿ ದೆಹಲಿಯ ಲೋಟಸ್ ಟೆಂಪಲ್

ಮುಂಗಾರು ಬುವಿಗೆ ಮುತ್ತಿಕ್ಕಿದೆ. ಅವಿತಿದ್ದ ಬೀಜಗಳು ಮೊಳೆಯುತ್ತಿವೆ. ಅವು ಚಿಗುರೊಡೆದು, ಕಾಂಡದ ಕಣ್ಣುಗಳಿಂದ ಮೊಗ್ಗು ಚಿಮ್ಮಿಸಿ, ಹೂ ಬಿರಿಯುವ ಪ್ರಕ್ರಿಯೆಯೇ ಶ್ರಾವಣದ ಸಂಭ್ರಮ. ಪ್ರಕೃತಿಯ ಈ ಸೊಬಗಿನೊಂದಿಗೆ ಹಬ್ಬಗಳ ಸಾಲು ಸಾಲು..
ಶ್ರಾವಣದ ಮೊದಲ ನಾಡ ಹಬ್ಬವೇ ಸ್ವಾತಂತ್ರ್ಯೋತ್ಸವ. ಈ ಹಬ್ಬದ ನೆನಪಲ್ಲೇ ಕೆಂಪುತೋಟ ಲಾಲ್‌ಬಾಗ್ ಅಂಗಳದಲ್ಲಿ `ಹೂವಿನ ಹಬ್ಬ`ವೂ ಆರಂಭ. ನೂರರ ಹೊಸ್ತಿಲಲ್ಲಿರುವ ಹೂವಿನ ಹಬ್ಬಕ್ಕೆ ಈ ಬಾರಿ ರಂಗುರಂಗು ಪುಷ್ಪಗಳ ಮೆರವಣಿಗೆ.
ವೈವಿಧ್ಯಮಯ ವಾತಾವರಣದಲ್ಲಿ ಬೆಳೆದಿರುವ ಹೂವುಗಳ ಪ್ರದರ್ಶನ. ಕುಂಡ ಕೃಷಿಯಲ್ಲಿ ಸಾವಿರಾರು ಸಂಖ್ಯೆಯ ತರಕಾರಿ ಬೆಳೆ, ಇಕೆಬಾನದ ವಿರಾಟ ದರ್ಶನ. ಕಣ್ಣಿಗೆ ತಂಪಾಗುವ ಪುಷ್ಪೋತ್ಸವದ ಜೊತೆಗೆ ಇಳಿ ಸಂಜೆಯಲ್ಲಿ `ಸಂಗೀತ ರಸಸಂಜೆ`ಯ ವಿಶೇಷ.

ಕೋನಾರ್ಕ್ ಸೂರ್ಯದೇವಾಲಯ

ಪ್ರದರ್ಶನ `ಮೆನು`
ಕೆಂಪುತೋಟದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನವನ್ನು `ದೆಹಲಿಯ ಲೋಟಸ್ ಮಂದಿರ`ಕ್ಕಾಗಿ ಅರ್ಪಿಸಲಾಗಿದೆ. ಆ ನೆನಪಿಗಾಗಿ ಬೃಹತ್ ಗಾತ್ರದ `ಕಮಲ`ದ ಪ್ರತಿಕೃತಿಯನ್ನು ಗಾಜಿನಮನೆಯ ನಡುವಿನಲ್ಲಿ ನಿರ್ಮಿಸಲಾಗಿದೆ. ಶ್ವೇತ ಕಮಲ ಶಾಂತಿಯ ಸಂಕೇತ. ದೇಶದಲ್ಲಿ ಶಾಂತಿ ನೆಲಸಲಿ ಎಂದು ಫಲಪುಷ್ಪ ಪ್ರದರ್ಶನದ ಮೂಲಕ ತೋಟಗಾರಿಕೆ ಇಲಾಖೆ ಹಾರೈಸುತ್ತಿದೆ.

32 ಅಡಿ ಅಗಲ, 22 ಅಡಿ ಉದ್ದ, ಮೂರೂವರೆ ಲಕ್ಷ ಹೂವುಗಳಿಂದ ನಿರ್ಮಾಣಗೊಂಡಿರುವ `ಕಮಲ`ದಲ್ಲಿ ಗುಲಾಬಿ, ಕಾರ್ನೇಷನ್, ಸುಗಂಧರಾಜ ಪುಷ್ಪಗಳಿವೆ. ಎಲ್ಲವೂ ಶ್ವೇತವರ್ಣದವು.
ಕಮಲದ ಸುತ್ತ `ಫ್ಲೋರಲ್ ವ್ಹೀಲ್` (ಹೂವಿನ ಚಕ್ರ) ಚಿತ್ತಾರಗಳಿವೆ. ಒಂದೂ ಮುಕ್ಕಾಲು ಲಕ್ಷ ಜರ್ಬೆರಾ ಹೂವುಗಳನ್ನು ಬಳಸಿ ಈ `ಹೂ ಚಕ್ರ` ಬಿಡಿಸಲಾಗಿದೆ. ಒರಿಸ್ಸಾದ ಕೊನಾರ್ಕ ಸೂರ್ಯ ದೇವಾಲಯದಲ್ಲಿರುವ `ಚಕ್ರ`ದ ಪ್ರತಿಬಿಂಬವೇ ಈ ಹೂ ಚಕ್ರ.
ಊಟಿಯ ಶೀತ ಪ್ರದೇಶದಲ್ಲಿ ಕರ್ನಾಟಕ ತೋಟಗಾರಿಕಾ ವಿಭಾಗದವರು ಬೆಳೆಸಿರುವ ಪುಷ್ಪಗಳನ್ನೂ ಇಲ್ಲಿ ತಂದು ಪ್ರದರ್ಶನಕ್ಕೆ ಇಡಲಾಗಿದೆ. ಈ ವಿಭಾಗದಲ್ಲಿ ಪ್ರತಿ ವರ್ಷ ಕಡಿಮೆ ಸಂಖ್ಯೆಯಲ್ಲಿ ಹೂಗಳು ಇರುತ್ತಿದ್ದವು. ಆದರೆ ಈ ವರ್ಷ 56 ಬಗೆಯ ಪುಷ್ಪಗಳಿವೆ.  ಸ್ವಾಟಿಸ್, ಲಿಸೀತಿಯಂ, ಸೈಕ್ಲೋಮಿನ್, ಅಗಫಾಂತಸ್, ರೆಡ್ ಹಾಟ್ ಪೋಕರ್, ಕ್ಯಾಲಾಲಿಲ್ಲಿ.. ಇತ್ಯಾದಿ. ಇವೆಲ್ಲ  ಗಾಜಿನಮನೆಯ ಕೊನೆಯ ಭಾಗದಲ್ಲಿವೆ. ಆಂತೋರಿಯಂ – ಹೈಟೆಕ್ ಪುಷ್ಪೋದ್ಯಮದ ವಾಣಿಜ್ಯ ಬೆಳೆ. ಸುಮಾರು 12 ವಿಧದ ಆಂತೋರಿಯಂ ಪುಷ್ಪಗಳು ಪ್ರದರ್ಶನದಲ್ಲಿವೆ.

