ಭಾನುವಾರ ರಾತ್ರಿ 9.30ಗೆ ಸಮಯ ಟಿವಿ ನೋಡಿ

‘ಶ್ರೀ ಕೃಷ್ಣ” ಪಡ್ರೆ ಕನ್ನಡ ನಾಡಿನ ಅಭಿವೃದ್ಧಿ ಪತ್ರಕರ್ತರಲ್ಲಿ ಮೊದಲ ಸಾಲಿಗೆ ಸೇರಿದವರು. ಬರೆಯುತ್ತಾ, ಬರೆಸುತ್ತಾ, ಕೃಷಿಕರ ಕೈಗೂ ಲೇಖನಿ ಕೊಟ್ಟು ಅವರನ್ನೂ ಬರೆಯುವಂತೆ ಮಾಡಿದವರು.

ಎಂಡೋಸಲ್ಲ್ಫಾನ್ ಅನಾಹುತವನ್ನು ಬೆಳಕಿಗೆ ತಂದವರು. ಬರನಿರೋಧಕ ಜಾಣ್ಮೆಯ ಯಶೋಗಾಥಗಳನ್ನು ಪರಿಚಯಿಸಿದವರು. ಮಳೆಕೊಯ್ಲು, ನೆಲ-ಜಲ ಸಂರಕ್ಷಣೆಯಲ್ಲಿ ಸ್ಪೆಶಲೈಸೇಶನ್ ಪಡೆದವರು. 22 ವರ್ಷ ವಯಸ್ಸಿನ ಅಡಿಕೆ ಪತ್ರಿಕೆಯ ಸ್ಥಾಪಕ ಸಂಪಾದಕ. ಏಳು ವರ್ಷದ ಬಿಡುವಿನ ನಂತರ ಆಗಸ್ಟ್ ೨೦೦೬ ರಿಂದ ಪುನಃ ಪತ್ರಿಕೆಯ ಸಂಪಾದಕತ್ವ.

ಐದು ವರ್ಷಗಳ ಕಾಲ ವಿಜಯ ಕರ್ನಾಟಕದಲ್ಲಿ ಮಳೆಕೊಯ್ಲಿನ ಬಗ್ಗೆ ಅಂಕಣ – ಹನಿಗೂಡಿಸೋಣ. http://www.indiatogether.com ಜಾಲತಾಣದಲ್ಲಿ ಇದೇ ವಿಷಯದ ಮೇಲೆ ನಿರಂತರವಾಗಿ ನುಡಿಚಿತ್ರ ಪ್ರಕಟಣೆ.

ಮಳೆಕೊಯ್ಲು ನೆಲ-ಜಲ ಸಂರಕ್ಷಣೆಯ ಬಗ್ಗೆ ೧೦ ಪುಸ್ತಕ ರಚನೆ. ಪುಸ್ತಕ ಪ್ರಾಧಿಕಾದ ಕೃಷಿ ಸಂಪುಟಗಳಲ್ಲಿ  ಕರ್ನಾಟಕದ ಬರನಿರೋಧಕ ಜಾಣ್ಮೆಗಳ ಪುಸ್ತಕ ಪ್ರಕಟಣೆ. ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ ಕನ್ನಡ – ಪಠ್ಯಪುಸ್ತಕಗಳಲ್ಲಿ ಇವರು ಬರೆದ ಜಲಸಂರಕ್ಷಣೆಯ ಬಗೆಗಿನ ಪಾಠ ಸೇರಿಕೊಂಡಿದೆ. ಮಳೆಕೊಯ್ಲಿನ ಬಗ್ಗೆ ರಾಜ್ಯದುದ್ದಗಲದಲ್ಲಿ ನಾನ್ನೂರಕ್ಕೂ ಹೆಚ್ಚು ಸ್ಲೈಡ್ ಶೋ.

