ನೀರಿನ ದೊಣೆಗೆ ಯುವಕರಿಂದ ಪುನಶ್ಚೇತನ

08ct2ep.jpg

ಚಿತ್ರದುರ್ಗ: ನಗರದ ಚಿನ್ಮೂಲಾದ್ರಿ ಅಡ್ವೆಂಚರ್ ಕ್ಲಬ್‌ನ ಯುವಕರು ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿರುವ ನೀರಿನ ದೊಣೆಯನ್ನು ಪುನಶ್ಚೇತನ ಗೊಳಿಸುವ ಮೂಲಕ ‘ವಿಶ್ವ ಪರಿಸರ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ವಿಶ್ವ ಪರಿಸರ ದಿನಕ್ಕೆ ಮುನ್ನಾ ದಿನ ಕ್ಲಬ್‌ನ ಮುಖ್ಯಸ್ಥ ನಾಗರಾಜ್ (ನಾಗು ಆರ್ಟ್ಸ್‌) ಮತ್ತು ನಾಲ್ವರು ಸ್ನೇಹಿತರು ಆಡುಮಲ್ಲೇಶ್ವರದ ಮೇಲ್ಭಾಗದಲ್ಲಿರುವ ಹಿಮವತ್ಕೇದಾರ ಸಮೀಪದಲ್ಲಿನ ನೀರಿನ ದೊಣೆಯನ್ನು ಸ್ವಚ್ಛಗೊಳಿಸಿದ್ದಾರೆ.

‘ಬಂಡೆಗೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಕಲ್ಲು ಕಟ್ಟಡದ ಈ ದೊಣೆಯಲ್ಲಿ ಹೂಳು ತುಂಬಿಕೊಂಡು ನೀರು ನಿಲ್ಲುವ ಪ್ರಮಾಣ ಕಡಿಮೆ ಯಾಗಿತ್ತು. ಹಿಂದೆ ಬೇರೆ ಬೇರೆ ದೊಣೆಗಳ ಹೂಳು ತೆಗೆದಾಗ, ನೀರು ನಿಲ್ಲುವ ಪ್ರಮಾಣದ ಬಗ್ಗೆ ಅರಿವು ಮೂಡಿತು. ಹಾಗಾಗಿ ಈ ದೊಣೆಯ ಹೂಳು ತೆಗೆದಿದ್ದೇವೆ’ ಎಂದು ನಾಗರಾಜ್ ತಿಳಿಸಿದರು.

ಈ ದೊಣೆಯ ಆಸು–ಪಾಸಿನಲ್ಲಿ ನವಿಲು, ಕರಡಿ, ಚಿರತೆ ಮತ್ತು ಕೊಂಡುಕುರಿಗಳು ಹೆಚ್ಚು ಅಡ್ಡಾಡುತ್ತವೆ. ಬಸವನಬಾಯಿಯಿಂದ ನೀರು ಬೀಳುವ ನೀರು ಸುತ್ತಲಿನ ದೊಣೆಗಳಲ್ಲಿ ಸಂಗ್ರಹ ವಾಗುತ್ತದೆ.

‘ಇಡೀ ದಿನ ಹೂಳು ತೆಗೆದವು. ಹೂಳು ತೆಗೆಯುತ್ತಲೇ ನೀರಿನ ಒರತೆ ಕಾಣಿಸಿಕೊಂಡಿತು. ಮಾರನೆಯ ದಿನ ಒಂದು ಗುಂಡಿಯಲ್ಲಿ ಪ್ರಾಣಿಗಳು ಕುಡಿಯುವಷ್ಟು ನೀರು ಸಂಗ್ರಹವಾಗಿತ್ತು’ ಎನ್ನುತ್ತಾ ನೀರು ಸಂಗ್ರಹವಾಗಿದ್ದನ್ನು ತೋರಿಸುತ್ತಾರೆ ನಾಗರಾಜ್.

‘ದೊಣೆ ಪುನರುಜ್ಜೀವನ’ದ ಶ್ರಮದಾನದಲ್ಲಿ ಕೆಇಬಿ ನೌಕರ ಸಂತೋಷ್, ಎಲೆಕ್ಟ್ರೀಷಿಯನ್ ನಾಗಭೂಷಣ, ಛಾಯಾಚಿತ್ರಗಾಹಕ ಬಾಬು, ಕಲಾವಿದ ಮಾರುತಿ ಪಾಲ್ಗೊಂಡಿದ್ದರು.

donenayakaru.jpg

ಜೋಗಿಮಟ್ಟಿಯ ‘ದೊಣೆ’ನಾಯಕರು!

ಬರ ಮತ್ತು ಬಾಯಾರಿಕೆಯಿಂದ ನಾಡು ಕಂಗೆಟ್ಟಿರುವ ಸಂದರ್ಭದಲ್ಲಿ ಚಿತ್ರದುರ್ಗಕ್ಕೆ ಸಮೀಪದ ಜೋಗಿಮಟ್ಟಿಯಲ್ಲಿ ಮಾತ್ರ ‘ನೀರಹಾಡು’ ಅನುರಣನಗೊಳ್ಳುತ್ತಿದೆ. ಅಲ್ಲಿನ ಕಾಡು ಪ್ರಾಣಿಗಳಿಗೆ ಬಿರುಬೇಸಿಗೆಯಲ್ಲೂ ಕುಡಿವ ನೀರಿಗೆ ಕೊರತೆ ಎನ್ನಿಸಿಲ್ಲ. ಅದಕ್ಕೆ ಕಾರಣ, ಯುವ ಉತ್ಸಾಹಿಗಳ ಪರಿಸರ ಕಾಳಜಿ.

ಕಾಡಿನಲ್ಲಿನ ನೀರತಾಣಗಳನ್ನು ಹುಡುಕಿ ಮರುಪೂರಣಗೊಳಿಸಿರುವ ಅವರು, ನಿಜವಾದ ಅರ್ಥದಲ್ಲಿ ‘ದೊಣೆ’ನಾಯಕರು.

‘ನೀರಿಲ್ಲ ಅಂತ ಎಲ್ಲ ಕಡೆಯಿಂದ ಸುದ್ದಿ ಬರ್ತಾ ಇದೆ. ಇಲ್ನೋಡಿ ಸರ್, ನಮ್ ಜೋಗಿಮಟ್ಟಿ ಕಾಡಿನ ತುದಿಯ ಗವಿಬಾಗಿಲು ಗುಹೆಯಲ್ಲಿ ಈಗಲೂ 13 ಅಡಿ ನೀರಿದೆ. ಸೀಳ್ಗಲ್ಲು, ತಣ್ಣೀರು ದೋಣಿ, ಈರಣ್ಣನ ಬಂಡೆ, ಮಡಿಕೆ ದೋಣಿ, ಎಬ್ಬಿದರು ಹಳ್ಳ, ಪಾಂಡವರಮಠದ ಬಂಡೆಗಳಲ್ಲೂ ನೀರು ನಿಂತಿದೆ…’

ಚಿನ್ಮೂಲಾದ್ರಿ ಅಡ್ವೆಂಚರ್ ಕ್ಲಬ್ ನಾಗರಾಜ್ (ನಾಗು) ಚಿತ್ರದುರ್ಗ ಸಮೀಪದ ಜೋಗಿಮಟ್ಟಿ ಅರಣ್ಯದ ತುದಿಯಲ್ಲಿ, ನೀರಿನ  ದೊಣೆಗಳಲ್ಲಿ (ಜಲಸಂಗ್ರಹ ರಚನೆ), ಗವಿ ಬಾವಿಯೊಳಗೆ ನೀರು ತುಂಬಿರುವ ಚಿತ್ರಗಳನ್ನು ಎದುರಿಗೆ ಹರವಿ ಕುಳಿತು ಮಾತಿಗಿಳಿದರು.

‘ಈ ಬಿರು ಬೇಸಿಗೆಯಲ್ಲೂ ಗುಹೆಯಲ್ಲಿ ನೀರಿದೆ. ಇದೆಲ್ಲ, ಹಿಂದೆ ನಾವು ಹೂಳು ತೆಗೆದು, ಸ್ವಚ್ಛ ಮಾಡಿದ್ದರ ಪ್ರತಿಫಲ…’ ಎಂದರು. ಅವರು ಹರಡಿಕೊಂಡಿದ್ದ ಅಂದು–ಇಂದಿನ ಚಿತ್ರಗಳಲ್ಲಿ ಒಂದೂವರೆ ದಶಕದಲ್ಲಿ ಕಾಡಿನಲ್ಲಾದ ಜಲ ಸಂರಕ್ಷಣೆಯ ಬದಲಾವಣೆಗಳು ಕಾಣುತ್ತಿದ್ದವು!

ನೀರಾಸರೆಯ ತಾಣಗಳು
ಚಿತ್ರದುರ್ಗದಿಂದ 10 ಕಿ.ಮೀ ದೂರವಿರುವ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದ ತುದಿಯಲ್ಲಿ ನೀರಿನ ದೊಣೆಗಳಿವೆ. ಇವುಗಳಲ್ಲಿ ಕೆಲವು ಮಾನವ ನಿರ್ಮಿತ. ಇನ್ನೂ ಕೆಲವು ಸ್ವಾಭಾವಿಕ ರಚನೆಗಳು. ಕಾಡು ಪ್ರಾಣಿಗಳ ನೀರಡಿಕೆ ನೀಗಿಸಲು ಬಹಳ ಹಿಂದೆ ಇಂಥ ದೊಣೆಗಳನ್ನು ನಿರ್ಮಿಸಲಾಗಿದೆ.

ಇವುಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ವರ್ಷಗಟ್ಟಲೆ ನೀರು ಬತ್ತುವುದಿಲ್ಲ. ಕುಡಿಯಲು ಯೋಗ್ಯವಾದ ನೀರಿನ ಈ ದೊಣೆಗಳು ಪ್ರಾಣಿಗಳಿಗೆ ನೀರಾಸರೆಯ ತಾಣಗಳಾಗಿವೆ. 13 ವರ್ಷಗಳ ಹಿಂದೆ ಈ ಗುಹೆ, ಹೊಂಡದ ಬಂಡೆಗಳು ಹೂಳು ತುಂಬಿಕೊಂಡು, ಗಿಡಗಂಟೆಗಳು ಬೆಳೆದುಕೊಂಡಿದ್ದವು. ಮಳೆ ಬಂದಾಗಲೂ ನೀರು ನಿಲ್ಲುತ್ತಿರಲಿಲ್ಲ. ನಿಂತರೂ ಆ ನೀರು ಕುಡಿಯುವ ಪ್ರಾಣಿಗಳಿಗೆ ಎಟುಕುವಂತಿರಲಿಲ್ಲ.

2003ನೇ ಇಸವಿ. ನಾಗರಾಜ್ ಮತ್ತು ಗೆಳೆಯರು ಚಾರಣಕ್ಕೆಂದು ಕಾಡಿಗೆ ಹೋಗಿದ್ದರು. ಗವಿಬಾಗಿಲ ಬಂಡೆ ಮೇಲೆ ಕುಳಿತು ಊಟ ಮಾಡುವಾಗ, ಊಟದ ನಡುವೆ ನೀರಡಿಕೆಯಾಗಿದೆ. ಸುತ್ತಲೂ ಹುಡುಕಿದರೂ ಎಲ್ಲಿಯೂ ನೀರು ಸಿಗಲಿಲ್ಲ. ಕೆಳಗೆ ಗುಹೆಯಲ್ಲಿ ನೀರಿದೆ, ಕುಡಿಯಲು ಯೋಗ್ಯವಿಲ್ಲ.

‘ನಮ್ಮ ಪಾಡೇ ಹೀಗಾದರೆ, ಬೇಸಿಗೆಯಲ್ಲಿ ಇಲ್ಲಿನ ಮೂಕ ಪ್ರಾಣಿಗಳ ಕಥೆ ಹೇಗಿರಬೇಡ’ ಎಂದು ನಾಗು ಮತ್ತು ಗೆಳೆಯ ಜಗದೀಶ್ ಅವರಿಗೆ ಅನ್ನಿಸಿತು. ಅದರ ಫಲವಾಗಿ, ಅವರು ಗವಿಗಳನ್ನು ಸ್ವಚ್ಛಗೊಳಿಸುವ ಸಂಕಲ್ಪ ಕೈಗೊಂಡರು.

‘ಮೊದಲು ಗಿಡಗಂಟೆ, ಹೂಳು ತೆಗೆದವು. ಹೂಳು ತೆಗೆದಂತೆ ಗವಿಯ ಆಳ–ಅಗಲ ವಿಸ್ತಾರವಾಯಿತು. ಹೂಳು ತೆಗೆದ ಮೇಲೆ ದೊಡ್ಡ ಬಾವಿಯೇ ನಿರ್ಮಾಣವಾದಂತಾಯಿತು. ಆ ವರ್ಷ ಮಳೆ ಬಂತು. ಗವಿಯೊಳಗೆ ನೀರು ತುಂಬಿಕೊಂಡಿತು. 20 ಅಡಿಗೂ ಹೆಚ್ಚು ನೀರು ಸಂಗ್ರಹವಾ­ಯಿತು. ಪ್ರಾಣಿಗಳಿಗೆ ನೀರಾಸರೆಯ ತಾಣವಾಯಿತು’ ಎಂದು ಆ ದಿನಗಳನ್ನು ನಾಗು ನೆನಪಿಸಿಕೊಳ್ಳುತ್ತಾರೆ. ಗವಿಬಾಗಿಲ ಗುಹೆಯಲ್ಲಿ ಈ ಬಿರು ಬಿಸಿಲಿನಲ್ಲೂ ವ್ಯಕ್ತಿ ಮುಳುಗುವಷ್ಟು ನೀರಿದೆ ಎಂದು ಪ್ರಸ್ತುತ ಗುಹೆಯ ಸ್ಥಿತಿಯನ್ನು ವಿವರಿಸುತ್ತಾರೆ.

ಉತ್ತೇಜಿಸಿದ ಮೊದಲ ಯಶಸ್ಸು: ಗವಿಬಾಗಿಲ ಗುಹೆಯ ಹೂಳೆತ್ತಿ, ನೀರು ಸಂಗ್ರಹವಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಯಿತು. ಅದು ಯುವಕರ ‘ಶ್ರಮದಾನ’ಕ್ಕೆ ಮತ್ತಷ್ಟು ಉತ್ತೇಜನ ನೀಡಿತು. ಮುಂದೆ ಅರಣ್ಯದಲ್ಲಿರುವ ಕೆಲವು ಜಲತಾಣಗಳನ್ನು ಸ್ವಚ್ಛಗೊಳಿಸಲು ಸಂಕಲ್ಪ ಮಾಡಿದರು. ಹೂಳು ತೆಗೆವ ಜತೆಗೆ ಬಂಡೆಯ ಪೊಟರೆಗಳಿಗೆ ತಡೆಗೋಡೆ ಕಟ್ಟಿ ನೀರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ದೊಣೆಯ ಸನಿಹದಲ್ಲೇ ಹಣ್ಣಿನ ಗಿಡಗಳನ್ನು ನೆಟ್ಟರು.

‘ಹಣ್ಣಿನ ಗಿಡಗಳು ಏತಕ್ಕೆ?’ ಎಂದರೆ, ‘ನೀರು ಕುಡಿಯಲು ಬರುವ ಪ್ರಾಣಿಗಳಿಗೆ ಆಹಾರ ಸಿಗಲಿ ಎಂಬುದು ಹಣ್ಣಿನ ಗಿಡ ನೆಡುವ ಉದ್ದೇಶ’ ಎನ್ನುತ್ತಾರೆ ನಾಗು. ಗುಹೆಗಳಲ್ಲಿ ಹೂಳು ತೆಗೆಯುವಾಗ ಪುರಾತನ ಮಡಿಕೆ, ಕುಡಿಕೆಗಳು ಸಿಕ್ಕಿವೆ. ಇಳಿಜಾರಿನಲ್ಲಿರುವ ದೊಣೆಗಳ ಹೂಳು ತೆಗೆಯುವಾಗ ಸಿಕ್ಕಿರುವ ಕಲ್ಲು ಚಪ್ಪಡಿ (ಡ್ರೆಸ್ಸ್ ಸ್ಟೋನ್) ತಡೆ ಗೋಡೆಗಳು ಕಂಡಿವೆ.

ಈ ಕುರುಹುಗಳು, ನೀರಾಶ್ರಯ ತಾಣಗಳ ಪುರಾತನ ಇತಿಹಾಸವನ್ನು ಹೇಳುತ್ತವೆ. ಇತಿಹಾಸ ಸಂಶೋಧಕರು ‘ಮಡಿಕೆ, ಕುಡಿಕೆಗಳು ನೂರಾರು ವರ್ಷಗಳ ಹಿಂದೆ ಈ ಗುಹೆಗಳಲ್ಲಿ ಜನ ವಸತಿ ಇದ್ದಿರಬಹುದು ಎನ್ನುವುದಕ್ಕೆ ಸಾಕ್ಷಿ ಎನ್ನುತ್ತಾರೆ.

ಗುಹೆ, ದೊಣೆಗಳ ಹೂಳು ತೆಗೆದು, ನೀರು ಸಂಗ್ರಹಣೆ ಮಾಡಿದ ಯಶಸ್ಸಿನ ನಂತರ, 2010ರಲ್ಲಿ ನಾಗು ಮತ್ತು ಗೆಳೆಯರು ನೀರು ಸಂಗ್ರಹವಾಗುವ ಬಂಡೆಗಳಿಗೆ ಸಿಮೆಂಟ್, ಇಟ್ಟಿಗೆ ಬಳಸಿ ಒಡ್ಡು ನಿರ್ಮಿಸಿ, ನೀರು ನಿಲ್ಲಿಸಿದರು. 10 ಕಿ.ಮೀ ದೂರದಿಂದ ಅರಣ್ಯದವರೆಗೆ ಇಟ್ಟಿಗೆ ಸಿಮೆಂಟ್ ಹೊತ್ತು, ಬಂಡೆಗಳ ಇಳಿಜಾ­ರಿಗೆ ಅಡ್ಡಲಾಗಿ ಗೋಡೆ ನಿರ್ಮಿಸಿರುವುದು ಒಂದು ಸಾಹಸ.

‘ಒಬ್ಬನೇ ಕೆಲಸ ಆರಂಭಿಸಿದೆ. ನಂತರ ಗೆಳೆಯರು ಕೈಜೋಡಿಸಿದರು. ಒಂದು ವಾರ ಪರಿಶ್ರಮ ಹಾಕಿದೆವು. ಆಗ ಬೇಸಿಗೆಯಲ್ಲಿ ಈ ಕೆಲಸ ಮಾಡಿದ್ದು, ಮಳೆಗಾಲದಲ್ಲಿ ನೀರು ಸಂಗ್ರಹವಾಯಿತು. ಈ ಬೇಸಿಗೆಯಲ್ಲೂ ನೀರಿದೆ, ಅದು ತಿಳಿಯಾಗಿದೆ, ಶುದ್ಧವಾಗಿದೆ. ಕುಡಿಯಲು ಯೋಗ್ಯವಾಗಿದೆ’– ಎನ್ನುವುದು ಅವರ ವಿವರಣೆ.