ಬಟರ್ ಫ್ಲೈ ಕಾರ್ನರ್

ಇಕೆಬಾನ ಸ್ಪೆಷಲ್
ಬೆಂಗಳೂರಿಗೂ ಇಕೆಬಾನಕ್ಕೂ ಅವಿನಾಭಾವ ಸಂಬಂಧ. ಅದರ ನೆನಪಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಪರಿಣತರಾದ ಲೀಲಾ ರಾಜ್‌ಕುಮಾರ್ ಅವರು ವೈವಿಧ್ಯಮಯ ಇಕೆಬಾನಗಳನ್ನು ಪ್ರದರ್ಶಿಸುತ್ತಿದ್ದಾರೆ.  `ಶತಮಾನದ ಹೊಸ್ತಿಲಲ್ಲಿರುವ ಫಲಪುಷ್ಪ ಪ್ರದರ್ಶನಕ್ಕಾಗಿ` ಲೀಲಾ ಅವರು ದೆಹಲಿ, ಮುಂಬೈ, ತಿರುವನಂತಪುರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೂವುಗಳನ್ನು ಸಂಗ್ರಹಿಸಿ `ಇಕೆಬಾನ` ತಯಾರಿಸಿದ್ದಾರೆ.
ಫಲಪುಷ್ಪ ಪ್ರದರ್ಶನದಲ್ಲಿ ಎಚ್‌ಎಎಲ್, ಜೆಡ್ – ಪರಿಸರ ಸ್ನೇಹಿ ಮನೆ ನಿರ್ಮಾಣ ಸಂಸ್ಥೆ ಸೇರಿದಂತೆ 230 ವಿವಿಧ ಕಂಪೆನಿಗಳು, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಅಂದದ ಕೈತೋಟ ನಿರ್ಮಿಸಿರುವ ಮನೆ ಮಾಲೀಕರು ಪಾಲ್ಗೊಂಡಿದ್ದಾರೆ.
ತರಕಾರಿ ವೈವಿಧ್ಯ
ಕುಂಡಗಳಲ್ಲಿ ತರಕಾರಿ ಬೆಳೆಯಲು ಸಾಧ್ಯವೇ? ಹೀಗೆಂದು ಅಚ್ಚರಿಯಿಂದ ಪ್ರಶ್ನಿಸುವವರಿಗೆ ಫಲಪುಷ್ಪ ಪ್ರದರ್ಶನದಲ್ಲಿರುವ ತೋಟಗಾರಿಕಾ ಇಲಾಖೆ ಮಳಿಗೆಯಲ್ಲಿ ಕುಂಡಗಳಲ್ಲಿ ಬೆಳೆದಿರುವ ತರಕಾರಿಗಳೇ ಉತ್ತರ ನೀಡುತ್ತವೆ.
ಈ ಮಳಿಗೆಯಲ್ಲಿ ಸಾವಿರಾರು ಕುಂಡಗಳಲ್ಲಿ ತರಕಾರಿಗಳನ್ನು ಬೆಳೆಸಲಾಗಿದೆ. ಜೊತೆಗೆ ತೋಟಗಾರಿಕೆ ಕುರಿತು ವಿವರಣೆ ನೀಡುವ ಮಾಹಿತಿ ಕೇಂದ್ರ ಕೂಡ ಇದೆ.
ಪಕ್ಕದಲ್ಲಿರುವ ಮತ್ತೊಂದು ಮಳಿಗೆಯಲ್ಲಿ ಹಣ್ಣುಗಳನ್ನು ಸಂಸ್ಕರಿಸಿ ಜಾಮ್, ಜೆಲ್ಲಿ ಹಾಗೂ ವಿವಿಧ ಬಗೆಯ ಜ್ಯೂಸ್‌ಗಳ ತಯಾರಿಕೆ ಪ್ರಾತ್ಯಕ್ಷಿಕೆಯಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜಗದೀಶ್.ಕುಂಡದಲ್ಲಿ ತರಕಾರಿಗಳನ್ನೂ ಬೆಳೆದಿರುವುದು ಪ್ರದರ್ಶನದ ಹೈಲೈಟ್. ಜತೆಗೆ ತೋಟ ನಿರ್ಮಾಣ ಮಾಡುವವರಿಗೆ ಸಲಕರಣೆಗಳೂ ಪ್ರದರ್ಶನದಲ್ಲಿ ಲಭ್ಯ. ಅದಕ್ಕಾಗಿ ಗೊಬ್ಬರ, ಔಷಧ ಪರಿಕರಗಳ ಮಾರಾಟದ ಮಳಿಗೆ ತೆರೆಯಲಾಗಿದೆ. ಮಹಾನಗರದ 12 ಪ್ರತಿಷ್ಠಿತ ನರ್ಸರಿಗಳು ಹೊಸ ಹೊಸ ಗಿಡಗಳೊಂದಿಗೆ ನಿಮ್ಮನ್ನು ಸ್ವಾಗತಿಸಲು ಸಜ್ಜಾಗಿವೆ.

ಸಂಗೀತದ ರಸದೌತಣ

ಫಲಪುಷ್ಪ ಪ್ರದರ್ಶನ ಕಂಡು ಕಣ್ಣಿಗೆ ತಂಪು ನೀಡುತ್ತದೆ. ಒಂದಷ್ಟು ಮನ ತಣಿಯಬೇಕಲ್ಲ. ಅದಕ್ಕಾಗಿಯೇ ತೋಟಗಾರಿಕೆ ಇಲಾಖೆಯವರು ಲಾಲ್‌ಬಾಗ್ ಬ್ಯಾಂಡ್ ಸ್ಟಾಂಡ್‌ನಲ್ಲಿ ಪ್ರದರ್ಶನದ ಪ್ರತಿ ದಿನ ಸಂಜೆ 4ರಿಂದ 7 ರವರೆಗೆ `ಸಂಗೀತ ಸಂಜೆ` ಏರ್ಪಡಿಸಿದ್ದಾರೆ.  ಫಲಪುಷ್ಪ ಪ್ರದರ್ಶನಕ್ಕೆ ಬಂದವರಿಗೆ ಸಂಗೀತ ಸಂಜೆ ಒಂದು ಬೋನಸ್. ಈ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರು ಗೀತಗಾಯನ ಪ್ರಸ್ತುಪಡಿಸುತ್ತಾರೆ.