ಅರಸಿ ಬಂದ ಪ್ರಶಸ್ತಿಗಳು ಹಲವು.  ಎರಡು ಬಾರಿ ಸ್ಟೇಟ್ಸ್‌ಮನ್ ಪತ್ರಿಕೆಯ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕರ್ನಾಟಕ ಸರಕಾರದ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಸಿಡಿಎಲ್  ಸಂಸ್ಥೆಯ ಪ್ರಶಸ್ತಿ ಇತ್ಯಾದಿ. ಅಶೋಕಾ ಫೆಲೋ.

ಹೀಗೆ ಪತ್ರಿಕೋದ್ಯಮ ಹಾಗೂ ಪರಿಸರ ಜಾಗೃತಿಯ ಕಣಜವಾಗಿರುವ ‘ಶ್ರೀ’ ಪಡ್ರೆಯವರ ಸಾಧನೆಗಳು  ಇದೇ ಭಾನುವಾರ ರಾತ್ರಿ 9.30ಕ್ಕೆ ಸಮಯ ವಾಹಿನಿಯ ‘ಕರ್ನಾಟಕದ ಕಣ್ಮಣಿಗಳು’ ಸರಣಿ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿವೆ.

ಅರ್ಧಗಂಟೆ ಅವಧಿಯ ಈ ಕಾರ್ಯಕ್ರಮದಲ್ಲಿ ಕೃಷಿ, ಪತ್ರಿಕೋದ್ಯಮ, ಜಲಪತ್ರಿಕೋದ್ಯಮ, ಎಂಡೋಸಲ್ಫಾನ್  ವಿರುದ್ಧದ ಹೋರಾಟ.. ಹೀಗೆ ‘ಶ್ರೀ’ ಪಡ್ರೆಯವರ ಎರಡೂವರೆ ದಶಕಗಳ ಕೃಷಿ ಮತ್ತು ಪತ್ರಿಕೋದ್ಯಮದ ಚಟುವಟಿಕೆಗಳು ಬಿತ್ತರಗೊಳ್ಳಲಿವೆ.

<!–[if !mso]> <! st1\:*{behavior:url(#ieooui) } –>

C©üªÀÈ¢Þ ¥ÀvÀæPÀvÀð. FUÀ ªÀļÉPÉÆAiÀÄÄè, £É®-d® ¸ÀAgÀPÀëuÉAiÀÄ°è ¸Éà±À¯ÉʸÉñÀ£ï.

20 ªÀµÀð ªÀAiÀĹì£À CrPÉ ¥ÀwæPÉAiÀÄ ¸ÁÜ¥ÀPÀ ¸ÀA¥ÁzÀPÀ.  K¼ÀÄ ªÀµÀðzÀ ©qÀÄ«£À £ÀAvÀgÀ DUÀ¸ïÖ 2006jAzÀ ¥ÀÅ£ÀB ¥ÀwæPÉAiÀÄ ¸ÀA¥ÁzÀPÀvÀé. £Á®ÄÌ ªÀµÀðUÀ½AzÀ «dAiÀÄ PÀ£ÁðlPÀzÀ°è ªÀļÉPÉÆ¬Äè£À §UÉÎ CAPÀt ºÀ¤UÀÆr¸ÉÆÃt. www.indiatogether.com eÁ®vÁtzÀ°è EzÉà «µÀAiÀÄzÀ ªÉÄÃ¯É PÁAiÀĪÀiÁäV £ÀÄravÀæ ¥ÀæPÀluÉ.

ªÀļÉPÉÆAiÀÄÄè £É®-d® ¸ÀAgÀPÀëuÉAiÀÄ §UÉÎ 10 ¥ÀŸÀÛPÀ gÀZÀ£É. ¥ÀŸÀÛPÀ ¥Áæ¢üPÁgÀPÁÌV §gÉzÀ PÀ£ÁðlPÀzÀ §gÀ¤gÉÆÃzsÀPÀ eÁuÉäUÀ¼À §UÉV£À ºÉƸÀ ¥ÀŸÀÛPÀ CaÑ£À°è. PÀ£ÁðlPÀ, PÉÃgÀ¼À ªÀÄvÀÄÛ ªÀĺÁgÁµÀÖçzÀ PÀ£ÀßqÀ񎊥¥ÀoÀå¥ÀŸÀÛPÀUÀ¼À°è EªÀgÀÄ §gÉzÀ d®¸ÀAgÀPÀëuÉAiÀÄ §UÉV£À ¥ÁoÀ ¸ÉÃjPÉÆArzÉ. ªÀļÉPÉÆ¬Äè£À §UÉÎ gÁdåzÀÄzÀÝUÀ®zÀ°è £Á£ÀÆßgÀPÀÆÌ ºÉZÀÄÑ ¸ÉèöÊqï ±ÉÆÃ.