ಎಲ್ಲದರಲ್ಲೂ ನೀರಿದೆ: ಕಳೆದ 13 ವರ್ಷಗಳಲ್ಲಿ ಸ್ವಚ್ಛಗೊಳಿಸಿರುವ ನೀರಿನ ದೊಣೆಗಳಲ್ಲಿ ಬಿರು ಬೇಸಿಗೆಯಲ್ಲೂ ನೀರಿದೆ. ಪ್ರಾಣಿಗಳು ನಿತ್ಯ ಇಲ್ಲಿ ನೀರು ಕುಡಿಯುತ್ತವೆ. ವಿಶೇಷವಾಗಿ ಕರಡಿ, ನವಿಲು, ಚಿರತೆ, ಜಿಂಕೆಗಳಿಗೆ ಈ ಹೊಂಡಗಳು ನೀರಾಸರೆಯಾಗುತ್ತವೆ. ಈಗಲೂ ನೀರಿನ ತಾಣಗಳ ಸುತ್ತ, ಪ್ರಾಣಿಗಳ ಹಿಕ್ಕೆಗಳು ಕಾಣುತ್ತವೆ.

ಚಾರಣ, ಚಿತ್ರಕಲೆ, ಛಾಯಾಗ್ರಹಣದ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ನಾಗುಗೆ ಇಂಥ ಹಲವು ಹವ್ಯಾಸಗಳು ವೃತ್ತಿಯಾಗಿವೆ. ಆದರೆ, ಪರಿಸರ ಸಂರಕ್ಷಣೆಯನ್ನು ಸೇವೆಯಾಗಿ ಉಳಿಸಿಕೊಂಡಿದ್ದಾರೆ. ಮೂರೂವರೆ ದಶಕಗಳಿಂದ ಗೆಳೆಯರು, ಶಾಲಾ ಮಕ್ಕಳು, ಪರ ಊರಿನ ಹವ್ಯಾಸಿ ಚಾರಣಿಗರೊಂದಿಗೆ ಜೋಗಿಮಟ್ಟಿ ಸುತ್ತಾಡು­ತ್ತಿರುವ ನಾಗುಗೆ ಅಲ್ಲಿನ ಗಿಡ ಮರ, ದೊಣೆ, ಹೊಂಡಗಳ ದಾರಿ ಗೊತ್ತಿದೆ.

ಪ್ರಾಣಿಗಳ ಆಹಾರದ ಕಾರಿಡಾರ್ ಕುರಿತು ಪಕ್ಕಾ ಮಾಹಿತಿ ಇದೆ. ಇತ್ತೀಚೆಗೆ ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಪ್ರಾಣಿಗಳ ಜೀವನಕ್ರಿಯೆ ಅರಿತಿರುವ ಅವರು, ಅವುಗಳ ಪ್ರಮುಖ ನೀರಾಸರೆ ತಾಣವನ್ನೇ  ಗುರುತಿಸಿ, ಗೆಳೆಯರ ನೆರವಿನಿಂದ ಪುನಶ್ಚೇತನಗೊಳಿಸಿದ್ದಾರೆ.

ಹೀಗೆ ಸುತ್ತಾಡುತ್ತಾ, ಈ ರೀತಿ ಕೆಲಸ ಮಾಡುವ ನಾಗುಗೆ, ‘ಇದರಿಂದ ಏನು ಲಾಭ ನಿಮಗೆ… ಯಾಕೀ ಹುಚ್ಚಾಟ’ ಅಂತ ಕೇಳಿದರೆ ಭಾವನಾತ್ಮಕವಾಗಿ ಉತ್ತರಿಸುತ್ತಾರೆ. ‘ಈ ಕಾಡಿನೊಂದಿಗೆ ನನ್ನದು ಮೂರು ದಶಕಗಳ ಸಂಬಂಧ. ನನ್ನ ಚಿತ್ರಕಲೆ, ಫೋಟೊಗ್ರಫಿಗೆ ಸ್ಫೂರ್ತಿ ಕೊಟ್ಟ ಕಾನನ ಇದು. ಈ ಕಾಡಿನಲ್ಲಿ ನೀರಿನ ಕೊರತೆಯಾಗಿ, ನವಿಲು, ಕರಡಿ, ಚಿರತೆಗಳು ಪರದಾಡಿದ್ದನ್ನು ಕಂಡಿದ್ದೇನೆ.

ಹೀಗಾಗಬಾರದು ಎಂಬುದು ನನ್ನ ಪುಟ್ಟ ಕಾಳಜಿ. ಅದಕ್ಕಾಗಿಯೇ ಈ ಜಲತಾಣಗಳಿಗೆ ಜೀವ ನೀಡುವ ಕೆಲಸ ಮಾಡಿದ್ದೇನೆ. ನಾವೇನ್ ಮಹಾ ಮಾಡಿರೋದು, ಸುರಿಯುವ ಮಳೆ ನೀರಿಗೆ ದಾರಿ ಮಾಡಿಕೊಟ್ಟಿದ್ದೇವೆ. ಅದು ತಲುಪುವ ಜಾಗಕ್ಕೆ ತಲುಪಿಸಿದ್ದೇವೆ. ಹೂಳು ಎತ್ತಿ, ನೀರು ನಿಲ್ಲುವಂತೆ ಮಾಡಿದ್ದೇವೆ, ಅಷ್ಟೆ. ಇದರಲ್ಲಿ ವಿಶೇಷ ಸಾಧನೆಯೇನಿಲ್ಲ’ ಎನ್ನುತ್ತಾರೆ.

ಅಂದಹಾಗೆ, ಕಾಡಿನ ತುದಿಯಲ್ಲಿ ಇನ್ನೂ ಹಲವು ನೀರಿನ ದೊಣೆಗಳಿವೆ, ಗುಹೆಗಳಿವೆ. ಪುಟ್ಟ ಪುಟ್ಟ ಕೆರೆಗಳಿವೆ. ನೀರಾಸರೆಯ ತಾಣಗಳಿವೆ. ಇವುಗಳ ಪುನರುಜ್ಜೀವನಕ್ಕೆ ಕೈಜೋಡಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ. ಹಾಗಾದರೆ ಮಾತ್ರ ಪ್ರಾಣಿಗಳು ನೀರಿಗಾಗಿ ಊರಿಗೆ ಬರುವುದನ್ನು ತಪ್ಪಿಸಬಹುದು ಎಂಬ ಪರಿಸರ ಕಾಳಜಿ ಅವರದ್ದು. ಸಂಪರ್ಕಕ್ಕೆ–9901124445.

‘ಕೆರೆ ತುಂಬಿದರೆ, ಮತ್ತೆ ಆಲೆಮನೆ ಹಾಕ್ತೀವಿ’

‘ನಮ್ಮೂರು ಕೆರೆ ತುಂಬಿದರೆ ಸುತ್ತ ಇಪ್ಪತ್ತೈದು ಬಾವಿಗಳಲ್ಲಿ ಸದಾ ನೀರು ಜಿನುಗುತ್ತಿತ್ತು. ಗದ್ದೆಯಲ್ಲಿ ಭತ್ತದ ಪೈರು, ಪಕ್ಕದಲ್ಲಿ ಕಬ್ಬಿನ ಬೆಳೆ, ಸಮೀಪದಲ್ಲೇ ಆಲೆಮನೆ ಹಾಕಿ ಹುಂರ್ಗಡಿ ಬೆಲ್ಲ ಮಾಡ್ತಿದ್ವಿ. ಇದು ಕಥೆ ಅಲ್ಲ, 35 ವರ್ಷಗಳ ಹಿಂದೆ ಊರಲ್ಲಿ ಹಿಂಗೇ ನಡೀತಿತ್ತು. ಇವತ್ತಿಗೂ ನಮ್ಮೂರಲ್ಲಿ ಅಂದು ಕಬ್ಬು ಬೆಳೆದವರು, ಬೆಲ್ಲ ಮಾಡ್ದವರು ಇದ್ದಾರೆ…’

ತಾಲ್ಲೂಕಿನ ಭರಮಸಗಾರ ಸಮೀಪದ ಎಮ್ಮೆಹಟ್ಟಿ ಕೆರೆಯ ಇತಿಹಾಸವನ್ನು ಊರಿನ ಹಿರಿಯ ಸುಂಕದಕಲ್ಲು ತಿಪ್ಪಣ್ಣ ಹಂಪಿಯ ಗತವೈಭವದಂತೆ ಮೆಲುಕು ಹಾಕುತ್ತಾರೆ. ಆದರೆ, 90ರ ದಶಕದಿಂ­ದೀ­ಚೆಗೆ ಕೆರೆಗೆ ನೀರು ಹರಿಯುವುದು ಕಡಿಮೆಯಾದ ಮೇಲೆ, ಬಾವಿಗಳು ಮುಚ್ಚಿಹೋಗಿವೆ. ಕಬ್ಬು, ಭತ್ತ, ಶೇಂಗಾ, ಜೋಳದ ಕೃಷಿ ನಿಂತು ಹೋಗಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಸದ್ಯ ಈಗ ಎಮ್ಮೆಹಟ್ಟಿಯಲ್ಲಿ ಕೊಳವೆಬಾವಿಗಳ ಆಶ್ರಯದಲ್ಲಿ ಸೊಪ್ಪು, ತರಕಾರಿ, ಎಲೆಬಳ್ಳಿ, ಮುಸುಕಿನ ಜೋಳ ಬೆಳೆಯುತ್ತಿರುವುದನ್ನು ಅವರು ಉಲ್ಲೇಖಿಸುತ್ತಾರೆ.

ಚಿಕ್ಕ ಕೆರೆ, ಚೊಕ್ಕ ಅಚ್ಚುಕಟ್ಟು: ಭರಮಸಾಗರದಿಂದ ನಾಲ್ಕು ಕಿ.ಮೀ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಎಮ್ಮೆಹಟ್ಟಿ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯದ ವಿಸ್ತೀರ್ಣ 66 ಎಕರೆ. ಅಚ್ಚುಕಟ್ಟು ಪ್ರದೇಶ ಕೂಡ 75 ರಿಂದ 80 ಎಕರೆ. ನೀರ್ಥಡಿ ಬೆಟ್ಟ ಪ್ರದೇಶ, ಹಂಪನೂರು, ಹಳುವದರ ಸೇರಿದಂತೆ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯ ಹಳ್ಳಿಗಳೇ ಈ ಕೆರೆಯ ಅಚ್ಚುಕಟ್ಟು ಪ್ರದೇಶ. ಅಲ್ಲಿ ಮಳೆ ಸುರಿದರೆ, ಈ ಕೆರೆಗೆ ಹಳ್ಳಗಳ ರೂಪದಲ್ಲಿ ನೀರು ಹರಿಯುತ್ತದೆ. ಈ ಕೆರೆ ತುಂಬಿ ಕೋಡಿ ಹರಿದರೆ, ಮುಂದೆ ಪಳಗೆರೆಕೆರೆ­(ಬೇವಿನಹಳ್ಳಿ), ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತದೆ. ಸುತ್ತಲಿನ ನಾಲ್ಕೈದು ಹಳ್ಳಿಗಳ ಅಂತರ್ಜಲ ಹೆಚ್ಚಾಗುತ್ತದೆ.

ಇತ್ತೀಚೆಗೆ ಕೆರೆ ತುಂಬಿಲ್ಲ : 1992 ಮತ್ತು 2000ನೇ ವರ್ಷದಲ್ಲಿ ಶೇ 80­ರಷ್ಟು ಕೆರೆ ತುಂಬಿತ್ತು. ಆದರೆ ಕೋಡಿ ಹರಿದಿರಲಿಲ್ಲ. ಇದನ್ನು ಹೊರತುಪಡಿಸಿ, ಕೆರೆ ತುಂಬಿದ್ದನ್ನು ಕಂಡಿಲ್ಲ ಎನ್ನುತ್ತಾರೆ ಗ್ರಾಮದ ಹನುಮಂತಪ್ಪ. ಕೆರೆಗೆ ಮಳೆ ನೀರು ಹರಿಯುವ ಹಂಪನೂರು, ನೀರ್ಥಡಿ ಕಡೆಯ ಹಳ್ಳಗಳು ಒತ್ತುವರಿಯಾಗಿದ್ದು, ನೀರ್ಥಡಿ ಕಡೆಯಿಂದ ಕೆರೆಗೆ ನೀರು ಹರಿಸಲು ನಿರ್ಮಿಸಬೇಕಿದ್ದ ಫೀಡರ್ ಚಾನೆಲ್ ಅರ್ಧಕ್ಕೆ ನಿಂತಿದ್ದರಿಂದ, ಕೆರೆಗೆ ಸಮರ್ಪಕವಾಗಿ ಮಳೆ ನೀರು ಸೇರುವುದಿಲ್ಲ ಎನ್ನುತ್ತಾರೆ ಅವರು.

ಹೀಗೆ ಒಂದು ಕಡೆ ಮಳೆಯ ಪ್ರಮಾಣದಲ್ಲಿ ಏರುಪೇರು, ಮತ್ತೊಂದು ಕಡೆ ಸುರಿವ ಮಳೆ ನೀರು ಸರಿಯಾಗಿ ಕೆರೆ ಸೇರದ ಪರಿಣಾಮ, ಪ್ರತಿ ಮಳೆಗಾಲದಲ್ಲಿ ಎಷ್ಟು ಜೋರು ಮಳೆ ಸುರಿದರೂ, ಕೆರೆ ಭರ್ತಿಯಾಗುತ್ತಿಲ್ಲ.

ಕೆರೆ ನಿರ್ವಹಣೆ ಕೊರತೆ: ಎಮ್ಮೆಹಟ್ಟಿ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಇಂಥದ್ದೊಂದು ವಾರಸುದಾರಿಕೆ ಹೊರತುಪಡಿಸಿದರೆ ಇಲಾಖೆಯಿಂದ ಕೆರೆ ನಿರ್ವಹಣೆ ಮಾಡಿದ ಉದಾಹರಣೆಗಳು ಇಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾ­ಣದ ವೇಳೆ ಕೆರೆಗೆ ನೀರು ಹರಿಯುವ ದಾರಿಯನ್ನು ಕದಲಿಸಿದ್ದರಿಂದ, ಮಳೆ ನೀರು ಕೆರೆ ಸೇರುತ್ತಿಲ್ಲ. ಇನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸರ್ವೀಸ್ ರಸ್ತೆ ನಿರ್ಮಿಸುವಾಗ ಕೆರೆ ಅಂಗಳದ ಮೂರ್ನಾಲ್ಕು ಎಕರೆಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದರಿಂದ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯವೂ ಕಡಿಮೆಯಾಗಿದೆ. ಸರ್ವೀಸ್ ರಸ್ತೆ ಮಾಡಿದ ಮೇಲಾದರೂ, ಕೆರೆಗೆ ಮಳೆ ನೀರು ಹರಿಯುವ ಕಾಲುವೆಗಳನ್ನು ಮಾಡಿಕೊಡಲಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಕೆರೆಗೆ ನೀರು ತುಂಬಬೇಕಾದರೆ: ಕೆರೆಗೆ ಮಳೆ ನೀರು ಹರಿಯಬೇಕಾದರೆ ಹಂಪನೂರು ಫೀಡರ್ ಚಾನೆಲ್ ಕಾಮಗಾರಿ ಪೂರ್ಣ­ಗೊಳ್ಳ­ಬೇಕು. ಗ್ರಾಮದ ಮೇಲೆ ಹಾಗೂ ರಸ್ತೆಯ ಮೇಲೆ ಸುರಿಯ ಮಳೆ ನೀರು ಕೆರೆಗೆ ಸೇರುವಂತೆ ಹೆದ್ದಾರಿ ಪ್ರಾಧಿಕಾರದವರು ಕಾಲುವೆಗಳನ್ನು ನಿರ್ಮಿಸಬೇಕು. ಆಗ ಕೆರೆ ಮೊದಲಿನಂತಾಗುತ್ತದೆ.

ಕೆರೆಗೆ ನೀರು ಹರಿದರೆ, ಮತ್ತೆ ಎಮ್ಮೆಹಟ್ಟಿ ಗ್ರಾಮದ ಸುತ್ತ, ಕಬ್ಬು, ಭತ್ತ, ಶೇಂಗಾ ಕೃಷಿ ಗರಿಗೆದರುತ್ತದೆ. ಮತ್ತೆ ಆಲೆಮನೆ ವೈಭವ ಶುರುವಾಗಿ, ಹುಂಡಿ ಬೆಲ್ಲದ ತಯಾರಿಕೆಯನ್ನೂ ಕಾಣಬಹುದು ಎಂದು ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಕೆಂಚ ಯಲಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಈಶ್ವರಪ್ಪ, ರಂಗನಾಥ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹಳ್ಳ ದುರಸ್ತಿಯಾದರೆ ಕೆರೆ ತುಂಬಿ ಹರಿಯುವುದು

ಚಿತ್ರದುರ್ಗ: ಅಚ್ಚುಕಟ್ಟು ಪ್ರದೇಶದಲ್ಲಿರುವ ಹಳ್ಳಗಳಲ್ಲಿ ನೀರಿಲ್ಲದೇ ನಮ್ಮೂರ ಕೆರೆ ತುಂಬುತ್ತಿಲ್ಲ, ಪರಿಣಾಮ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುತ್ತಿದೆ. ಕೃಷಿ ಬದುಕು ಕುಂಟುತ್ತಾ ಸಾಗಿದೆ!
17ct-jnkote2
ಜಂಪಣ್ಣನಾಯಕನ ಕೋಟೆಯ(ಜೆಎನ್ ಕೋಟೆ) ಗ್ರಾಮಸ್ಥರು, ತಮ್ಮೂರಿನ ಕೆರೆಗೆ ನೀರು ಹರಿಯದಿರುವ ಕುರಿತು ಹೀಗೆ ಬೇಸರದಿಂದ ವಿವರಿಸುತ್ತಾರೆ.

ಸುಮಾರು ಹತ್ತು ವರ್ಷಗಳಿಂದ ಕೆರೆಗೆ ಸರಿಯಾಗಿ ನೀರು ಹರಿಯುತ್ತಿಲ್ಲ. ಹೀಗಾಗಿ ಕೆರೆಯನ್ನೇ ನಂಬಿಕೊಂಡಿರುವ ಸುತ್ತಲಿನ ಹತ್ತು ಹದಿನೈದು ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದೆ. ಕುಡಿಯಲು ಶುದ್ಧ ನೀರಿಲ್ಲ. ಕೃಷಿ ಚಟುವಟಿಕೆಗಳ ಪರಿಸ್ಥಿತಿಯಂತೂ ಹೇಳತೀರದು.