13ರಂದು ವಿಶೇಷ ಸಂಗೀತ ಕಾರ್ಯಕ್ರಮವಿದೆ. ಮಿಲಿಟರಿಯ 40 ಮಂದಿ ಹೆಸರಾಂತ ವಾದ್ಯಗಾರರು ತಮ್ಮ ವಾದ್ಯಗಳ ಮೂಲಕ ಸಂಗೀತದ ರಸದೌತಣ ನೀಡಲಿದ್ದಾರೆ. ಇದು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ 99 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಿರುವ ಕಾರ್ಯಕ್ರಮ.

ಲಾಲ್‌ಬಾಗ್ ಸುತ್ತಿ ಸುಸ್ತಾದರೆ, ನಿಮ್ಮ ದಣಿವು, ಬಾಯಾರಿಕೆ ನೀಗಿಸಲು ಗಾಜಿನಮನೆ ಸುತ್ತ 120 ಮಳಿಗೆಗಳಿವೆ. ಇಲ್ಲಿ ಕುರುಕುಲು ತಿಂಡಿ, ತಂಪು ಪಾನೀಯಗಳು ಎಲ್ಲವೂ ಲಭ್ಯ.
ಎಲ್ಲದಕ್ಕೂ ಉತ್ತರ ಸಿಕ್ಕ ಮೇಲೆ, ಇನ್ನೇಕೆ ತಡ; ಪುಷ್ಪೋತ್ಸವದ ಸೌಂದರ್ಯದ ಸವಿ ಸವಿಯಲು ಹೊರಡಿ ಸಸ್ಯ ಕಾಶಿಗೆ !

ಬಣ್ಣ ಬಣ್ಣದ ಹೂಗಳ ರಂಗೋಲಿ

ಪಾರ್ಕಿಂಗ್, ಪ್ರವೇಶ
ಇಷ್ಟೆಲ್ಲ ವೈವಿಧ್ಯವಿರುವ `ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ`ವನ್ನು ನೋಡಲು ಹೋಗಲೇಬೇಕು. ಆದರೆ ನಮ್ಮ ಬೈಕು, ಕಾರು ಪಾರ್ಕಿಂಗ್ ಮಾಡುವುದೆಲ್ಲಿ? ನಿಜ, ನಿಮ್ಮ ಸಮಸ್ಯೆಗೆ ಇಲಾಖೆಯವರು ಪರಿಹಾರ ಸೂಚಿಸಿದ್ದಾರೆ. ಈ ಬಾರಿ ಡಬ್ಬಲ್ ರೋಡ್ ದ್ವಾರ ಹಾಗೂ ಸಿದ್ಧಾಪುರ ಗೇಟ್ (ಅಶೋಕ ಪಿಲ್ಲರ್ ಕಡೆಯಿಂದ) ಸಮೀಪದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 12,000 ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಇದೆ.


ಪುಟ್ಟ ಕಾಡು, ಅದರೊಳಗೊಂದು ಜಲಪಾತ…

ಎತ್ತಿಪೋತೆ ಅರಣ್ಯದ ವಿಹಂಗಮ ನೋಟ

ಚಿತ್ರ ನೋಡಿದ ಕೂಡಲೇ ಯಾವುದೋ ಮಲೆನಾಡಿನ ಭಾಗವಿರಬೇಕು ಎನ್ನಿಸಿರಬೇಕಲ್ವಾ ? ಹಾಗೆಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇದು ವರ್ಷೊಂಭತ್ತುಕಾಲ ಧಗ ಧಗ ಉರಿಯುವ ಬಿಸಿಲ ನಾಡು ಗುಲ್ಬರ್ಗ ಜಿಲ್ಲೆಯ ಸಮೀಪವಿರುವ ಒಂದು ಕಾಡಿನ ದೃಶ್ಯ. ಇತ್ತೀಚೆಗೆ ಗೆಳೆಯರಾದ ಶಿವಾನಂದ ಕಳವೆ, ಆನಂದತೀರ್ಥ ಪ್ಯಾಟಿ ಈ ಕಾಡಿಗೆ ಭೇಟಿ ನೀಡಿದ್ದಾರೆ.  ಕನ್ನಡ ನಾಡಿನ ಗಡಿಯಲ್ಲಿರುವ ಈ ಕಾಡಿನ ಬಗ್ಗೆ ಒಂದೆರಡು ತುಣುಕು ಹಾಗೂ ನಾಲ್ಕೈದು ಫೋಟೋ ಕಳುಹಿಸಿದ್ದಾನೆ ಪ್ಯಾಟಿ. ಅವನ ಬರಹದೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದೇನೆ. ಅದಕ್ಕೆ ಗೆಳೆಯ ವಿನೋದ್ ಪ್ರತಿಕ್ರಿಯಿಸಿದ್ದಾನೆ. ಅದನ್ನು ಪೊಸ್ಟಿಸಿದ್ದೇನೆ..

‘ಗುಲ್ಬರ್ಗ ಜಿಲ್ಲೆ ಎಂದರೆ ಬಿಸಿಲಿನ ನಾಡು. ಇಲ್ಲಿ ಕೂಡ ಹಸಿರಿನ ತಾಣವೊಂದು ಇದೆ ಗೊತ್ತೇ?! ಹೌದು… ಇದರ ಹೆಸರು ಕೊಂಚಾವರಂ ಕಾಡು. ಮಿತ್ರ ಶಿವಾನಂದ ಕಳವೆ ಜತೆ ಎರಡು ದಿನ ಸುತ್ತಾಡಿ ಬಂದ ಬಳಿಕ, ಕೆಲ ಚಿತ್ರ ಕಳಿಸುತ್ತಿದ್ದೇನೆ. ಅಂದ ಹಾಗೆ, ಕಾಡಿನಲ್ಲಿ ಜಲಪಾತ ಕೂಡ ಇದೆ!! ‘ಎತ್ತಿಪೋತೆ’ ಅಂತ ಹೆಸರು. ಇನ್ನು ಈ ಚಿತ್ರಗಳು ನಿಮಗಾಗಿ…

