ಬಹುಭಾಷಾ ನಟ ಪ್ರಕಾಶ್ ರೈ ನನಗೆ ಹೀಗೆ ನೆನಪಾದರು

ಬಹುಭಾಷಾ ನಟ ಪ್ರಕಾಶ್ ರೈ ನನಗೆ ಹೀಗೆ ನೆನಪಾದರು

ಆ ಕಡೆಯಿಂದ: ………… ’ನಾನು ಪ್ರಕಾಶ್ ರೈ ಮಾತಾಡ್ತಿರೋದು..’
ಈ ಕಡೆಯಿಂದ:……..‘ಕೇಳಿಸುತ್ತಿಲ್ಲ.. ಇನ್ನೊಮ್ಮೆ ಹೇಳಿ..’
‘ನಾನು ಪ್ರಕಾಶ್ ರೈ.. ಶ್ರೀಕಂಠ ಅವರಲ್ಲವಾ..’ –
ಅರೆ ಹೌದು ಪ್ರಕಾಶ್ ರೈ ವಾಯ್ಸ್.. ‘ಓಹೋ ಹೇಳಿ ಸರ್.. ಎಂಥ ಸರ್ಪ್ರೈಸ್ ಕೊಟ್ಟಿರಿ.. ನೀವು ಕರೆ ಮಾಡ್ತೀರಾ ಎಂದು ಊಹಿಸಿರಲಿಲ್ಲ. ಆಶ್ಚರ್ಯವಾಯಿತು’ ಎಂದು ಒಂದೇ ಉಸಿರಿಗೆ ಮಾತನಾಡಿದೆ.

****

ಹೀಗೆ ಒಮ್ಮೆ ಪ್ರಕಾಶ್ ರೈ ನನಗೆ ಕರೆ ಮಾಡಿ ಮಾತನಾಡಿದಾಗ, ಕ್ಷಣ ಥ್ರಿಲ್ ಆಗಿದ್ದೆ. ಅದು ಕರೆ ಮಾಡಿದ್ದಕ್ಕಲ್ಲ, ಒಂದು ಸಣ್ಣ ವಿಚಾರಕ್ಕೆ ದೊಡ್ಡ ಸ್ಟಾರ್ ನಟ ಇಷ್ಟು ಬೇಗ ಸ್ಪಂದಿಸಿದರಲ್ಲಾ ಎಂದು !