ಜೆಎನ್ ಕೋಟೆ ಕೆರೆ ಇತಿಹಾಸ: 135 ಹೆಕ್ಟೇರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜೆಎನ್ ಕೋಟೆ ಕೆರೆಗೆ ರೈತರ ಪ್ರಕಾರ 300 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಕುರುಮರಡಿಕೆರೆ ತುಂಬಿ ಕೋಡಿ, ನರೇನಾಳ್ ಗ್ರಾಮ ವ್ಯಾಪ್ತಿಯ ಎತ್ತರ ಪ್ರದೇಶಗಳೇ ಕೆರೆ ಅಚ್ಚುಕಟ್ಟು ಪ್ರದೇಶ. ಕುರುಮರಡಿಕೆರೆ ಕೆರೆ ತುಂಬಿ ಹರಿದರೆ, ಆ ನೀರು ಹಳ್ಳದ ರೂಪದಲ್ಲಿ ಪಾಲನಹಳ್ಳಿ, ರಾಷ್ಟ್ರೀಯ ಹೆದ್ದಾರಿ ದಾಟಿ, ಕ್ಯಾದಿಗ್ಗೆರೆ ಆಸುಪಾಸಿನಲ್ಲಿ ಹರಿಯುತ್ತಾ ಜೆಎನ್ ಕೋಟೆ ಸೇರುವ ವ್ಯವಸ್ಥೆ ಇದೆ.

1985-86ರಕ್ಕೆ ಮುನ್ನ ಮಳೆಗಾಲ ಉತ್ತಮವಾಗಿತ್ತು. ಪ್ರತಿ ವರ್ಷ ಕೆರೆ ತುಂಬುತ್ತಿತ್ತು. ತೆಂಗು, ಭತ್ತ, ತರಕಾರಿ, ಹೂವು ಎಲ್ಲ ಸಮೃದ್ಧವಾಗಿತ್ತು. 86ರನಂತರ ಮಳೆ ಕ್ಷೀಣಿಸಿತು. ಕೊಳವೆಬಾವಿಗಳು ಹೆಚ್ಚಾದವು. ಅಂತರ್ಜಲ ಕುಸಿಯಲಾರಂಭಿಸಿತು. ಆದರೂ ಮಳೆಗಾಲದಲ್ಲಿ ಕೆರೆ ತುಂಬಿರುತ್ತಿತ್ತು. ‘15 ವರ್ಷಗಳ ಹಿಂದೆ ಕೆರೆ ಕೋಡಿಬಿದ್ದಿದ್ದು ನೆನಪಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಕ್ವಾರಿಯಾಗುವ ಮುಂಚೆಯೂ ಕೆರೆ ತುಂಬುತ್ತಿತ್ತು. ಆದರೆ ಕ್ವಾರಿ ನಡೆದು ಬೃಹತ್ ಕೆರೆಗಳು ನಿರ್ಮಾಣವಾಗಿ, ಸುತ್ತಲಿನ ಜಮೀನಿನವರು ಹಳ್ಳದ ನೀರನ್ನು ಕ್ವಾರಿಗೆ ತಿರುಗಿಸಲು ಶುರು ಮಾಡಿದ ಮೇಲೆ, ಕೆರೆಗೆ ಮಳೆ ನೀರು ಹರಿಯುವುದೇ ನಿಂತುಹೋಯಿತು’ ಎನ್ನುತ್ತಾರೆ ಗ್ರಾಮದ ಮುಖಂಡ ಮಂಜುನಾಥ್.

ಶ್ರಮದಾನದಿಂದ ಹಳ್ಳ ದುರಸ್ತಿ: ಅಚ್ಚುಕಟ್ಟು ಪ್ರದೇಶ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಿಗೆ ಸೇರುತ್ತದೆ. ಹೀಗೆ ಹಳ್ಳಗಳು ಒತ್ತುವರಿಯಾಗಿ, ನೀರನ್ನು ಕ್ವಾರಿಗೆ ತಿರುಗಿಸುವುದು ಗೊತ್ತಾದ ಮೇಲೆ ಗ್ರಾಮಸ್ಥರೆಲ್ಲ ಎರಡು ತಾಲ್ಲೂಕಿನ ತಹಶೀಲ್ದಾರರಿಗೆ ದೂರು ನೀಡಿ, ಸಮೀಕ್ಷೆ ನಡೆಸಿ ಹಳ್ಳಗಳನ್ನು ಗುರುತಿಸುವಂತೆ ಮನವಿ ಮಾಡಿದ್ದಾರೆ.

ಈ ನಡುವೆ ಜೆಎನ್ ಕೋಟೆ ಗ್ರಾಮಸ್ಥರೆಲ್ಲ ಹಳ್ಳ ಸರಿಪಡಿಸಲು ಪ್ರಯತ್ನಿಸಿ ಸುತ್ತಲಿನ ಜಮೀನಿನವರ ವಿರೋಧಕ್ಕೂ ಗುರಿಯಾಗಿದ್ದಾರೆ. ಹಳ್ಳಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದಾರೆ. ಇದಾವುದೂ ಸಾಧ್ಯವಾಗದಿದ್ದಾಗ, ಸ್ವತಃ ಗ್ರಾಮಸ್ಥರೆಲ್ಲ ಸೇರಿ ನಾಲ್ಕು ದಿನ ಶ್ರಮದಾನ ಮಾಡಿ, ಲಕ್ಷದವರೆಗೂ ಹಣ ಖರ್ಚು ಮಾಡಿ ಹಳ್ಳಗಳಿಗೆ ತಡೆಗೋಡೆ ನಿರ್ಮಿಸಿದ್ದಾರೆ. ಆದರೂ ಇದು ತಾತ್ಕಾಲಿಕ ರಚನೆಯಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಬಹುದು. ಶಾಶ್ವತ ತಡೆಗೋಡೆ ಬೇಕು ಎನ್ನುತ್ತಾರೆ ಗ್ರಾಮಸ್ಥರು

ಸರ್ವೆ ಮಾಡಿಸಿ, ಹಳ್ಳ ಗುರುತಿಸಿ: ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಹಳ್ಳಗಳಿವೆ. ಒಂದು ಹಳ್ಳದ ನೀರನ್ನು ಜಮೀನಿನ ರೈತರು ಕ್ವಾರಿಯ ಹೊಂಡಕ್ಕೆ ತಿರುವುತ್ತಾರೆ. ಮತ್ತೊಂದು ಹಳ್ಳಕ್ಕೆ ತಡೆ ಹಾಕುತ್ತಾರೆ. ಪ್ರಶ್ನಿಸಿದರೆ, ‘ಇಲ್ಲಿ ಹಳ್ಳವೇ ಇಲ್ಲ’ ಎಂದು ವಾದಿಸುತ್ತಾರೆ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಏರಿ, ತಹಶೀಲ್ದಾರ್ ವರೆಗೂ ಹೋಗಿ ಸ್ಥಳ ಪರಿಶೀಲನೆಯಾಗಿದೆ. ಅಧಿಕಾರಿಗಳು, ಸಮೀಕ್ಷೆ ಮೂಲಕ ಕಾಲುವೆ ಗುರುತಿಸಬೇಕು ಎಂದಿದ್ದಾರೆ. ಆದರೆ ಇಲ್ಲಿವರೆಗೂ ಕೆಲಸವಾಗಿಲ್ಲ ಎಂದು ಹೇಳಿದ ಅವರು, ಹಳ್ಳ ಗುರುತಿಸಿ ನಕ್ಷೆ ಮಾಡಿಸಿದರೆ ಸಾಕು, ಮುಂದಿನ ಕೆಲಸ ಬೇರೆ ಇಲಾಖೆಯವರು ಮಾಡುತ್ತಾರೆ’ ಎಂದು ಗ್ರಾಮದ ಜಯಕುಮಾರ್, ಸಿ.ಎಸ್.ಗೌಡ್ರು ಅಭಿಪ್ರಾಯಪಡುತ್ತಾರೆ.

ಹಳ್ಳಗಳು ಸರಿ ಹೋದರೆ: ಹಳ್ಳಗಳಿಂದ ನೀರು ಕ್ವಾರಿಗೆ ಹರಿಯದಂತೆ ತಡೆಗೋಡೆ ಮಾಡಿಸಿ, ತಡೆ ಮಾಡಿರುವ ಹಳ್ಳಗಳನ್ನು ಸರಿಪಡಿಸಿದರೆ, ಜೆಎನ್ ಕೋಟೆ ಕೆರೆಗೆ ಸರಾಗವಾಗಿ ಮಳೆ ನೀರು ಹರಿಯುತ್ತದೆ. ಕನಿಷ್ಠ 15 ರಿಂದ 20 ಹಳ್ಳಿಯವರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಫ್ಲೋರೈಡ್ ಸಮಸ್ಯೆ ಕಡಿಮೆಯಾಗುತ್ತದೆ. ‘ಕೆರೆಯಲ್ಲಿ ನೀರು ನಿಂತರೆ, ಸುತ್ತಲಿನ ಕೊಳವೆಬಾವಿಗಳು ಮರುಪೂರಣ ಆಗುತ್ತವೆ. ಕೊಳವೆಬಾವಿಗಳಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ. ಹಳ್ಳಗಳು ಸರಿಯಾದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುತ್ತದೆ’ ಎಂಬುದು ಗ್ರಾಮದ ಜಯಕುಮಾರ್ ಅವರ ಅಭಿಪ್ರಾಯ.

ನಾರಿ ಸುವರ್ಣ ಕುರಿ ತಳಿ

ಚಿತ್ರದುರ್ಗ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯದ ಮೂರು ಜಿಲ್ಲೆಗಳ 15 ರೈತರಿಗೆ ಅವಳಿ ಮರಿ ಸಂತಾ ನದ ನಾರಿ ಸುವರ್ಣ ಹೊಸ ಕುರಿ ತಳಿ ನೀಡಲಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಕುರಿಗಳಿರುವ ತುಮಕೂರು, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ತಲಾ ಐದು ಗ್ರಾಮಗಳ ರೈತರಿಗೆ ಹೊಸ ತಳಿಗಳ ಕುರಿ ಮರಿ ವಿತರಿಸಲಾಗಿದೆ.

ಪ್ರಾಯೋಗಿಕ ಯೋಜನೆ : ಏಳು ತಿಂಗಳ ಹಿಂದೆ ಮೂರು ಜಿಲ್ಲೆಗಳ  ಪಶುವೈದ್ಯಾಧಿ ಕಾರಿಗಳ ತಂಡವೊಂದು ಮಹಾ ರಾಷ್ಟ್ರದ ಸತಾರ ಜಿಲ್ಲೆಯ ಪಲ್ಟಾನ ಗ್ರಾಮಕ್ಕೆ ಎರಡು ದಿನಗಳ ಭೇಟಿ ನೀಡಿ ‘ನಾರಿ ಸುವರ್ಣ ತಳಿ’ ಕುರಿತು ಮಾಹಿತಿ ಸಂಗ್ರಹಿ ಸಿದೆ. ನಂತರ ಕುರಿ ಮತ್ತು ಉಣ್ಣೆ ಅಭಿ ವೃದ್ಧಿ ನಿಗಮ ಫಲಾನುಭವಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಈ ಹೊಸ ತಳಿಯ ಕುರಿ ಮರಿಗಳನ್ನು ಖರೀದಿಸಿ ಮೂರು ಜಿಲ್ಲೆಗಳಲ್ಲಿ ವಿತರಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮದಕರಿಪುರ, ಕಕ್ಕೆಹರವು, ವಿಜಾಪುರ ಸಮೀಪದ ಕಿಟ್ಟದಹಳ್ಳಿ, ಕೋಡಯ್ಯನ ಹಟ್ಟಿ ಮತ್ತು ಬಚ್ಚಬೋರಯ್ಯನ­ಹಟ್ಟಿಯಲ್ಲಿ ಆಯ್ದ ಫಲಾನುಭವಿಗಳಿಗೆ ಈ ತಳಿಗಳನ್ನು ನೀಡಲಾಗಿದೆ.

ಫಲಾನುಭವಿಗಳಿಗೆ ತರಬೇತಿ : ಪಲ್ಟಾನ ಗ್ರಾಮದ ನಿಂಬ್ಕರ್ ಕೃಷಿ ಸಂಶೋಧನಾ ಸಂಸ್ಥೆ ಎಂಬ ಸ್ವಯಂ ಸೇವಾ ಸಂಸ್ಥೆಯ ತಜ್ಞರು ಈ ಕುರಿ ತಳಿ ಅಭಿವೃದ್ಧಿಪಡಿಸಿ ದ್ದಾರೆ. ‘ಪಶ್ಚಿಮ ಬಂಗಾಳದ ಸುಂದರ ಬನ್ ಪ್ರದೇಶದ ‘ಗೆರೋಲ್’ ಎಂಬ ಅವಳಿ ಮರಿ ಸಂತಾನದ ಕುರಿತ ತಳಿಯ ವಂಶವಾಹಿನಿಯನ್ನು (ಜೀನೊ ಟೈಪ್) ಸಾಮಾನ್ಯ ಕುರಿ ತಳಿಗೆ ಸೇರಿಸಿ ನಾರಿ ಸುವರ್ಣ ತಳಿ ಅಭಿವೃದ್ಧಿಪಡಿಸಲಾಗಿದೆ’ ಎಂದು ತಾಲ್ಲೂಕಿನ ಪಶು ವೈದ್ಯಾಧಿಕಾರಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

‘ಸದ್ಯ ಹೊಸ ಕುರಿ ತಳಿಯನ್ನು ಜಿಲ್ಲೆಯ ಐವರು ರೈತರಿಗೆ ವಿತರಿಸಿದ್ದೇವೆ. ಕುರಿ ತಳಿ ವಿತರಣೆಗೂ ಮುನ್ನ ಕುರಿಸಾಕಾ ಣೆದಾರರನ್ನು ಪಲ್ಟಾನ ಗ್ರಾಮಕ್ಕೆ ಕರೆದೊಯ್ದು, ನಾರಿ ಸುವರ್ಣ ಕುರಿ ತಳಿಯ ಸಾಕಾಣಿಕೆ, ಆಹಾರ, ಪೋಷಣೆ, ನಿರ್ವ ಹಣೆ ಕುರಿತು ತರಬೇತಿ ನೀಡಲಾಗಿದೆ’ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲೆಯ ಸಹಾಯಕ ನಿರ್ದೇಶ ಡಾ. ಬಿ.ವಿ.ಪ್ರತಾಪ್ ರೆಡ್ಡಿ ವಿವರಿಸಿದರು.

ಒಣಹವೆಗೆ ಒಗ್ಗುವ ತಳಿ : ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಸತಾರ ಜಿಲ್ಲೆಯ ಹವಾಮಾನ ಒಂದೇ ರೀತಿ ಇದ್ದು, ಒಣಹವೆಗೆ ಹೊಂದಿಕೊಂಡು ಬೆಳೆಯುತ್ತವೆ. ಪ್ರಾಯೋಗಿಕ ಯೋಜನೆ­ಯಾಗಿ­ರು­ವುದ ರಿಂದ, ಸದ್ಯಕ್ಕೆ ಕುರಿಗಾಹಿಗಳಿಗೆ ಈ ಕುರಿ ಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇಯಿಸು ವಂತೆ ತರಬೇತಿ ನೀಡಿದ್ದೇವೆ. ಆರು ತಿಂಗ ಳಲ್ಲಿ ಈ ಕುರಿಗಳು ಮರಿ ಹಾಕಲಿದ್ದು, ಫಲಿ ತಾಂಶ ಆಧರಿಸಿ ಮಂದೆ ಯಲ್ಲಿ ಬಿಟ್ಟು ಮೇಯಿಸಲು ಸೂಚಿಸಲಾಗುತ್ತದೆ’ ಎಂದು ಡಾ.ಪ್ರಸನ್ನ ವಿವರಿಸಿದರು.

ಇದು ಯೋಜನೆಯ ಪ್ರಥಮ ಹಂತವಾಗಿದೆ. ಈಗ ಫಲಾನುಭವಿಗಳಿಗೆ ನೀಡಿರುವ ಕುರಿಗಳು ಮುಂದಿನ ಆರೇಳು ತಿಂಗಳಲ್ಲಿ ಮರಿ ಹಾಕಲಿವೆ. ಈ ಪ್ರಯೋಗದ ಫಲಿತಾಂಶ ಆಧರಿಸಿ, ನಾರಿ ಸುವರ್ಣ ತಳಿಯನ್ನು ರಾಜ್ಯದಾದ್ಯಂತ ವಿಸ್ತರಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ನಿಷ್ಕ್ರಿಯ ಕೊಳವೆಬಾವಿಗಳಿಗೆ ಜಲಮರುಪೂರಣ

ಚಿತ್ರದುರ್ಗಜಿಲ್ಲೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿಷ್ಕ್ರಿಯಗೊಂಡಿರುವ ಕೊಳವೆಬಾವಿಗಳಿಗೆ ಜಲ­ಮರು­ಪೂರಣ (ಮಳೆ ನೀರು ರೀಚಾರ್ಜ್) ವಿಧಾನ ಅಳವಡಿಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯ್ತಿ ಮುಂದಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ಎಂಎನ್ಆರ್ಇಜಿ) ನಿಷ್ಕ್ರಿಯ ಕೊಳವೆ­ಬಾವಿ­ಗಳಿಗೆ ಜಲಮರುಪೂರಣ ವಿಧಾನ ಅಳವಡಿಸುವ ಕಾಮಗಾರಿಯನ್ನು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗ ಕೈಗೆತ್ತಿಕೊಂಡಿದೆ.

ಆರಂಭದಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಿಂದ 10 ಕೊಳವೆಬಾವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಮೊದಲ ಹಂತವಾಗಿ ಒಂದಷ್ಟು ಮಾದರಿಗಳನ್ನು ಸಿದ್ಧಪಡಿಸಿ, ಅದರಲ್ಲಿನ ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ಉಳಿದ ಕೊಳವೆಬಾವಿಗಳಿಗೂ ಈ ವಿಧಾನ ಅಳವಡಿಸಲು ನಿರ್ಧರಿಸಲಾಗಿದೆ.