-ಆನಂದತೀರ್ಥ ಪ್ಯಾಟಿ

ಈ ಹಿಂದೆ  ಇದೇ ಕಾಡನ್ನು ಸುತ್ತಾಡಿ ತೋಳಗಳ ಕುರಿತು ಅಧ್ಯಯನ ನಡೆಸಿರುವ ಕಾಡು ಪ್ರೀತಿಯ ಪರ್ತಕರ್ತ ಗೆಳೆಯ ಬಿ.ವಿನೋದ್ ಕುಮಾರ್  (ಸುವರ್ಣ ನ್ಯೂಸ್ )  ಬಿಸಿಲ ನಾಡಿನ ಕಾಡು ಕುರಿತು ಖುಷಿಯಿಂದ ಪ್ರತಿಕ್ರಿಯಿಸಿದ್ದಾರ. ಆ ಪ್ರತಿಕ್ರಿಯೆ ಹೀಗಿದೆ ;

……This is like a oasis in your district. I had an opportunity to roam in this forest searching for indian grey wolves. This is one of the finest forest patch in this region. if i am not wrong, this joins bidar and gulbarga with some parts of AP. Forest department is declaring this as a wildlife sanctuary.
This amazing forest is facing a major threat from local villagers as all of they directly depend on this forest for firewood.
I request you to focus on this forest  and write some stories, which will definately help to restore this beautiful bio diversity.

ಹೀಗೆಲ್ಲ ಹೇಳಿದ ಮೇಲೆ ಬಿಸಲೂರಿನ  ಈ ಕಾಡು ನೋಡಬೇಕೆನಿಸಿದೆ. ಈ ಚಳಿಗಾಲದಲ್ಲೇಕೆ ಒಮ್ಮೆ ಭೇಟಿ ಕೊಡಬಾರದು ? ಎಂದು ಯೋಚಿಸುತ್ತಿದ್ದೇನೆ. ಅದಕ್ಕೆ ಮುಂದೆ ಈ ಚಿತ್ರಗಳನ್ನೊಮ್ಮೆ ನೋಡಿ.. ಎಂಜಾಯ್್ ಮಾಡಿ.

ಗಾಣಧಾಳು..

ಕಾಡೊಳಗಿನ ಕೆರೆ/ನದಿಯ ವಿಹಂಗಮ ನೋಟ
ಕಾಡಿನೊಳಗೊಂದು ಜಲಪಾತ.. ಊಹಿಸಲೂ ಅಸಾಧ್ಯ
ಗಾಲ್ಫ್ ಅಂಗಳದಂತೆ ಕಾಡುವ ಎತ್ತಿಪೋತೆ ಕಾಡಿನ ಅಂಗಳ
ದಟ್ಟ ಕಾಡಿನೊಳಗಿನ ರಸ್ತೆ

ಸಮುದಾಯದ ಒಗ್ಗಟ್ಟು ಕೆರೆ ಅಭಿವೃದ್ಧಿಯ ಗುಟ್ಟು

೨೮ ಆಗಸ್ಟ್ ೨೦೦೯ ರಲ್ಲಿ..

ಕೆರೆ ಅಂಗಳದ ತುಂಬಾ ಕಳೆ, ಶಿಥಿಲಗೊಂಡ ಏರಿ. ಅದರ ಮೇಲೆ ಪೊದೆಯಂತೆ ಬೆಳೆದು ನಿಂತ ಮುಳ್ಳು-ಕಂಟಿ ಗಿಡಗಳು. ಮಳೆಗಾಲದಲ್ಲೂ ತುಂಬದ ಕೆರೆ, ನಿರ್ವಹಣೆಯಿಲ್ಲದೇ ಸೊರಗಿದ್ದ ತೂಬು, ರಾಜಕಾಲುವೆ… ಒಟ್ಟಾರೆ ಅಧ್ವಾನವಾಗಿದ್ದ ಆ ಕೆರೆ ಒಂದು ರೀತಿಯಲ್ಲಿ ಪಾಳು ಕೊಂಪೆ..

೧೦ ಜೂನ್ ೨೦೧೧ರಲ್ಲಿ…
ಹುಲ್ಲು ಹಾಸಿನ ಕೆರೆಯ ಏರಿ. ಜಲಾಶಯದ ಗೋಡೆಯಷ್ಟು ಭದ್ರವಾದ ಕಲ್ಲುಕಟ್ಟಡ. ಬೇಸಿಗೆಯಲ್ಲೂ ಕೆರೆಯ ತುಂಬಾ ನೀರು.. ಜಲಾನಯನ ಪ್ರದೇಶದಲ್ಲಿ ಕಾಡು ಮರಗಳ ಹಸಿರು ಹಾಸು, ಮಳೆ ನೀರಿಗೆ ದಾರಿ ತೋರುವ ಒಡ್ಡುಗಳು, ‘ಕೆರೆ ಸಾಕ್ಷರತೆ’ ಸಾರುವ ನಾಮಫಲಕಗಳು, ಇವೆಲ್ಲದರ ನಡುವೆ ಸುಡು ಬಿಸಿಲಲ್ಲೂ ಬೀಸುವ ತಂಗಾಳಿ… ಮುಂಜಾನೆ – ಸಂಜೆ ಕೆರೆಯ ಸುತ್ತಾ ಹೆಜ್ಜೆ ಹಾಕುವ ಕೆರೆ ಬಳಕೆದಾರರು..

****

ಎರಡು ವರ್ಷಗಳಲ್ಲಿ ಗೋಪಾಲನಹಳ್ಳಿ ಕೆರೆ ಬದಲಾಗಿದ್ದು ಒಂದು ಅಚ್ಚರಿಯ ಅಭಿವೃದ್ಧಿ. ಇದು ಏಕಾ ಏಕಿಯಾದ ಅಭಿವೃದ್ಧಿಯಲ್ಲ. ಕಲ್ಲು-ಮುಳ್ಳುಗಳ ನೆಡಮುಡಿಯ ಮೇಲೆ

ಕೆರೆ ಅಂಗಳದಲ್ಲಿ ತಿಳಿ ನೀರು

ಸಾಗುತ್ತಾ ಗುರಿ ತಲುಪಿದ ಕಥೆ. ಈ ಬೆಳವಣಿಗೆ, ಬದಲಾವಣೆಯ ಹಿಂದೆ ಒಂದು ಸಮುದಾಯದ ಶ್ರಮವಿದೆ. ಬದ್ಧತೆಯ ಕೆಲಸವಿದೆ. ಜೊತೆಗೆ ಜಲಸಂವರ್ಧನ ಯೋಜನೆಯ ನೆರವಿದೆ. ಸಮುದಾಯಗಳ ಮನಸ್ಸು ಒಗ್ಗೂಡಿದರೆ ಎಂಥಾ ಅಭಿವೃದ್ಧಿ ಕಾರ್ಯಗಳು ‘ಹೂವು ಎತ್ತಿದಷ್ಟೇ’ ಸರಾಗವಾಗುತ್ತವೆ ಎನ್ನುವುದಕ್ಕೆ ಈ ‘ಕೆರೆಯ ಅಭಿವೃದ್ಧಿ’ಯೊಂದು ಜ್ವಲಂತ ಸಾಕ್ಷಿ !