ಅಂದು ‘ನಾನು ನನ್ನ ಕನಸು’ ಚಿತ್ರ ನೋಡಿದ್ದೆ. ಚಿತ್ರಕಥೆ, ನವಿರಾದ ಸಂಭಾಷಣೆ, ಪಾತ್ರಗಳ ನಡುವಿನ ಭಾವನಾತ್ಮಕ ಸನ್ನಿವೇಶಗಳು, ಎಲ್ಲದಕ್ಕಿಂತ ಮುಖ್ಯವಾಗಿ ರೈ ನಟನೆ, ಅಚ್ಯುತಕುಮಾರ್ ಪಾತ್ರ.. ಎಲ್ಲವೂ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇಡೀ ದಿನ ಚಿತ್ರದ ಸನ್ನಿವೇಶಗಳನ್ನೇ ಮೆಲಕು ಹಾಕುತ್ತಿದ್ದಾಗ ಗೆಳೆಯ ವಿನೋದ್ ಕುಮಾರ್ ನಾಯಕ್ ಕರೆ ಮಾಡಿದ. ಅವನೊಟ್ಟಿಗೆ ‘ಹುಲಿ ಸಂರಕ್ಷಣಾ ಅಭಿಯಾನ’ದಲ್ಲಿ ರೈ ಪಾಲ್ಗೊಂಡಿದರ ಬಗ್ಗೆ ನೆನಪಿಸಿಕೊಳ್ಳುತ್ತಾ, ‘ನಾನು ನನ್ನ ಕನಸು’ ಸಿನಿಮಾ ಬಗ್ಗೆ ಪ್ರಶಂಸೆ ಮಾಡಿದೆ. ‘ರೈ’ ಗೊಂದು ‘ಅಭಿನಂದನೆ ತಿಳಿಸು ಗೆಳೆಯಾ’ ಎಂದು ವಿನೋದ್‌ಗೆ ಹೇಳಿದೆ. ಬಹುಶಃ ಈ ವಿಷಯವನ್ನು ವಿನೋದ್ ಅವರಿಗೆ ತಿಳಿಸಿರಬೇಕು ಅನ್ನಿಸುತ್ತೆ, ಈ ಮಾತುಕತೆಯ ಮಾರನೆಯ ದಿನವೇ ಪ್ರಕಾಶ್ ರೈ ನನಗೆ ಕರೆ ಮಾಡಿ, ಅಚ್ಚರಿ ಮೂಡಿಸಿದರು !
ಸಿನಿಮಾ ನನಗೆ ಪ್ಯಾಷನ್. ಆದರೆ, ಆ ಕ್ಷೇತ್ರದೊಟ್ಟಿಗಿನ ಸಂಪರ್ಕ ಕಡಿಮೆ. ಆದರೂ ರೈ ಕರೆ ಮಾಡಿದಾಗ ಸಹಜವಾಗಿ ಖುಷಿಯಾಯಿತು. ಅವರೊಂದಿಗೆ ಸಿನಿಮಾ ಕಥೆ, ನಮ್ಮ ಹುಡುಗ ಅಚ್ಯುತ ಕುಮಾರ್ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ರೈ ಕೂಡ ‘ಅಚ್ಯುತ ಅದ್ಭುತ ಪ್ರತಿಭೆ, ಕಲಾವಿದರು’ ಎಂದೆಲ್ಲ ಪ್ರಶಂಸಿದರು. ಎರಡೇ ನಿಮಿಷಕ್ಕೆ ಮುಗಿದ ಅವರ ಸಿನಿಮಾ ಮಾತು, ನಂತರ ಒಕ್ಕಲುತನದ ವಿಚಾರದತ್ತ ಹೊರಳಿತು.
‘ಹೈದರಾಬಾದ್ ಸಮೀಪ ತೋಟ ಮಾಡ್ತಿದ್ದೇನೆ. ನಿಮ್ಮಲ್ಲಿ ಒಳ್ಳೆಯ ದಾಳಿಂಬೆ ಸಸಿ ಸಿಗುತ್ತಂತೆ. ಚೆನ್ನಾಗಿರೋ ಸಸಿ ಕೊಡಿಸುತ್ತೀರಾ’ ಎಂದು ಕೇಳಿದರು ರೈ ! ಒಮ್ಮೆ ತೋಟಕ್ಕೆ ಬನ್ನಿ ಎಂದು ಆಹ್ವಾನಿಸಿದರು.
ಆ ಮಾತು ಕೇಳಿ ತುಂಬಾ ಖುಷಿಯಾಯಿತು. ಅಲ್ಲಿವರೆಗೆ ರೈ ಅವರನ್ನು ಒಬ್ಬ ಪ್ರತಿಭಾವಂತ ನಟ, ಸಾಮಾಜಿಕ ಚಿಂತಕ ಮಾತ್ರ ಎಂದುಕೊಂಡಿದ್ದೆ. ಅವರ ಭೇಟಿಯ ನಂತರ ‘ಅವರಲ್ಲೊಬ್ಬ ಕೃಷಿಕನೂ ಇದ್ದಾನೆ’ ಎಂದು ಅರ್ಥವಾಯಿತು. ಅವರೊಟ್ಟಿಗಿನ ಸಂಭಾಷಣೆಯಿಂದ ಒಟ್ಟು ಅರ್ಥವಾಗಿದ್ದು, ಅವರು ಎಲ್ಲೇ ಮಾತನಾಡಿದರೂ ತುಂಬಾ ಗಂಭೀರವಾಗಿ, ಜಬಾಬ್ದಾರಿಯಾಗಿ, ಮಾತನಾಡುತ್ತಾರೆಂದು…!

ವೆಂಕಣ್ಣಾಚಾರ್ ಸ್ವಾತಂತ್ರ್ಯೋತ್ಸವದ ನಿರೂಪಣೆಗೆ 40 ವರ್ಷ !