ತರಬೇತಿ, ಕಾರ್ಯಾಗಾರ : ಜಲಮರುಪೂರಣ ಯೋಜನೆ ಆರಂಭಕ್ಕೆ ಮುನ್ನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಈ ಯೋಜನೆ ನಿರ್ವಹಿಸುವ ತಂಡದವರಿಗೆ ಕಾರ್ಯಾಗಾರ ನಡೆಸಿ, ಜಲಮರುಪೂರಣ ಕಾಮಗಾರಿ ತರಬೇತಿ ನೀಡಲಾಗಿದೆ. ಆರಂಭದಲ್ಲಿ ಒಂದೊಂದು ಮಾದರಿ ಸಿದ್ಧಪಡಿಸಲು ಜಿಲ್ಲಾ ಪಂಚಾಯ್ತಿ ಸಿಇಒ ಸೂಚಿಸಿದ್ದಾರೆ. ಅದರಂತೆ ಚಿತ್ರದುರ್ಗ ತಾಲ್ಲೂಕು ದೊಡ್ಡ­ಸಿದ್ದವ್ವನ­ಹಳ್ಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಕೊಳವೆಬಾವಿ ಸಿದ್ಧವಾಗಿದೆ.

ಏನಿದು ಜಲಮರುಪೂರಣ?: ನಿಷ್ಕ್ರಿಯಗೊಂಡಿರುವ ಕೊಳವೆಬಾವಿಗಳನ್ನು ಜಲಮರುಪೂರಣ ಕಾರ್ಯಕ್ಕಾಗಿ ಆಯ್ಕೆ ಮಾಡಿ­ಕೊಳ್ಳ­­ಲಾಗುತ್ತಿದೆ. ತಾಂತ್ರಿಕ ವಿಭಾಗದವರ ನಿರ್ದೇಶನದಂತೆ ಕೊಳವೆಬಾವಿ ಸುತ್ತ ಇಪ್ಪತ್ತು ಅಡಿ ಆಳದ ಗುಂಡಿ ತೆಗೆದು, ಸುತ್ತ ದಪ್ಪ ಕಲ್ಲು, ವಿವಿಧ ಗಾತ್ರಗಳ ಜಲ್ಲಿ, ಮರಳು ತುಂಬಿಸ­ಲಾ­ಗು­ತ್ತಿದೆ. ಕೊಳವೆಬಾವಿ ಸಮೀಪ­ದಲ್ಲಿ ಇಳಿಜಾರು ಪ್ರದೇಶವನ್ನು ಗುರುತಿಸಿ, ಅಲ್ಲಿಂದ ಮಳೆ ನೀರು ಜಲಮರುಪೂರಣ ರಚನೆಯತ್ತ ಹರಿದುಬರುವಂತೆ ಮಾಡಲಾಗುತ್ತಿದೆ.

‘ಭವಿಷ್ಯದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸುವುದು ಕಡಿಮೆಯಾಗಬೇಕು. ಇರುವ ಕೊಳವೆಬಾವಿಗಳಿಗೆ ಮರುಜೀವ ತುಂಬಬೇಕು. ಪರಿಸರ ರಕ್ಷಿಸಬೇಕೆಂಬ ಉದ್ದೇಶದೊಂದಿಗೆ ನಿಷ್ಕ್ರಿಯ ಕೊಳವೆ ಬಾವಿಗಳನ್ನೇ ಜಲಮರುಪೂರಣ ವಿಧಾನ ಅಳವಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಮಂಜುಶ್ರೀ.

ಎಲ್ಲ ತಾಲ್ಲೂಕುಗಳಲ್ಲೂ…
ವೇದಾವತಿ ನದಿ ಪುನಶ್ಚೇತನ ಕಾರ್ಯ ನಡೆಯುತ್ತಿರುವ ಹೊಸದುರ್ಗ ತಾಲ್ಲೂಕು ಹೊರತುಪಡಿಸಿ, ಉಳಿದ ಐದು ತಾಲ್ಲೂಕುಗಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಕೊಳವೆಬಾವಿ ಕೈಗೆತ್ತಿಕೊಳ್ಳಲಾಗುತ್ತಿದೆ. ವೇದಾವತಿ ನದಿ ಪುನಶ್ಚೇತನ ಯೋಜನೆಯಲ್ಲೂ ಜಲಮರುಪೂರಣ ವಿಧಾನ ಅಳವಡಿಕೆಗೆ ಅವಕಾಶವಿರುವುದರಿಂದ ಹೊಸದುರ್ಗ ತಾಲ್ಲೂಕಿನಲ್ಲಿ 5 ಕೊಳವೆ ಬಾವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಂದು ಸಿಇಒ ಮಂಜುಶ್ರೀ ಅವರು ಸ್ಪಷ್ಟಪಡಿಸಿದರು.

ಬಜೆಟ್‌ಗೆ ಅನುಮೋದನೆ ಸಿಕ್ಕಿಲ್ಲ
ಪ್ರತಿ ಕೊಳವೆಬಾವಿಗೆ ಜಲಮರುಪೂರಣ ವಿಧಾನ ಅಳವಡಿಸಲು (ಎರಡು ವಿಧಾನಗಳಲ್ಲಿ) ₨ 63 ರಿಂದ ₨ 68 ಸಾವಿರದಷ್ಟು ವೆಚ್ಚವಾಗಬಹುದು ಎಂದು ಎಂಜಿನಿಯರಿಂಗ್ ವಿಭಾಗದವರು ಅಂದಾಜು ವೆಚ್ಚ ನೀಡಿದ್ದಾರೆ. ವೇದಾವತಿ ನದಿ ಪುನಶ್ಚೇತನ ಯೋಜನೆಯಲ್ಲೂ ಈ ಕಾರ್ಯಕ್ಕಾಗಿ ₨ 65 ಸಾವಿರ ನಿಗದಿಪಡಿ­ಸಲಾ­ಗಿದೆ. ಸದ್ಯ ಈ ಯೋಜನೆಯ ಪ್ರಸ್ತಾವನೆಯನ್ನು ಆರ್‌ಡಿಪಿಆರ್‌ಗೆ ಕಳಿಸಿದ್ದೇವೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದರೆ, ಇದು ಕಳೆದ ವರ್ಷವೇ ಆಗಬೇಕಾದ ಕೆಲಸವಾಗಿದ್ದರಿಂದ, ಈ ವರ್ಷದ ಮಳೆಗಾಲದ ಒಳಗೆ ಆಗಲಿ ಎಂದು ಕಾಮಗಾರಿ ಶುರು ಮಾಡಿಸಿರುವುದಾಗಿ ಮಂಜುಶ್ರೀ ವಿವರಿಸಿದರು.

‘ಈ ಯೋಜನೆ ರಾಜ್ಯದೆಲ್ಲೆಡೆ ಚಾಲ್ತಿಯಲ್ಲಿರುವ ಕುರಿತು ಮಾಹಿತಿ ಇಲ್ಲ. ಆದರೆ, ಚಿತ್ರದುರ್ಗ­ದಂತಹ ಕಡಿಮೆ ಮಳೆ ಬೀಳುವ ಪ್ರದೇಶಕ್ಕೆ ಈ ವಿಧಾನ ಅನಿವಾರ್ಯ. ಆದ್ದರಿಂದ ಮಳೆಗಾಲಕ್ಕೆ ಮುನ್ನವೇ ಕಾಮಗಾರಿಗೆ ಚಾಲನೆ ನೀಡಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಸಿರಿಧಾನ್ಯಗಳೆಂಬ ಪರಿಪೂರ್ಣ ಆಹಾರ

ಸಿರಿಧಾನ್ಯಗಳ ಪರಿಪೂರ್ಣ ಊಟ

‘ನಾವೆಲ್ಲ  ಬಾಣಂತನದಾಗ ನವಣಕ್ಕಿ, ಸಾವಕ್ಕಿ ಅನ್ನ-ರೊಟ್ಟಿ ಉಂಡು; ಮೂಲಂಗಿ, ಹಕ್ಕರಿಕಿ ಸೊಪ್ಪು ತಿಂತಿದ್ವಿ. ನನ್ನ ಗಂಡ ನವಣಕ್ಕಿ ಕುಟ್ಟೋನು. ನಾನು ಹಸನು ಮಾಡೋಳು. ಮುಂಜಾನೆ ಉಂಡ್ರೆ ಸಂಜಿಮಟ ಹಸಿವಾಗ್ತಿರಲಿಲ್ಲ. ಈಗಿನೋರು ನೆಲ್ಲಕ್ಕಿ ಉಣ್ತಾರ. ಅದನ್ನು ದಿವಸಕ್ಕೆ ಮೂರು ಸಾರಿ ಉಂಡ್ರೂ ಹಸಿವು ತಡೆಯಾಕಿಲ್ರಿ’

ಹಾವೇರಿ ಜ್ಲಿಲೆಯ ರಾಣೆಬೆನ್ನೂರು ತ್ಲಾಲೂಕಿನ ಕಾಕೋಳದ ಹೇಮವ್ವ ಲಮಾಣಿ ಬಾಣಂತನದ ಊಟದ್ಲಲಿ ಸಾವೆ, ನವಣಕ್ಕಿ ಬಳಕೆ, ಅದರೊಳಗಿನ ಪೌಷ್ಟಿಕತೆಯನ್ನು ಸೊಗಸಾಗಿ ಬಿಚ್ಚಿಡುತ್ತಾರೆ. ಹೇಮವ್ವ ಅಷ್ಟೇ ಅಲ, ಉತ್ತರ ಕರ್ನಾಟಕದ ಬಹುಪಾಲು ಹಳ್ಳಿಗರು ಸಿರಿಧಾನ್ಯಗಳ ಕುರಿತು ಇಂಥ್ದದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನವಣೆ, ಸಾಮೆ, ಸಜ್ಜೆ, ಆರಕ, ರಾಗಿಯಂತಹ ಸಿರಿಧಾನ್ಯ(ಕಿರುಧಾನ್ಯ)ಗಳ ಅಡುಗೆಗಳೆಂದರೆ ಹಾಗೆ. ರುಚಿ ಹೆಚ್ಚು, ಪೌಷ್ಟಿಕಾಂಶದ್ಲಲೂ ತುಸು ಮುಂದು. ಈ ಧಾನ್ಯಗಳ ಒಂದು ಉಂಡೆ, ಅರ್ಧ ರೊಟ್ಟಿ, ಅರ್ಧ ಲೋಟ ಪಾಯಸ ದೀರ್ಘಕಾಲ ಹಸಿವನ್ನು ಮುಂದೂಡುತ್ತವೆ. ಹೊಟ್ಟೆಗೆ ತಂಪು ನೀಡಿ, ದೇಹಕ್ಕೆ ಶಕ್ತಿ ತುಂಬುತ್ತವೆ. ಅದಕ್ಕಾಗಿಯೇ ಹಿರಿಯರು ಈ ಖಾದ್ಯಗಳನ್ನು ಸೇವಿಸಿದರೆ ‘ಜೀವಕ್ಕೆ ತಂಪು, ಜುಟ್ಟಿಗೆ ಭದ್ರ’ ಎನ್ನುತ್ತಾರೆ.

ಬರಗಾಲ ಎದರಿಸುತ್ತಾ ಅರಳುವ ಪ್ರತಿ ಕಿರುಧಾನ್ಯದ ಒಡಲ್ಲಲಿ ಭರಪೂರ ಪೋಷಕಾಂಶಗಳಿವೆ. ಆಹಾರ ತಜ್ಞರ ಪ್ರಕಾರ ಕಿರುಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದ್ಲಲಿ ಪ್ರೊಟೀನ್, ವಿಟಮಿನ್ ಹಾಗೂ ಖನಿಜಗಳನ್ನು ಹೊಂದಿವೆ. ಹಾಗಾಗಿ ಈ ಧಾನ್ಯಗಳು ಆಹಾರವಷ್ಟೇ ಅಲ. ಔಷಧವೂ ಹೌದು.

ಮಿಲ್ಲೆಟ್ಸ್ ಗೆ ಹೊಸ ಪೋಷಾಕು

ಸಿರಿಧಾನ್ಯಗಳಲ್ಲಿ ರೋಗಗಳನ್ನು ನಿಯಂತ್ರಿಸುವ ಫಿನೋಲಿಕ್ ಆಸಿಡ್, ಫ್ಲೆವನೋಯ್ಡ್ಸ್ ಹಾಗೂ ಫೈಟೊ ಆಲೆಕ್ಸಿನ್‌ನಂಥ ಫೈಟೊನ್ಯೂಟ್ರಿಯಂಟ್ಸ್‌ಗಳಿವೆ. ಅವು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್‌ಗಳು. ಸಿರಿಧಾನ್ಯಗಳು ಕೇವಲ ಕಾರ್ಬೊಹೈಡ್ರೇಟ್ ಮಾತ್ರವ್ಲಲ; ಉತ್ತಮ ಗುಣಮಟ್ಟದ ಕೊಬ್ಬನ್ನೂ ಪೂರೈಸುತ್ತವೆ. ‘ಉದಾಹರಣೆಗೆ ಸಜ್ಜೆಯ್ಲಲಿರುವ ೫.೩ ಕೊಬ್ಬಿನ್ಲಲಿ ಶೇ ೨.೮ರಷ್ಟು ಒಮೆಗಾ-೩ ಕೊಬ್ಬಿನಾಮ್ಲ(ಫ್ಯಾಟಿ ಆಸಿಡ್)’ ಇರುತ್ತದೆ ಎನ್ನುತ್ತಾರೆ ಆಹಾರ ತಜ್ಞ ಕೆ.ಸಿ.ರಘು.

ಸಿರಿಧಾನ್ಯಗಳ ಕಾರ್ಯ ವೈಖರಿ: ಸಿರಿಧಾನ್ಯಗಳ ಆಹಾರ ಸೇವಿಸಿದ ನಂತರ ನಿಧಾನವಾಗಿ ಜೀರ್ಣವಾಗುತ್ತಾ, ದೇಹಕ್ಕೆ ಶಕ್ತಿಯನ್ನು ಪೂರೈಸುತ್ತವೆ. ನೋಡಿ, ನಮ್ಮ ದೇಹಕ್ಕೆ ಶಕ್ತಿ ಸರಬರಾಜಾಗುವುದು – ಕಾರ್ಬೊಹೈಡ್ರೇಟ್ಸ್ + ಪ್ರೋಟಿನ್ಸ್ + ಖನಿಜಾಂಶಗಳಿಂದ. ಅದರ‍್ಲಲೂ ಕಾರ್ಬೊಹೈಡ್ರೇಟ್‌ಗಳಿಂದ ಹೆಚ್ಚು ಶಕ್ತಿ (ಶೇ ೬೦-೯೦ರಷ್ಟು) ಪೂರೈಕೆಯಾಗುತ್ತದೆ. ಇವುಗಳ್ಲಲಿ ಪಿಷ್ಠದ(ಸ್ಟಾರ್ಚ್) ಅಂಶ ಅಧಿಕವಾಗಿರುತ್ತದೆ. ಈ ಪಿಷ್ಠದ್ಲಲಿ ಅಮಿಲೊ ಪೆಕ್ಟಿನ್ ಮತ್ತು ಅಮಿಲೋಸ್ ಎಂಬ ಎರಡು ರಾಸಾಯನಿಕಗಳಿರುತ್ತವೆ. ಅಮಿಲೋಸ್ – ರಕ್ತಕ್ಕೆ ನಿಧಾನವಾಗಿ ಸಕ್ಕರೆಯನ್ನು ಪೂರೈಸುತ್ತದೆ. ಸಿರಿಧಾನ್ಯಗಳ್ಲಲಿ ಅಮಿಲೋಸ್ ಪ್ರಮಾಣ ಹೆಚ್ಚಿರುವುದರಿಂದ ಆಹಾರ ಪಚನವಾಗಿ, ಶಕ್ತಿಯಾಗಿ ಪರಿವರ್ತನೆಯಾಗುವವರೆಗೂ ರಕ್ತಕ್ಕೆ ಸೇರುವ ಸಕ್ಕರೆ ಪ್ರವಾಹವನ್ನು ನಿಯಂತ್ರಿಸುತ್ತದೆ.

ಪ್ರಸ್ತುತ ನಾವು ಸೇವಿಸುತ್ತಿರುವ ಪಾಲಿಷ್ ಮಾಡಿದ ಗೋಧಿ, ಅಕ್ಕಿಯಂತಹ ಆಹಾರದ್ಲಲಿ ಪೆಕ್ಟಿನ್ ಅಂಶ ಹೆಚ್ಚು, ಅಮಿಲೋಸ್ ಕಡಿಮೆ. ಪರಿಣಾಮ ಸೇವಿಸಿದ ಆಹಾರ ಶೀಘ್ರ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತದೆ. ಆಹಾರದ್ಲಲಿರುವ ಸಕ್ಕರೆ ಪ್ರಮಾಣ ವೇಗವಾಗಿ ಹಾಗೂ ನೇರವಾಗಿ ರಕ್ತ ಸೇರುತ್ತದೆ. ರಕ್ತದ್ಲಲಿ ಸಕ್ಕರೆ ಹೆಚ್ಚಾಗಿ ಮಧುಮೇಹ ರೋಗ ಉಲ್ಬಣಕ್ಕೆ ಕಾರಣವಾಗುತ್ತದೆ. ಕೊಬ್ಬು ಹೆಚ್ಚಾಗಿ ‘ರಕ್ತದ ಒತ್ತಡ’ಕ್ಕೆ ಕಾರಣವಾಗುತ್ತದೆ’- ಎಂದು ರಘು ವಿವರಿಸುತ್ತಾರೆ. ‘ಇದೇ ಕಾರಣಗಳಿಂದಲೇ ಹಿಂದಿನ ಕಾಲದ್ಲಲಿ ನವಣೆ, ಸಾಮೆ, ಸಜ್ಜೆಯಂತಹ ಸಿರಿಧಾನ್ಯಗಳ ಆಹಾರ ಉಂಡು ಬೆಳೆದವರಿಗೆ ಮಧುಮೇಹ, ರಕ್ತದೊತ್ತಡದಂತಹ ಖಾಯಿಲೆಗಳು ಸೋಕುತ್ತಿರಲ್ಲಿಲ. ಮಾತ್ರವ್ಲಲ, ದೀರ್ಘಾಯುಷಿಗಳಾಗಿರುತ್ತ್ದಿದರು’ ಎನ್ನುವುದು ಅವರ ಅಭಿಪ್ರಾಯ.