ಗೋಪಾಲನಹಳ್ಳಿ, ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ. ಚಿಕ್ಕನಾಯ್ಕನಹಳ್ಳಿ – ತಿಪಟೂರು ಮಾರ್ಗದಲ್ಲಿದೆ ಈ ಹಳ್ಳಿ. ಗ್ರಾಮದಲ್ಲಿ ಒಟ್ಟು ೧೨೦ ಮನೆಗಳಿವೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರೇ ಹೆಚ್ಚು. ಇಲ್ಲಿನ ಕುಂಟುಂಬಗಳು ಒಂದಲ್ಲಾ ಒಂದು ರೀತಿಯಿಂದ ಈ ಕೆರೆಯನ್ನು ಅವಲಂಬಿಸಿದ್ದಾರೆ.

ಒಟ್ಟು ೪೩.೭೫ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಈ ಕೆರೆ ನೀರುಣಿಸುತ್ತದೆ. ಈ ಅಚ್ಚುಕಟ್ಟು ಪ್ರದೇಶದಲ್ಲಿ ತೆಂಗಿನ ತೋಟಗಳಿವೆ. ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಹಣ್ಣಿನ ಗಿಡಗಳಿವೆ. ಇವೆಲ್ಲವಕ್ಕೂ ಕೆರೆ ನೀರೇ ಆಧಾರ. ಈ ಕೆರೆಯ ಮೇಲೆ ಇಷ್ಟೆಲ್ಲಾ ಅವಲಂಬನೆಯಿದ್ದರೂ, ಊರಿನವರ‍್ಯಾರೂ ಕೆರೆ ನಿರ್ವಹಣೆಯತ್ತ ಗಮನಿಸುತ್ತಿರಲಿಲ್ಲ. ಮಳೆ ಬಂದಾಗ ಅಲ್ಪ ಸ್ವಲ್ಪ ಕೆರೆ ತುಂಬುತ್ತಿತ್ತು. ಸಿಕ್ಕಷ್ಟು ನೀರನ್ನು ಕೃಷಿಗೆ ಬಳಸಿಕೊಂಡು ರೈತರು ಸುಮ್ಮನಾಗುತ್ತಿದ್ದರು. ಹೀಗೆ ನಿರ್ವಹಣೆ ಕೊರತೆಯಿಂದಾಗಿ ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. ಮುಳ್ಳು-ಕಂಟಿಗಳು ಬೆಳೆದು, ಏರಿ ದುರ್ಬಲವಾಯಿತು ಕೆರೆ ಸಂಪೂರ್ಣ ಪಾಳು ಬಿತ್ತು.

ಆಗಸ್ಟ್ ೨೦೦೯ರಲ್ಲಿ ಜಲಸಂವರ್ಧನಾ ಯೋಜನ ಸಂಘ ‘ಸಮುದಾಯ ಸಹಭಾಗಿತ್ವದ ಕೆರೆ ಅಭಿವೃದ್ಧಿ’ ಯೋಜನೆಯಡಿ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ 40 ಕೆರೆಗಳನ್ನು ಆಯ್ಕೆ ಮಾಡಿತು. ಅದರಲ್ಲಿ ಗೋಪಾಲನಹಳ್ಳಿ ಕೆರೆಯೂ ಸೇರಿತು. ಆರಂಭದಲ್ಲಿ ಗ್ರಾಮಸ್ಥರು ಕೆರೆ ಅಭಿವೃದ್ಧಿಗೆ ಆಸಕ್ತಿ ತೋರಲಿಲ್ಲ. ಆದರೆ ಸ್ಥಳೀಯ ಉಪನ್ಯಾಸಕ ರಘು ಈ ಯೋಜನೆಯನ್ನು ಅರ್ಥಮಾಡಿಕೊಂಡರು. ಗ್ರಾಮಸ್ಥರನ್ನೂ ಒಪ್ಪಿಸಿದರು. ಊರಿನ ಯುವಕರನ್ನು ಹುರಿದುಂಬಿಸುತ್ತಾ, ‘ಕಾಲಭೈರವೇಶ್ವರ ಬನಶಂಕರಿ ಕೆರೆ ಅಭಿವೃದ್ಧಿ ಸಂಘ’ ರಚಿಸಿದರು. ಸಂಘದ ೯ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು, ಎಲ್ಲ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆರೆ ಅಭಿವೃದ್ಧಿಗೆ ಸಂಕಲ್ಪ ಮಾಡಿದರು.
ಸಂಘ ರಚನೆಯಾದ ಮೇಲೆ ಯೋಜನೆಯ ನಿಯಮದಂತೆ ಕೆರೆ ಅಭಿವೃದ್ಧಿಯ ವೆಚ್ದದಲ್ಲಿ  ಶೇ.೬ ರಷ್ಟನ್ನು ಸಮುದಾಯಗಳು ಭರಿಸಬೇಕು. ಸರ್ಕಾರ ೧೯,೭೮,೬೦೪ ರೂಪಾಯಿ ನೀಡಿದರೆ, ಅದಕ್ಕೆ ಗ್ರಾಮಸ್ಥರು ಶೇ ೬ ರಷ್ಟು ಅಂದರೆ  ರೂ.೧,೧೮,೭೧೬ ಗಳನ್ನು ವಂತಿಕೆ ಕಟ್ಟಬೇಕು. ಸಂಘದ ಸದಸ್ಯರು ಯೋಜನೆ ಈನಿಯಮಕ್ಕೆ ಬದ್ಧರಾಗಿ, ಮನೆ ಮನೆಗೆ ತಿರುಗಿ ವಂತಿಕೆ ಸಂಗ್ರಹಿಸಿದರು.

ಏರಿಗೆ ‘ಹೆಪ್ಪು’, ಕೆರೆಯಂಚಿಗೆ ಹಸಿರು…!