‘ಆ ಪಥ ಸಂಚಲನದಲ್ಲಿ ಭಾಗವಹಿಸಿರುವ ಮಕ್ಕಳ ಶಿಸ್ತನ್ನು ನೋಡಿ. ಎಷ್ಟು ಸೊಗಸಾಗಿದೆ. ಓಹೋ.. ಇಲ್ನೋಡಿ, ನಮ್ ಸಚಿವರು ಸ್ವಾತಂತ್ರ್ಯದ ಶುಭಾಶಯ ಸಂಕೇತವಾಗಿ ಬಲೂನ್‌ಗಳನ್ನು ಆಗಸಕ್ಕೆ ಹಾರಿ ಬಿಡುತ್ತಿದ್ದಾರೆ. ನೀವೆಲ್ಲ ಈಗ ಚಪ್ಪಾಳೆ ತಟ್ಟಿ ಸಂಭ್ರಮಿಸಬೇಕು. ಆಸಂಭ್ರಮ ಮುಗಿಲು ಮುಟ್ಟಬೇಕು…’
ಪ್ರತಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಲ್ಲಿ ಹೀಗೆ ದೇಶ ಭಕ್ತಿಯ ಆವಾಹನೆಯೊಂದಿಗೆ ಸಾಹಿತ್ಯ ಪರಿಚಾರಕ ಕೆ.ವೆಂಕಣ್ಣಾಚಾರ್ ವೀಕ್ಷಕ ವಿವರಣೆ ನೀಡುತ್ತಿದ್ದರೆ, ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕ ಮಹಾಪ್ರಭು ಮರು ಯೋಚನೆ ಮಾಡದೇ, ಜೋರಾಗಿ ಕರತಾಡನ ಮಾಡಲೇ ಬೇಕು. ಅಷ್ಟರಮಟ್ಟಿಗೆ ಅವರ ಮಾತುಗಳು ಪ್ರೀತಿ ಪೂರ್ವಕವಾಗಿರುತ್ತವೆ.
ಅಂದಹಾಗೆ, 78ರ ಹೊಸ್ತಿಲಲ್ಲಿರುವ ವೆಂಕಣ್ಣಾಚಾರ್ ಅವರ ಸ್ವಾತಂತ್ರ್ಯೋತ್ಸವದ ವೀಕ್ಷಕ ವಿವರಣೆಗೆ ಈಗ 41ರ ಹರೆಯ. ಅಪರೂಪದ ಮಾಹಿತಿ, ಸ್ಪುಟವಾದ ಭಾಷೆ, ನವಿರಾದ ನಿರೂಪಣೆಯೊಂದಿಗೆ ನಾಲ್ಕು ದಶಕಗಳಿಂದ ನಿರಂತರವಾಗಿ ವೆಂಕಣ್ಣಾಚಾರ್ ವೀಕ್ಷಕ ವಿರಣೆ ನೀಡುತ್ತಾಬಂದಿದ್ದಾರೆ. ಸಾವಿರಾರು ಪ್ರೇಕ್ಷರಿಂದ ಚಪ್ಪಾಳೆಗಳನ್ನು ಹೊಡೆಸಿದ್ದಾರೆ.

ನೆನಪಿನಾಳದಿಂದ…
ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಆಗಸ್ಟ್ 15, 1973ರ ಸ್ವಾತಂತ್ರ್ಯೋತ್ಸವದೊಂದಿಗೆ ವೀಕ್ಷಕ ವಿವರಣೆ ಆರಂಭಿ­ಸಿದ ವೆಂಕಣ್ಣಾಚಾರ್, 40 ವರ್ಷಗಳಲ್ಲಿ ಒಂದೇಒಂದು ವರ್ಷವೂ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳದೇ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ.
‘1972ರಲ್ಲಿ ಚಿತ್ರದುರ್ಗಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯ ನೌಕರನಾಗಿ ಬಂದೆ. 73ರ ಜನವರಿಯಿಂದಲೇಗಣರಾಜ್ಯೋತ್ಸವದ ನಿರೂಪಣೆ ಜವಾಬ್ದಾರಿ ದೊರೆಯಿತು. ಮೊದಲು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಎರಡೂಹಳೇ ಮಾಧ್ಯಮಿಕ ಶಾಲಾಆವರಣದಲ್ಲಿ ನಡೆಯುತ್ತಿತ್ತು. ನಂತರ ಒನಕೆ ಓಬವ್ವ ಕ್ರೀಡಾಂಗಣಕ್ಕೆ ವರ್ಗವಾಯಿತು. ಈಗ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದೆ. ಪ್ರತಿ ವರ್ಷವೂ ಹೊಸ ಹೊಸ ರೂಪದೊಂದಿಗೆ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲು ಶಾಲಾ ಶಿಕ್ಷಕರು ಹಾಡು ಹೇಳುತ್ತಿದ್ದರೆ, ಮಕ್ಕಳು ನರ್ತಿಸುತ್ತಿದ್ದರು. ಈಗ ಟೇಪ್ ರೆಕಾರ್ಡರ್ ಗಳು ಹಾಡುತ್ತವೆ. ಆದರೆ, ಚಿತ್ರದುರ್ಗದಲ್ಲಿ ಎಂದೆಂದೂ ಕಾರ್ಯಕ್ರಮಗಳು ಕಳಪೆಯಾಗಿ ನಡೆಯಲಿಲ್ಲ’ ಎಂದು ಬದಲಾವಣೆಯ ಹಂತಗಳನ್ನು ನೆನಪಿಸಿಕೊಳ್ಳುತ್ತಾರೆ ವೆಂಕಣ್ಣಾಚಾರ್.

ಪ್ರೀತಿಯ ಕೆಲಸ…
ವೆಂಕಣ್ಣಾಚಾರ್ ತನ್ನ ನಾಲ್ಕು ದಶಕಗಳ ಈ ‘ನಿರೂಪಣೆಯ ಪಯಣ’ದಲ್ಲಿ ಸಾಕಷ್ಟು ರಾಜಕೀಯ ನಾಯಕರನ್ನು ಕಂಡಿದ್ದಾರೆ. ಸಾಹಿತಿಗಳು, ವೆಂಕಣ್ಣಾಚಾರ್ ಸ್ವಾತಂತ್ರ್ಯೋತ್ಸವದ ನಿರೂಪಣೆಗೆ 40 ವರ್ಷ ! ಓದಲು ಮುಂದುವರೆಸಿ