ಪೌಷ್ಟಿಕಾಂಶ ಪರೀಕ್ಷೆ, ಫಲಿತಾಂಶ :

‘ಸಿರಿಧಾನ್ಯಗಳ್ಲಲಿ ಇಷ್ಟ್ಲೆಲ ಪೋಷಕಾಂಶಗಳು, ಪ್ರೋಟಿನ್, ವಿಟಮಿನ್ ಇರುತ್ತವೆ ಎಂದು ಹೇಗೆ ನಂಬುವುದು’- ಇದು ಇವತ್ತಿನ ಬ್ದುದಿವಂತ ನಾಗರಿಕ ಸಮಾಜ ಕೇಳುವ ಪ್ರಶ್ನೆ. ಇಂಥ ಪ್ರಶ್ನೆಗಳನ್ನಿಟ್ಟುಕೊಂಡೇ ಬೆಂಗಳೂರಿನ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ಪ್ರಿಸ್ಟೀನ್ ಆರ್ಗಾನಿಕ್ಸ್ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದವರು ಮೊಟ್ಟ ಮೊದಲ ಬಾರಿಗೆ ಸಿರಿಧಾನ್ಯಗಳನ್ನು ಪರೀಕ್ಷೆಗೆ ಒಳಪಡಿಸಿ ಅವುಗಳ್ಲಲಿರುವ ಪೌಷ್ಟಿಕಾಂಶ, ನಾರು ಮತ್ತು ಕಬ್ಬಿಣದ ಅಂಶಗಳನ್ನು ದಾಖಲಿಸ್ದಿದಾರೆ.

ಆ ಪ್ರಕಾರ ನವಣೆ, ಸಾಮೆ, ಹಾರಕ ಮತ್ತು ರಾಗಿಯ್ಲಲಿ ಡಯಟರಿ ಫೈಬರ್‌ಗಳು (ನಾರಿನಂಶ) ಹೆಚ್ಚಾಗಿರುವುದನ್ನು ಗುರುತಿಸಲಾಗಿದೆ. ಈ ಧಾನ್ಯಗಳ ಖಾದ್ಯಗಳು ಸಕ್ಕರೆಯನ್ನು ನಿಧಾನವಾಗಿ ಹೀರಿಕೊಂಡು, ರಕ್ತದ್ಲಲಿ ಕರಾರುವಕ್ಕಾಗಿ ಬಿಡುಗಡೆ ಮಾಡುತ್ತವೆ. ಇದರಿಂದ ಪಚನಕ್ರಿಯೆ ನಿಧಾನವಾಗಿ, ದೇಹಕ್ಕೆ ಶಕ್ತಿ ಸರಬರಾಜಾ ಗುತ್ತದೆ. ಅದೇ ರೀತಿ ಪೌಷ್ಟಿಕಾಂಶಗಳಂತೆ ಸಿರಿಧಾನ್ಯಗಳ್ಲಲಿರುವ ಖನಿಜಾಂಶಗಳು ಕೂಡ ಗಮನಾರ್ಹವಾಗಿವೆ. ೧೦೦ ಗ್ರಾಂ ಸಜ್ಜೆಯ್ಲಲಿ ೮ ಮಿ.ಗ್ರಾಂ ಕಬ್ಬಿಣದ ಅಂಶವಿದೆ. ಅಕ್ಕಿಯ್ಲಲಿ ಕೇವಲ ೦.೭ ಮಿ.ಗ್ರಾಂ ಅಂಶವಿದೆ. ಹಾಗಾಗಿ ಸಜ್ಜೆರೊಟ್ಟಿ ತಿನ್ನುವುದರಿಂದ ಕಬ್ಬಿಣಾಂಶ ದೇಹಕ್ಕೆ ಪೂರೈಕೆಯಾಗುತ್ತದೆ.

‘ಕ್ಯಾಲ್ಸಿಯಂ ಕೊರತೆ’ ಎಂದ ಕೂಡಲೇ ವೈದ್ಯರು ಮಾತ್ರೆಗಳನ್ನು ಬರೆಯುತ್ತಾರೆ. ಗರ್ಭಿಣಿಯರಲ್ಲಂತೂ ಈ ಮಾತ್ರೆ ಸೇವನೆ ಪ್ರಮಾಣ ಹೆಚ್ಚು. ‘ಕ್ಯಾಲ್ಸಿಯಂ ಕೊರತೆಯಿರುವ ನನ್ನ ಪೇಷೆಂಟ್‌ಗಳಿಗೆ ರಾಗಿ ಆಹಾರವನ್ನೇ ಸೂಚಿಸುತ್ತೇನೆ. ಮಧುಮೇಹಿಗಳಿಗೆ ಅನ್ನದ ಬದಲಿಗೆ ನವಣೆ ಪದಾರ್ಥಗಳನ್ನು ಸೂಚಿಸುತ್ತೇನೆ. ಬಾಲ್ಯದಿಂದಲೇ ನವಣೆ, ಸಾಮೆ, ರಾಗಿ ಬಳಸುವ ಅಭ್ಯಾಸ ರೂಢಿಸಿಕೊಂಡರೆ ರೋಗಗಳಿಂದ ದೂರವಿರಬಹುದು’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ.ವಸುಂಧರಾ ಭೂಪತಿ.

ಮೈಸೂರಿನ ಸಿರಿಧಾನ್ಯ ಮೇಳದಲ್ಲಿ ಸಜ್ಜೆ, ಸಾಮೆ, ನವಣೆ ತಿನಿಸುಗಳಿಗೆ ಮುಗಿದ್ದ ಬಿದ್ದ ಜನ

ಹೀಗೆ ಆಹಾರ – ಔಷಧ ಎರಡನ್ನೂ ಒಳಗೊಂಡ ಸಿರಿಧಾನ್ಯಗಳು ನಮ್ಮ ದಿನಿಸಿ ಪಟ್ಟಿಯಿಂದ ನಾಪತ್ತೆಯಾಗಿವೆ. ಸಂಸ್ಕರಣೆ ಸಮಸ್ಯೆಯಿಂದಾಗಿ ರೈತರ ಹೊಲಗಳಿಂದಲೂ ಕಾಣೆಯಾಗುತ್ತಿವೆ. ಈ ಧಾನ್ಯಗಳ ಸಂರಕ್ಷಣೆಗಾಗಿ ಹೈದರಾಬಾದ್‌ನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ(ಡಿಡಿಎಸ್) ದಶಕಗಳಿಂದ ಶ್ರಮಿಸುತ್ತಿದೆ. ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ ಎಂಬ ಜಾಲದೊಂದಿಗೆ ವಿವಿಧ ಸಂಸ್ಥೆಗಳೊಡನೆ ಜನರ‍್ಲಲಿ ಜಾಗೃತಿ ಮೂಡಿಸುತ್ತಿದೆ. ಹವಾಮಾನ ವೈಪರೀತ್ಯ, ಆಹಾರ ಸುರಕ್ಷತೆಗೆ ನೆರವಾಗುವ ಈ ಧಾನ್ಯಗಳನ್ನು ‘ಸಾರ್ವಜನಿಕ ಪಡಿತರ ವ್ಯವಸ್ಥೆ’ಯ್ಲಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಬಿಸಿಯೂಟ, ಅಂಗನವಾಡಿ ಯೋಜನೆಯ್ಲಲಿ ಈ ಧಾನ್ಯಗಳನ್ನು ಬಳಸುವುದರಿಂದ ಮಕ್ಕಳ್ಲಲಿನ ಅಪೌಷ್ಠಿಕತೆಗೆ ಪರಿಹಾರ ದೊರೆತಂತಾಗುತ್ತದೆ. ಈ ಯೋಜನೆಗಳಿಗಾಗಿ ಸ್ಥಳೀಯ ರೈತರಿಂದ ಧಾನ್ಯ ಖರೀದಿಸಿದರೆ ಉತ್ತಮ ಮಾರುಕಟ್ಟೆ ಲಭ್ಯವಾಗುತ್ತದೆ ಎನ್ನುವುದು ಡಿಡಿಎಸ್‌ನ ಮುಖ್ಯಸ್ಥ ಪಿ.ವಿ.ಸತೀಶ್ ಅವರ ಅಭಿಪ್ರಾಯ. ಸಿರಿಧಾನ್ಯಗಳ ಪೌಷ್ಟಿಕಾಂಶ ಕುರಿತು ಹೆಚ್ಚಿನ ಮಾಹಿತಿಗೆ ಆಹಾರ ತಜ್ಞ ಕೆ.ಸಿ.ರಘು ಅವರ ದೂರವಾಣಿ ಸಂಖ್ಯೆ: ೯೯೮೦೦೦೯೧೪೦.

ವೃಕ್ಷಾಶ್ರಯ ಕೃಷಿ

ವೃಕ್ಷಾಶ್ರಯದಲ್ಲಿ ಕೃಷಿಕ ನರೇಂದ್ರ

‘ಈ ತೋಟದ್ಲಲಿ ಎಷ್ಟು ಬೆಳೆಗಳಿರಬಹುದು ಲೆಕ್ಕ ಹಾಕಿ ?’ – ನರೇಂದ್ರ ಸುಮ್ನೆ ಒಂದು ಪ್ರಶ್ನೆ ಹರಿಯಬಿಟ್ಟರು. ‘ದೃಷ್ಟಿ ಹಾಯಿಸಿ ಕಂಡ್ದಿದ್ಲೆಲ ಬೆಳೆ ಲೆಕ್ಕ ಹಾಕಿದೆ. ‘ಏಳೆಂಟು ಬೆಳೆ ಇರಬಹುದು’ಎಂದೆ. ನರೇಂದ್ರ ಥಟ್ಟನೆ ೧೬-೧೮ ಬೆಳೆಗಳನ್ನು ಎಣಿಸಿದರು. ಅಚ್ಚರಿ ವಿಷಯವೆಂದರೆ, ಆ ಬೆಳೆಗಳ್ಲಲಿ ಶೇ ೯೦ ರಷ್ಟು ಮರಗಳು. ಅಷ್ಟೂ ಬೆಳೆಗಳು ಬೆಳೆದ್ದಿದು ಒಂದು ಎಕರೆ ಐದು ಗುಂಟೆ ಪ್ರದೇಶದ್ಲಲಿ ! ಸಾಗರ ತ್ಲಾಲೂಕಿನ ಬೇಳೂರಿನ ನರೇಂದ್ರ ಅವರ‍್ದದು ಬೇರೆ ಬೇರೆಕಡೆ ಐದಾರು ಎಕರೆ ಜಮೀನಿದೆ. ಒಂದು ಎಕರೆ ಐದು ಗುಂಟೆಯ್ಲಲಿ ಮಾತ್ರ ಮರ ಆಧಾರಿತ ಕೃಷಿ. ಈ ತಾಕಿನ್ಲಲಿ ನಿನ್ನೆ ನೆಟ್ಟ ಗಿಡದಿಂದ ಮೂವತ್ತು ವರ್ಷದ ಮರಗಳಿವೆ. ಇವುಗಳ್ಲಲಿ ಮುಖ್ಯ ಬೆಳೆ ಅಡಿಕೆ. ಉಳಿದಂತೆ ಬಾಳೆ, ಕೋಕೋ, ಕಾಫಿ ಇದೆ. ಇವುಗಳ ನಡುವೆಯೇ ಜಾಯಿಕಾಯಿ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ ಮತ್ತು ಅರಿಶಿಣದಂತಹ ಸಂಬಾರ ಬೆಳೆಗಳಿವೆ. ಎಲ ಮರಗಳೂ ಫಲ ಕೊಡುತ್ತಿವೆ. ಇಷ್ಟ್ಲೆಲ ಮರಗಳ್ದಿದರೂ ಒಂದು ಮರ ಮತ್ತೊಂದರ ಬೆಳವಣಿಗೆಗೆ ಅಡ್ಡಿಯಾಗ್ಲಿಲ. ಇದೇ ಅವರ ತೋಟದ ವಿನ್ಯಾಸ ವಿಶೇಷ. ತೋಟದ ಮೇಲ್ಭಾಗದ್ಲಲಿ ಮಾವು, ಹಲಸು, ಕೆಲವು ಹಣ್ಣಿನ ಮರಗಳಿವೆ. ಕೆಳಬಾಗದ್ಲಲಿ ೯೮೦ ಅಡಿಕೆ ಮರಗಳಿವೆ. ೩೦೦ ಬಾಳೆ, ೩೫೦ ಕಾಫಿ, ಕೋಕೋ, ೩೫೦ ಕಾಳುಮೆಣಸು ಬಳ್ಳಿಗಳಿವೆ.೧೦೦ ಜಾಯಿಕಾಯಿ ಮರಗಳು, ೧೫ ಲವಂಗ ಗಿಡಗಳಿವೆ. ಮನೆ ಬಳಕೆಗೆ ಏಲಕ್ಕಿ, ಶುಂಠಿ, ಅರಿಶಿಣ ಮತ್ತು ಸುವರ್ಣಗೆಡ್ಡೆ ಬೆಳೆದುಕೊಳ್ಳುತ್ತಾರೆ. ‘ಅಡಿಕೆ ಕಾಸು ಕೊಡುವ ಬೆಳೆ. ಒಮ್ಮೊಮ್ಮೆ ಕೊಳೆ ರೋಗ ಕಾಣಿಸಿಕೊಂಡರೆ, ಕೈ ಕೊಡುವ ಬೆಳೆಯೂ ಹೌದು. ಮಿಶ್ರ ಬೆಳೆಯಿದ್ದರೆ ಒಂದು ಬೆಳೆ ಕೈ ಎತ್ತಿದರೂ ಉಪ ಬೆಳೆಗಳು ಕೈಹಿಡಿಯುತ್ತವೆ. ಒಮೊಮ್ಮೆ ಎಲ ಬೆಳೆಗಳು ಸಮೃದ್ಧವಾಗಿ ಫಸಲು ನೀಡಿ ಜೇಬು ತುಂಬಿಸ್ದಿದುಂಟು’ – ಮರ ಆಧಾರಿತ, ಮಿಶ್ರ ಕೃಷಿಯ ಹಿಂದಿನ ಉದೇಶ ವಿವರಿಸುತ್ತಾರೆ ನರೇಂದ್ರ.

ತೋಟದ ಮೇಲ್ಭಾದಲ್ಲಿರುವ ಹಲಸಿನ ಗಿಡಗಳು

ಬೆಳೆ ಜೋಡಿಸಿರುವ ಪರಿ :

ಪ್ರತಿಯೊಂದು ಗಿಡಗಳ ನಾಟಿ ಹಿಂದೆ ವಿಶೇಷ ವಿಧಾನಗಳಿವೆ. ಅಡಿಕೆ ಮರವನ್ನು ೯ ಅಡಿ ಅಂತರದ್ಲಲಿ ‘ಜಿಗ್ ಜಾಗ್’ ವಿಧಾನದ್ಲಲಿ ನಾಟಿ ಮಾಡಿದ್ದಾರೆ. ನಡುವೆ ಜಾಯಿಕಾಯಿ ಗಿಡಗಳಿವೆ. ಅಡಿಕೆ ಮರಕ್ಕೆ ಕಾಳುಮೆಣಸನ್ನು ಬಳ್ಳಿಗಳನ್ನು ಹಬ್ಬಿಸಿದ್ದಾರೆ. ಕೆಲವೊಂದು ಮರಗಳಿಗೆ ವೀಳ್ಯೆದೆಲೆ ಬಳ್ಳಿಗಳೂ ಹಬ್ಬಿವೆ. ಬಳ್ಳಿಗಳು ಮರವನ್ನು ತಬ್ಬಿ ಬೆಳೆಯುವುದರಿಂದ, ಮರಕ್ಕೆ ಬಿಸಿಲಿನಿಂದ ರಕ್ಷಣೆ, ಜೊತೆಗೆ ಬಳಿಗಳಿಗೆ ಗಟ್ಟಿ ಆಸರೆ ಎನ್ನುವುದು ಅವರ ನಂಬಿಕೆ. ಈ ಮರಗಳನ್ನು ಹಂತ ಹಂತವಾಗಿ ನಾಟಿ ಮಾಡ್ದಿದಾರೆ. ಅಡಿಕೆ ಮತ್ತು ಜಾಯಿಕಾಯಿ ಮರಗಳು ಬೆಳೆದು ದೊಡ್ಡವಾದ ನಂತರ ಇವುಗಳ ಆಸುಪಾಸಿನ್ಲಲಿ ಕಾಫಿ, ಬಾಳೆ, ಲವಂಗ ನಾಟಿ ಮಾಡಿದ್ದಾರೆ. ಎರಡು-ಮೂರು ಮರಗಳ ನಡುವೆ ಶುಂಠಿ, ಅರಿಶಿಣ, ಸುವರ್ಣಗೆಡ್ಡೆ ಹಾಕಿದ್ದಾರೆ. ಈ ಎಲ ಬೆಳೆಗಳಿಗೆ ಸೂಕ್ತ ಬಿಸಿಲಿನ ಅಗತ್ಯವಿರುವುದರಿಂದ ಅಡಿಕೆ ಮರಗಳನ್ನು ‘ಜಿಗ್ ಜಾಗ್’ ವಿಧಾನದ್ಲಲಿ ನಾಟಿ ಮಾಡ್ದಿದೇನೆ – ನರೇಂದ್ರ ವಿವರಿಸುತ್ತಾರೆ.

ಈ ಮಿಶ್ರಬೆಳೆ ವಿಧಾನದಿಂದ ಪ್ರತಿ ಬೆಳೆಗೂ ಪ್ರತ್ಯೇಕ ಗೊಬ್ಬರ, ನೀರು ಕೊಡುವ ಶ್ರಮ ಕಡಿಮೆಯಾಗುತ್ತದೆ. ಆಳುಗಳ ಅವಲಂಬನೆ ಕೈ ಬಿಡಬಹುದು’ – ಇದು ಅವರ ಅಭಿಪ್ರಾಯ. ಮಿಶ್ರ ಬೆಳೆಯಾಗಿ ಸಂಬಾರ ಬೆಳೆಗಳೇ ಏಕೆ? – ಎಂಬ ಪ್ರಶ್ನೆಗೆ, ‘ಜಾಯಿಕಾಯಿ ಗಿಡಗಳಿಗೆ ಹೆಚ್ಚು ನೀರು, ಗೊಬ್ಬರ ಆರೈಕೆ ಬೇಡ. ರೋಗ ಕೀಟದ ಬಾಧೆ ಕಡಿಮೆ. ಹದಿನೈದು ದಿನಕ್ಕೊಮ್ಮೆ ದ್ರವರೂಪಿ ಗೊಬ್ಬರ ಮತ್ತು ವಾರಕ್ಕೊಮ್ಮೆ ನೀರುಕೊಟ್ಟರೆ ಸಾಕು. ಇನ್ನು ಶುಂಠಿ, ಅರಿಶಿಣ – ಇವುಗಳನ್ನು ನಾಟಿ ಮಾಡಿದಾಗ ಆರೈಕೆ ಮಾಡಿದರೆ ಸಾಕು. ಇಷ್ಟು ಸರಳವಾಗಿರುವ ಕೃಷಿಗಿಂತ ಇನ್ನೇನು ಬೇಕು?’ ಉತ್ತರಿಸುತ್ತಾರೆ ನರೇಂದ್ರ. ಅಂದ ಹಾಗೆ, ಇಡೀ ತೋಟಕ್ಕೆ ಗೊಬ್ಬರ ಪೂರೈಸಲು ‘ರಸಾವರಿ(ಬಯೋಡೈಜೆಸ್ಟರ್)’ ವಿಧಾನ ಅನುಸರಿಸುತ್ತಾರೆ. ತೋಟದ ಮೇಲ್ಭಾಗದ್ಲಲಿ ನೆಲ ಮಟ್ಟದ ಟ್ಯಾಂಕ್ ನಿರ್ಮಿಸಿ, ಅದರ‍್ಲಲಿ ಗಂಜಲ, ಸೆಗಣಿ, ಕೃಷಿ ತ್ಯಾಜ್ಯ ಕರಗಿಸಿ ತಯಾರಿಸಿದ ‘ರಸಾವರಿ’ಯನ್ನು ಡ್ರಿಪ್ ಪೈಪ್ ಮೂಲಕ ತೋಟದ ಬೆಳೆಗಳಿಗೆ ಉಣಿಸುತ್ತಾರೆ. ಈ ತಂತ್ರಜ್ಞಾನದಿಂದ ಕೂಲಿ ಆಳಿನ ಖರ್ಚು ಉಳಿದಿದೆ ಎನ್ನುತ್ತಾರೆ ನರೇಂದ್ರ.