ಹಲ್ಲು ಹೆಪ್ಪಿನೊಂದಿಗೆ ಕೆರೆ ಏರಿ

ವಂತಿಕೆ ಸಂಗ್ರಹದ ನಂತರೆ ಕೆರೆ ಅಭಿವೃದ್ಧಿ ಚಟುವಟಿಕೆ ಚುರುಕಾಯಿತು. ಮೊದಲು ಏರಿಯ ಸುತ್ತಲಿದ್ದ ಮುಳ್ಳು – ಕಂಟಿಗಳನ್ನು ತೆಗೆದರು. ಏರಿಯ ಇಳಿಜಾರಿಗೆ ‘ಹೆಪ್ಪು’ ಹೊದಿಸಿ(ಹುಲ್ಲಿನ ತೆಂಡೆಗಳು)ಗಟ್ಟಿಗೊಳಿಸಿದರು. ಮಳೆಗಾಲ ಶುರುವಾಗುವುದರೊಳಗೆ ಅರ್ಧ ಕೆರೆ ಹೂಳು ತೆಗೆಸಿದ್ದಾಯಿತು. ಕೆರೆ ಅಭಿವೃದ್ಧಿ ಕಾರ್ಯಗಳು ಸಾಗಿದಂತೆ ಗ್ರಾಮಸ್ಥರ ಆಸಕ್ತಿಯೂ ಗರಿಗೆದರಿತು. ಮುಂದಿನ ಕೆಲಸಗಳು ಹೂವು ಪೋಣಿಸಿದಂತೆ ಸರ ಸರ ಸಾಗಿದವು. ಕೆರೆ ಅಂಗಳ ಸ್ವಚ್ಛವಾಗುತ್ತಲೇ, ಕ್ಯಾಚ್‌ಮೆಂಟ್ ಪ್ರದೇಶ(ಕೆರೆಗೆ ನೀರು ಹರಿವ ಸ್ಥಳ)ಕ್ಕೆ ‘ಚಿಕಿತ್ಸೆ’. ಅದರ ಮೊದಲ ಹೆಜ್ಜೆಯೇ ಕೆರೆ ಅಂಚಿನಲ್ಲಿ ನೆಡು ತೋಪು ನಿರ್ಮಾಣ. ಇದಕ್ಕಾಗಿ ಗ್ರಾಮಸ್ಥರೇ ಟೊಂಕ ಕಟ್ಟಿ ನಿಂತಿದ್ದ ವಿಶೇಷ.

ಪ್ರತಿ ಭಾನುವಾರ ಗ್ರಾಮಸ್ಥರೆಲ್ಲ ಕೆರೆ ಅಂಚಿನಲ್ಲಿ ಸೇರುತ್ತಿದ್ದರು. ಆ ದಿನ ಕೃಷಿ ಪರಿಕರಗಳ ಜೊತೆಗೆ ಅಡುಗೆ ಮನೆಯೂ ಕೆರೆ ಅಂಚಿಗೆ ವರ್ಗವಾಗುತ್ತಿತ್ತು. ಒಂದೆಡೆ ಗಿಡ ನಾಟಿ ಮಾಡುತ್ತಿದ್ದರೆ, ಇನ್ನೊಂದೆಡೆ ರುಚಿ ರುಚಿಯಾದ ಅಡುಗೆ ಸಿದ್ಧವಾಗುತ್ತಿತ್ತು. ಹೀಗೆ ಸಂಭ್ರಮದಿಂದಲೇ ಒಂದೂವರೆ ತಿಂಗಳಲ್ಲಿ ಶ್ರಮದಾನ ಪೂರ್ಣ. ಪರಿಸರ ತಜ್ಞರ ನಿರ್ದೇಶನದೊಂದಿಗೆ ಹೊಂಗೆ, ಅತ್ತಿ, ಹೂವತ್ತಿ, ನೆಲ್ಲಿ, ಹುಣಸೆ, ಸೀತಾಫಲ, ಬೇಲ, ಮಾವು, ಸಿಲ್ವರ್ ಓಕ್, ಅಕೇ ಶಿಯಾ, ಕಾಡು ಬಾದಾಮಿ, ನೇರಳೆ, ಮತ್ತಿ, ಹಲಸಿನಂತಹ ೨೨ ಜಾತಿಯ ೧೫೦೦ ಗಿಡಗಳನ್ನು ನಾಟಿ ಮಾಡಿದರು. ನುಜ್ಜುಕಲ್ಲಿನ ನೆಲದಲ್ಲಿ ಗುಂಡಿ ತೆಗೆದು ಗಿಡ ನೆಡುವುದು ಸುಲಭದ ಮಾತಲ್ಲ. ಆದರೆ ಆ ಕಾರ್ಯವನ್ನು ಸಾಧಿಸಿರುವ ಗ್ರಾಮಸ್ಥರ ಒಗ್ಗಟ್ಟಿನ ಶಕ್ತಿ ಮೆಚ್ಚುವಂಥದ್ದು. ಇಷ್ಟೆಲ್ಲ ಕಷ್ಟದ ಕೆಲಸವಾದರೂ ಗ್ರಾಮಸ್ಥರಿಗೆ ಇದು ಶ್ರಮದ ಕೆಲಸ ಅಂತ ಅನ್ನಿಸಿಲಿಲ್ಲವಂತೆ. ಹಬ್ಬದ ರೀತಿಯಲ್ಲಿ ಶ್ರಮದಾನ ಮಾಡಿದ್ದೇವೆ. ಊರಿನ ಒಗ್ಗಟ್ಟಿನಿಂದಲೇ ಕಲ್ಲು ಭೂಮಿಯಲ್ಲೂ ಹಸಿರು ಅರಳಿಸಲು ಸಾಧ್ಯವಾಗಿದೆ’- ರಘು ಭಾವುಕರಾಗಿ ನುಡಿಯುತ್ತಾರೆ.