CgÀ¹ §AzÀ ¥Àæ±À¹ÛUÀ¼ÀÄ ºÀ®ªÀÅ. ¸ÉÖÃmïìªÀÄ£ï ¥ÀwæPÉAiÀÄ C©üªÀÈ¢Þ ¥ÀwæPÉÆÃzÀåªÀÄ ¥Àæ±À¹Û ºÁUÀÆ PÀ£ÁðlPÀ ¸ÀgÀPÁgÀzÀ ¥Àj¸ÀgÀ ¥ÀwæPÉÆÃzÀåªÀÄ ¥Àæ±À¹Û EvÁå¢. C±ÉÆÃPÁ ¥sɝɯÃ.

ಭತ್ತ ಉತ್ಸವಕ್ಕೆ ಬನ್ನಿ

ಚೌಳು ಮಣ್ಣಿನ ಸಮಸ್ಯೆ ನಮ್ಮ ಬೇಸಾಯ ಸಮುದಾಯಕ್ಕೆ ಕಂಟಕ. ಎಷ್ಟೋ ಎಕೆರೆ ಭೂಮಿ ಇದರಿಂದ ಬೀಳು ಬಿದ್ದಿದೆ.
ನಮ್ಮ ಪೂರ್ವಿಕರಲ್ಲಿ ಚೌಳು ಮಣ್ಣನ್ನು ಪಳಗಿಸುವ ತಾಳ್ಮೆ, ಸೂಕ್ತ ತಳಿಗಳ ಭಂಢಾರ ಹಾಗೂ ಜ್ಞಾನ ಅಪಾರವಾಗಿತ್ತು.
ಆದರೆ ಆಧುನಿಕ ಕೃಷಿ ಈ ಎಲ್ಲವನ್ನೂ ತಿರಸ್ಕರಿಸಿದ ಪರಿಣಾಮ ಇಂದು ಚೌಳು ಭೂಮಿ ವಿಸ್ತರಿಸುತ್ತಿದೆ.
ಆದರೆ ಈಗಲೂ ಕೆಲ ರೈತ ಸಮುದಾಯಗಳು ಚೌಳು ನಿರೋಧಕ ಭತ್ತ ಮತ್ತು ರಾಗಿ ತಳಿಗಳನ್ನು ಉಳಿಸಿಕೊಂಡು ನೆಮ್ಮದಿಯಿಂದ ಬೇಸಾಯ ಮಾಡುತ್ತಿದ್ದಾರೆ.
ದಿನಾಂಕ ೨೧ ಮತ್ತು ೨೨ ನೇ ಆಗಸ್ಟ್ ೨೦೧೦ ರಂದು ಚೌಳು ಭೂಮಿ ಭತ್ತದ ಬೇಸಾಯದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಇದು ಮೊದಲ ಪ್ರಯತ್ನ ಎಂಬುದು ನಮ್ಮ ಅಭಿಪ್ರಾಯ.
ಆಹ್ವಾನ ಪತ್ರಿಕೆ ಇದರ ಜೊತೆಗಿದೆ.

ದಯಮಾಡಿ ಬನ್ನಿ

ನಿಮ್ಮ ವಿಶ್ವಾಸಿಗಳು

ಧಾನ್ಯ ಸಂಸ್ಥೆ, ತುಮಕೂರು
ಸಹಜ ಸಮೃದ್ಧ, ಬೆಂಗಳೂರು
ಸಮಾಜ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಡವನಹಳ್ಳಿ