ತೋಟದ ತುಂಬಾ ದರಕಿನ ಹಾಸಿಗೆ, ಅದರ ಅಡಿಯಲ್ಲಿ ಸೂಕ್ಷ್ಮಾಣು ಜೀವಿಗಳ ಸಂಸಾರ

ದರಕಿನ ಮುಚ್ಚಿಗೆ: ಒತ್ತೊತ್ತಾದ ಬೆಳೆ, ಉಳುಮೆಯ್ಲಿಲದ ಭೂಮಿ ಇದರ ನಡುವೆ ಉತ್ತಮ ಹಾಗೂ ಸುಸ್ಥಿರ ಫಸಲು. ಇವುಗಳ ಹಿಂದಿನ ರಹಸ್ಯವೇ ‘ದರಕಿನ ಮುಚ್ಚಿಗೆ’. ಇಡೀ ತೋಟಕ್ಕೆ ಪ್ರತಿ ಬೇಸಿಗೆಯ್ಲಲಿ ಅರ್ಧ ಅಡಿ ಎತ್ತರಕ್ಕೆ ತರಗೆಲೆಗಳನ್ನು ಮುಚ್ಚಿಗೆ ಮಾಡುತ್ತಾರೆ. ಮೆತ್ತನೆಯ ಹಾಸಿಗೆಯಂತಿರುವ ಎಲೆಗಳ ಅಡಿಯ್ಲಲಿ ಸೂಕ್ಷ್ಮಾಣು ಜೀವಿಗಳ ಸಂಸಾರವಿರುತ್ತದೆ. ಇವು ಮಣ್ಣಿಗೆ ಪೋಷಕಾಂಶ ನೀಡಿ, ಭೂಮಿ ಉಳುಮೆಗೂ ನೆರವಾಗುತ್ತವೆ. ದರಕಿನ ಹಾಸಿನಿಂದಾಗಿ ತೋಟದ್ಲಲಿ ತೇವಾಂಶ ನಿರಂತರವಾಗಿದೆ. ಸೂಕ್ಷ್ಮ ಜೀವಿಗಳ ಜೊತೆ ಎರೆಹುಳು, ಉಪಕಾರಕ ಕೀಟಗಳು ಮಣ್ಣಿನ್ಲಲಿ ವೃದ್ಧಿಯಾಗಿವೆ. ‘ತೋಟವನ್ನು ಇವರೇ ಉಳುಮೆ ಮಾಡುತ್ತಾರೆ. ನಾನೇ ಕೆಲವೊಮ್ಮೆ ಉಪಕಾರಕ ಇರುವೆಗಳನ್ನು ತಂದು ತೋಟಕ್ಕೆ ಬಿಟ್ಟ್ದಿದೇನೆ’ ಎನ್ನುವ ನರೇಂದ್ರ ಅವರಿಗೆ ತೋಟದ ವಾತಾವರಣ ವರ್ಷ ಪೂರ್ತಿ ತಂಪಾಗಿರಲು ಈ ಸೂಕ್ಷ್ಮ ಜೀವಿಗಳೇ ಕಾರಣ ಎನ್ನುತ್ತಾರೆ.

ಭವಿಷ್ಯದಲ್ಲಿ ತೋಟದ ಮುಚ್ಚಿಗೆಗಾಗಿ ಹಲಸಿ ಸಸಿಗಳ ನಾಟಿ

ಪ್ರಯೋಗಗಳು – ಫಲಿತಾಂಶಗಳು : ದರಕು ಕೇವಲ ಗೊಬ್ಬರ ಅಥವಾ ಮುಚ್ಚಿಗೆ ಅಷ್ಟೇ ಅಲ. ಕೆಲವು ಬೆಳೆಗಳಿಗೆ ತಗಲುವ ರೋಗ ನಿಯಂತ್ರಕ, ನಿವಾರಕವೂ ಹೌದು. ಅಡಿಕೆ ಮರದ ಬುಡದ್ಲಲಿ ದರಕು ಹೊದಿಸಿ,ಮೆಣಸಿನ ಬಳ್ಳಿ ನಾಟಿ ಮಾಡಿ, ಸಮೀಪದ್ಲಲೇ ಅರಿಶಿಣ ಗೆಡ್ಡೆ ನೆಟ್ಟ್ದಿದಾರೆ. ಇದರಿಂದ ಕಾಳುಮೆಣಸಿಗೆ ಬರುವ ಸೊರಗು ರೋಗ ಹತೋಟಿ ಬಂದಿದೆ’ – ನರೇಂದ್ರ ವಿವರಿಸುತ್ತಾರೆ. ಅರಿಶಿಣದ್ಲಲಿ ರೋಗ ನಿರೋಧಕ ಗುಣವಿರುವುದರಿಂದ ಬಳ್ಳಿಗೆ ತಗುಲುವ ರೋಗವನ್ನು ನಿಯಂತ್ರಿಸಿದೆ ಎನ್ನುವುದು ಅವರ ಅಭಿಪ್ರಾಯ. ‘ಇಷ್ಟಾಗಿಯೂ ಒಮೊಮ್ಮೆ ಸೊರಗು ರೋಗ ಕಾಟ ಕೊಡುತ್ತದೆ. ಆಗ ಇಪ್ಪತ್ತು ಕೆ.ಜಿ ಟ್ರೈಕೋಡರ್ಮವನ್ನು ಕಾಡು ಮಣ್ಣಿನೊಂದಿಗೆ ಬೆರೆಸಿ ಎಂಟರಿಂದ ಹತ್ತು ದಿವಸಗಳ ಅಂತರದ್ಲಲಿ ಮೆಣಸಿನ ಬಳ್ಳಿಯ ಬುಡಕ್ಕೆ ಹಾಕುತ್ತೆನೆ. ರೋಗ ಹತೋಟಿಗೆ ಬರುತ್ತದೆ’ – ಪರಿಹಾರ ಸೂಚಿಸುತ್ತಾರೆ ನರೇಂದ್ರ. ಶುಂಠಿ, ಅರಿಶಿಣ, ಸುವರ್ಣಗೆಡ್ಡೆಯಂತಹ ತರಕಾರಿ/ಸಂಬಾರ ಬೆಳಗಳನ್ನು ಮನೆಗೆ ಅಗತ್ಯವ್ದಿದಷ್ಟು ಕೊಯ್ಯುತ್ತಾರೆ. ಉಳಿದ ಗೆಡ್ಡೆಗಳನ್ನು ಮಣ್ಣಿನ್ಲಲೇ ಬಿಡುತ್ತಾರೆ. ‘ಗೆಡ್ಡೆ ಗೆಣೆಸುಗಳು ಭೂಮಿಯ್ಲಲ್ದಿದರೆ ಚೆನ್ನಾಗಿ ಉಳುಮೆ ಮಾಡುತ್ತವೆ. ಮಣ್ಣಿಗೆ ಬೇಕಾದ ಪೂರಕ ಪೋಷಕಾಂಶಗಳನ್ನು ನೀಡುತ್ತವೆ. ಅವುಗಳನ್ನು ಕಿತ್ತು ಮಾರಿದರೆ ಇನ್ನೆಷ್ಟು ಸಂಪಾದಿಸಲು ಸಾಧ್ಯ ? – ಅವರು ಪ್ರಶ್ನಿಸುತ್ತಾರೆ.

ಇಳುವರಿ ಕೇಳ್ಬೇಡಿ ! ಇಷ್ಟು ಮರಗಳಿವೆ, ಬೆಳೆಯಿದೆ. ಇವುಗಳ ಇಳವರಿ ಎಷ್ಟು ? ಎಲಿಗೆ ಮಾರುತ್ತೀರಿ ?- ಎಂದರೆ, ನರೇಂದ್ರ ಅವರು ‘ಇಳುವರಿ ಕೇಳಬೇಡಿ. ಅಷ್ಟು ನಿಖರವಾಗಿ ಲೆಕ್ಕ ಇಟ್ಟ್ಲಿಲ’ ಎಂದು ಮಾತು ಬದಲಿಸುತ್ತಾರೆ. ಇನ್ನು ಮಾರುಕಟ್ಟೆ ವಿಷಯ; ಕಾಳುಮೆಣಸು, ಜಾಕಾಯಿ, ಪತ್ರೆಯನ್ನು ಬೆಂಗಳೂರು, ಬೆಳಗಾವಿ ಶಿರಸಿಗೆ ಕಳುಹಿಸುತ್ತಾರೆ. ಅಡಿಕೆ, ಬಾಳೆ, ಕಾಫಿ, ಏಲಕ್ಕಿ, ಲವಂಗವನ್ನು ಸಾಗರದ ಅಂಗಡಿಗಳಿಗೆ ಕೊಡುತ್ತಾರೆ. ವೀಳ್ಯೆದೆಲೆಯನ್ನು ಕೂಲಿ ಕಾರ್ಮಿಕರೇ ಖರೀದಿಸುತ್ತಾರೆ. ‘ಇಷ್ಟು ಮಾರ್ಗಗಳಿದ್ದಾಗ, ಮಾರುಕಟ್ಟೆ ಬಗ್ಗೆ ಚಿಂತೆ ಏಕೆ? ಎನ್ನುತ್ತಾರೆ ಅವರು. ನರೇಂದ್ರ ಅವರ ಸಂಪರ್ಕ, ದೂರವಾಣಿ ಸಂಖ್ಯೆ :೦೮೧೮೩-೨೬೦೧೩೫, ೦೮೧೮೩-೨೧೨೨೨೨. ಚಿತ್ರ-ಲೇಖನ: ಗಾಣಧಾಳು ಶ್ರೀಕಂಠ

ಕೆಂಪುತೋಟದಲ್ಲಿ ಹೂ ಹಬ್ಬ

ಲಾಲ್ ಬಾಗ್ ಅಂಗಳದಲ್ಲಿ ದೆಹಲಿಯ ಲೋಟಸ್ ಟೆಂಪಲ್

ಮುಂಗಾರು ಬುವಿಗೆ ಮುತ್ತಿಕ್ಕಿದೆ. ಅವಿತಿದ್ದ ಬೀಜಗಳು ಮೊಳೆಯುತ್ತಿವೆ. ಅವು ಚಿಗುರೊಡೆದು, ಕಾಂಡದ ಕಣ್ಣುಗಳಿಂದ ಮೊಗ್ಗು ಚಿಮ್ಮಿಸಿ, ಹೂ ಬಿರಿಯುವ ಪ್ರಕ್ರಿಯೆಯೇ ಶ್ರಾವಣದ ಸಂಭ್ರಮ. ಪ್ರಕೃತಿಯ ಈ ಸೊಬಗಿನೊಂದಿಗೆ ಹಬ್ಬಗಳ ಸಾಲು ಸಾಲು..
ಶ್ರಾವಣದ ಮೊದಲ ನಾಡ ಹಬ್ಬವೇ ಸ್ವಾತಂತ್ರ್ಯೋತ್ಸವ. ಈ ಹಬ್ಬದ ನೆನಪಲ್ಲೇ ಕೆಂಪುತೋಟ ಲಾಲ್‌ಬಾಗ್ ಅಂಗಳದಲ್ಲಿ `ಹೂವಿನ ಹಬ್ಬ`ವೂ ಆರಂಭ. ನೂರರ ಹೊಸ್ತಿಲಲ್ಲಿರುವ ಹೂವಿನ ಹಬ್ಬಕ್ಕೆ ಈ ಬಾರಿ ರಂಗುರಂಗು ಪುಷ್ಪಗಳ ಮೆರವಣಿಗೆ.
ವೈವಿಧ್ಯಮಯ ವಾತಾವರಣದಲ್ಲಿ ಬೆಳೆದಿರುವ ಹೂವುಗಳ ಪ್ರದರ್ಶನ. ಕುಂಡ ಕೃಷಿಯಲ್ಲಿ ಸಾವಿರಾರು ಸಂಖ್ಯೆಯ ತರಕಾರಿ ಬೆಳೆ, ಇಕೆಬಾನದ ವಿರಾಟ ದರ್ಶನ. ಕಣ್ಣಿಗೆ ತಂಪಾಗುವ ಪುಷ್ಪೋತ್ಸವದ ಜೊತೆಗೆ ಇಳಿ ಸಂಜೆಯಲ್ಲಿ `ಸಂಗೀತ ರಸಸಂಜೆ`ಯ ವಿಶೇಷ.

ಕೋನಾರ್ಕ್ ಸೂರ್ಯದೇವಾಲಯ

ಪ್ರದರ್ಶನ `ಮೆನು`
ಕೆಂಪುತೋಟದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನವನ್ನು `ದೆಹಲಿಯ ಲೋಟಸ್ ಮಂದಿರ`ಕ್ಕಾಗಿ ಅರ್ಪಿಸಲಾಗಿದೆ. ಆ ನೆನಪಿಗಾಗಿ ಬೃಹತ್ ಗಾತ್ರದ `ಕಮಲ`ದ ಪ್ರತಿಕೃತಿಯನ್ನು ಗಾಜಿನಮನೆಯ ನಡುವಿನಲ್ಲಿ ನಿರ್ಮಿಸಲಾಗಿದೆ. ಶ್ವೇತ ಕಮಲ ಶಾಂತಿಯ ಸಂಕೇತ. ದೇಶದಲ್ಲಿ ಶಾಂತಿ ನೆಲಸಲಿ ಎಂದು ಫಲಪುಷ್ಪ ಪ್ರದರ್ಶನದ ಮೂಲಕ ತೋಟಗಾರಿಕೆ ಇಲಾಖೆ ಹಾರೈಸುತ್ತಿದೆ.

32 ಅಡಿ ಅಗಲ, 22 ಅಡಿ ಉದ್ದ, ಮೂರೂವರೆ ಲಕ್ಷ ಹೂವುಗಳಿಂದ ನಿರ್ಮಾಣಗೊಂಡಿರುವ `ಕಮಲ`ದಲ್ಲಿ ಗುಲಾಬಿ, ಕಾರ್ನೇಷನ್, ಸುಗಂಧರಾಜ ಪುಷ್ಪಗಳಿವೆ. ಎಲ್ಲವೂ ಶ್ವೇತವರ್ಣದವು.
ಕಮಲದ ಸುತ್ತ `ಫ್ಲೋರಲ್ ವ್ಹೀಲ್` (ಹೂವಿನ ಚಕ್ರ) ಚಿತ್ತಾರಗಳಿವೆ. ಒಂದೂ ಮುಕ್ಕಾಲು ಲಕ್ಷ ಜರ್ಬೆರಾ ಹೂವುಗಳನ್ನು ಬಳಸಿ ಈ `ಹೂ ಚಕ್ರ` ಬಿಡಿಸಲಾಗಿದೆ. ಒರಿಸ್ಸಾದ ಕೊನಾರ್ಕ ಸೂರ್ಯ ದೇವಾಲಯದಲ್ಲಿರುವ `ಚಕ್ರ`ದ ಪ್ರತಿಬಿಂಬವೇ ಈ ಹೂ ಚಕ್ರ.
ಊಟಿಯ ಶೀತ ಪ್ರದೇಶದಲ್ಲಿ ಕರ್ನಾಟಕ ತೋಟಗಾರಿಕಾ ವಿಭಾಗದವರು ಬೆಳೆಸಿರುವ ಪುಷ್ಪಗಳನ್ನೂ ಇಲ್ಲಿ ತಂದು ಪ್ರದರ್ಶನಕ್ಕೆ ಇಡಲಾಗಿದೆ. ಈ ವಿಭಾಗದಲ್ಲಿ ಪ್ರತಿ ವರ್ಷ ಕಡಿಮೆ ಸಂಖ್ಯೆಯಲ್ಲಿ ಹೂಗಳು ಇರುತ್ತಿದ್ದವು. ಆದರೆ ಈ ವರ್ಷ 56 ಬಗೆಯ ಪುಷ್ಪಗಳಿವೆ.  ಸ್ವಾಟಿಸ್, ಲಿಸೀತಿಯಂ, ಸೈಕ್ಲೋಮಿನ್, ಅಗಫಾಂತಸ್, ರೆಡ್ ಹಾಟ್ ಪೋಕರ್, ಕ್ಯಾಲಾಲಿಲ್ಲಿ.. ಇತ್ಯಾದಿ. ಇವೆಲ್ಲ  ಗಾಜಿನಮನೆಯ ಕೊನೆಯ ಭಾಗದಲ್ಲಿವೆ. ಆಂತೋರಿಯಂ – ಹೈಟೆಕ್ ಪುಷ್ಪೋದ್ಯಮದ ವಾಣಿಜ್ಯ ಬೆಳೆ. ಸುಮಾರು 12 ವಿಧದ ಆಂತೋರಿಯಂ ಪುಷ್ಪಗಳು ಪ್ರದರ್ಶನದಲ್ಲಿವೆ.