ಕ್ಯಾಚ್ ಮೆಂಟ್ ಪ್ರದೇಶದಲ್ಲಿ ಶ್ರಮದಾನದ ಮೂಲಕ ಬೆಳೆಸಿದ ಕಾಡು-ಹಣ್ಣಿನ ಗಿಡಗಳು

ಗಿಡ ನೆಟ್ಟು ವರ್ಷವಾಗಿದೆ. ನೆಟ್ಟ ಗಿಡಗಳೆಲ್ಲ ಎದೆಯುದ್ದಕ್ಕೆ ಬೆಳೆದಿವೆ. ಶೇ.೯೦ರಷ್ಟು ಗಿಡಗಳು ಉಳಿದಿವೆ. ‘ಈ ಯೋಜನೆಯಡಿ ಜಿಲ್ಲೆಯಾದ್ಯಂತ ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಗಿದೆ. ಆದರೆ ಇಂಥ ಫಲಿತಾಂಶ ಎಲ್ಲೂ ಕಂಡಿಲ್ಲ. ಇದೆಲ್ಲ ಸಮುದಾಯದ ಶ್ರಮ, ಅನುಸರಿಸಿರುವ ನಿರ್ವಹಣಾ ಕ್ರಮ’ ಎಂದು ಹರ್ಷ ವ್ಯಕ್ತಪಡಿಸು ತ್ತಾರೆ ಜೆಎಸ್‌ವೈಎಸ್‌ನ ಜಿಲ್ಲಾ ಪರಿಸರ ತಜ್ಞ ನಾಗರಾಜ್. ಇತ್ತೀಚೆಗೆ ಕೆರೆ ಅಭಿವೃದ್ಧಿ ವೀಕ್ಷಣೆಗೆ ಆಗಮಿಸಿದ್ದ ವಿಶ್ವಬ್ಯಾಂಕಿನ ಪರಿಸರ ತಜ್ಞರಾದ  ಪಿಯುಷ್ ಡೊಗ್ರಾ ಕೂಡ ಈ ನೆಡುತೋಪಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವುದು ಸಂಘದ ಸದಸ್ಯರ ಉತ್ಸಾಹ ಇಮ್ಮಡಿಸುವಂತಾಗಿದೆ.

ಕೆರೆ ಅಭಿವೃದ್ಧಿಯೊಂದಿಗೆ..
ಕೆರೆ ಅಭಿವೃದ್ಧಿಯೊಂದಿಗೆ ಪ್ರಸ್ತುತ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬೆಂಗಳೂರು ಕೃಷಿ ವಿಶ್ವ ನೆರವಿನೊಂದಿಗೆ ರೈತರ ಜಮೀನಿನಲ್ಲಿ ಸಂಶೋಧನೆಗಳೂ ಆರಂಭವಾಗಿವೆ. ಮರೆಯಾಗಿದ್ದ ಸಿರಿಧಾನ್ಯಗಳು( ಹಾರಕ, ಕೊರಲೆ, ನವಣೆ) ಕಾಣಿಸಿಕೊಳ್ಳುತ್ತಿವೆ. ತರಕಾರಿ ಬೆಳೆ, ಮೇವಿನ ಬೆಳೆ ಬೆಳೆಯುವವರ ಸಂಖ್ಯೆ ಹೆಚ್ಚಿದೆ. ಸಂಘದವತಿ ಯಿಂದ ಮೀನುಗಾರಿಕೆ ಕೈಗೊಂಡು ೨೫ ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ.
ಈ ಯೋಜನೆಯಲ್ಲಿ ವಿಧವೆಯರಿಗೆ ಒಂದೂವರೆ ಲಕ್ಷ ರೂಪಾಯಿಯ ಸುತ್ತು ನಿಧಿ ನೀಡಲಾಗಿದೆ. ಈ ಹಣದಲ್ಲಿ ಹೈನುಗಾರಿಕೆ, ಕೋಳಿ, ಕುರಿ, ಆಡು ಸಾಕಾಣಿಕೆ ಕೈಗೊಂಡಿದ್ದಾರೆ. ಕೆರೆ ಅಬಿವೃದ್ಧಿ ಯೋಜನೆಯಿಂದ ಊರಿನಲ್ಲಿ ದನಕರಗಳು ಹೆಚ್ಚಾಗಿವೆ. ‘ಸಂಘದಿಂದ ಸಾಲವಾಗಿ ಪಡೆದ ಹಣವನ್ನು ಆರು ತಿಂಗಳೊಳಗೆ ಮರುಪಾವತಿ ಮಾಡಿದ್ದಾರೆ ಸದಸ್ಯರು’ ಎನ್ನುತ್ತಾರೆ ಜಿಲ್ಲಾ ಸಾಮಾಜಿಕ ತಜ್ಞೆ ವೀಣಾ.

ಕ್ಯಾಚ್ ಮೆಂಟ್ ಪ್ರದೇಶದಲ್ಲಿ ಹಸಿರು ಹೊದಿಕೆ
ಸಮುದಾಯ ಸಂಘಟನೆಯ ರೂವಾರಿ ರಘು(ಎಡಬದಿ) ಜೆಎಸ್ ವೈಎಸ್ ಜಿಲ್ಲಾ ಸಂಯೋಜನಾಧಿಕಾರಿ ಪದ್ಮಪ್ರಭ

ಹಂತ ಹಂತವಾಗಿ ಕೆರೆ ಅಭಿವೃದ್ಧಿ ಜೊತೆಗೆ ಸಮಗ್ರವಾಗಿ ಗ್ರಾಮದ ಅಭಿವೃದ್ಧಿಯಾಗುತ್ತಿದೆ. ‘ಮೊದಲು ನೀರು ಬಳಸುವವನಿಗಷ್ಟೇ ಈ ಕೆರೆ ಸೇರಿದ್ದು’ ಎಂಬ ಭಾವನೆಯಿತ್ತು. ಆದರೆ ಕೆರೆ ಅಭಿವೃದ್ಧಿ ಯೋಜನೆ ಅನುಷ್ಠಾನದ ನಂತರ ಕೆರೆ ಮತ್ತು ಗ್ರಾಮಸ್ಥರ ನಡುವೆ ಆತ್ಮೀಯತೆ ಬೆಳೆದಿದೆ. ಪ್ರತಿಯೊಬ್ಬರೂ ಕೆರೆಯನ್ನು ಪ್ರೀತಿಯ ಕಂಗಳಿಂದ ನೋಡುತ್ತಾರೆ. ನಿತ್ಯ ಒಬ್ಬರಲ್ಲಾ ಒಬ್ಬರು ಕೆರೆಗೆ ಭೇಟಿ ನೀಡುತ್ತಾರೆ. ಸಣ್ಣ ಸಣ್ಣ ಬದಲಾವಣೆಗಳನ್ನು ಗಮನಿಸುತ್ತಾರೆ. ಅದಕ್ಕೆ ರಘು ಹೇಳ್ತಾರೆ, ‘ಈ ಯೋಜನೆ ಕೆರೆಯನ್ನಷ್ಟೇ ಕಟ್ಟಲಿಲ್ಲ, ನಮ್ಮ ಗ್ರಾಮಸ್ಥರ ಮನಸ್ಸುಗಳನ್ನು ಬೆಸೆದಿದೆ. ಒಗ್ಗಟ್ಟಿನ ಪಾಠ ಹೇಳಿದೆ. ಕೆರೆಯೊಂದು ಅಭಿವೃದ್ಧಿಯಾದರೆ, ಇಡೀ ಊರೇ ಅಭಿವೃದ್ಧಿಯಾದಂತೆ’ ಎಂಬ ಸಿದ್ಧಾಂತವನ್ನು ತಿಳಿಸಿಕೊಟ್ಟಿದೆ.

ಒಂದೂವರೆ ವರ್ಷದಲ್ಲಿ ಗೋಪಾಲನಹಳ್ಳಿಯಲ್ಲಾಗಿರುವ ಬದಲಾವಣೆಗಳು ರಾಜ್ಯಾದ್ಯಂತ ಪಸರಿಸಿವೆ. ಜಿಲ್ಲಾ ಸಮನ್ವಯ ಅಧಿಕಾರಿಗಳಿಗೆ ‘ಇದೊಂದು ಮಾದರಿ ಕೆರೆ’ಯಾಗಿದೆ. ಇಲ್ಲಿನ ಸಮುದಾಯದ ಬದ್ಧತೆ ಅರಿತ ವಿವಿಧ ಇಲಾಖೆಗಳು ‘ತಮ್ಮ ಯೋಜನೆಗಳನ್ನು ಈ ಗ್ರಾಮದಲ್ಲಿ ಅನುಷ್ಠಾನಗೊಳಿಸಲು’ ಪೈಪೋಟಿಗಿಳಿದಿವೆ. ಅತ್ಯುತ್ತಮ ಗ್ರಾಮ ಸಂಘಟನೆಯ ಕಾರ್ಯವನ್ನು ವೀಕ್ಷಿಸಲು ಹಲವರು ಗಣ್ಯರು ಭೇಟಿ ನೀಡಿದ್ದಾರೆ. ಈಗ ಎಲ್ಲರ ದೃಷ್ಟಿ ಗೋಪಾಲನಹಳ್ಳಿಯತ್ತ ನೆಟ್ಟಿದೆ.

ಸಮುದಾಯ ಸಂಘಟನೆ ಕಟ್ಟಿದ ಸೇತುವೆ

ಸೇತುವೆ ನಿರ್ಮಿಸಿದ ಸಮುದಾಯ !
ಗೋಪಾಲನಹಳ್ಳಿ ಕೆರೆ ಕೋಡಿ ಬಿದ್ದಾಗ ಮುಂದೆ ದೊಡ್ಡದಾದ ಹಳ್ಳ ಹರಿಯುತ್ತದೆ. ಈ ಹಳ್ಳ ಮಳೆಗಾಲದಲ್ಲಿ ಗ್ರಾಮ ಹಾಗೂ ೩೦ ಮಂದಿ ಅಚ್ಚುಕಟ್ಟುದಾರರಿಗೆ ‘ಜಲ ಕಂಟಕ’ವಾಗಿತ್ತು. ಬೆಳಿಗ್ಗೆ ಜಮೀನಿಗೆ ಹೊ ದವರು ಸಂಜೆಯ ಮಳೆಗೆ ಸಿಕ್ಕಿ ಗ್ರಾಮಕ್ಕೆ ವಾಪಾಸಾಗುವುದರೊಳಗೆ ಹಳ್ಳದಲ್ಲಿ ಎದೆ ಮಟ್ಟದ ನೀರು. ಜಾನುವಾರು, ಕುರಿ-ಮೇಕೆ ಹೇಗೋ ಈಜಿ ದಡ ಸೇರುತ್ತಿದ್ದವು. ಮಹಿಳೆಯರು, ಮಕ್ಕಳು ಮಾತ್ರ, ನೀರು ಇಳಿಯುವವರೆಗೂ ಕಾಯಬೇಕಿತ್ತು. ಬೆಳೆ ಕೊಯ್ಲಾದಾಗ, ಕಣ ಮಾಡಿದಾಗ ದವಸ-ಧಾನ್ಯ ಸಾಗಿಸಲು ವಿಪರೀತ ತೊಂದರೆ.
‘ಕೆರೆ ಅಭಿವೃದ್ಧಿ ಮಾಡಿದಿರಿ. ನಮ್ಮ ಕಷ್ಟನೂ ಒಮ್ಮೆ ನೋಡಿ, ಸೇತುವೆ ಕಟ್ಟಿಕೊಡಿ’ ಎಂದು ಕೆರೆ ಅಭಿವೃದ್ಧಿ ಸಂಘದವರು ಯೋಜನಾಧಿಕಾರಿಗಳಿಗೆ ಮೊರೆಯಿಟ್ಟರು. ಆದರೆ ಎಂಜಿನಿಯರ್‌ಗಳು ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕೈಚೆಲ್ಲಿದ್ದರು. ಆದರೆ ಅಂದಿನ ಜಿಲ್ಲಾ ಸಮನ್ವಯಾಧಿಕಾರಿ ನಾಗರಾಜನಾಯಕ್, ಗೋಪಾಲನಹಳ್ಳಿಯ ‘ಸಮುದಾಯದ ಬದ್ಧತೆ’ ಕಂಡು ಸೇತುವೆ ನಿರ್ಮಾಣಕ್ಕೆ ಅನುಮತಿ ಕೊಡಿಸಿದರು. ಕ್ರಿಯಾ ಯೋಜನೆ ರೂಪಿಸಿದ ಒಂದೂವರೆ ತಿಂಗಳಲ್ಲಿ ಸೇತುವೆ ಸಿದ್ಧವಾಯಿತು. ಕೆರೆ ಅಭಿವೃದ್ಧಿ ಸಂಘದವರ ಕಣ್ಗಾವಲಿನಲ್ಲೇ ಕಾಮಗಾರಿ ಸಾಗಿದ್ದು ವಿಶೇಷ.  ಸೇತುವೆ ನಿರ್ಮಿಸಿದ್ದಕ್ಕೆ ಗ್ರಾಮಸ್ಥರು ಇಲಾಖೆಗೆ ಋಣಿಯಾಗಿದ್ದಾರೆ. ‘ಸೇತುವೆ ನಿರ್ಮಾಣ, ನಮ್ಮ ಪಾಲಿಗೆ ‘ಕೋಟಿ ಹಣಕ್ಕಿಂತಲೂ’ ಹೆಚ್ಚು ಎನ್ನುವುದು ಮಹಿಳಾ ಸಂಘದ ಸದಸ್ಯೆ ಲಲಿತಮ್ಮ ಅಭಿಪ್ರಾಯ.