ಬಟರ್ ಫ್ಲೈ ಕಾರ್ನರ್

ಇಕೆಬಾನ ಸ್ಪೆಷಲ್
ಬೆಂಗಳೂರಿಗೂ ಇಕೆಬಾನಕ್ಕೂ ಅವಿನಾಭಾವ ಸಂಬಂಧ. ಅದರ ನೆನಪಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಪರಿಣತರಾದ ಲೀಲಾ ರಾಜ್‌ಕುಮಾರ್ ಅವರು ವೈವಿಧ್ಯಮಯ ಇಕೆಬಾನಗಳನ್ನು ಪ್ರದರ್ಶಿಸುತ್ತಿದ್ದಾರೆ.  `ಶತಮಾನದ ಹೊಸ್ತಿಲಲ್ಲಿರುವ ಫಲಪುಷ್ಪ ಪ್ರದರ್ಶನಕ್ಕಾಗಿ` ಲೀಲಾ ಅವರು ದೆಹಲಿ, ಮುಂಬೈ, ತಿರುವನಂತಪುರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೂವುಗಳನ್ನು ಸಂಗ್ರಹಿಸಿ `ಇಕೆಬಾನ` ತಯಾರಿಸಿದ್ದಾರೆ.
ಫಲಪುಷ್ಪ ಪ್ರದರ್ಶನದಲ್ಲಿ ಎಚ್‌ಎಎಲ್, ಜೆಡ್ – ಪರಿಸರ ಸ್ನೇಹಿ ಮನೆ ನಿರ್ಮಾಣ ಸಂಸ್ಥೆ ಸೇರಿದಂತೆ 230 ವಿವಿಧ ಕಂಪೆನಿಗಳು, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಅಂದದ ಕೈತೋಟ ನಿರ್ಮಿಸಿರುವ ಮನೆ ಮಾಲೀಕರು ಪಾಲ್ಗೊಂಡಿದ್ದಾರೆ.
ತರಕಾರಿ ವೈವಿಧ್ಯ
ಕುಂಡಗಳಲ್ಲಿ ತರಕಾರಿ ಬೆಳೆಯಲು ಸಾಧ್ಯವೇ? ಹೀಗೆಂದು ಅಚ್ಚರಿಯಿಂದ ಪ್ರಶ್ನಿಸುವವರಿಗೆ ಫಲಪುಷ್ಪ ಪ್ರದರ್ಶನದಲ್ಲಿರುವ ತೋಟಗಾರಿಕಾ ಇಲಾಖೆ ಮಳಿಗೆಯಲ್ಲಿ ಕುಂಡಗಳಲ್ಲಿ ಬೆಳೆದಿರುವ ತರಕಾರಿಗಳೇ ಉತ್ತರ ನೀಡುತ್ತವೆ.
ಈ ಮಳಿಗೆಯಲ್ಲಿ ಸಾವಿರಾರು ಕುಂಡಗಳಲ್ಲಿ ತರಕಾರಿಗಳನ್ನು ಬೆಳೆಸಲಾಗಿದೆ. ಜೊತೆಗೆ ತೋಟಗಾರಿಕೆ ಕುರಿತು ವಿವರಣೆ ನೀಡುವ ಮಾಹಿತಿ ಕೇಂದ್ರ ಕೂಡ ಇದೆ.
ಪಕ್ಕದಲ್ಲಿರುವ ಮತ್ತೊಂದು ಮಳಿಗೆಯಲ್ಲಿ ಹಣ್ಣುಗಳನ್ನು ಸಂಸ್ಕರಿಸಿ ಜಾಮ್, ಜೆಲ್ಲಿ ಹಾಗೂ ವಿವಿಧ ಬಗೆಯ ಜ್ಯೂಸ್‌ಗಳ ತಯಾರಿಕೆ ಪ್ರಾತ್ಯಕ್ಷಿಕೆಯಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜಗದೀಶ್.ಕುಂಡದಲ್ಲಿ ತರಕಾರಿಗಳನ್ನೂ ಬೆಳೆದಿರುವುದು ಪ್ರದರ್ಶನದ ಹೈಲೈಟ್. ಜತೆಗೆ ತೋಟ ನಿರ್ಮಾಣ ಮಾಡುವವರಿಗೆ ಸಲಕರಣೆಗಳೂ ಪ್ರದರ್ಶನದಲ್ಲಿ ಲಭ್ಯ. ಅದಕ್ಕಾಗಿ ಗೊಬ್ಬರ, ಔಷಧ ಪರಿಕರಗಳ ಮಾರಾಟದ ಮಳಿಗೆ ತೆರೆಯಲಾಗಿದೆ. ಮಹಾನಗರದ 12 ಪ್ರತಿಷ್ಠಿತ ನರ್ಸರಿಗಳು ಹೊಸ ಹೊಸ ಗಿಡಗಳೊಂದಿಗೆ ನಿಮ್ಮನ್ನು ಸ್ವಾಗತಿಸಲು ಸಜ್ಜಾಗಿವೆ.

ಸಂಗೀತದ ರಸದೌತಣ

ಫಲಪುಷ್ಪ ಪ್ರದರ್ಶನ ಕಂಡು ಕಣ್ಣಿಗೆ ತಂಪು ನೀಡುತ್ತದೆ. ಒಂದಷ್ಟು ಮನ ತಣಿಯಬೇಕಲ್ಲ. ಅದಕ್ಕಾಗಿಯೇ ತೋಟಗಾರಿಕೆ ಇಲಾಖೆಯವರು ಲಾಲ್‌ಬಾಗ್ ಬ್ಯಾಂಡ್ ಸ್ಟಾಂಡ್‌ನಲ್ಲಿ ಪ್ರದರ್ಶನದ ಪ್ರತಿ ದಿನ ಸಂಜೆ 4ರಿಂದ 7 ರವರೆಗೆ `ಸಂಗೀತ ಸಂಜೆ` ಏರ್ಪಡಿಸಿದ್ದಾರೆ.  ಫಲಪುಷ್ಪ ಪ್ರದರ್ಶನಕ್ಕೆ ಬಂದವರಿಗೆ ಸಂಗೀತ ಸಂಜೆ ಒಂದು ಬೋನಸ್. ಈ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರು ಗೀತಗಾಯನ ಪ್ರಸ್ತುಪಡಿಸುತ್ತಾರೆ.

13ರಂದು ವಿಶೇಷ ಸಂಗೀತ ಕಾರ್ಯಕ್ರಮವಿದೆ. ಮಿಲಿಟರಿಯ 40 ಮಂದಿ ಹೆಸರಾಂತ ವಾದ್ಯಗಾರರು ತಮ್ಮ ವಾದ್ಯಗಳ ಮೂಲಕ ಸಂಗೀತದ ರಸದೌತಣ ನೀಡಲಿದ್ದಾರೆ. ಇದು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ 99 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಿರುವ ಕಾರ್ಯಕ್ರಮ.

ಲಾಲ್‌ಬಾಗ್ ಸುತ್ತಿ ಸುಸ್ತಾದರೆ, ನಿಮ್ಮ ದಣಿವು, ಬಾಯಾರಿಕೆ ನೀಗಿಸಲು ಗಾಜಿನಮನೆ ಸುತ್ತ 120 ಮಳಿಗೆಗಳಿವೆ. ಇಲ್ಲಿ ಕುರುಕುಲು ತಿಂಡಿ, ತಂಪು ಪಾನೀಯಗಳು ಎಲ್ಲವೂ ಲಭ್ಯ.
ಎಲ್ಲದಕ್ಕೂ ಉತ್ತರ ಸಿಕ್ಕ ಮೇಲೆ, ಇನ್ನೇಕೆ ತಡ; ಪುಷ್ಪೋತ್ಸವದ ಸೌಂದರ್ಯದ ಸವಿ ಸವಿಯಲು ಹೊರಡಿ ಸಸ್ಯ ಕಾಶಿಗೆ !

ಬಣ್ಣ ಬಣ್ಣದ ಹೂಗಳ ರಂಗೋಲಿ

ಪಾರ್ಕಿಂಗ್, ಪ್ರವೇಶ
ಇಷ್ಟೆಲ್ಲ ವೈವಿಧ್ಯವಿರುವ `ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ`ವನ್ನು ನೋಡಲು ಹೋಗಲೇಬೇಕು. ಆದರೆ ನಮ್ಮ ಬೈಕು, ಕಾರು ಪಾರ್ಕಿಂಗ್ ಮಾಡುವುದೆಲ್ಲಿ? ನಿಜ, ನಿಮ್ಮ ಸಮಸ್ಯೆಗೆ ಇಲಾಖೆಯವರು ಪರಿಹಾರ ಸೂಚಿಸಿದ್ದಾರೆ. ಈ ಬಾರಿ ಡಬ್ಬಲ್ ರೋಡ್ ದ್ವಾರ ಹಾಗೂ ಸಿದ್ಧಾಪುರ ಗೇಟ್ (ಅಶೋಕ ಪಿಲ್ಲರ್ ಕಡೆಯಿಂದ) ಸಮೀಪದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 12,000 ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಇದೆ.


ಸಮುದಾಯದ ಒಗ್ಗಟ್ಟು ಕೆರೆ ಅಭಿವೃದ್ಧಿಯ ಗುಟ್ಟು

೨೮ ಆಗಸ್ಟ್ ೨೦೦೯ ರಲ್ಲಿ..

ಕೆರೆ ಅಂಗಳದ ತುಂಬಾ ಕಳೆ, ಶಿಥಿಲಗೊಂಡ ಏರಿ. ಅದರ ಮೇಲೆ ಪೊದೆಯಂತೆ ಬೆಳೆದು ನಿಂತ ಮುಳ್ಳು-ಕಂಟಿ ಗಿಡಗಳು. ಮಳೆಗಾಲದಲ್ಲೂ ತುಂಬದ ಕೆರೆ, ನಿರ್ವಹಣೆಯಿಲ್ಲದೇ ಸೊರಗಿದ್ದ ತೂಬು, ರಾಜಕಾಲುವೆ… ಒಟ್ಟಾರೆ ಅಧ್ವಾನವಾಗಿದ್ದ ಆ ಕೆರೆ ಒಂದು ರೀತಿಯಲ್ಲಿ ಪಾಳು ಕೊಂಪೆ..

೧೦ ಜೂನ್ ೨೦೧೧ರಲ್ಲಿ…
ಹುಲ್ಲು ಹಾಸಿನ ಕೆರೆಯ ಏರಿ. ಜಲಾಶಯದ ಗೋಡೆಯಷ್ಟು ಭದ್ರವಾದ ಕಲ್ಲುಕಟ್ಟಡ. ಬೇಸಿಗೆಯಲ್ಲೂ ಕೆರೆಯ ತುಂಬಾ ನೀರು.. ಜಲಾನಯನ ಪ್ರದೇಶದಲ್ಲಿ ಕಾಡು ಮರಗಳ ಹಸಿರು ಹಾಸು, ಮಳೆ ನೀರಿಗೆ ದಾರಿ ತೋರುವ ಒಡ್ಡುಗಳು, ‘ಕೆರೆ ಸಾಕ್ಷರತೆ’ ಸಾರುವ ನಾಮಫಲಕಗಳು, ಇವೆಲ್ಲದರ ನಡುವೆ ಸುಡು ಬಿಸಿಲಲ್ಲೂ ಬೀಸುವ ತಂಗಾಳಿ… ಮುಂಜಾನೆ – ಸಂಜೆ ಕೆರೆಯ ಸುತ್ತಾ ಹೆಜ್ಜೆ ಹಾಕುವ ಕೆರೆ ಬಳಕೆದಾರರು..

****

ಎರಡು ವರ್ಷಗಳಲ್ಲಿ ಗೋಪಾಲನಹಳ್ಳಿ ಕೆರೆ ಬದಲಾಗಿದ್ದು ಒಂದು ಅಚ್ಚರಿಯ ಅಭಿವೃದ್ಧಿ. ಇದು ಏಕಾ ಏಕಿಯಾದ ಅಭಿವೃದ್ಧಿಯಲ್ಲ. ಕಲ್ಲು-ಮುಳ್ಳುಗಳ ನೆಡಮುಡಿಯ ಮೇಲೆ

ಕೆರೆ ಅಂಗಳದಲ್ಲಿ ತಿಳಿ ನೀರು

ಸಾಗುತ್ತಾ ಗುರಿ ತಲುಪಿದ ಕಥೆ. ಈ ಬೆಳವಣಿಗೆ, ಬದಲಾವಣೆಯ ಹಿಂದೆ ಒಂದು ಸಮುದಾಯದ ಶ್ರಮವಿದೆ. ಬದ್ಧತೆಯ ಕೆಲಸವಿದೆ. ಜೊತೆಗೆ ಜಲಸಂವರ್ಧನ ಯೋಜನೆಯ ನೆರವಿದೆ. ಸಮುದಾಯಗಳ ಮನಸ್ಸು ಒಗ್ಗೂಡಿದರೆ ಎಂಥಾ ಅಭಿವೃದ್ಧಿ ಕಾರ್ಯಗಳು ‘ಹೂವು ಎತ್ತಿದಷ್ಟೇ’ ಸರಾಗವಾಗುತ್ತವೆ ಎನ್ನುವುದಕ್ಕೆ ಈ ‘ಕೆರೆಯ ಅಭಿವೃದ್ಧಿ’ಯೊಂದು ಜ್ವಲಂತ ಸಾಕ್ಷಿ !

ಗೋಪಾಲನಹಳ್ಳಿ, ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ. ಚಿಕ್ಕನಾಯ್ಕನಹಳ್ಳಿ – ತಿಪಟೂರು ಮಾರ್ಗದಲ್ಲಿದೆ ಈ ಹಳ್ಳಿ. ಗ್ರಾಮದಲ್ಲಿ ಒಟ್ಟು ೧೨೦ ಮನೆಗಳಿವೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರೇ ಹೆಚ್ಚು. ಇಲ್ಲಿನ ಕುಂಟುಂಬಗಳು ಒಂದಲ್ಲಾ ಒಂದು ರೀತಿಯಿಂದ ಈ ಕೆರೆಯನ್ನು ಅವಲಂಬಿಸಿದ್ದಾರೆ.

ಒಟ್ಟು ೪೩.೭೫ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಈ ಕೆರೆ ನೀರುಣಿಸುತ್ತದೆ. ಈ ಅಚ್ಚುಕಟ್ಟು ಪ್ರದೇಶದಲ್ಲಿ ತೆಂಗಿನ ತೋಟಗಳಿವೆ. ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಹಣ್ಣಿನ ಗಿಡಗಳಿವೆ. ಇವೆಲ್ಲವಕ್ಕೂ ಕೆರೆ ನೀರೇ ಆಧಾರ. ಈ ಕೆರೆಯ ಮೇಲೆ ಇಷ್ಟೆಲ್ಲಾ ಅವಲಂಬನೆಯಿದ್ದರೂ, ಊರಿನವರ‍್ಯಾರೂ ಕೆರೆ ನಿರ್ವಹಣೆಯತ್ತ ಗಮನಿಸುತ್ತಿರಲಿಲ್ಲ. ಮಳೆ ಬಂದಾಗ ಅಲ್ಪ ಸ್ವಲ್ಪ ಕೆರೆ ತುಂಬುತ್ತಿತ್ತು. ಸಿಕ್ಕಷ್ಟು ನೀರನ್ನು ಕೃಷಿಗೆ ಬಳಸಿಕೊಂಡು ರೈತರು ಸುಮ್ಮನಾಗುತ್ತಿದ್ದರು. ಹೀಗೆ ನಿರ್ವಹಣೆ ಕೊರತೆಯಿಂದಾಗಿ ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. ಮುಳ್ಳು-ಕಂಟಿಗಳು ಬೆಳೆದು, ಏರಿ ದುರ್ಬಲವಾಯಿತು ಕೆರೆ ಸಂಪೂರ್ಣ ಪಾಳು ಬಿತ್ತು.

ಆಗಸ್ಟ್ ೨೦೦೯ರಲ್ಲಿ ಜಲಸಂವರ್ಧನಾ ಯೋಜನ ಸಂಘ ‘ಸಮುದಾಯ ಸಹಭಾಗಿತ್ವದ ಕೆರೆ ಅಭಿವೃದ್ಧಿ’ ಯೋಜನೆಯಡಿ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ 40 ಕೆರೆಗಳನ್ನು ಆಯ್ಕೆ ಮಾಡಿತು. ಅದರಲ್ಲಿ ಗೋಪಾಲನಹಳ್ಳಿ ಕೆರೆಯೂ ಸೇರಿತು. ಆರಂಭದಲ್ಲಿ ಗ್ರಾಮಸ್ಥರು ಕೆರೆ ಅಭಿವೃದ್ಧಿಗೆ ಆಸಕ್ತಿ ತೋರಲಿಲ್ಲ. ಆದರೆ ಸ್ಥಳೀಯ ಉಪನ್ಯಾಸಕ ರಘು ಈ ಯೋಜನೆಯನ್ನು ಅರ್ಥಮಾಡಿಕೊಂಡರು. ಗ್ರಾಮಸ್ಥರನ್ನೂ ಒಪ್ಪಿಸಿದರು. ಊರಿನ ಯುವಕರನ್ನು ಹುರಿದುಂಬಿಸುತ್ತಾ, ‘ಕಾಲಭೈರವೇಶ್ವರ ಬನಶಂಕರಿ ಕೆರೆ ಅಭಿವೃದ್ಧಿ ಸಂಘ’ ರಚಿಸಿದರು. ಸಂಘದ ೯ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು, ಎಲ್ಲ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆರೆ ಅಭಿವೃದ್ಧಿಗೆ ಸಂಕಲ್ಪ ಮಾಡಿದರು.
ಸಂಘ ರಚನೆಯಾದ ಮೇಲೆ ಯೋಜನೆಯ ನಿಯಮದಂತೆ ಕೆರೆ ಅಭಿವೃದ್ಧಿಯ ವೆಚ್ದದಲ್ಲಿ  ಶೇ.೬ ರಷ್ಟನ್ನು ಸಮುದಾಯಗಳು ಭರಿಸಬೇಕು. ಸರ್ಕಾರ ೧೯,೭೮,೬೦೪ ರೂಪಾಯಿ ನೀಡಿದರೆ, ಅದಕ್ಕೆ ಗ್ರಾಮಸ್ಥರು ಶೇ ೬ ರಷ್ಟು ಅಂದರೆ  ರೂ.೧,೧೮,೭೧೬ ಗಳನ್ನು ವಂತಿಕೆ ಕಟ್ಟಬೇಕು. ಸಂಘದ ಸದಸ್ಯರು ಯೋಜನೆ ಈನಿಯಮಕ್ಕೆ ಬದ್ಧರಾಗಿ, ಮನೆ ಮನೆಗೆ ತಿರುಗಿ ವಂತಿಕೆ ಸಂಗ್ರಹಿಸಿದರು.

ಏರಿಗೆ ‘ಹೆಪ್ಪು’, ಕೆರೆಯಂಚಿಗೆ ಹಸಿರು…!

ಹಲ್ಲು ಹೆಪ್ಪಿನೊಂದಿಗೆ ಕೆರೆ ಏರಿ

ವಂತಿಕೆ ಸಂಗ್ರಹದ ನಂತರೆ ಕೆರೆ ಅಭಿವೃದ್ಧಿ ಚಟುವಟಿಕೆ ಚುರುಕಾಯಿತು. ಮೊದಲು ಏರಿಯ ಸುತ್ತಲಿದ್ದ ಮುಳ್ಳು – ಕಂಟಿಗಳನ್ನು ತೆಗೆದರು. ಏರಿಯ ಇಳಿಜಾರಿಗೆ ‘ಹೆಪ್ಪು’ ಹೊದಿಸಿ(ಹುಲ್ಲಿನ ತೆಂಡೆಗಳು)ಗಟ್ಟಿಗೊಳಿಸಿದರು. ಮಳೆಗಾಲ ಶುರುವಾಗುವುದರೊಳಗೆ ಅರ್ಧ ಕೆರೆ ಹೂಳು ತೆಗೆಸಿದ್ದಾಯಿತು. ಕೆರೆ ಅಭಿವೃದ್ಧಿ ಕಾರ್ಯಗಳು ಸಾಗಿದಂತೆ ಗ್ರಾಮಸ್ಥರ ಆಸಕ್ತಿಯೂ ಗರಿಗೆದರಿತು. ಮುಂದಿನ ಕೆಲಸಗಳು ಹೂವು ಪೋಣಿಸಿದಂತೆ ಸರ ಸರ ಸಾಗಿದವು. ಕೆರೆ ಅಂಗಳ ಸ್ವಚ್ಛವಾಗುತ್ತಲೇ, ಕ್ಯಾಚ್‌ಮೆಂಟ್ ಪ್ರದೇಶ(ಕೆರೆಗೆ ನೀರು ಹರಿವ ಸ್ಥಳ)ಕ್ಕೆ ‘ಚಿಕಿತ್ಸೆ’. ಅದರ ಮೊದಲ ಹೆಜ್ಜೆಯೇ ಕೆರೆ ಅಂಚಿನಲ್ಲಿ ನೆಡು ತೋಪು ನಿರ್ಮಾಣ. ಇದಕ್ಕಾಗಿ ಗ್ರಾಮಸ್ಥರೇ ಟೊಂಕ ಕಟ್ಟಿ ನಿಂತಿದ್ದ ವಿಶೇಷ.

ಪ್ರತಿ ಭಾನುವಾರ ಗ್ರಾಮಸ್ಥರೆಲ್ಲ ಕೆರೆ ಅಂಚಿನಲ್ಲಿ ಸೇರುತ್ತಿದ್ದರು. ಆ ದಿನ ಕೃಷಿ ಪರಿಕರಗಳ ಜೊತೆಗೆ ಅಡುಗೆ ಮನೆಯೂ ಕೆರೆ ಅಂಚಿಗೆ ವರ್ಗವಾಗುತ್ತಿತ್ತು. ಒಂದೆಡೆ ಗಿಡ ನಾಟಿ ಮಾಡುತ್ತಿದ್ದರೆ, ಇನ್ನೊಂದೆಡೆ ರುಚಿ ರುಚಿಯಾದ ಅಡುಗೆ ಸಿದ್ಧವಾಗುತ್ತಿತ್ತು. ಹೀಗೆ ಸಂಭ್ರಮದಿಂದಲೇ ಒಂದೂವರೆ ತಿಂಗಳಲ್ಲಿ ಶ್ರಮದಾನ ಪೂರ್ಣ. ಪರಿಸರ ತಜ್ಞರ ನಿರ್ದೇಶನದೊಂದಿಗೆ ಹೊಂಗೆ, ಅತ್ತಿ, ಹೂವತ್ತಿ, ನೆಲ್ಲಿ, ಹುಣಸೆ, ಸೀತಾಫಲ, ಬೇಲ, ಮಾವು, ಸಿಲ್ವರ್ ಓಕ್, ಅಕೇ ಶಿಯಾ, ಕಾಡು ಬಾದಾಮಿ, ನೇರಳೆ, ಮತ್ತಿ, ಹಲಸಿನಂತಹ ೨೨ ಜಾತಿಯ ೧೫೦೦ ಗಿಡಗಳನ್ನು ನಾಟಿ ಮಾಡಿದರು. ನುಜ್ಜುಕಲ್ಲಿನ ನೆಲದಲ್ಲಿ ಗುಂಡಿ ತೆಗೆದು ಗಿಡ ನೆಡುವುದು ಸುಲಭದ ಮಾತಲ್ಲ. ಆದರೆ ಆ ಕಾರ್ಯವನ್ನು ಸಾಧಿಸಿರುವ ಗ್ರಾಮಸ್ಥರ ಒಗ್ಗಟ್ಟಿನ ಶಕ್ತಿ ಮೆಚ್ಚುವಂಥದ್ದು. ಇಷ್ಟೆಲ್ಲ ಕಷ್ಟದ ಕೆಲಸವಾದರೂ ಗ್ರಾಮಸ್ಥರಿಗೆ ಇದು ಶ್ರಮದ ಕೆಲಸ ಅಂತ ಅನ್ನಿಸಿಲಿಲ್ಲವಂತೆ. ಹಬ್ಬದ ರೀತಿಯಲ್ಲಿ ಶ್ರಮದಾನ ಮಾಡಿದ್ದೇವೆ. ಊರಿನ ಒಗ್ಗಟ್ಟಿನಿಂದಲೇ ಕಲ್ಲು ಭೂಮಿಯಲ್ಲೂ ಹಸಿರು ಅರಳಿಸಲು ಸಾಧ್ಯವಾಗಿದೆ’- ರಘು ಭಾವುಕರಾಗಿ ನುಡಿಯುತ್ತಾರೆ.

ಕ್ಯಾಚ್ ಮೆಂಟ್ ಪ್ರದೇಶದಲ್ಲಿ ಶ್ರಮದಾನದ ಮೂಲಕ ಬೆಳೆಸಿದ ಕಾಡು-ಹಣ್ಣಿನ ಗಿಡಗಳು

ಗಿಡ ನೆಟ್ಟು ವರ್ಷವಾಗಿದೆ. ನೆಟ್ಟ ಗಿಡಗಳೆಲ್ಲ ಎದೆಯುದ್ದಕ್ಕೆ ಬೆಳೆದಿವೆ. ಶೇ.೯೦ರಷ್ಟು ಗಿಡಗಳು ಉಳಿದಿವೆ. ‘ಈ ಯೋಜನೆಯಡಿ ಜಿಲ್ಲೆಯಾದ್ಯಂತ ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಗಿದೆ. ಆದರೆ ಇಂಥ ಫಲಿತಾಂಶ ಎಲ್ಲೂ ಕಂಡಿಲ್ಲ. ಇದೆಲ್ಲ ಸಮುದಾಯದ ಶ್ರಮ, ಅನುಸರಿಸಿರುವ ನಿರ್ವಹಣಾ ಕ್ರಮ’ ಎಂದು ಹರ್ಷ ವ್ಯಕ್ತಪಡಿಸು ತ್ತಾರೆ ಜೆಎಸ್‌ವೈಎಸ್‌ನ ಜಿಲ್ಲಾ ಪರಿಸರ ತಜ್ಞ ನಾಗರಾಜ್. ಇತ್ತೀಚೆಗೆ ಕೆರೆ ಅಭಿವೃದ್ಧಿ ವೀಕ್ಷಣೆಗೆ ಆಗಮಿಸಿದ್ದ ವಿಶ್ವಬ್ಯಾಂಕಿನ ಪರಿಸರ ತಜ್ಞರಾದ  ಪಿಯುಷ್ ಡೊಗ್ರಾ ಕೂಡ ಈ ನೆಡುತೋಪಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವುದು ಸಂಘದ ಸದಸ್ಯರ ಉತ್ಸಾಹ ಇಮ್ಮಡಿಸುವಂತಾಗಿದೆ.

ಕೆರೆ ಅಭಿವೃದ್ಧಿಯೊಂದಿಗೆ..
ಕೆರೆ ಅಭಿವೃದ್ಧಿಯೊಂದಿಗೆ ಪ್ರಸ್ತುತ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬೆಂಗಳೂರು ಕೃಷಿ ವಿಶ್ವ ನೆರವಿನೊಂದಿಗೆ ರೈತರ ಜಮೀನಿನಲ್ಲಿ ಸಂಶೋಧನೆಗಳೂ ಆರಂಭವಾಗಿವೆ. ಮರೆಯಾಗಿದ್ದ ಸಿರಿಧಾನ್ಯಗಳು( ಹಾರಕ, ಕೊರಲೆ, ನವಣೆ) ಕಾಣಿಸಿಕೊಳ್ಳುತ್ತಿವೆ. ತರಕಾರಿ ಬೆಳೆ, ಮೇವಿನ ಬೆಳೆ ಬೆಳೆಯುವವರ ಸಂಖ್ಯೆ ಹೆಚ್ಚಿದೆ. ಸಂಘದವತಿ ಯಿಂದ ಮೀನುಗಾರಿಕೆ ಕೈಗೊಂಡು ೨೫ ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ.
ಈ ಯೋಜನೆಯಲ್ಲಿ ವಿಧವೆಯರಿಗೆ ಒಂದೂವರೆ ಲಕ್ಷ ರೂಪಾಯಿಯ ಸುತ್ತು ನಿಧಿ ನೀಡಲಾಗಿದೆ. ಈ ಹಣದಲ್ಲಿ ಹೈನುಗಾರಿಕೆ, ಕೋಳಿ, ಕುರಿ, ಆಡು ಸಾಕಾಣಿಕೆ ಕೈಗೊಂಡಿದ್ದಾರೆ. ಕೆರೆ ಅಬಿವೃದ್ಧಿ ಯೋಜನೆಯಿಂದ ಊರಿನಲ್ಲಿ ದನಕರಗಳು ಹೆಚ್ಚಾಗಿವೆ. ‘ಸಂಘದಿಂದ ಸಾಲವಾಗಿ ಪಡೆದ ಹಣವನ್ನು ಆರು ತಿಂಗಳೊಳಗೆ ಮರುಪಾವತಿ ಮಾಡಿದ್ದಾರೆ ಸದಸ್ಯರು’ ಎನ್ನುತ್ತಾರೆ ಜಿಲ್ಲಾ ಸಾಮಾಜಿಕ ತಜ್ಞೆ ವೀಣಾ.

ಕ್ಯಾಚ್ ಮೆಂಟ್ ಪ್ರದೇಶದಲ್ಲಿ ಹಸಿರು ಹೊದಿಕೆ
ಸಮುದಾಯ ಸಂಘಟನೆಯ ರೂವಾರಿ ರಘು(ಎಡಬದಿ) ಜೆಎಸ್ ವೈಎಸ್ ಜಿಲ್ಲಾ ಸಂಯೋಜನಾಧಿಕಾರಿ ಪದ್ಮಪ್ರಭ

ಹಂತ ಹಂತವಾಗಿ ಕೆರೆ ಅಭಿವೃದ್ಧಿ ಜೊತೆಗೆ ಸಮಗ್ರವಾಗಿ ಗ್ರಾಮದ ಅಭಿವೃದ್ಧಿಯಾಗುತ್ತಿದೆ. ‘ಮೊದಲು ನೀರು ಬಳಸುವವನಿಗಷ್ಟೇ ಈ ಕೆರೆ ಸೇರಿದ್ದು’ ಎಂಬ ಭಾವನೆಯಿತ್ತು. ಆದರೆ ಕೆರೆ ಅಭಿವೃದ್ಧಿ ಯೋಜನೆ ಅನುಷ್ಠಾನದ ನಂತರ ಕೆರೆ ಮತ್ತು ಗ್ರಾಮಸ್ಥರ ನಡುವೆ ಆತ್ಮೀಯತೆ ಬೆಳೆದಿದೆ. ಪ್ರತಿಯೊಬ್ಬರೂ ಕೆರೆಯನ್ನು ಪ್ರೀತಿಯ ಕಂಗಳಿಂದ ನೋಡುತ್ತಾರೆ. ನಿತ್ಯ ಒಬ್ಬರಲ್ಲಾ ಒಬ್ಬರು ಕೆರೆಗೆ ಭೇಟಿ ನೀಡುತ್ತಾರೆ. ಸಣ್ಣ ಸಣ್ಣ ಬದಲಾವಣೆಗಳನ್ನು ಗಮನಿಸುತ್ತಾರೆ. ಅದಕ್ಕೆ ರಘು ಹೇಳ್ತಾರೆ, ‘ಈ ಯೋಜನೆ ಕೆರೆಯನ್ನಷ್ಟೇ ಕಟ್ಟಲಿಲ್ಲ, ನಮ್ಮ ಗ್ರಾಮಸ್ಥರ ಮನಸ್ಸುಗಳನ್ನು ಬೆಸೆದಿದೆ. ಒಗ್ಗಟ್ಟಿನ ಪಾಠ ಹೇಳಿದೆ. ಕೆರೆಯೊಂದು ಅಭಿವೃದ್ಧಿಯಾದರೆ, ಇಡೀ ಊರೇ ಅಭಿವೃದ್ಧಿಯಾದಂತೆ’ ಎಂಬ ಸಿದ್ಧಾಂತವನ್ನು ತಿಳಿಸಿಕೊಟ್ಟಿದೆ.

ಒಂದೂವರೆ ವರ್ಷದಲ್ಲಿ ಗೋಪಾಲನಹಳ್ಳಿಯಲ್ಲಾಗಿರುವ ಬದಲಾವಣೆಗಳು ರಾಜ್ಯಾದ್ಯಂತ ಪಸರಿಸಿವೆ. ಜಿಲ್ಲಾ ಸಮನ್ವಯ ಅಧಿಕಾರಿಗಳಿಗೆ ‘ಇದೊಂದು ಮಾದರಿ ಕೆರೆ’ಯಾಗಿದೆ. ಇಲ್ಲಿನ ಸಮುದಾಯದ ಬದ್ಧತೆ ಅರಿತ ವಿವಿಧ ಇಲಾಖೆಗಳು ‘ತಮ್ಮ ಯೋಜನೆಗಳನ್ನು ಈ ಗ್ರಾಮದಲ್ಲಿ ಅನುಷ್ಠಾನಗೊಳಿಸಲು’ ಪೈಪೋಟಿಗಿಳಿದಿವೆ. ಅತ್ಯುತ್ತಮ ಗ್ರಾಮ ಸಂಘಟನೆಯ ಕಾರ್ಯವನ್ನು ವೀಕ್ಷಿಸಲು ಹಲವರು ಗಣ್ಯರು ಭೇಟಿ ನೀಡಿದ್ದಾರೆ. ಈಗ ಎಲ್ಲರ ದೃಷ್ಟಿ ಗೋಪಾಲನಹಳ್ಳಿಯತ್ತ ನೆಟ್ಟಿದೆ.

ಸಮುದಾಯ ಸಂಘಟನೆ ಕಟ್ಟಿದ ಸೇತುವೆ

ಸೇತುವೆ ನಿರ್ಮಿಸಿದ ಸಮುದಾಯ !
ಗೋಪಾಲನಹಳ್ಳಿ ಕೆರೆ ಕೋಡಿ ಬಿದ್ದಾಗ ಮುಂದೆ ದೊಡ್ಡದಾದ ಹಳ್ಳ ಹರಿಯುತ್ತದೆ. ಈ ಹಳ್ಳ ಮಳೆಗಾಲದಲ್ಲಿ ಗ್ರಾಮ ಹಾಗೂ ೩೦ ಮಂದಿ ಅಚ್ಚುಕಟ್ಟುದಾರರಿಗೆ ‘ಜಲ ಕಂಟಕ’ವಾಗಿತ್ತು. ಬೆಳಿಗ್ಗೆ ಜಮೀನಿಗೆ ಹೊ ದವರು ಸಂಜೆಯ ಮಳೆಗೆ ಸಿಕ್ಕಿ ಗ್ರಾಮಕ್ಕೆ ವಾಪಾಸಾಗುವುದರೊಳಗೆ ಹಳ್ಳದಲ್ಲಿ ಎದೆ ಮಟ್ಟದ ನೀರು. ಜಾನುವಾರು, ಕುರಿ-ಮೇಕೆ ಹೇಗೋ ಈಜಿ ದಡ ಸೇರುತ್ತಿದ್ದವು. ಮಹಿಳೆಯರು, ಮಕ್ಕಳು ಮಾತ್ರ, ನೀರು ಇಳಿಯುವವರೆಗೂ ಕಾಯಬೇಕಿತ್ತು. ಬೆಳೆ ಕೊಯ್ಲಾದಾಗ, ಕಣ ಮಾಡಿದಾಗ ದವಸ-ಧಾನ್ಯ ಸಾಗಿಸಲು ವಿಪರೀತ ತೊಂದರೆ.
‘ಕೆರೆ ಅಭಿವೃದ್ಧಿ ಮಾಡಿದಿರಿ. ನಮ್ಮ ಕಷ್ಟನೂ ಒಮ್ಮೆ ನೋಡಿ, ಸೇತುವೆ ಕಟ್ಟಿಕೊಡಿ’ ಎಂದು ಕೆರೆ ಅಭಿವೃದ್ಧಿ ಸಂಘದವರು ಯೋಜನಾಧಿಕಾರಿಗಳಿಗೆ ಮೊರೆಯಿಟ್ಟರು. ಆದರೆ ಎಂಜಿನಿಯರ್‌ಗಳು ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕೈಚೆಲ್ಲಿದ್ದರು. ಆದರೆ ಅಂದಿನ ಜಿಲ್ಲಾ ಸಮನ್ವಯಾಧಿಕಾರಿ ನಾಗರಾಜನಾಯಕ್, ಗೋಪಾಲನಹಳ್ಳಿಯ ‘ಸಮುದಾಯದ ಬದ್ಧತೆ’ ಕಂಡು ಸೇತುವೆ ನಿರ್ಮಾಣಕ್ಕೆ ಅನುಮತಿ ಕೊಡಿಸಿದರು. ಕ್ರಿಯಾ ಯೋಜನೆ ರೂಪಿಸಿದ ಒಂದೂವರೆ ತಿಂಗಳಲ್ಲಿ ಸೇತುವೆ ಸಿದ್ಧವಾಯಿತು. ಕೆರೆ ಅಭಿವೃದ್ಧಿ ಸಂಘದವರ ಕಣ್ಗಾವಲಿನಲ್ಲೇ ಕಾಮಗಾರಿ ಸಾಗಿದ್ದು ವಿಶೇಷ.  ಸೇತುವೆ ನಿರ್ಮಿಸಿದ್ದಕ್ಕೆ ಗ್ರಾಮಸ್ಥರು ಇಲಾಖೆಗೆ ಋಣಿಯಾಗಿದ್ದಾರೆ. ‘ಸೇತುವೆ ನಿರ್ಮಾಣ, ನಮ್ಮ ಪಾಲಿಗೆ ‘ಕೋಟಿ ಹಣಕ್ಕಿಂತಲೂ’ ಹೆಚ್ಚು ಎನ್ನುವುದು ಮಹಿಳಾ ಸಂಘದ ಸದಸ್ಯೆ ಲಲಿತಮ್ಮ ಅಭಿಪ್ರಾಯ.